ಬುಧವಾರ, ಡಿಸೆಂಬರ್ 30, 2015

ಏಸಸ್ ಜೆನ್‌ಪ್ಯಾಡ್: ಮನರಂಜನೆಗೊಂದು ಹೊಸ ಟ್ಯಾಬ್ಲೆಟ್

ದೊಡ್ಡಗಾತ್ರದ ಮೊಬೈಲ್ ಫೋನುಗಳು ಸರ್ವೇಸಾಮಾನ್ಯವಾಗುತ್ತಿರುವ ಈ ದಿನಗಳಲ್ಲಿ ಟ್ಯಾಬ್ಲೆಟ್ಟುಗಳು ಪ್ರಸ್ತುತವೋ ಇಲ್ಲವೋ ಎನ್ನುವುದು ನಮಗೆ ಪದೇ ಪದೇ ಎದುರಾಗುವ ಪ್ರಶ್ನೆ. ಪರಿಸ್ಥಿತಿ ಹೀಗಿದ್ದರೂ ಮಾರುಕಟ್ಟೆಗೆ ಹೊಸ ಟ್ಯಾಬ್ಲೆಟ್ಟುಗಳು ಇನ್ನೂ ಬರುತ್ತಲೇ ಇವೆ, ಹೊಸ ಸೌಲಭ್ಯಗಳನ್ನೂ ಪರಿಚಯಿಸುತ್ತಿವೆ.

ಈಚೆಗೆ ಮಾರುಕಟ್ಟೆ ಪ್ರವೇಶಿಸಿರುವ ಏಸಸ್ ಸಂಸ್ಥೆಯ ಜೆನ್‌ಪ್ಯಾಡ್ ೭, ಇಂತಹುದೊಂದು ಟ್ಯಾಬ್ಲೆಟ್. ಅದರ ಪರಿಚಯ ಇಲ್ಲಿದೆ.


ಜೆನ್‌ಪ್ಯಾಡ್‌ನ ವಿನ್ಯಾಸ ಮೊದಲ ನೋಟಕ್ಕೇ ಗಮನಸೆಳೆಯುವಂತಿದೆ. ಹಿಂಬದಿ ರಕ್ಷಾಕವಚ ಪ್ಲಾಸ್ಟಿಕ್‌ನದೇ ಆದರೂ ಗೀರುಗಳಿರುವ (ಲೆದರ್‌/ರೆಗ್ಸಿನ್‌ನಂತಹ) ವಿನ್ಯಾಸದಿಂದಾಗಿ ಆಕರ್ಷಕವಾಗಿ ಕಾಣುತ್ತದೆ - ಜಾರುವುದಿಲ್ಲವಾದ್ದರಿಂದ ಹಿಡಿದುಕೊಳ್ಳಲೂ ಅನುಕೂಲಕರ.

ಮಂಗಳವಾರ, ಡಿಸೆಂಬರ್ 29, 2015

ಫ್ರೀ ಬೇಸಿಕ್ಸ್ ಎಂಬ ಗೊಂದಲದ ಸುತ್ತ

ಟಿ. ಜಿ. ಶ್ರೀನಿಧಿ

ಅಂತರಜಾಲವನ್ನು ಇನ್‌ಫರ್ಮೇಶನ್ ಸೂಪರ್‌ಹೈವೇ ಎಂದು ಕರೆಯುತ್ತಾರಲ್ಲ, ಅದನ್ನು ಒಂದು ರಸ್ತೆಯಾಗಿಯೇ ಕಲ್ಪಿಸಿಕೊಳ್ಳಿ. ಆ ರಸ್ತೆಯಲ್ಲಿ ಎಲ್ಲ ಜಾಲತಾಣ ಹಾಗೂ ಆಪ್ ಬಳಕೆದಾರರಿಗೆ ಸಂಬಂಧಪಟ್ಟ ಮಾಹಿತಿಯೂ ಓಡಾಡುತ್ತಿರುತ್ತದೆ. ಕೆಲವರದು ಎಸ್‌ಯುವಿ ಇರಬಹುದು, ಇನ್ನು ಕೆಲವರದು ಕಾರು-ಬೈಕು-ಬಸ್ಸು-ಲಾರಿಗಳಿರಬಹುದು, ಸೈಕಲ್ ಓಡಿಸುವವರೂ ಇರಬಹುದು. ಆದರೆ ರಸ್ತೆ ಮಾತ್ರ ಎಲ್ಲರಿಗೂ ಒಂದೇ. ಟೋಲ್ ಬಂದಾಗ ಟೋಲ್ ಪಾವತಿಸಿ, ಇಲ್ಲದಿದ್ದರೆ ಹಾಗೆಯೇ ಗಾಡಿ ಓಡಿಸುತ್ತಿರಿ.

ಇದ್ದಕ್ಕಿದ್ದ ಹಾಗೆ ಬಹುರಾಷ್ಟ್ರೀಯ ವಾಹನ ತಯಾರಿಕಾ ಸಂಸ್ಥೆಯೊಂದು ಆ ರಸ್ತೆಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡುಬಿಡುತ್ತದೆ; ತಾನು ತಯಾರಿಸುವ ಕಾರುಗಳಿಗೆ ಮಾತ್ರ ಆ ರಸ್ತೆಯಲ್ಲಿ ಪ್ರವೇಶ ಎಂದು ಹೇಳುತ್ತದೆ. ಅಷ್ಟೇ ಅಲ್ಲ, ಆ ರಸ್ತೆಯ ಮೂಲಕ ಯಾವ ಊರಿಗೆ ಹೋಗಬೇಕು, ದಾರಿಯಲ್ಲಿ ಎಲ್ಲಿ ನಿಲ್ಲಿಸಬೇಕು, ಕಾಫಿ ಎಲ್ಲಿ ಕುಡಿಯಬೇಕು, ಶೌಚಾಲಯಕ್ಕೆ ಎಲ್ಲಿ ಹೋಗಬೇಕು ಎನ್ನುವುದನ್ನೂ ತಾನೇ ನಿರ್ಧರಿಸುತ್ತದೆ. ಹಾಂ, ಇಷ್ಟು ಶರತ್ತುಗಳನ್ನು ಒಪ್ಪಿದರೆ ಸಾಕು, ರಸ್ತೆ ಬಳಸಲು ಟೋಲ್ ಕೊಡುವುದೇನೂ ಬೇಡ ನೋಡಿ!

ಇದೇನೋ ಅಸಂಬದ್ಧವಾಗಿದೆಯಲ್ಲ ಎನಿಸಿದರೆ ಒಂದು ಕ್ಷಣ ಆಚೀಚೆ ನೋಡಿ - ನಿಮ್ಮ ಮನೆಯ ದಿನಪತ್ರಿಕೆಯಲ್ಲಿ, ಟೀವಿ ಕಾರ್ಯಕ್ರಮದ ನಡುವೆ, ಪಕ್ಕದ ಬಸ್ ಸ್ಟಾಪ್ ಫಲಕದಲ್ಲಿ ನಿಮಗೆ 'ಫ್ರೀ ಬೇಸಿಕ್ಸ್'ನ ಜಾಹೀರಾತು ಕಾಣಸಿಗುತ್ತದೆ. ಇಂತಿಂಥವರು ಈ ಯೋಜನೆಯನ್ನು ಬೆಂಬಲಿಸಿದ್ದಾರೆ ಎನ್ನುವ ಮಾಹಿತಿಯಂತೂ ಫೇಸ್‌ಬುಕ್‌ನಲ್ಲಿ ಕಾಣಿಸುತ್ತಲೇ ಇರುತ್ತದೆ.

ಇಷ್ಟಕ್ಕೂ ಏನಿದು ಫ್ರೀ ಬೇಸಿಕ್ಸ್?

ಸೋಮವಾರ, ಡಿಸೆಂಬರ್ 28, 2015

ಕನಸುಗಳಿಗೆ ತಂತ್ರಜ್ಞಾನದ ರೆಕ್ಕೆ

ಟಿ. ಜಿ. ಶ್ರೀನಿಧಿ

ಮಿಕ್ಸರ್ ಗ್ರೈಂಡರಿನಿಂದ ಮಸಾಲೆ ದೋಸೆಯವರೆಗೆ, ದ್ವಿಚಕ್ರ ವಾಹನದಿಂದ ದ್ವಿದಳ ಧಾನ್ಯಗಳವರೆಗೆ ಈಗ ಪ್ರತಿಯೊಂದನ್ನೂ ಆನ್‌ಲೈನ್‌ನಲ್ಲೇ ಕೊಳ್ಳುವುದು ಸಾಧ್ಯ. ಮನೆಯಿಂದ ಹೊರಗೆ ಕಾಲಿಡಬೇಕಾದ ಅಗತ್ಯವಿಲ್ಲ, ಟ್ರಾಫಿಕ್ ಜಾಮ್ ಭಯವೂ ಇಲ್ಲ - ಕೈಲಿರುವ ಮೊಬೈಲಿನಲ್ಲೋ ಪಕ್ಕದ ಕಂಪ್ಯೂಟರಿನಲ್ಲೋ ಕ್ಷಣಾರ್ಧದಲ್ಲೇ ನಮಗೆ ಬೇಕಾದ ವಸ್ತುಗಳನ್ನು ಆರ್ಡರ್ ಮಾಡುವುದು, ಅದಕ್ಕಾಗಿ ಹಣಪಾವತಿಸುವುದು ಸಾಧ್ಯ. ಇಷ್ಟೆಲ್ಲ ಅನುಕೂಲದ ಜೊತೆಗೆ ಡಿಸ್ಕೌಂಟು-ಕ್ಯಾಶ್‌ಬ್ಯಾಕುಗಳ ಆಮಿಷ ಬೇರೆ!

ನಾವು ಕ್ಷಣಾರ್ಧದಲ್ಲಿ ಆರ್ಡರ್ ಮಾಡುವುದೇನೋ ಸರಿ, ಆದರೆ ಆರ್ಡರ್ ಮಾಡಿದ ವಸ್ತು ನಮ್ಮನ್ನು ತಲುಪುವುದು ಮಾತ್ರ ನಿಧಾನ. ದೋಸೆಯೂ ಪಿಜ್ಜಾ-ಬರ್ಗರ್‌ಗಳೂ ಅರ್ಧಗಂಟೆಯಷ್ಟು ಸಮಯ ತೆಗೆದುಕೊಂಡರೆ ಇತರ ವಸ್ತುಗಳು ನಮ್ಮನ್ನು ತಲುಪಲು ಅರ್ಧದಿನವೋ ಅರ್ಧವಾರವೋ ಬೇಕಾಗುತ್ತದೆ.

ಇದೇಕೆ ಹೀಗೆ? ಯಾವುದೋ ವಸ್ತು ಬೇಕೆಂದು ನಾವು ಸಲ್ಲಿಸಿದ ಬೇಡಿಕೆ ಸಂಕೇತಗಳ ರೂಪತಳೆದು ಅಂತರಜಾಲದಲ್ಲಿ ಹಾರಿಹೋಗುತ್ತದಲ್ಲ, ಅದೇ ರೀತಿ ಆ ವಸ್ತುವೂ ಹಾರಿಬಂದು ನಮ್ಮ ಕೈಸೇರುವುದು ಸಾಧ್ಯವಿಲ್ಲವೆ?

ಕಾಲ್ಪನಿಕ ಕತೆಯಂತೆ ಕಾಣುವ ಈ ಸನ್ನಿವೇಶವನ್ನು ನಿಜವಾಗಿಸಲು ಅನೇಕ ಪ್ರಯತ್ನಗಳು ಈಗಾಗಲೇ ನಡೆದಿವೆ. ಆ ಕುರಿತ ಸುದ್ದಿಗಳು ಹಳತೂ ಆಗಿಬಿಟ್ಟಿವೆ.

ಬುಧವಾರ, ಡಿಸೆಂಬರ್ 23, 2015

ಹೊಸ ಪುಸ್ತಕ: 'ಕಂಪ್ಯೂಟರ್‌ಗೆ ಪಾಠ ಹೇಳಿ...'

ನಮ್ಮಿಂದ ಹೇಳಿಸಿಕೊಳ್ಳದೆ ಕಂಪ್ಯೂಟರ್ ಯಾವ ಕೆಲಸವನ್ನೂ ಮಾಡುವುದಿಲ್ಲ; ಅದು ಏನು ಮಾಡುವುದಿದ್ದರೂ ನಾವು ಹೇಳಿದ್ದನ್ನಷ್ಟೆ, ಹೇಳಿದಂತೆಯೇ ಮಾಡುತ್ತದೆ ಎನ್ನುವುದು ನಮಗೆ ಗೊತ್ತು. ಆದರೆ ನಮಗೇನು ಬೇಕು ಎನ್ನುವುದನ್ನು ಕಂಪ್ಯೂಟರಿಗೆ ಹೇಳುವುದು ಹೇಗೆ?

ನಮಗೆ ಬೇಕಾದ ಕೆಲಸ ಮಾಡಿಕೊಡುವ ಸಾಫ್ಟ್‌ವೇರನ್ನು ಕೊಂಡುಕೊಂಡರೆ ಆಯಿತು ನಿಜ. ಆದರೆ ಅದನ್ನು ಮೊದಲಿಗೆ ಯಾರೋ ಸಿದ್ಧಪಡಿಸಿರಬೇಕು ತಾನೆ? ಹಾಗಾದರೆ ಸಾಫ್ಟ್‌ವೇರನ್ನು ಸಿದ್ಧಪಡಿಸುವುದು ಎಂದರೇನು, ಮತ್ತು ಅದು ಸಾಧ್ಯವಾಗುವುದು ಹೇಗೆ?

ಶುಕ್ರವಾರ, ನವೆಂಬರ್ 27, 2015

ಡಿಸೆಂಬರ್ ೧೯-೨೦: ಬೆಂಗಳೂರಿನಲ್ಲಿ ವಿಕಿಪೀಡಿಯ ಸಂಪಾದನೋತ್ಸವ

ಇಜ್ಞಾನ ವಾರ್ತೆ

ಕೆಲ ತಿಂಗಳ ಹಿಂದೆ ಬೆಂಗಳೂರಿನ ಟೆಕ್ಸಸ್ ಇನ್‌ಸ್ಟ್ರುಮೆಂಟ್ಸ್ ಸಂಸ್ಥೆಯಲ್ಲಿ ನಡೆದ ಕನ್ನಡ ವಿಜ್ಞಾನ ಲೇಖಕರ ಶಿಬಿರ ನಿಮಗೆ ನೆನಪಿರಬಹುದು. ಇದೀಗ ಕನ್ನಡ ಮತ್ತು ವಿಜ್ಞಾನ ಬರವಣಿಗೆಗೆ ಸಂಬಂಧಪಟ್ಟ ಇನ್ನೊಂದು ಕಾರ್ಯಕ್ರಮ ಟೆಕ್ಸಸ್ ಇನ್‌ಸ್ಟ್ರುಮೆಂಟ್ಸ್‌ನಲ್ಲಿ ನಡೆಯುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಬರಹಗಳನ್ನು ವಿಕಿಪೀಡಿಯಕ್ಕೆ ಸೇರಿಸುವುದು ಈ ಕಾರ್ಯಕ್ರಮದ ಉದ್ದೇಶ. ವಿಕಿಪೀಡಿಯ ಪರಿಚಯವಿಲ್ಲದವರಿಗೆ ಅಗತ್ಯ ತರಬೇತಿಯನ್ನೂ ನೀಡಲಾಗುವುದು.

ಗುರುವಾರ, ನವೆಂಬರ್ 12, 2015

ವಾಸ್ತವವಲ್ಲದ ವಾಸ್ತವ

ಟಿ. ಜಿ. ಶ್ರೀನಿಧಿ


ಈಗಿನ ಅಜ್ಜ-ಅಜ್ಜಿಯರು ಚಿಕ್ಕಮಕ್ಕಳಾಗಿದ್ದಾಗ ಜಾತ್ರೆ-ಸಂತೆಗಳಲ್ಲಿ ಬಯಾಸ್ಕೋಪ್ (ಅಥವಾ ಬಯೋಸ್ಕೋಪ್) ಎನ್ನುವುದೊಂದು ಆಕರ್ಷಣೆ ಇರುತ್ತಿತ್ತಂತೆ. ದಪ್ಪನೆಯದೊಂದು ಪೆಟ್ಟಿಗೆ, ಅದರೊಳಗೆ ಇಣುಕಲೊಂದು ಕಿಂಡಿ - ಇದು ಬಯಾಸ್ಕೋಪಿನ ಸ್ವರೂಪ. ನಾಲ್ಕಾಣೆಯನ್ನೋ ಎಂಟಾಣೆಯನ್ನೋ ಕೊಟ್ಟು ಆ ಪೆಟ್ಟಿಗೆಯೊಳಗೆ ಇಣುಕಿದರೆ ಮುಂಬಯಿ, ದೆಹಲಿ, ಆಗ್ರಾದ ದೃಶ್ಯಗಳೆಲ್ಲ ಕಣ್ಣೆದುರು ಮೂಡುತ್ತಿದ್ದವು. ಬಾಣಾವರದ ಸಂತೆಯಲ್ಲೇ ಭಾರತ ದರ್ಶನ!

ಕೆಲ ವರ್ಷಗಳ ನಂತರ ಇಂತಹವೇ ಪೆಟ್ಟಿಗೆಗಳು ಇನ್ನು ಸ್ವಲ್ಪ ಚಿಕ್ಕದಾಗಿ 'ವ್ಯೂ ಮಾಸ್ಟರ್' ಎಂಬ ಹೆಸರಿನೊಡನೆ ಮಕ್ಕಳ ಕೈಗೆ ಬಂದವು. ಗುಂಡನೆಯ ಡಿಸ್ಕುಗಳನ್ನು ಪುಟ್ಟದೊಂದು ಸಾಧನದೊಳಕ್ಕೆ ಸೇರಿಸಿ ಇಣುಕಿ ನೋಡಿದರೆ ಅದರಲ್ಲಿನ ಚಿತ್ರಗಳು ನಮ್ಮ ಕಣ್ಮುಂದೆ ಮೂಡುತ್ತಿದ್ದವು (ಈಗ ಇದರ ಥ್ರೀಡಿ ಆವೃತ್ತಿಯೂ ಲಭ್ಯ).

ಬುಧವಾರ, ನವೆಂಬರ್ 4, 2015

ಜೆನ್‌ಫೋನ್ ಲೇಸರ್: ಕೈಗೆಟುಕುವ ಬೆಲೆ, ಉತ್ತಮ ಗುಣಮಟ್ಟ


ಈಚಿನ ದಿನಗಳಲ್ಲಿ ಮೊಬೈಲ್ ಫೋನ್ ಮಾರುಕಟ್ಟೆಗೆ ಹೊಸ ಮಾದರಿಗಳು ಒಂದರ ಹಿಂದೊಂದರಂತೆ ಪ್ರವೇಶಿಸುತ್ತಲೇ ಇವೆ. ಆದಷ್ಟೂ ಹೆಚ್ಚಿನ ಸವಲತ್ತುಗಳನ್ನು ಸಾಧ್ಯವಾದಷ್ಟೂ ಕಡಿಮೆ ಬೆಲೆಯಲ್ಲಿ ಒದಗಿಸಲು ಇಲ್ಲಿ ಸ್ಪರ್ಧೆಯೇ ನಡೆದಿದೆ.

ಮೊಬೈಲ್ ದರಸಮರದಲ್ಲಿ ಅತ್ಯಂತ ಹೆಚ್ಚು ಲಾಭವಾಗಿರುವುದು ಹತ್ತು ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಯ ಫೋನುಗಳನ್ನು ಬಳಸುವವರಿಗೆ ಎನ್ನಬಹುದು. ಇಷ್ಟು ಬೆಲೆಯ ಮಿತಿಯೊಳಗೆ ಸಾಕಷ್ಟು ಉತ್ತಮ ಸೌಲಭ್ಯಗಳನ್ನು ನೀಡುವ ಹಲವು ಫೋನುಗಳು ಇದೀಗ ಮಾರುಕಟ್ಟೆಯಲ್ಲಿವೆ.

ಇಂತಹ ಫೋನುಗಳಲ್ಲೊಂದು ಏಸಸ್ ಸಂಸ್ಥೆಯ 'ಜೆನ್‌ಫೋನ್ ೨ ಲೇಸರ್'.

ಗುರುವಾರ, ಅಕ್ಟೋಬರ್ 22, 2015

ಆಟಗಳಲ್ಲಿ ಕನ್ನಡದ ಸೊಗಡು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ  [ಹಿಂದಿನ ಲೇಖನ]

ಕಂಪ್ಯೂಟರ್ ತಂತ್ರಾಂಶಗಳ ಪೈಕಿ ಆಟಗಳಿಗೆ ತಮ್ಮದೇ ಆದ ವಿಶಿಷ್ಟ ಸ್ಥಾನವಿದೆ. ಯಾವ ಭೇದವೂ ಇಲ್ಲದೆ ಎಲ್ಲರೂ ಬಳಸುವ ಸಾರ್ವತ್ರಿಕ ತಂತ್ರಾಂಶಗಳಲ್ಲವೆ ಅವು? ಇನ್ನು ಮೊಬೈಲಿನಲ್ಲಂತೂ ಕೇಳುವುದೇ ಬೇಡ, ಯಾವ ಆಪ್ ಅಂಗಡಿಯನ್ನೇ ನೋಡಿದರೂ ನಮಗೆ ಸಾವಿರಾರು ಸಂಖ್ಯೆಯ ಆಟಗಳು ಕಾಣಸಿಗುತ್ತವೆ.

ಇಷ್ಟೆಲ್ಲ ಜನಪ್ರಿಯವಾಗಿರುವ ಗೇಮ್ಸ್ ಲೋಕದಲ್ಲಿ ಕೊಂಚಮಟ್ಟಿಗೆ ಕನ್ನಡವೂ ಇದೆ.

ಬೌದ್ಧಿಕ ಕಸರತ್ತಿನ ಆಟಗಳ ಪೈಕಿ ಬಹುಕಾಲದಿಂದ ಜನಪ್ರಿಯವಾಗಿರುವ ಪದಬಂಧವನ್ನು 'ಇಂಡಿಕ್ರಾಸ್' ತಾಣದ ಮೂಲಕ ಆನ್‌ಲೈನ್‌ನಲ್ಲೂ ತುಂಬಿಸಬಹುದು.

ಶುಕ್ರವಾರ, ಅಕ್ಟೋಬರ್ 16, 2015

ಕನ್ನಡದಲ್ಲೇ ಪ್ರೋಗ್ರಾಮಿಂಗ್!

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ  [ಹಿಂದಿನ ಲೇಖನ]

ಕನ್ನಡದ ಬಳಕೆದಾರರಿಗೆ ತಂತ್ರಜ್ಞಾನದ ಇಷ್ಟೆಲ್ಲ ಸವಲತ್ತುಗಳನ್ನು ಒದಗಿಸಲು ಅನೇಕ ಪರಿಣತರು ಸಾಕಷ್ಟು ಪ್ರೋಗ್ರಾಮುಗಳನ್ನು ಬರೆದಿರುತ್ತಾರೆ.

ಮೂಲಭೂತವಾಗಿ ಕಂಪ್ಯೂಟರಿಗೆ ಅರ್ಥವಾಗುವುದು 'ಒಂದು'-'ಸೊನ್ನೆ'ಗಳ ಬೈನರಿ (ದ್ವಿಮಾನ ಪದ್ಧತಿ) ಭಾಷೆ ಮಾತ್ರ. ಕಂಪ್ಯೂಟರ್‌ನ ಮೆಮೊರಿಯಲ್ಲಿ ಏನು ಉಳಿಯಬೇಕಾದರೂ ಅದು ಒಂದು ಅಥವಾ ಸೊನ್ನೆಯ ರೂಪದಲ್ಲಷ್ಟೆ ಇರಲು ಸಾಧ್ಯ - ಪ್ರೋಗ್ರಾಮುಗಳಿಗೂ ಇದೇ ನಿಯಮ ಅನ್ವಯವಾಗುತ್ತದೆ. ಆದರೆ ಅಂಕಿಗಳ ಭಾಷೆಯಲ್ಲಿ ಪ್ರೋಗ್ರಾಮ್ ಬರೆಯುವುದು ಕಷ್ಟವಾದ್ದರಿಂದ ಅದಕ್ಕಾಗಿ ಪ್ರೋಗ್ರಾಮಿಂಗ್ ಭಾಷೆಗಳನ್ನು ಬಳಸುತ್ತಾರೆ. ಇಂತಹ ಬಹುತೇಕ ಭಾಷೆಗಳು (ಉದಾ: ಸಿ, ಸಿ++, ಜಾವಾ ಇತ್ಯಾದಿ) ಇಂಗ್ಲಿಷ್ ಲಿಪಿಯನ್ನೇ ಬಳಸುವುದು ಸಂಪ್ರದಾಯ.

ಮಂಗಳವಾರ, ಅಕ್ಟೋಬರ್ 13, 2015

ಪುಟ್ಟ ಮಕ್ಕಳಿಗೆ ಸಿಹಿ ಪೆಪ್ಪರ್‌ಮಿಂಟ್

ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎನ್ನುವುದು ನಮಗೆ ಗೊತ್ತೇ ಇದೆ. ಮಕ್ಕಳ ಕುರಿತು ಆ ಶಿಕ್ಷಕರಿಗೆ ಹೆಚ್ಚಿನ ಆಸಕ್ತಿಯಿದ್ದಷ್ಟೂ ಅವರು ನಮ್ಮ ಮುಂದಿನ ಪೀಳಿಗೆಯನ್ನು ಇನ್ನಷ್ಟು ಚೆನ್ನಾಗಿ ರೂಪಿಸಬಲ್ಲರು. ಮಕ್ಕಳಿಗೆ ಹೊಸ ವಿಷಯಗಳನ್ನು ತಿಳಿಸುವ, ಅವರಲ್ಲಿ ಕುತೂಹಲವನ್ನು ಹೆಚ್ಚಿಸುವ ಆಸಕ್ತಿಯಿರುವ ಶಿಕ್ಷಕರಲ್ಲಿ ಶ್ರೀ ನಾರಾಯಣ ಬಾಬಾನಗರ ಒಬ್ಬರು.

ಮೇಷ್ಟರ ಕೆಲಸದ ಜೊತೆಗೆ ವಿಜ್ಞಾನ ಸಂವಹನವನ್ನೂ ಸೊಗಸಾಗಿ ಮಾಡುವ ಬಾಬಾನಗರ ಅವರ ಹೊಸ ಕೃತಿ 'ಪೆಪ್ಪರ್‌ಮಿಂಟ್'. ಪುಟ್ಟಪುಟ್ಟ ಬರಹಗಳಲ್ಲಿ ಹೊಸ ವಿಷಯಗಳನ್ನು (ಕೇರಮ್ ಆಡುವಾಗ ಬೋರಿಕ್ ಪೌಡರ್ ಬಳಸುವುದು ಏಕೆ, ಕೃತಕ ಉಪಗ್ರಹಗಳ ಉಪಯೋಗ ಏನು, ಗೀಜಗನ ಗೂಡಿನ ವೈಶಿಷ್ಟ್ಯ ಏನು ಇತ್ಯಾದಿ) ಮಕ್ಕಳಿಗೆ ತಿಳಿಸಿಕೊಡುವ ವಿಶಿಷ್ಟ ಪ್ರಯತ್ನ ಇದು. ಓದು ಹೊರೆಯೆನಿಸುವುದಿಲ್ಲವಾದ್ದರಿಂದ ಇದು ಮಕ್ಕಳಿಗೂ ಇಷ್ಟವಾಗುತ್ತದೆ.

ಸೋಮವಾರ, ಅಕ್ಟೋಬರ್ 12, 2015

ಮೊಬೈಲ್ ಕ್ಯಾಮೆರಾ ಮಾಯಾಜಾಲ

ಟಿ. ಜಿ. ಶ್ರೀನಿಧಿ

ಮೊದಲಿಗೆ ಮೊಬೈಲ್ ಫೋನ್ ಸೃಷ್ಟಿಯಾದದ್ದು ಯಾವಾಗ ಎಲ್ಲಿಂದ ಬೇಕಿದ್ದರೂ ದೂರವಾಣಿ ಕರೆಮಾಡಿ ಮಾತನಾಡುವುದನ್ನು ಸಾಧ್ಯವಾಗಿಸುವ ಉದ್ದೇಶದಿಂದ. ಮುಂದಿನ ದಶಕಗಳಲ್ಲಿ ಮೊಬೈಲ್ ಜನಪ್ರಿಯತೆ ಹೆಚ್ಚಿದಂತೆ ಅದರಲ್ಲಿರುವ ಸೌಲಭ್ಯಗಳೂ ಹೆಚ್ಚಿದ್ದು ಈಗ ಇತಿಹಾಸ. ಎಸ್ಸೆಮ್ಮೆಸ್ ಕಳುಹಿಸುವುದರಿಂದ ಹಿಡಿದು ಆನ್‌ಲೈನ್ ಶಾಪಿಂಗ್ ಮಾಡುವವರೆಗೆ ಪ್ರತಿಯೊಂದಕ್ಕೂ ಈಗ ನಾವು ಮೊಬೈಲನ್ನೇ ಅವಲಂಬಿಸಿದ್ದೇವೆ. ಎಫ್‌ಎಂ ರೇಡಿಯೋ, ಎಂಪಿಥ್ರೀ ಪ್ಲೇಯರುಗಳನ್ನೆಲ್ಲ ಮೂಲೆಗುಂಪು ಮಾಡಿದ್ದು ಇದೇ ಮೊಬೈಲ್.

ಮೊಬೈಲ್ ಫೋನ್ ಬಂದ ಮೇಲೆ ತಮ್ಮ ಮಹತ್ವ ಕಳೆದುಕೊಂಡ ಸಾಧನಗಳ ಪೈಕಿ ಡಿಜಿಟಲ್ ಕ್ಯಾಮೆರಾಗೆ ಪ್ರಮುಖ ಸ್ಥಾನ. ಮೊಬೈಲ್ ಜಗತ್ತು ವಿಸ್ತರಿಸಿದಂತೆ ಅದು ಛಾಯಾಗ್ರಹಣಕ್ಕೆ ನೀಡಿರುವ - ನೀಡುತ್ತಿರುವ ಹೊಸ ಆಯಾಮಗಳ ಪರಿಚಯ ಇಲ್ಲಿದೆ.

ಗುರುವಾರ, ಅಕ್ಟೋಬರ್ 8, 2015

ಪಠ್ಯದಿಂದ ಧ್ವನಿಗೆ

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ  [ಹಿಂದಿನ ಲೇಖನ]

ಕನ್ನಡದ ಇಷ್ಟೆಲ್ಲ ಮಾಹಿತಿ ಕಂಪ್ಯೂಟರೀಕರಣವಾಗಿರುವ ಈ ಸಂದರ್ಭದಲ್ಲಿ ಅದು ಎಲ್ಲರಿಗೂ ದೊರಕುವಂತಿರಬೇಕಾದ್ದು ಅತ್ಯಗತ್ಯ. ಈ ನಿಟ್ಟಿನಲ್ಲಿ ಪಠ್ಯವನ್ನು ಧ್ವನಿಗೆ ಪರಿವರ್ತಿಸುವ (ಟೆಕ್ಸ್ಟ್ ಟು ಸ್ಪೀಚ್) ತಂತ್ರಾಂಶದ್ದು ಮಹತ್ವದ ಸ್ಥಾನ. ಕಂಪ್ಯೂಟರಿನಲ್ಲಿ ದಾಖಲಾಗಿರುವ ಪಠ್ಯವನ್ನು ಧ್ವನಿರೂಪದಲ್ಲಿ ನಮಗೆ 'ಓದಿಹೇಳುವುದು' ಈ ತಂತ್ರಾಂಶದ ವೈಶಿಷ್ಟ್ಯ. ಕಂಪ್ಯೂಟರಿನ ಪರದೆಯ ಮೇಲೆ ಪುಟಗಟ್ಟಲೆ ಪಠ್ಯವನ್ನು ಓದಲು ಬೇಜಾರು ಎನ್ನುವವರಿಂದ ಹಿಡಿದು ದೃಷ್ಟಿ ಸವಾಲಿನ ದೆಸೆಯಿಂದ ಓದಲು ಸಾಧ್ಯವಿಲ್ಲದವರ ತನಕ ಈ ತಂತ್ರಾಂಶ ಎಲ್ಲರಿಗೂ ನೆರವಾಗಬಲ್ಲದು.

ಬುಧವಾರ, ಸೆಪ್ಟೆಂಬರ್ 30, 2015

ಕನ್ನಡದ ಕೇಳುಪುಸ್ತಕಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ  [ಹಿಂದಿನ ಲೇಖನ]

ಓದುವ ಪುಸ್ತಕಗಳ ಜೊತೆಗೆ ಕನ್ನಡದ ಕೇಳು ಪುಸ್ತಕಗಳೂ ಇವೆ. ಹೆಸರಾಂತ ಲೇಖಕರ ಕತೆ - ಕಾದಂಬರಿಗಳ ಧ್ವನಿಮುದ್ರಣವನ್ನು ಇದೀಗ ವಿವಿಧ ಜಾಲತಾಣಗಳಲ್ಲಿ ಕೊಳ್ಳಬಹುದು; ಸಿಡಿ ರೂಪದಲ್ಲಿ ಅಥವಾ ಡೌನ್‌ಲೋಡ್ ಮಾಡಿಕೊಂಡು ಕೇಳಬಹುದು. ಮಾಸ್ತಿಯವರ 'ಸುಬ್ಬಣ್ಣ', ಭೈರಪ್ಪನವರ 'ಧರ್ಮಶ್ರೀ', ಬೀಚಿಯವರ 'ಮಾತನಾಡುವ ದೇವರುಗಳು', ವಸುಧೇಂದ್ರರ 'ನಮ್ಮಮ್ಮ ಅಂದ್ರೆ ನಂಗಿಷ್ಟ' ಸೇರಿದಂತೆ ಹಲವು ಕೃತಿಗಳು ಧ್ವನಿಮುದ್ರಿತ ರೂಪದಲ್ಲಿ ಪ್ರಕಟವಾಗಿವೆ. 'ಕೇಳಿ ಕಥೆಯ' ಎನ್ನುವ ಕೇಳುಪುಸ್ತಕದಲ್ಲಂತೂ ಕತೆಗಳ ಗೊಂಚಲೇ ಇದೆ!

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಮಗ್ರ ವಚನಸಾಹಿತ್ಯ ಹಾಗೂ ಸಮಗ್ರ ದಾಸಸಾಹಿತ್ಯ ತಾಣಗಳಲ್ಲಿ ವಚನಗಳು ಹಾಗೂ ದಾಸಸಾಹಿತ್ಯದ ಧ್ವನಿಮುದ್ರಣ ಲಭ್ಯವಿದೆ.

ಗುರುವಾರ, ಸೆಪ್ಟೆಂಬರ್ 24, 2015

ಅನುವಾದ

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ  [ಹಿಂದಿನ ಲೇಖನ]

ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿಯ ಮಹಾಪೂರ ಇಂಗ್ಲಿಷಿನಲ್ಲೇ ಇರಬೇಕು ಎಂದೇನೂ ಇಲ್ಲವಲ್ಲ! ಫ್ರೆಂಚ್‌ನಲ್ಲೋ ಜರ್ಮನ್‌ನಲ್ಲೋ ಇರುವ ತಾಣದಲ್ಲೂ ನಮಗೆ ಬೇಕಾದ ಮಾಹಿತಿ ಇರಬಹುದು. ಹೀಗೆ ಬೇರಾವುದೋ ಭಾಷೆಯಲ್ಲಿ ಇರುವ ಮಾಹಿತಿಯನ್ನು ನಮ್ಮ ಭಾಷೆಗೆ ಅನುವಾದಿಸಿಕೊಳ್ಳುವ ಸೌಲಭ್ಯ 'ಗೂಗಲ್ ಟ್ರಾನ್ಸ್‌ಲೇಟ್' ಮೂಲಕ ಕನ್ನಡಕ್ಕೂ ಬಂದಿದೆ.

ಈ ಸೇವೆ ಬಳಸಿ ವಿವಿಧ ಭಾಷೆಗಳಲ್ಲಿರುವ ಮಾಹಿತಿಯನ್ನು - ತಕ್ಕಮಟ್ಟಿಗಿನ ನಿಖರತೆಯೊಂದಿಗೆ - ಕನ್ನಡಕ್ಕೆ ಅನುವಾದಿಸಿಕೊಳ್ಳಬಹುದು. ಅನುವಾದ ತಪ್ಪು ಎನಿಸಿದಾಗ ನಾವೇ ಅದನ್ನು ತಿದ್ದುವುದೂ ಸಾಧ್ಯ.

ಭಾನುವಾರ, ಸೆಪ್ಟೆಂಬರ್ 20, 2015

ಕನ್ನಡದ ಬ್ರೌಸರ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ  [ಹಿಂದಿನ ಲೇಖನ]

ವಿಶ್ವವ್ಯಾಪಿ ಜಾಲದ (ವರ್ಲ್ಡ್‌ವೈಡ್ ವೆಬ್) ಬಳಕೆದಾರರೆಲ್ಲರೂ ಕಡ್ಡಾಯವಾಗಿ ಬಳಸುವ ತಂತ್ರಾಂಶವೆಂದರೆ ಬ್ರೌಸರ್. ವಿಶ್ವವ್ಯಾಪಿ ಜಾಲದಲ್ಲಿರುವ ತಾಣಗಳನ್ನು ತಮ್ಮ ಕಂಪ್ಯೂಟರಿನಲ್ಲಿ ವೀಕ್ಷಿಸಲು ಬಳಕೆದಾರರಿಗೆ ನೆರವಾಗುವುದು ಈ ತಂತ್ರಾಂಶದ ಕೆಲಸ. ಗೂಗಲ್ ಕ್ರೋಮ್, ಮೊಜಿಲ್ಲಾ ಫೈರ್‌ಫಾಕ್ಸ್, ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಸೇರಿದಂತೆ ಹಲವಾರು ಪ್ರಮುಖ ಬ್ರೌಸರುಗಳ ಕನ್ನಡ ಆವೃತ್ತಿ ಇದೀಗ ಲಭ್ಯವಿದೆ. ಇದರಿಂದಾಗಿ ಆ ಬ್ರೌಸರುಗಳಲ್ಲಿರುವ ಆಯ್ಕೆಗಳನ್ನೆಲ್ಲ ನಾವು ಕನ್ನಡದಲ್ಲಿ ನೋಡಬಹುದು, ಬಳಸಬಹುದು.

ಶುಕ್ರವಾರ, ಸೆಪ್ಟೆಂಬರ್ 11, 2015

ಪದಪರೀಕ್ಷೆ

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ  [ಹಿಂದಿನ ಲೇಖನ]

ಇಂಗ್ಲಿಷ್ ಪದಗಳನ್ನು ಟೈಪಿಸುವಾಗ ಏನಾದರೂ ಅಕ್ಷರದೋಷಗಳಿದ್ದರೆ ಅವನ್ನು ಕೆಂಪು ಅಡಿಗೆರೆಯ ಮೂಲಕ ಗುರುತಿಸುವ, ಸ್ಪೆಲಿಂಗ್ ಸರಿಪಡಿಸಲು ಸಹಾಯವನ್ನೂ ಮಾಡುವ ಸೌಲಭ್ಯಗಳನ್ನು ನಾವು ಹಲವು ತಂತ್ರಾಂಶಗಳಲ್ಲಿ, ಜಾಲತಾಣಗಳಲ್ಲಿ ಗಮನಿಸಿರುತ್ತೇವೆ. ಇಂತಹ ಸೌಲಭ್ಯ ಕನ್ನಡದಲ್ಲೂ ಇದೆ. ಪದಸಂಸ್ಕಾರಕಗಳ ಉದಾಹರಣೆ ನೋಡುವುದಾದರೆ 'ಪದ' ತಂತ್ರಾಂಶದಲ್ಲಿ ಟೈಪಿಸಿದ ನಮ್ಮ ಪಠ್ಯದಲ್ಲಿರುವ (ಬಹುತೇಕ) ತಪ್ಪುಗಳನ್ನು ಗುರುತಿಸುವುದು ಹಾಗೂ ಸರಿಯಾದ ರೂಪಗಳನ್ನು ನೋಡುವುದು ಸಾಧ್ಯ. ಅಷ್ಟೇ ಅಲ್ಲ, ಮೊದಲ ಕೆಲ ಅಕ್ಷರಗಳನ್ನು ಟೈಪಿಸುತ್ತಿದ್ದಂತೆ ಆ ಅಕ್ಷರಗಳಿಂದ ಪ್ರಾರಂಭವಾಗುವ ಪದವನ್ನು ಸೂಚಿಸುವ ಸೌಲಭ್ಯ ಕೂಡ ಇಲ್ಲಿದೆ.

ಶನಿವಾರ, ಸೆಪ್ಟೆಂಬರ್ 5, 2015

ಟೀವಿಯನ್ನು ಸ್ಮಾರ್ಟ್ ಮಾಡೋಣ ಬನ್ನಿ!


ಒಂದು ಕಾಲವಿತ್ತು, ಬೀದಿಗೊಂದು ಟೀವಿ ಇದ್ದರೆ ಆಗ ಅದೇ ಹೆಚ್ಚು. ಶುಕ್ರವಾರದ ಚಿತ್ರಮಂಜರಿ - ಭಾನುವಾರದ ಚಲನಚಿತ್ರಗಳನ್ನೆಲ್ಲ ನೋಡಲು ಬರುವವರನ್ನು ಸಂಭಾಳಿಸುವ ಹೆಚ್ಚುವರಿ ಜವಾಬ್ದಾರಿ ಆಗಿನ ಟೀವಿ ಮಾಲೀಕರಿಗೆ ಉಚಿತವಾಗಿ ದೊರಕುತ್ತಿತ್ತು. ಟೀವಿ ನೋಡಲು ನೆರೆಮನೆಗೆ ಹೋಗುವ ವ್ಯವಸ್ಥೆ ಅಂದಿನ ಕಾಲದ ಸೋಶಿಯಲ್ ನೆಟ್‌ವರ್ಕ್ ಆಗಿತ್ತು ಎಂದರೂ ಸರಿಯೇ!

ಮುಂದೆ ಟೀವಿಯ ಜನಪ್ರಿಯತೆ ಹಾಗೂ ಅದನ್ನು ಕೊಳ್ಳುವ ಶಕ್ತಿಗಳೆರಡೂ ಹೆಚ್ಚಿದಂತೆ ಎಲ್ಲ ಮನೆಗಳಿಗೂ ಟೀವಿಯ ಆಗಮನವಾಯಿತು. ಕಪ್ಪು ಬಿಳುಪು ಹೋಗಿ ಬಣ್ಣದ ಟೀವಿ ಬಂತು, ಫ್ಲ್ಯಾಟ್ ಸ್ಕ್ರೀನ್ - ಎಲ್‌ಸಿಡಿ - ಎಲ್‌ಇಡಿ ಟೀವಿಗಳ ಪರಿಚಯವಾಯಿತು, ನೈಜ ದೃಶ್ಯದಷ್ಟೇ ಸುಸ್ಪಷ್ಟವಾಗಿ ಚಿತ್ರಗಳನ್ನು ಪ್ರದರ್ಶಿಸುವ ಹೈ ಡೆಫನಿಶನ್ (ಎಚ್‌ಡಿ) ಟೀವಿಗಳೂ ಬಂದವು.

ಬುಧವಾರ, ಸೆಪ್ಟೆಂಬರ್ 2, 2015

ಯುನಿಕೋಡ್

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ  [ಹಿಂದಿನ ಲೇಖನ]


ಹಿಂದಿನ ಕನ್ನಡ ಪದಸಂಸ್ಕಾರಕಗಳನ್ನು ಬಳಸುವಾಗ ನಾವು ನಿರ್ದಿಷ್ಟ ಫಾಂಟುಗಳನ್ನು ಅವಲಂಬಿಸಬೇಕಾದ್ದು ಅನಿವಾರ್ಯವಾಗಿತ್ತು. ಟೈಪಿಸುವುದು ಹಾಗಿರಲಿ, ಫಾಂಟ್ ಇನ್‌ಸ್ಟಾಲ್ ಮಾಡಿಕೊಳ್ಳದೆ ಕನ್ನಡದ ಪಠ್ಯ ಓದುವುದೂ ಆಗ ಸಾಧ್ಯವಾಗುತ್ತಿರಲಿಲ್ಲ.

ಈ ಪರಿಸ್ಥಿತಿ ಬದಲಾದದ್ದು ಯುನಿಕೋಡ್ ಸಂಕೇತ ವಿಧಾನ ಬಳಕೆಗೆ ಬಂದಾಗ (ನೆನಪಿಡಿ, ಯುನಿಕೋಡ್ ಒಂದು ಸಂಕೇತ ವಿಧಾನ - ತಂತ್ರಾಂಶ ಅಲ್ಲ). ಈ ಸೌಲಭ್ಯವಿರುವ ತಂತ್ರಾಂಶಗಳಲ್ಲಿ ಬೆರಳಚ್ಚು ಮಾಡಿದ ಮಾಹಿತಿಯನ್ನು ನೇರವಾಗಿ ಯುನಿಕೋಡ್‌ನಲ್ಲೇ ಸಂಗ್ರಹಿಸಿಡಲಾಗುತ್ತದೆ, ಹಳೆಯ ತಂತ್ರಾಂಶಗಳಂತೆ ಅಕ್ಷರಶೈಲಿಯ (ಫಾಂಟ್) ಸಂಕೇತಗಳಲ್ಲಿ ಅಲ್ಲ. ಹಾಗಾಗಿ ಯುನಿಕೋಡ್‌ನಲ್ಲಿರುವ ಮಾಹಿತಿಯನ್ನು ಬೇರೊಬ್ಬರು ಓದಲು ಕನ್ನಡದ ಯಾವುದೇ ಯುನಿಕೋಡ್ ಅಕ್ಷರಶೈಲಿ (ಓಪನ್‌ಟೈಪ್ ಫಾಂಟ್) ಇದ್ದರೆ ಸಾಕು.

ಗುರುವಾರ, ಆಗಸ್ಟ್ 27, 2015

ಫಿಕಾಮ್ ಎನರ್ಜಿ 653: ಕಡಿಮೆ ಬೆಲೆಯ ಉತ್ತಮ ಮೊಬೈಲ್

ದೇಶದಲ್ಲಿರುವ ಜನರ ಸಂಖ್ಯೆಯ ಜೊತೆಗೆ ಮೊಬೈಲುಗಳ ಸಂಖ್ಯೆಯಲ್ಲೂ ವಿಶ್ವದ ರಾಷ್ಟ್ರಗಳಲ್ಲಿ ಭಾರತಕ್ಕೆ ಮುಂಚೂಣಿ ಸ್ಥಾನ. ಜೀವನಾವಶ್ಯಕ ವಸ್ತುಗಳ ಸಾಲಿನಲ್ಲಿ ಊಟ-ಬಟ್ಟೆ-ಸೂರಿನ ಜೊತೆಗೆ ಮೊಬೈಲ್ ದೂರವಾಣಿಯನ್ನು ಸೇರಿಸುವವರನ್ನೂ ನಾವಿಲ್ಲಿ ಕಾಣಬಹುದು.

ಕಾಲ ಬದಲಾದಂತೆ ತಂತ್ರಜ್ಞಾನವೂ ಬದಲಾಗುವುದು ಸಾಮಾನ್ಯ ತಾನೆ, ಅಂತಹ ಬದಲಾವಣೆಗಳಿಗೆ ಹೊಂದಿಕೊಳ್ಳುವುದರಲ್ಲೂನಾವು ಸದಾ ಮುಂದೆ. ಮೊದಲಿಗೆ ಮೊಬೈಲ್ ಫೋನುಗಳ ಪರಿಚಯವಾದಾಗ, ಸ್ಮಾರ್ಟ್‌ಫೋನುಗಳು ಮಾರುಕಟ್ಟೆಗೆ ಬಂದಾಗ, 2G ಹೋಗಿ 3Gಯ ಆಗಮನವಾದಾಗ - ಇಂತಹ ಎಲ್ಲ ಸಂದರ್ಭಗಳಲ್ಲೂ ಕಾಣಿಸಿದ ನಮ್ಮ ಉತ್ಸಾಹ ಮೊಬೈಲ್ ಸಂಸ್ಥೆಗಳ ಮಾರುಕಟ್ಟೆಯನ್ನು ವಿಸ್ತರಿಸಿತ್ತು; ತಂತ್ರಜ್ಞಾನದ ಬೆಳವಣಿಗೆಯನ್ನು ಇನ್ನಷ್ಟು ಪ್ರೋತ್ಸಾಹಿಸಿತ್ತು.

ಇದರಿಂದಾಗಿಯೇ ಏನೋ ಹೊಸ ಉತ್ಪನ್ನಗಳು ಒಂದರ ಹಿಂದೊಂದರಂತೆ ನಮ್ಮ ಮಾರುಕಟ್ಟೆಗೆ ಬರುತ್ತಲೇ ಇರುತ್ತವೆ.

ಬುಧವಾರ, ಆಗಸ್ಟ್ 26, 2015

ಕಂಪ್ಯೂಟರಿನಲ್ಲಿ ಕನ್ನಡ ಅಕ್ಷರ

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ  [ಹಿಂದಿನ ಲೇಖನ]

'ಸೇಡಿಯಾಪು' ತಂತ್ರಾಂಶ
ಕಂಪ್ಯೂಟರ್ ಪ್ರಪಂಚದಲ್ಲಿ ಕನ್ನಡ ಮೊದಲಿಗೆ ಬಳಕೆಯಾಗಿದ್ದು ಇಂಗ್ಲಿಷ್ ಲಿಪಿಯ ಮೂಲಕ. ಇಂಗ್ಲಿಷ್ ಅಕ್ಷರಗಳಲ್ಲಿ ಕನ್ನಡವನ್ನು ಮೂಡಿಸುವ ಈ ವಿಧಾನ 'ಕಂಗ್ಲಿಷ್' ಭಾಷೆ ಎಂದೇ ಜನಪ್ರಿಯ. ಕನ್ನಡದ 'ನಮಸ್ಕಾರ'ವನ್ನು ಇಂಗ್ಲಿಷಿನಲ್ಲಿ 'namaskaara' ಎಂದು ಲಿಪ್ಯಂತರ ಮಾಡಿ ಬರೆಯುವ ಈ ವಿಧಾನವನ್ನು ಇನ್ನೂ ಇಮೇಲ್-ಚಾಟ್-ಎಸ್ಸೆಮ್ಮೆಸ್ ಇತ್ಯಾದಿಗಳಲ್ಲಿ ಬಳಸಲಾಗುತ್ತದೆ.

ಕನ್ನಡದ ಪದಸಂಸ್ಕಾರಕ, ಅಂದರೆ ವರ್ಡ್ ಪ್ರಾಸೆಸರ್ ತಂತ್ರಾಂಶಗಳು ಬಂದಾಗ ಕಂಪ್ಯೂಟರ್ ಪ್ರಪಂಚದಲ್ಲಿ ಕನ್ನಡದ ಬಳಕೆಗೆ ಮೊದಲ ಪ್ರೋತ್ಸಾಹ ದೊರಕಿತು. ಈ ತಂತ್ರಾಂಶಗಳಿಂದಾಗಿ ಕಂಪ್ಯೂಟರಿನಲ್ಲಿ ಕನ್ನಡ ಅಕ್ಷರಗಳನ್ನು ಮೂಡಿಸುವುದು, ಕಂಪ್ಯೂಟರ್ ಸಹಾಯದಿಂದ ಅವನ್ನು ಮುದ್ರಿಸಿಕೊಳ್ಳುವುದು ಸಾಧ್ಯವಾಯಿತು.

ಶುಕ್ರವಾರ, ಆಗಸ್ಟ್ 21, 2015

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ

ಕಂಪ್ಯೂಟರ್ ಪ್ರಪಂಚದಲ್ಲಿ ಕನ್ನಡದ ಸಾಧ್ಯತೆಗಳು 

ಆಧುನಿಕ ಕಂಪ್ಯೂಟರುಗಳಿಗೆ, ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚೆಂದರೆ ಒಂದು ಶತಮಾನದಷ್ಟು ಇತಿಹಾಸವಿದೆ. ಜನಸಾಮಾನ್ಯರು ಮಾಹಿತಿ ತಂತ್ರಜ್ಞಾನದ ಸಂಪರ್ಕಕ್ಕೆ ಬಂದದ್ದಂತೂ ಈಚೆಗೆ, ಕೆಲ ದಶಕಗಳ ಹಿಂದೆಯಷ್ಟೆ. ಇಷ್ಟು ಕಡಿಮೆ ಅವಧಿಯಲ್ಲಿ, ಪ್ರಾಯಶಃ ಬೇರಾವ ಕ್ಷೇತ್ರಕ್ಕೂ ಸಾಧ್ಯವಾಗದಷ್ಟು ಪ್ರಮಾಣದಲ್ಲಿ, ನಮ್ಮ ಬದುಕಿನಲ್ಲಿ ಗಮನಾರ್ಹ ಬದಲಾವಣೆಗಳನ್ನು ತಂದದ್ದು ಮಾಹಿತಿ ತಂತ್ರಜ್ಞಾನದ ಹೆಗ್ಗಳಿಕೆಯೆಂದೇ ಹೇಳಬೇಕು.

ಮಾಹಿತಿ ತಂತ್ರಜ್ಞಾನ ಕ್ಷೇತ್ರ ಬೆಳೆಯುತ್ತಿದ್ದ ಸಮಯದಲ್ಲಿ ಅದರ ವ್ಯಾಪ್ತಿ ದೊಡ್ಡದೊಡ್ಡ ಸಂಸ್ಥೆಗಳಿಗೆ, ವಿಶ್ವವಿದ್ಯಾಲಯ-ಸಂಶೋಧನಾ ಕೇಂದ್ರಗಳಿಗಷ್ಟೆ ಸೀಮಿತವಾಗಿತ್ತು. ಅಂತಹ ಸಮಯದಲ್ಲಿ ಕಂಪ್ಯೂಟರುಗಳಿಂದ ಏನು ಕೆಲಸವಾಗಬಲ್ಲದು ಎನ್ನುವುದು ಮುಖ್ಯವಾಗಿತ್ತೇ ಹೊರತು ಆ ಕೆಲಸಕ್ಕೆ ಯಾವ ಭಾಷೆಯ ಮಾಧ್ಯಮ ಬಳಕೆಯಾಗಬೇಕು ಎನ್ನುವುದಕ್ಕೆ ಅಷ್ಟೇನೂ ಮಹತ್ವವಿರಲಿಲ್ಲ. ಆ ಸಮಯದಲ್ಲಿ ಕಂಪ್ಯೂಟರ್ ಪ್ರಪಂಚದ ಬಹುಪಾಲು ವ್ಯವಹಾರವೆಲ್ಲ ಇಂಗ್ಲಿಷಿನಲ್ಲೇ ನಡೆಯುತ್ತಿತ್ತು ಎನ್ನಬಹುದು.

ಆನಂತರದ ಸಮಯದಲ್ಲಿ ಮಾಹಿತಿ ತಂತ್ರಜ್ಞಾನದ ಹರವು ಇನ್ನಷ್ಟು ವಿಸ್ತರಿಸಿದಂತೆ ಅದು ಜನಸಾಮಾನ್ಯರ ಸಮೀಪಕ್ಕೂ ಬಂತು. ತಂತ್ರಜ್ಞಾನ ಸಾಮಾನ್ಯರಿಗೂ ಆಪ್ತವಾಗಬೇಕಾದರೆ ಅದು ಜನರ ಭಾಷೆಯನ್ನು ಕಲಿಯಬೇಕೇ ಹೊರತು ಜನರು ತಂತ್ರಜ್ಞಾನದ ಭಾಷೆ ಕಲಿಯುವಂತಾಗಬಾರದು ಎಂಬ ಅಭಿಪ್ರಾಯ ರೂಪುಗೊಂಡಿತು.

ಬುಧವಾರ, ಆಗಸ್ಟ್ 5, 2015

ಕಳೆದುಹೋದ ಕತ್ತಲು

ಮಾಲಿನ್ಯದ ಕಾಟ ಈಗ ಬರಿಯ ನೀರು-ಗಾಳಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ಕೃತಕ ಬೆಳಕಿನ ಮಿತಿಮೀರಿದ ಬಳಕೆ ನಮ್ಮೆದುರಿಗೆ ಬೆಳಕಿನ ಮಾಲಿನ್ಯವೆಂಬ ಹೊಸದೊಂದು ಸಮಸ್ಯೆಯನ್ನು ತಂದಿಟ್ಟಿದೆ. ಈ ಕುರಿತು ಅತ್ಯಂತ ಮಾಹಿತಿಪೂರ್ಣವಾದ ಒಂದು ವೀಡಿಯೋ ಇಲ್ಲಿದೆ. ನೋಡಿ, ಹಂಚಿಕೊಳ್ಳಿ!


Video by International Dark-Sky Association
ಕನ್ನಡ ಅವತರಣಿಕೆ: ಜವಾಹರ್ ಲಾಲ್ ನೆಹರು ತಾರಾಲಯ

ಈ ವೀಡಿಯೋ ಅನ್ನು ಹಂಚಿಕೊಂಡಿದ್ದಕ್ಕಾಗಿ ಡಾ. ಬಿ. ಎಸ್. ಶೈಲಜಾ ಅವರಿಗೆ ವಿಶೇಷ ಕೃತಜ್ಞತೆಗಳು.

ಸೋಮವಾರ, ಆಗಸ್ಟ್ 3, 2015

ಸೆಲ್ಫಿ ಸಮಾಚಾರ



ಫೋಟೋ ಕ್ಲಿಕ್ಕಿಸುವ ಹವ್ಯಾಸವಿರುವವರಿಗೆ ಯಾವಾಗಲೂ ಒಂದು ಸಮಸ್ಯೆ: ಅವರು ಎಷ್ಟೇ ಒಳ್ಳೆಯ ಛಾಯಾಗ್ರಾಹಕರಾಗಿದ್ದರೂ ಅವರ ಫೋಟೋವನ್ನು ಬೇರೊಬ್ಬ ಛಾಯಾಗ್ರಾಹಕನೇ ಕ್ಲಿಕ್ಕಿಸಬೇಕು. ಅವರ ಕಲ್ಪನಾಶಕ್ತಿಯೇನಿದ್ದರೂ ಬೇರೆಯವರ ಚಿತ್ರಗಳನ್ನು ಕ್ಲಿಕ್ಕಿಸಲಷ್ಟೇ ಸೀಮಿತವಾಗಿರಬೇಕು, ಇಲ್ಲವೇ ಕ್ಯಾಮೆರಾವನ್ನು ತನ್ನತ್ತ ತಿರುಗಿಸಿಕೊಂಡು ಬೇಕಾದಂತೆ ಫೋಟೋ ಕ್ಲಿಕ್ಕಿಸಲು ತಿಣುಕಬೇಕು.

ಮೊಬೈಲ್ ಫೋನ್ ಕ್ಯಾಮೆರಾಗಳು ಜನಪ್ರಿಯವಾಗುವವರೆಗೆ ಈ ಸಮಸ್ಯೆ ಸಾಕಷ್ಟು ವ್ಯಾಪಕವಾಗಿಯೇ ಇತ್ತು. ಮೊಬೈಲಿನಲ್ಲೇ ಕ್ಯಾಮೆರಾ ಬಂದಮೇಲೆ ಸ್ವಂತಚಿತ್ರವನ್ನು ಕ್ಲಿಕ್ಕಿಸಿಕೊಳ್ಳಲು ದೊಡ್ಡ ಕ್ಯಾಮೆರಾವನ್ನು ತಿರುವುಮುರುವಾಗಿ ಹಿಡಿದುಕೊಂಡು ತಿಣುಕುವುದು ತಪ್ಪಿತು!

ಶುಕ್ರವಾರ, ಜುಲೈ 31, 2015

ಸ್ಮಾರ್ಟ್‌ಫೋನ್ ಮುಖ ೧೦: ಟಿಕ್‌ಟಿಕ್ ಗೆಳೆಯ

ಮೊಬೈಲ್ ಬಳಸಲು ಶುರುಮಾಡಿದ ಮೇಲೆ ವಾಚ್ ಕಟ್ಟುವುದನ್ನೇ ಬಿಟ್ಟುಬಿಟ್ಟಿದ್ದೇನೆ ಎನ್ನುವ ಅನೇಕರನ್ನು ನಾವು ನೋಡಬಹುದು. ಕೈಗಡಿಯಾರ ಮಾತ್ರವೇ ಏಕೆ, ಹಾಸಿಗೆ ಪಕ್ಕದಲ್ಲಿರುತ್ತಿದ್ದ ಅಲಾರಂ ಗಡಿಯಾರಕ್ಕೆ ನಿವೃತ್ತಿ ಕೊಟ್ಟದ್ದೂ ಮೊಬೈಲ್ ದೂರವಾಣಿಯೇ. ಅಷ್ಟೇ ಅಲ್ಲ, ಅಲಾರಂ ಗಡಿಯಾರಕ್ಕೆ ಆಧುನಿಕತೆಯ ಸ್ಪರ್ಶ ಕೊಟ್ಟದ್ದೂ ಮೊಬೈಲಿನ ಹೆಚ್ಚುಗಾರಿಕೆ. ಒಮ್ಮೆ ಹೊಂದಿಸಿದ ಅಲಾರಂ ಪ್ರತಿದಿನವೂ ಹೊಡೆಯುವಂತೆ ನೋಡಿಕೊಳ್ಳುವುದು, ವಾರದ ಬೇರೆಬೇರೆ ದಿನ ಬೇರೆಬೇರೆ ಸಮಯಕ್ಕೆ ಅಲಾರಂ ಹೊಂದಿಸುವುದು ಮುಂತಾದ ಕೆಲಸಗಳೆಲ್ಲ ಮೊಬೈಲಿನಲ್ಲಿ ಬಲು ಸುಲಭ. ಅರ್ಧನಿದ್ದೆಯಲ್ಲಿ ಎದ್ದು, ಅಲಾರಂ ಗಡಿಯಾರದ ತಲೆಯ ಮೇಲೆ ಮೊಟಕಿ ಮತ್ತೆ ಮಲಗುತ್ತಿದ್ದೆವಲ್ಲ - ಅಂತಹ ಸನ್ನಿವೇಶಗಳನ್ನು ತಪ್ಪಿಸಲು ಬೇಕಾದ ಸೌಲಭ್ಯಗಳನ್ನೂ ಆಪ್‌ಗಳ ಮೂಲಕ ಪಡೆದುಕೊಳ್ಳಬಹುದು. ಪೂರ್ತಿಯಾಗಿ ಎಚ್ಚರಮಾಡಿಕೊಂಡು ಸಣ್ಣದೊಂದು ಪ್ರಶ್ನೆಗೆ ಉತ್ತರಿಸುವವರೆಗೂ ಅಲಾರಂ ನಿಲ್ಲದಿರುವ ವ್ಯವಸ್ಥೆ ಇಂತಹ ಕೆಲ ಆಪ್‌ಗಳಲ್ಲಿರುತ್ತದೆ.

ಮೊಬೈಲ್ ಫೋನುಗಳು ಕೈಗಡಿಯಾರದ ಕಾಲವನ್ನು ಇನ್ನೇನು ಮುಗಿಸಿಯೇಬಿಟ್ಟವು ಎನ್ನುವಷ್ಟರಲ್ಲಿ ಸ್ಮಾರ್ಟ್ ವಾಚುಗಳು ಮಾರುಕಟ್ಟೆಗೆ ಬಂದಿವೆ. ಸಮಯ ತೋರಿಸುವ ಹಾಗೂ ಅಲಾರಂ ಹೊಡೆಯುವ ಕೆಲಸಗಳಿಗಷ್ಟೇ ಸೀಮಿತವಾಗದೆ ಈ ಹೊಸಬಗೆಯ ವಾಚುಗಳು ಆರೋಗ್ಯದ ಮೇಲೆ ನಿಗಾ ಇಡುವುದನ್ನು, ಮೊಬೈಲಿನ ವಿಸ್ತರಣೆಯಂತೆ ಕೆಲಸಮಾಡುವುದನ್ನೆಲ್ಲ ಕಲಿತುಬಿಟ್ಟಿವೆ (ಸ್ಮಾರ್ಟ್‌ವಾಚ್ ಬಳಸಿ ಮೊಬೈಲಿಗೆ ಬರುವ ಸಂದೇಶವನ್ನು ಓದುವುದು, ಕರೆಗಳಿಗೆ ಉತ್ತರಿಸುವುದು ಸಾಧ್ಯ; ಹೃದಯದ ಬಡಿತ-ದೇಹದ ಉಷ್ಣತೆಯನ್ನು, ನಾವು ಮಾಡುತ್ತಿರುವ ವ್ಯಾಯಾಮದ ಪ್ರಮಾಣವನ್ನು ಗಮನಿಸಿಕೊಳ್ಳುವ ಸಾಮರ್ಥ್ಯವೂ ಕೆಲ ವಾಚುಗಳಲ್ಲಿರುತ್ತವೆ). ಮೊದಲಿಗೆ ಮೊಬೈಲ್ ಫೋನಿನ ಜೊತೆಗಷ್ಟೆ ಬಳಕೆಯಾಗುತ್ತಿದ್ದ ಈ ಸ್ಮಾರ್ಟ್ ಕೈಗಡಿಯಾರಗಳು ಮುಂದೊಮ್ಮೆ ಮೊಬೈಲಿಗೆ ಪರ್ಯಾಯವಾಗಿ ಬೆಳೆದರೂ ಆಶ್ಚರ್ಯವಿಲ್ಲ ಎಂದು ತಜ್ಞರು ಹೇಳುತ್ತಾರೆ. 

ತಂತ್ರಜ್ಞಾನದ ಪ್ರಪಂಚವೆಂದರೆ ಹಾಗೆಯೇ ತಾನೆ? ಬದಲಾವಣೆಯೇ ಈ ಜಗದ ನಿಯಮ!

ಪ್ರಸ್ತುತ ಬರಹದೊಡನೆ ಈ ಸರಣಿ ಮುಕ್ತಾಯವಾಯಿತು | ಈವರೆಗಿನ ಮುಖಗಳು

ಶುಕ್ರವಾರ, ಜುಲೈ 24, 2015

ಸ್ಮಾರ್ಟ್‌ಫೋನ್ ಮುಖ ೯: ಸ್ಮಾರ್ಟ್ ಮನೆಯ ಸ್ಮಾರ್ಟ್ ಕೀಲಿ

ಎಲ್ಲ ಸಾಧನಗಳೂ ಒಂದೊಂದಾಗಿ ಸ್ಮಾರ್ಟ್ ಆಗುತ್ತಿದ್ದಂತೆ ಒಟ್ಟಾರೆಯಾಗಿ ನಮ್ಮ ಮನೆಯೇ ಸ್ಮಾರ್ಟ್ ಆಗಿಬಿಟ್ಟಿದೆಯಲ್ಲ, ಈ ಸ್ಮಾರ್ಟ್ ಮನೆಯೊಡನೆ ಸುಲಭವಾಗಿ ವ್ಯವಹರಿಸಲು ಮೊಬೈಲ್ ಫೋನನ್ನು ಬಳಸಬಹುದು. ಮೊಬೈಲ್ ಫೋನ್ ಸಹಾಯದಿಂದ ತೆರೆಯಬಹುದಾದ ಸ್ಮಾರ್ಟ್ ಬೀಗಗಳು ಈಗಾಗಲೇ ತಯಾರಾಗಿವೆ. ಮನೆಯ ಸ್ವಿಚ್ಚುಗಳನ್ನು ಮೊಬೈಲ್ ಬಳಸಿಯೇ ಹೊತ್ತಿಸುವುದು - ಆರಿಸುವುದು, ಮನೆಯಲ್ಲಿ ನಡೆಯುತ್ತಿರುವ ಘಟನೆಗಳ ಮೇಲೆ ಮೊಬೈಲ್ ಮೂಲಕವೇ ಕಣ್ಣಿಡುವುದು ಸಾಧ್ಯವಾಗಿದೆ. ಬಿಸಿಲಿನಲ್ಲಿ ನಿಂತಿರುವ ಕಾರಿನ ಬಳಿ ಹೋಗುವಷ್ಟರಲ್ಲೇ ಅದರ ಏಸಿ ಪ್ರಾರಂಭವಾಗುವಂತೆ ಮಾಡುವ ವ್ಯವಸ್ಥೆ ಕೂಡ ಇದೆ. ಕಂಪ್ಯೂಟರಿನ ಪ್ರೆಸೆಂಟೇಶನ್ ಇರಲಿ, ಟೀವಿಯ ಚಾನೆಲ್ ಇರಲಿ - ಎಲ್ಲವನ್ನೂ ಮೊಬೈಲ್ ಬಳಸಿಯೇ ನಿಯಂತ್ರಿಸುವುದು ಇದೀಗ ಸಾಧ್ಯ. ಇಂಟರ್‌ನೆಟ್ ಸೌಲಭ್ಯ ಕೈಕೊಟ್ಟರೆ ಮೊಬೈಲ್ ಫೋನನ್ನೇ ವೈ-ಫಿ ಹಾಟ್‌ಸ್ಪಾಟ್ ಆಗಿ ಬದಲಿಸಿ ಹಲವು ಸಾಧನಗಳಿಗೆ ಅಂತರಜಾಲ ಸಂಪರ್ಕ ಒದಗಿಸಿಕೊಡುವುದಂತೂ ಈಗಾಗಲೇ ಹಳೆಯ ಸಂಗತಿ!

ಮುಂದಿನ ವಾರ: ಟಿಕ್‌ಟಿಕ್ ಗೆಳೆಯ | ಈವರೆಗಿನ ಮುಖಗಳು

ಶನಿವಾರ, ಜುಲೈ 18, 2015

ಸ್ಮಾರ್ಟ್‌ಫೋನ್ ಮುಖ ೮: ಡಿಜಿಟಲ್ ಸಹಾಯಕ

ದೊಡ್ಡ ಹುದ್ದೆಯಲ್ಲಿರುವ ಅಧಿಕಾರಿಗಳಿಗೆ ಅವರ ಕೆಲಸದಲ್ಲಿ ನೆರವಾಗಲು ಸಹಾಯಕರಿರುತ್ತಾರಲ್ಲ, ಅದೇ ರೀತಿಯಲ್ಲಿ ಮೊಬೈಲ್ ದೂರವಾಣಿ ನಮ್ಮೆಲ್ಲರಿಗೂ ಸಹಾಯಕನಂತೆ ಕೆಲಸಮಾಡುತ್ತಿದೆ ಎನ್ನಬಹುದು. ಮಾಡಬೇಕಿರುವ ಕೆಲಸದ ಬಗ್ಗೆ ನೆನಪಿಸುವುದು, ಹುಟ್ಟುಹಬ್ಬದಂತಹ ಸಂದರ್ಭಗಳನ್ನು ನೆನಪಿಟ್ಟುಕೊಳ್ಳುವುದು, ಮುಂಬರುವ ಪ್ರಯಾಣದ ವಿವರಗಳನ್ನು ನೀಡುವುದು, ಹವಾಮಾನದ ವಿವರಗಳನ್ನು ಕೊಡುವುದು - ಎಲ್ಲವನ್ನೂ ಮೊಬೈಲ್ ಫೋನ್ ಮಾಡುತ್ತದೆ. ಬೇಕಾದಾಗ ಆಟೋ-ಟ್ಯಾಕ್ಸಿಗಳನ್ನು ಕರೆಸುತ್ತದೆ, ಹೋಟಲಿನಿಂದ ಊಟ ತರಿಸಿಕೊಡುತ್ತದೆ. ಮುಖ್ಯವಾದ ಮಾಹಿತಿಯನ್ನು ಗುರುತುಹಾಕಿಕೊಳ್ಳುವುದಕ್ಕೆ, ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸೂಕ್ತವಾಗಿ ವಿಂಗಡಿಸಿಟ್ಟುಕೊಳ್ಳುವುದಕ್ಕೂ ಮೊಬೈಲ್ ಫೋನ್ ಬಳಸುವುದು ಸಾಧ್ಯ. ಹೀಗೆ ಶೇಖರಿಸಿಟ್ಟುಕೊಂಡ ಮಾಹಿತಿ ನಾವು ಉಪಯೋಗಿಸುವ ಎಲ್ಲ ಸಾಧನಗಳಲ್ಲೂ (ಕಂಪ್ಯೂಟರ್, ಟ್ಯಾಬ್ಲೆಟ್ ಇತ್ಯಾದಿ) ದೊರಕುವಂತೆ ಕೂಡ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲ, ನಾವು ನಿದ್ರಿಸುತ್ತಿರುವ ಸಂದರ್ಭದಲ್ಲಿ ಯಾರೂ ನಮಗೆ ಕರೆಮಾಡಿ ತೊಂದರೆಕೊಡದಂತೆ, ಆಫೀಸಿನಲ್ಲಿದ ಸೈಲೆಂಟ್ ಮೋಡ್ ಅಲ್ಲಿಂದ ಹೊರಬಂದ ತಕ್ಷಣ ಬದಲಾಗುವಂತೆಲ್ಲ ಮಾಡುಕೊಳ್ಳಲು ಕೂಡ ಮೊಬೈಲ್ ಸಹಾಯಕನ ಮೊರೆಹೋಗುವುದು ಸಾಧ್ಯ.

ಮುಂದಿನ ವಾರ: ಸ್ಮಾರ್ಟ್ ಮನೆಯ ಸ್ಮಾರ್ಟ್ ಕೀಲಿ | ಈವರೆಗಿನ ಮುಖಗಳು

ಭಾನುವಾರ, ಜುಲೈ 12, 2015

ಸ್ಮಾರ್ಟ್‌ಫೋನ್ ಮುಖ ೭: ಜೇಬಿನೊಳಗಿನ ಪರ್ಸು

ಅಂಗಡಿಯಲ್ಲಿ ಏನಾದರೂ ಕೊಂಡರೆ ಅದಕ್ಕೆ ನೋಟು-ನಾಣ್ಯಗಳ ರೂಪದ ಪಾವತಿ ನೀಡಬೇಕಿದ್ದ ಪರಿಸ್ಥಿತಿಯನ್ನು ಕ್ರೆಡಿಟ್ ಕಾರ್ಡ್ - ಡೆಬಿಟ್ ಕಾರ್ಡುಗಳು ಬದಲಿಸಿದವಲ್ಲ, ಈಗ ಮೊಬೈಲ್ ಫೋನುಗಳು ಕಾರ್ಡುಗಳನ್ನೇ ಹಳತಾಗಿಸಲು ಹೊರಟಿವೆ. ಬ್ಯಾಂಕ್ ಖಾತೆಯ ಮೂಲಕ ಹಣ ವರ್ಗಾವಣೆ ಇರಲಿ, ಮೊಬೈಲ್ ರೀಚಾರ್ಜ್ ಅಥವಾ ಬಿಲ್ ಪಾವತಿ ಇರಲಿ - ಎಲ್ಲವೂ ಈಗ ಮೊಬೈಲಿನಲ್ಲೇ ಸಾಧ್ಯ. ಮನೆಯ ಟೀವಿಯಿಂದ ಹಲ್ಲುಜ್ಜುವ ಬ್ರಶ್‌ವರೆಗೆ, ದ್ವಿಚಕ್ರ ವಾಹನದಿಂದ ದ್ವಿದಳ ಧಾನ್ಯಗಳವರೆಗೆ ಸಮಸ್ತವನ್ನೂ ಮೊಬೈಲಿನಲ್ಲೇ ಕೊಳ್ಳಬಹುದು. ಬಸ್ಸು-ರೈಲು-ವಿಮಾನಗಳಲ್ಲಿ ಟಿಕೇಟು ಕಾಯ್ದಿರಿಸಬಹುದು. ಮೊಬೈಲ್ ರೀಚಾರ್ಜ್, ಟ್ಯಾಕ್ಸಿ, ಆನ್‌ಲೈನ್ ಶಾಪಿಂಗ್ ಮುಂತಾದ ಅನೇಕ ಸೇವೆಗಳನ್ನು ಬಳಸಲು 'ವ್ಯಾಲೆಟ್'ಗಳಲ್ಲಿ ಹಣ ಇಟ್ಟು ಬೇಕಾದಾಗ ಬೇಕಾದಷ್ಟು ಮೊತ್ತವನ್ನು ಮೊಬೈಲಿನಿಂದಲೇ ಪಾವತಿಸುವ ಅಭ್ಯಾಸವೂ ಬೆಳೆಯುತ್ತಿದೆ. ಅಷ್ಟೇ ಅಲ್ಲ, ಒಂದೇ ವ್ಯಾಲೆಟ್ ಅನ್ನು ಹಲವು ಸೇವೆಗಳಿಗಾಗಿ ಬಳಸುವ ಯೋಚನೆಗಳೂ ಕಾರ್ಯರೂಪಕ್ಕೆ ಬಂದಿವೆ. ಅಂಗಡಿಯಲ್ಲಿ ಕಾರ್ಡ್ ಉಜ್ಜುವ ಬದಲು ಮೊಬೈಲನ್ನೇ ಸ್ಕ್ಯಾನ್ ಮಾಡಿ ಹಣ ಪಾವತಿಸುವ ರೋಚಕ ಕಲ್ಪನೆ ನಿಯರ್ ಫೀಲ್ಡ್ ಕಮ್ಯುನಿಕೇಶನ್‌ನಂತಹ (ಎನ್‌ಎಫ್‌ಸಿ) ತಂತ್ರಜ್ಞಾನಗಳಿಂದ ಸಾಕಾರವಾಗುತ್ತಿದೆ.

ಮುಂದಿನ ವಾರ: ಡಿಜಿಟಲ್ ಸಹಾಯಕ | ಈವರೆಗಿನ ಮುಖಗಳು

ಬುಧವಾರ, ಜುಲೈ 8, 2015

ಕಂಪ್ಯೂಟರ್ ಬಳಕೆಯ ಹೊಸದೊಂದು ಆಯಾಮ

ಕಂಪ್ಯೂಟರ್ ಬಳಕೆ ಬಹಳ ಸಾಮಾನ್ಯವಾದ ಸಂಗತಿ. ಪುಟ್ಟ ಮಕ್ಕಳಿಂದ ಅಜ್ಜ-ಅಜ್ಜಿಯರವರೆಗೆ ಬಹುತೇಕ ಎಲ್ಲರೂ ತಮ್ಮತಮ್ಮ ಅಗತ್ಯಗಳಿಗಾಗಿ ಕಂಪ್ಯೂಟರನ್ನು ಸರಾಗವಾಗಿ ಬಳಸುತ್ತಾರೆ.

ಆದರೆ ಕಂಪ್ಯೂಟರಿನ ನಿರ್ವಹಣೆ ಮಾತ್ರ ನಮ್ಮಲ್ಲಿ ಅನೇಕರಿಗೆ ತಲೆನೋವು ತರಿಸುವ ಸಂಗತಿ. ತಂತ್ರಾಂಶಗಳನ್ನು ಇನ್‌ಸ್ಟಾಲ್ ಮಾಡುವುದು, ಅವುಗಳನ್ನು ನವೀಕರಿಸುವುದು (ಅಪ್‌ಗ್ರೇಡ್), ವೈರಸ್ ಇತ್ಯಾದಿ ಬರದಂತೆ ನೋಡಿಕೊಳ್ಳುವುದು - ಇದನ್ನೆಲ್ಲ ಇಷ್ಟಪಟ್ಟು ಮಾಡುವವರು ಬಹಳ ಕಡಿಮೆ ಎಂದೇ ಹೇಳಬೇಕು.

ಈ ಸಮಸ್ಯೆಗೆ ಪರಿಹಾರ ಏನು? ಇನ್‌ಸ್ಟಾಲ್-ಅಪ್‌ಗ್ರೇಡುಗಳ ತಲೆಬಿಸಿಯಿಲ್ಲದೆ ಕಂಪ್ಯೂಟರನ್ನು ಬಳಸುವುದು ಸಾಧ್ಯವಿಲ್ಲವೆ?

ಕಂಪ್ಯೂಟರ್ ಬಳಕೆಯ ಹೊಸದೊಂದು ಆಯಾಮ ಕುರಿತ ವಿಶೇಷ ಲೇಖನ ಇಲ್ಲಿದೆ. ಓದಿ, ಪ್ರತಿಕ್ರಿಯೆ ನೀಡಿ.

ಈ ಲೇಖನದಲ್ಲಿ ಬಳಸಲಾಗಿರುವ ಹೊಸಬಗೆಯ ವಿನ್ಯಾಸ ಹೇಗಿದೆ? ನಿಮ್ಮ ಅನಿಸಿಕೆ ತಿಳಿಯುವ ಕುತೂಹಲ ನಮ್ಮದು.

ಶುಕ್ರವಾರ, ಜುಲೈ 3, 2015

ಸ್ಮಾರ್ಟ್‌ಫೋನ್ ಮುಖ ೬: ದಾರಿತೋರುವ ಮಾರ್ಗದರ್ಶಕ

ಪ್ರಯಾಣದ ಸಂದರ್ಭದಲ್ಲಿ ಸಾಗಬೇಕಾದ ದಾರಿಯ ಕುರಿತು ಗೊಂದಲವಾಗುವುದು ಅದೆಷ್ಟೋ ಬಾರಿ. ನಾವು ಹೋಗಬೇಕಿರುವ ಸ್ಥಳ ಎಷ್ಟು ದೂರದಲ್ಲಿದೆ, ಅಲ್ಲಿಗೆ ಹೋಗಬೇಕಿರುವ ದಾರಿ ಯಾವುದು, ಮಾರ್ಗಮಧ್ಯೆ ಯಾವ ರಸ್ತೆಯಲ್ಲಿ ತಿರುಗಬೇಕು - ಇದೆಲ್ಲ ಸಾಕಷ್ಟು ಗೊಂದಲಮೂಡಿಸುವ ಸಂಗತಿಗಳು. ಇಂತಹ ಗೊಂದಲಗಳಿಂದ ಪಾರಾಗಲು ನಾವು ಮೊಬೈಲ್ ಮೊರೆಹೋಗುವುದು ಸಾಧ್ಯ. ಈಗಿನ ಬಹುತೇಕ ಎಲ್ಲ ಫೋನುಗಳಲ್ಲೂ ಜಿಪಿಎಸ್ ಸೌಲಭ್ಯ ಇರುತ್ತದಲ್ಲ, ನಮ್ಮ ಮಾರ್ಗದರ್ಶಕನಂತೆ ಕೆಲಸಮಾಡಲು ಮೊಬೈಲ್ ಫೋನ್ ಅದೇ ತಂತ್ರಜ್ಞಾನವನ್ನು ಬಳಸುತ್ತದೆ. ನಾವು ಎಲ್ಲಿದ್ದೇವೆ ಎಂದು ಮ್ಯಾಪಿನಲ್ಲಿ ನೋಡಲು, ಹೋಗಬೇಕಾದ ದಾರಿಯನ್ನು ಗುರುತುಹಾಕಿಕೊಳ್ಳಲು 'ಗೂಗಲ್ ಮ್ಯಾಪ್ಸ್'ನಂತಹ ಹಲವು ಆಪ್‌ಗಳನ್ನು ಬಳಸುವುದು ಸಾಧ್ಯ. ಟ್ಯಾಕ್ಸಿ-ಆಟೋಗಳನ್ನು ಮೊಬೈಲ್ ಮೂಲಕವೇ ಕರೆಸುವ ಸೌಲಭ್ಯ ನೀಡುವ ಆಪ್‌ಗಳಲ್ಲಿ ವಾಹನ ಎಲ್ಲಿದೆ ಎಂದು ನಮಗೆ ತೋರಿಸುವುದಕ್ಕೆ, ನಾವೆಲ್ಲಿದ್ದೇವೆ ಎಂದು ಚಾಲಕರಿಗೆ ತಿಳಿಸುವುದಕ್ಕೂ ಇದೇ ತಂತ್ರಜ್ಞಾನ ಬಳಕೆಯಾಗುತ್ತದೆ. ಅಂದಹಾಗೆ ದಾರಿತೋರುವುದು ಎಂದರೆ ಮ್ಯಾಪ್ ತೋರಿಸುವುದಷ್ಟೇ ಏನೂ ಅಲ್ಲವಲ್ಲ, ಸುತ್ತಮುತ್ತ ಕತ್ತಲೆಯಿದ್ದಾಗ ಮೊಬೈಲ್ ಫೋನನ್ನೇ ಟಾರ್ಚಿನಂತೆ ಬಳಸುವುದು ಕೂಡ ಸಾಧ್ಯ. ಫ್ಲ್ಯಾಶ್ ಇಲ್ಲದ ಫೋನುಗಳಲ್ಲಿ ಬಳಸಲು ಪರದೆಯನ್ನೇ ಟಾರ್ಚಿನಂತೆ ಬೆಳಗಬಲ್ಲ ಆಪ್‌ಗಳೂ ಇವೆ.

ಮುಂದಿನ ವಾರ: ಜೇಬಿನೊಳಗಿನ ಪರ್ಸು | ಈವರೆಗಿನ ಮುಖಗಳು

ಸೋಮವಾರ, ಜೂನ್ 29, 2015

ಸ್ಮಾರ್ಟ್‌ಫೋನ್ ಮುಖ ೫: ಮಾಹಿತಿಯ ಮಹಾಮಳಿಗೆ

ವಿಶ್ವವ್ಯಾಪಿ ಜಾಲದಲ್ಲಿ (ವರ್ಲ್ಡ್‌ವೈಡ್ ವೆಬ್) ಮಾಹಿತಿಯ ಮಹಾಪೂರವೇ ಇದೆಯಲ್ಲ, ಅಲ್ಲಿಗೆ ಪ್ರವೇಶಿಸಲು ಮೊಬೈಲ್ ದೂರವಾಣಿಯೇ ನಮ್ಮ ಹೆಬ್ಬಾಗಿಲು. ಸರ್ಚ್ ಇಂಜನ್‌ಗಳನ್ನು ಬಳಸಿ ಮಾಹಿತಿಯನ್ನು ಹುಡುಕಲು, ಹುಡುಕಿದ ಮಾಹಿತಿಯಲ್ಲಿ ನಮಗೆ ಬೇಕಾದ್ದನ್ನು ಉಳಿಸಿಟ್ಟುಕೊಳ್ಳಲು, ಹಾಗೆ ಉಳಿಸಿಟ್ಟದ್ದನ್ನು ಸುಲಭವಾಗಿ ಮತ್ತೆ ತೆರೆದು ಓದಲು ಬೇಕಾದ ಅನೇಕ ಸೌಲಭ್ಯಗಳನ್ನು ಸ್ಮಾರ್ಟ್‌ಫೋನುಗಳು ನಮಗೆ ಒದಗಿಸುತ್ತವೆ. ವಿಕಿಪೀಡಿಯದಂತಹ ವಿಶ್ವಕೋಶಗಳು ಇದೀಗ ಮೊಬೈಲ್ ಆಪ್ ಮೂಲಕ ನಮ್ಮ ಅಂಗೈಯಲ್ಲೇ ದೊರಕುತ್ತವೆ. ಕ್ಷಣಕ್ಷಣದ ಸುದ್ದಿಗಳನ್ನು ಬಿತ್ತರಿಸುವ ಅದೆಷ್ಟೋ ಸೌಲಭ್ಯಗಳು ಇಂದು ಮೊಬೈಲಿನಲ್ಲಿವೆ. ಪತ್ರಿಕೆಗಳೂ ಅಷ್ಟೆ, ಯಾವ ದೇಶದಲ್ಲಿ ಪ್ರಕಟವಾಗುವ ಪತ್ರಿಕೆಯೇ ಆದರೂ ಅದು ಪ್ರಕಟವಾಗುತ್ತಿದ್ದಂತೆಯೇ ನಮ್ಮ ಮೊಬೈಲಿನಲ್ಲಿ ಪ್ರತ್ಯಕ್ಷವಾಗುವಂತೆ ಮಾಡಿಕೊಳ್ಳುವುದು ಸಾಧ್ಯ. ಇನ್ನು ಪುಸ್ತಕಗಳಂತೂ ಸಾವಿರಾರು ಸಂಖ್ಯೆಯಲ್ಲಿ ನಮ್ಮ ಮೊಬೈಲಿನಲ್ಲೇ ದೊರಕಬಲ್ಲವು. ಅಪರಿಚಿತ ಭಾಷೆಯ ಪಠ್ಯ ಅಥವಾ ಚಿತ್ರವನ್ನು ನಮ್ಮ ಭಾಷೆಗೆ ಅನುವಾದಿಸಿಕೊಳ್ಳುವುದರಿಂದ ಪ್ರಾರಂಭಿಸಿ ಹೊಸ ಭಾಷೆಯನ್ನು ಕಲಿಯುವತನಕ ಸ್ಮಾರ್ಟ್‌ಫೋನುಗಳು ನಮಗೆ ಹಲವು ಬಗೆಯಲ್ಲಿ ನೆರವಾಗುತ್ತವೆ. ಪ್ರವಾಸಿ ತಾಣಗಳ, ಹೋಟಲ್ಲುಗಳ ಬಗ್ಗೆ ತಿಳಿಯಬೇಕೆಂದರೆ ಅದಕ್ಕೂ ಮೊಬೈಲ್ ಫೋನ್ ಮೊರೆಹೋಗಬಹುದು.

ಮುಂದಿನ ವಾರ: ದಾರಿತೋರುವ ಮಾರ್ಗದರ್ಶಕ | ಈವರೆಗಿನ ಮುಖಗಳು

ಮಂಗಳವಾರ, ಜೂನ್ 23, 2015

ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನ ಸಾಹಿತ್ಯ : ವಿಶ್ವಾಸಾರ್ಹತೆ ಹೆಚ್ಚಿಸಿಕೊಂಡ ಕಸಾಪ

ಬೇಳೂರು ಸುದರ್ಶನ

ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ (ಸ್ಥಾಪನೆ: ಕ್ರಿಶ ೧೯೧೫) ಪ್ರಕಟಿಸಲು ಉದ್ದೇಶಿಸಿರುವ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ೧೭ ಸಂಪುಟಗಳಲ್ಲಿ ೧೪ನೇ ಸಂಪುಟವೇ ಮೊಟ್ಟಮೊದಲನೆಯದಾಗಿ ಬಿಡುಗಡೆಯಾಗಿದೆ. ಇತ್ತೀಚೆಗೆ ಶ್ರವಣಬೆಳಗೊಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾದ ಈ `ವಿಜ್ಞಾನ ತಂತ್ರಜ್ಞಾನ’ ಸಂಪುಟವು ಅತ್ಯಂತ ಹೊಣೆಗಾರಿಕೆಯಿಂದ ಪ್ರಕಟಿಸಿದ ಸಂಪಾದಿತ ಕೃತಿಯಾಗಿದೆ. ವಿಜ್ಞಾನ ತಂತ್ರಜ್ಞಾನ ಕುರಿತು ಕನ್ನಡದಲ್ಲಿ ನಡೆದ ಸಾಹಿತ್ಯಕ ಪ್ರಯತ್ನಗಳ ಸಮಗ್ರ ಚಿತ್ರಣವನ್ನು ಅಚ್ಚುಕಟ್ಟಾಗಿ ಮತ್ತು ಕೊನೇಕ್ಷಣದ ಬೆಳವಣಿಗೆಗಳನ್ನೂ ಸೇರಿಸಿ ಪ್ರಕಟಿಸಿರುವುದು ಅಭಿನಂದನೀಯ. ಸ್ವತಃ ವಿಜ್ಞಾನ ಲೇಖಕರಾಗಿ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ, ವಿವಿಧ ಸಂಪಾದಿತ ಕೃತಿಗಳಲ್ಲಿ ಹೊಣೆಗಾರಿಕೆ ಹೊತ್ತುಕೊಂಡು ಸಂಪೂರ್ಣಗೊಳಿಸಿರುವ ಹಿರಿಯರಾದ ಟಿ ಆರ್ ಅನಂತರಾಮು ಈ ಸಂಪುಟದಲ್ಲೂ ತಮ್ಮ ವೃತ್ತಿಪರತೆ ತೋರಿದ್ದಾರೆ. ಕನ್ನಡದ ವಿಜ್ಞಾನ ಲೇಖಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಯಕ್ಕೆ ಸರಿಯಾಗಿ ಸಂಪುಟವನ್ನು ಮುದ್ರಿಸಿಕೊಟ್ಟ ಅವರು ಕೃತಿಯ ಮೂಲಕವೇ ವೈಜ್ಞಾನಿಕ ಮನೋಭಾವ ಪ್ರದರ್ಶಿಸಿದ್ದಾರೆ!

ಕರ್ನಾಟಕದ ವಿಜ್ಞಾನ ಬರವಣಿಗೆಯೂ ಸರಿಸುಮಾರು ಕಸಾಪದಷ್ಟೇ ಹಳತು. ೧೯ನೇ ಶತಮಾನದಲ್ಲಿ ಚಿಗುರೊಡೆದು ೨೦ನೇ ಶತಮಾನದ ಆರಂಭದಲ್ಲಿ ಯೌವ್ವನಾವಸ್ಥೆಗೆ ಬಂದ ವಿಜ್ಞಾನ ಸಾಹಿತ್ಯವು ಈಗ ಪ್ರೌಢತೆಯ ಹೆಜ್ಜೆಗಳನ್ನು ಇಡುತ್ತಿದೆ. ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ಹಲವು ವಿಜ್ಞಾನ ತಂತ್ರಜ್ಞಾನ ಸಂಸ್ಥೆಗಳನ್ನು ಹೊಂದಿರುವ ಕನ್ನಡ ನಾಡಿನಲ್ಲಿ ವಿಜ್ಞಾನ ಸಾಹಿತ್ಯ ವಿಪುಲವಾಗಿದೆ; ಹಲವು ರಂಗಗಳನ್ನು ವ್ಯಾಪಿಸಿದೆ; ವೈಜ್ಞಾನಿಕ ಪರಿಭಾಷೆಯನ್ನು ರೂಪಿಸಿದೆ; ನಿಘಂಟು, ವಿಶ್ವಕೋಶಗಳು ಪ್ರಕಟವಾಗಿವೆ; ವಿಜ್ಞಾನ ಆಧಾರಿತ ಹೋರಾಟಗಳು ನಡೆದಿವೆ.

ಇಂಥ ವೈವಿಧ್ಯಮಯ ಹಿನ್ನೆಲೆಯನ್ನು ಶಿಸ್ತಿನಿಂದ ದಾಖಲಿಸುವುದು ಸವಾಲಿನ ಕೆಲಸ. ಆದರೆ ಟಿ ಆರ್ ಅನಂತರಾಮು ವಿಜ್ಞಾನ ಲೇಖಕರ ಪಡೆಯನ್ನೇ ಕಟ್ಟಿಕೊಂಡು ಈ ಸವಾಲನ್ನು ಯಶಸ್ವಿಯಾಗಿ ಎದುರಿಸಿದ್ದಾರೆ. ವಿಜ್ಞಾನ ಸಾಹಿತ್ಯ, ತಾಂತ್ರಿಕ ಸಾಹಿತ್ಯ, ಮಾಹಿತಿ ತಂತ್ರಜ್ಞಾನ – ಹೀಗೆ ಮೂರು ಕವಲುಗಳಲ್ಲಿ ವಿಷಯವಸ್ತುಗಳನ್ನು ಹರವಿಕೊಂಡ ಅವರು ವಿಜ್ಞಾನ ಸಾಹಿತ್ಯ ವಿಭಾಗದಲ್ಲಿ ಕನ್ನಡ ವಿಜ್ಞಾನ ಸಾಹಿತ್ಯದ ಎಲ್ಲ ಆಯಾಮಗಳನ್ನು ಒಂದೊಂದಾಗಿ ಪರಿಚಯಿಸಿದ್ದಾರೆ.

ಶುಕ್ರವಾರ, ಜೂನ್ 19, 2015

ಸ್ಮಾರ್ಟ್‌ಫೋನ್ ಮುಖ ೪: ಮನರಂಜನೆಯ ಸಾಧನ

ಪ್ರಯಾಣದ ಸಂದರ್ಭದಲ್ಲಿ ಹಾಡು ಕೇಳಬೇಕು ಎಂದರೆ ವಾಕ್‌ಮನ್ ಅನ್ನೋ ಎಫ್‌ಎಂ ರೇಡಿಯೋವನ್ನೋ ಜೊತೆಗೆ ಕೊಂಡೊಯ್ಯುವ ಅಭ್ಯಾಸ ಒಂದು ಕಾಲದಲ್ಲಿತ್ತು. ಮೊಬೈಲ್ ಬಳಕೆ ವ್ಯಾಪಕವಾದಂತೆ ವಾಕ್‌ಮನ್ ಮಾತ್ರವೇ ಏಕೆ, ಇದೀಗ ಐಪಾಡ್ ಕೂಡ ಮೂಲೆಗುಂಪಾಗಿದೆ. ಹಾಗೆಂದಮಾತ್ರಕ್ಕೆ ಮೊಬೈಲ್ ನೀಡುವ ಮನರಂಜನೆ ಹಾಡು ಕೇಳಿಸುವುದಕ್ಕಷ್ಟೇ ಸೀಮಿತವೇನೂ ಆಗಿಲ್ಲ. ಇಂದಿನ ಫೋನುಗಳಲ್ಲಿ ಅತ್ಯಾಧುನಿಕ ಆಟಗಳನ್ನು ಆಡುವುದು ಸಾಧ್ಯ. ಇಂತಹ ಆಟಗಳು ಫೋನಿನಲ್ಲಿರುವ ವಿವಿಧ ಸೆನ್ಸರುಗಳನ್ನು ಬಳಸುವುದರಿಂದ ಫೋನನ್ನು ಆಚೀಚೆ ತಿರುಗಿಸುವಷ್ಟರಿಂದಲೇ ಆಟದ ನಿಯಂತ್ರಣಗಳೆಲ್ಲ ನಮ್ಮ ಕೈವಶವಾಗಿಬಿಡುತ್ತವೆ; ಅಂದರೆ ಕಾರ್ ರೇಸಿನ ಆಟದಲ್ಲಿ ನಮ್ಮ ಮೊಬೈಲನ್ನೇ ಸ್ಟೀರಿಂಗ್ ಚಕ್ರವಾಗಿ ಬಳಸುವುದು ಸಾಧ್ಯವಾಗುತ್ತದೆ. ಇನ್ನು ಮೊಬೈಲಿನಲ್ಲಿ ಅತಿವೇಗದ ಅಂತರಜಾಲ ಸಂಪರ್ಕ (೩ಜಿ, ೪ಜಿ ಇತ್ಯಾದಿ) ಸಿಗುತ್ತಿರುವುದರಿಂದ ಟೀವಿ ಕಾರ್ಯಕ್ರಮ, ಸಿನಿಮಾ ಇತ್ಯಾದಿಗಳನ್ನು ನೋಡುವುದಕ್ಕೂ ನಾವು ಮೊಬೈಲನ್ನೇ ಬಳಸುವುದು ಸಾಧ್ಯವಾಗಿದೆ. ಅತ್ಯುತ್ತಮ ಸ್ಪಷ್ಟತೆಯ ಮೊಬೈಲ್ ಪರದೆಯ ಮೇಲೆ ಉತ್ತಮ ಗುಣಮಟ್ಟದ ವೀಡಿಯೋ ಮೂಡಿಬಂದಿತೆಂದರೆ ನಾವು ಕುಳಿತ ಜಾಗವೇ ದಿವಾನಖಾನೆಯಾಗುತ್ತದೆ, ಮೊಬೈಲೇ ಟೀವಿಯಾಗುತ್ತದೆ!

ಮುಂದಿನ ವಾರ: ಮಾಹಿತಿಯ ಮಹಾಮಳಿಗೆ | ಈವರೆಗಿನ ಮುಖಗಳು

ಬುಧವಾರ, ಜೂನ್ 17, 2015

ಸ್ಮಾರ್ಟ್ ಪೆನ್ನು ಸ್ಮಾರ್ಟ್ ಕಾಗದ!

ಟಿ. ಜಿ. ಶ್ರೀನಿಧಿ

"ಎಲ್ಲಕಡೆಯೂ ಕಂಪ್ಯೂಟರುಗಳು ಬಂದಮೇಲೆ ಕಾಗದ ಬಳಸುವ ಅಗತ್ಯವೇ ಇರುವುದಿಲ್ಲ" - ಎನ್ನುವ 'ಪೇಪರ್‌ಲೆಸ್' ಪ್ರಪಂಚದ ಕಲ್ಪನೆ ಕಂಪ್ಯೂಟರುಗಳು ಪರಿಚಯವಾದ ಕಾಲದಿಂದಲೇ ಚಾಲ್ತಿಯಲ್ಲಿದೆ. ಕಾಗದದ ಮೇಲಿನ ನಮ್ಮ ಅವಲಂಬನೆ ಕೆಲವೇ ವರ್ಷಗಳಲ್ಲಿ ಕಡಿಮೆಯಾಗಲಿದೆ ಎಂದು ಹೇಳಲು ಶುರುಮಾಡಿ ದಶಕಗಳೇ ಕಳೆದಿವೆ.

ಆದರೆ ಕಾಗದದ ಬೆಲೆ ಕಡಿಮೆಯಿರುವುದರಿಂದಲೋ, ಡಿಜಿಟಲ್ ರೂಪಕ್ಕಿಂತ ಕಾಗದವೇ ನಮ್ಮ ಮನಸ್ಸಿಗೆ ಹೆಚ್ಚು ಆಪ್ತವೆನಿಸುವುದರಿಂದಲೋ ಕಾಗದದ ಬಳಕೆ ಇಷ್ಟೆಲ್ಲ ಸಮಯದ ನಂತರವೂ ಮುಂದುವರೆದಿದೆ. ಕೆಲವು ಸಂದರ್ಭಗಳಲ್ಲಿ ಕಾಗದಕ್ಕೆ ಪೆನ್ನು ಜೋಡಿಯಾಗಿದ್ದರೆ ಇನ್ನು ಕೆಲವು ಬಾರಿ ಕಂಪ್ಯೂಟರಿನಲ್ಲಿರುವ ಮಾಹಿತಿಯೇ ಪ್ರಿಂಟರ್ ಮಾರ್ಗವಾಗಿ ಕಾಗದದ ಮೇಲಿಳಿಯುತ್ತದೆ. ಹೇಗೋ, ಪ್ರಪಂಚ ಮಾತ್ರ ಇನ್ನೂ 'ಪೇಪರ್‌ಲೆಸ್' ಆಗಿಯೇ ಇಲ್ಲ.

ಹಾಗೆಂದಮಾತ್ರಕ್ಕೆ ಕಾಗದದ ಬಳಕೆಯ ಮೇಲೆ ತಂತ್ರಜ್ಞಾನ ಪ್ರಭಾವವನ್ನೇ ಬೀರಿಲ್ಲ ಎನ್ನುವಂತಿಲ್ಲ.

ಸೋಮವಾರ, ಜೂನ್ 15, 2015

ಸಂವಹನಕ್ಕೆ ಸಿದ್ಧತೆ: ತಂತ್ರಜ್ಞಾನದ ಸವಲತ್ತುಗಳು

ಮೇ ೧೬, ೨೦೧೫ರಂದು ಬೆಂಗಳೂರಿನಲ್ಲಿ ನಡೆದ 'ಕನ್ನಡ ವಿಜ್ಞಾನ ಮತ್ತು ತಂತ್ರಜ್ಞಾನ ಬರಹಗಾರರ ಸಮ್ಮೇಳನ/ಕಾರ್ಯಾಗಾರ'ದಲ್ಲಿ ಮಾಡಿದ ಭಾಷಣದ ಪಠ್ಯರೂಪ
ಸುಧೀಂದ್ರ ಹಾಲ್ದೊಡ್ಡೇರಿ

ನಾನಿಂದು ಮಾತನಾಡುತ್ತಿರುವ ವಿಷಯ ಕೇವಲ ಸಂವಹನಕ್ಕಷ್ಟೇ ಸೀಮಿತವಾಗಿಲ್ಲ, ನಮ್ಮ ಇಡೀ ಜೀವನಶೈಲಿಗೇ ಅನ್ವಯಿಸುವಂಥದ್ದು. ಕಾರಣ, ತಂತ್ರಜ್ಞಾನ ನೀಡುತ್ತಿರುವ ಸವಲತ್ತುಗಳ ಹೊರತಾಗಿ ನಾವು ಏನನ್ನೂ ಊಹಿಸಿಕೊಳ್ಳಲಾರದ ಸ್ಥಿತಿಯಲ್ಲಿದ್ದೇವೆ. ಹಾಗೆಂದ ಮಾತ್ರಕ್ಕೆ "ನಮ್ಮ ಕಾಲದಲ್ಲಿ ಎಷ್ಟೆಲ್ಲಾ ಕಷ್ಟ ಪಡುತ್ತಿದ್ದೆವು, ಈಗಿನವರಿಗೆ ಅನುಕೂಲಗಳು ಜಾಸ್ತಿ, ಶ್ರದ್ಧೆ ಕಡಿಮೆ, ಕಾರ್ಯಭಾರವೂ ಹೆಚ್ಚಿಲ್ಲ" ಎಂದು ಹಳಿಯಲು ಹೊರಟಿಲ್ಲ. ನಿಗದಿತ ಹಳಿಯ ಮೇಲೆ ನನ್ನ ಯೋಚನಾ ಲಹರಿಯ ಬೋಗಿಗಳನ್ನು ಕೂಡಿಸಲು ಹೊರಟಿದ್ದೇನೆ.

ಸಿದ್ಧತೆಯೆಂಬುದು ನಮ್ಮೆಲ್ಲ ಕೆಲಸಗಳಿಗೆ ಅತ್ಯಗತ್ಯವಾದದ್ದು. ಸಿದ್ಧತೆಯಿಲ್ಲದ ಯಾವುದೇ ಕಾರ್ಯ ಅಪೂರ್ಣವಾಗಬಲ್ಲದ್ದು. ಸಂವಹನವೆಂದೊಡನೆ ಅದು ಪತ್ರಿಕೆಗಳ ಮೂಲಕ ಇರಬಹುದು ಅಥವಾ ರೇಡಿಯೊ ಮೂಲಕ ಇರಬಹುದು, ಟೀವಿ ಚಾನೆಲ್ ಮೂಲಕ ಇರಬಹುದು ಅಥವಾ ಇಂಟರ್‌ನೆಟ್ ಮೂಲಕ ನಡೆಸುವ ಬಹು-ಮಾಧ್ಯಮ ಅಭಿವ್ಯಕ್ತಿಯಿರಬಹುದು. ಮೊದಲ ಸಿದ್ಧತೆ ವಿಷಯವೊಂದರ ಕುರಿತು ಮಾಹಿತಿ ಟಿಪ್ಪಣಿ ಸಂಗ್ರಹಣೆ.

ಶುಕ್ರವಾರ, ಜೂನ್ 12, 2015

ಸ್ಮಾರ್ಟ್‌ಫೋನ್ ಮುಖ ೩: ಛಾಯಾಗ್ರಹಣದ ಸಂಗಾತಿ

ಚಿತ್ರಗಳನ್ನು ಕ್ಲಿಕ್ಕಿಸುವುದು ಹಾಗೂ ವೀಡಿಯೋ ಸೆರೆಹಿಡಿಯುವ ಕೆಲಸ ಈಚೆಗೆ ಮೊಬೈಲ್ ಫೋನಿನ ಪ್ರಮುಖ ಜವಾಬ್ದಾರಿಗಳಲ್ಲೊಂದಾಗಿ ಬೆಳೆದುಬಿಟ್ಟಿದೆ. ಮೊಬೈಲಿನಲ್ಲೂ ಫೋಟೋ ತೆಗೆಯಬಹುದು ಎನ್ನುವ ಕಾಲ ಹೋಗಿ ಮೊಬೈಲೇ ನಮ್ಮ ಕ್ಯಾಮೆರಾ ಎಂದು ಹೇಳುವ ಪರಿಸ್ಥಿತಿ ಬಂದಿದೆ ಎಂದರೂ ಸರಿಯೇ. ಮೊಬೈಲ್ ಕ್ಯಾಮೆರಾಗಳ ಸಾಮರ್ಥ್ಯವೂ ಇದಕ್ಕೆ ತಕ್ಕಂತೆ ಬೆಳೆಯುತ್ತಿದೆ. ಸುಮ್ಮನೆ ಮೆಗಾಪಿಕ್ಸೆಲ್‌ಗಳ ಲೆಕ್ಕ ತೋರಿಸುವ ಬದಲಿಗೆ ನಿಜಕ್ಕೂ ಉತ್ತಮ ಗುಣಮಟ್ಟದ ಛಾಯಾಚಿತ್ರ-ವೀಡಿಯೋಗಳನ್ನು ಸೆರೆಹಿಡಿಯುವ ಕ್ಯಾಮೆರಾಗಳನ್ನು ನಾವು ಇಂದಿನ ಫೋನುಗಳಲ್ಲಿ ನೋಡಬಹುದು. ಮಾರುಕಟ್ಟೆಯಲ್ಲಿರುವ ಕೆಲ ಫೋನುಗಳನ್ನು ಗಮನಿಸಿದರೆ ಕಡಿಮೆ ಬೆಳಕಿನಲ್ಲೂ ಉತ್ತಮ ಗುಣಮಟ್ಟದ ಚಿತ್ರಗಳನ್ನು ಕ್ಲಿಕ್ಕಿಸುವ ಸಾಮರ್ಥ್ಯ ಅದರ ಕ್ಯಾಮೆರಾಗಳಲ್ಲಿರುವುದನ್ನು ನಾವು ನೋಡಬಹುದು. ಎಸ್‌ಎಲ್‌ಆರ್ ಕ್ಯಾಮೆರಾಗಳಲ್ಲಿರುವಂತೆ ವಿವಿಧ ವಿವರಗಳನ್ನೆಲ್ಲ ನಾವೇ ಹೊಂದಿಸುವ (ಮ್ಯಾನ್ಯುಯಲ್ ಸೆಟ್ಟಿಂಗ್ಸ್) ಸೌಲಭ್ಯವೂ ಹಲವು ಫೋನುಗಳಲ್ಲಿರುತ್ತದೆ. ಇಷ್ಟೆಲ್ಲ ಸಮರ್ಥವಾದ ಕ್ಯಾಮೆರಾ ಜೊತೆಗೆ ಕ್ಲಿಕ್ಕಿಸಿದ ಚಿತ್ರವನ್ನು ಚೆಂದಗಾಣಿಸುವ - ವೀಡಿಯೋ ಅನ್ನು ಸಂಪಾದಿಸುವ ಸೌಲಭ್ಯವೂ ಮೊಬೈಲಿನಲ್ಲೇ ಸಿಗುತ್ತಿರುವುದರಿಂದ ಇಂದಿನ ಮೊಬೈಲ್ ಫೋನುಗಳು ನಿಜಕ್ಕೂ ನಮ್ಮ ಛಾಯಾಗ್ರಹಣದ ಸಂಗಾತಿಗಳಾಗಿ ಬೆಳೆದುಬಿಟ್ಟಿವೆ ಎನ್ನಬಹುದು.

ಮುಂದಿನ ವಾರ: ಮನರಂಜನೆಯ ಸಾಧನ | ಈವರೆಗಿನ ಮುಖಗಳು

ಬುಧವಾರ, ಜೂನ್ 10, 2015

'ಕಾಲ್ ಡ್ರಾಪ್' ಕಾಲ

ಕಳೆದ ಕೆಲದಿನಗಳಿಂದ ಮಾಧ್ಯಮಗಳಲ್ಲಿ 'ಕಾಲ್ ಡ್ರಾಪ್' ಕುರಿತ ಸುದ್ದಿ ನಮಗೆ ಪದೇಪದೇ ಕಾಣಸಿಗುತ್ತಿದೆ. ಇಷ್ಟಕ್ಕೂ ಈ 'ಕಾಲ್ ಡ್ರಾಪ್' ಎಂದರೇನು? ಕಾಲ್‌ಗಳೇಕೆ ಡ್ರಾಪ್ ಆಗುತ್ತವೆ? ಇದರ ಬಗ್ಗೆ ಸರಕಾರ ತಲೆ ಕೆಡಿಸಿಕೊಂಡಿರುವುದೇಕೆ?
ಟಿ. ಜಿ. ಶ್ರೀನಿಧಿ

ಬಸ್ಸಿನಲ್ಲೋ ಕಾರಿನಲ್ಲೋ ಕುಳಿತು ಮೊಬೈಲಿನಲ್ಲಿ ಮಾತನಾಡುತ್ತಿರುವಾಗ ಇದ್ದಕ್ಕಿದ್ದಂತೆ ಆ ಕರೆ ಸ್ಥಗಿತಗೊಳ್ಳುವುದು ಮೊಬೈಲ್ ಬಳಕೆದಾರರೆಲ್ಲರ ಸಾಮಾನ್ಯ ಅನುಭವವೆಂದೇ ಹೇಳಬೇಕು. ಹೊರಗಡೆಯ ಮಾತು ಹಾಗಿರಲಿ, ಮೊಬೈಲಿನಲ್ಲಿ ಮಾತನಾಡುತ್ತ ಮನೆಯೊಳಗೆ ಓಡಾಡುವಾಗಲೂ ಕೆಲವೊಮ್ಮೆ ಈ ಅನುಭವ ಆಗುವುದುಂಟು.

"ಅರೆ, ಈಗಷ್ಟೆ ಸರಿಯಾಗಿ ಕೇಳಿಸುತ್ತಿದ್ದದ್ದು ಇದ್ದಕ್ಕಿದ್ದಂತೆ ಸ್ಥಗಿತವಾಗಿಬಿಟ್ಟಿತಲ್ಲ, ಸಿಗ್ನಲ್ ಕೂಡ ಚೆನ್ನಾಗಿಯೇ ಇದೆ. ಇದೆಂಥದಿದು ವಿಚಿತ್ರ!" ಎನ್ನುವುದು ಇಂತಹ ಸನ್ನಿವೇಶಗಳಲ್ಲಿ ನಮ್ಮ ಪ್ರತಿಕ್ರಿಯೆಯಾಗಿರುತ್ತದೆ. ಎರಡು ಹೆಜ್ಜೆಯೂ ದಾಟಿಲ್ಲ, ಮೊಬೈಲ್ ಕರೆ ತನ್ನಷ್ಟಕ್ಕೆ ತಾನೇ ಸ್ಥಗಿತವಾಗಿಬಿಟ್ಟಿದೆ; ದೊಡ್ಡ ಬದಲಾವಣೆಯೇನೂ ಇಲ್ಲದಿದ್ದರೂ ಇದೇನು ಹೀಗೆ ಎಂದು ನಾವು ಕೇಳುತ್ತೇವೆ.

ಮೊಬೈಲ್ ಫೋನ್ ಏನಾದರೂ ತನ್ನ ಅಭಿಪ್ರಾಯ ಹೇಳುವಂತಿದ್ದರೆ ಅದು ನಮ್ಮ ಅಭಿಪ್ರಾಯಕ್ಕೆ ಸಂಪೂರ್ಣ ವಿರುದ್ಧವಾಗಿರುತ್ತದೆ. ಏಕೆಂದರೆ ನಾವು ಎರಡು ಹೆಜ್ಜೆಯ ದೂರ ಕ್ರಮಿಸುತ್ತಿರುವಾಗ ಆ ಫೋನಿನ ದೃಷ್ಟಿಯಲ್ಲಿ ದೊಡ್ಡ ಬದಲಾವಣೆಗಳೇ ಆಗಿರುತ್ತವೆ!

ಮೊಬೈಲ್ ಫೋನನ್ನು ಸೆಲ್ ಫೋನ್ ಎಂದು ಕರೆಯುತ್ತೇವಲ್ಲ, ಅದಕ್ಕೆ ಕಾರಣ ಮೊಬೈಲ್ ನೆಟ್‌ವರ್ಕುಗಳ ವಿನ್ಯಾಸ.

ಸೋಮವಾರ, ಜೂನ್ 8, 2015

ವಿಜ್ಞಾನ ಬರವಣಿಗೆಗೆ ಸಿದ್ಧತೆ

ಮೇ ೧೬, ೨೦೧೫ರಂದು ಬೆಂಗಳೂರಿನಲ್ಲಿ ನಡೆದ 'ಕನ್ನಡ ವಿಜ್ಞಾನ ಮತ್ತು ತಂತ್ರಜ್ಞಾನ ಬರಹಗಾರರ ಸಮ್ಮೇಳನ/ಕಾರ್ಯಾಗಾರ'ದಲ್ಲಿ ಮಾಡಿದ ಭಾಷಣದ ಪಠ್ಯರೂಪ
ಸಿ ಪಿ ರವಿಕುಮಾರ್

ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನ ಬರೆಯಲು ಹಲವು ಸಿದ್ಧತೆಗಳು ಬೇಕು: ಕನ್ನಡದಲ್ಲಿ ಬರೆಯಬೇಕೆಂಬ ಮಾನಸಿಕ ಸಿದ್ಧತೆ, ವಿಜ್ಞಾನ ಬರವಣಿಗೆಗೆ ಬೇಕಾದ ಹಿನ್ನೆಲೆ, ಓದು ಹಾಗೂ ಭಾಷಾಸಿದ್ಧತೆ.

ಮಾನಸಿಕ ಸಿದ್ಧತೆ ಕನ್ನಡದಲ್ಲಿ ವಿಜ್ಞಾನದ ಬರವಣಿಗೆಯನ್ನು ತಂದ ದಿಗ್ಗಜರು ಹಲವರು. ಡಾ| ಕೋಟ ಶಿವರಾಮ ಕಾರಂತರು ಮಕ್ಕಳಿಗಾಗಿ ಬರೆದ, ಸಂಪಾದಿಸಿದ ವಿಜ್ಞಾನ ಸಂಬಂಧಿ ಪುಸ್ತಕಗಳನ್ನು ನಾನು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗ ಓದಿದೆ. ನಿರಂಜನ ಅವರ ಸಂಪಾದಕತ್ವದಲ್ಲಿ ಸಿದ್ಧವಾದ ಜ್ಞಾನಗಂಗೋತ್ರಿ ವಿಶ್ವಕೋಶ ಸಂಪುಟಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕಾಗಿ ಒಂದು ಇಡೀ ಸಂಪುಟವನ್ನು ಮೀಸಲಾಗಿಟ್ಟಿದ್ದರು. ತಮ್ಮ ನವಿರುಹಾಸ್ಯ ಬೆರೆತ ಶೈಲಿಯಲ್ಲಿ ಸಸ್ಯಗಳ ಬಗ್ಗೆ ಬರೆದ ಪ್ರೊ| ಬಿಜಿಎಲ್ ಸ್ವಾಮಿ ಅವರ ಭಾಷಣ ಕೇಳುವ ಸದವಕಾಶ ನನಗೆ ನ್ಯಾಷನಲ್ ಕಾಲೇಜ್ ವಿದ್ಯಾರ್ಥಿಯಾಗಿದ್ದಾಗ ದೊರಕಿತ್ತು. ಪ್ರೊ| ಜಿ.ಟಿ. ನಾರಾಯಣರಾವ್ ಅವರ ಅನೇಕ ಪುಸ್ತಕಗಳನ್ನು ನಾನು ಓದಿದ್ದೇನೆ. ನನ್ನ ‘ಕಂಪ್ಯೂಟರ್ ಗೊಂದು ಕನ್ನಡಿ’ ಪುಸ್ತಕ ಪ್ರಕಟವಾದಾಗ ಅವರು ನನಗೆ ಮೆಚ್ಚುಗೆಯ ಮಾತು ಬರೆದು ಪ್ರೋತ್ಸಾಹಿಸಿದರು.

ಶುಕ್ರವಾರ, ಜೂನ್ 5, 2015

ಸ್ಮಾರ್ಟ್‌ಫೋನ್ ಮುಖ ೨: ಕಂಪ್ಯೂಟರಿಗೊಂದು ಪುಟ್ಟ ಪರ್ಯಾಯ

ಒಂದು ಕಾಲದ ಕಂಪ್ಯೂಟರುಗಳಲ್ಲಿ ಏನೆಲ್ಲ ಸಾಧ್ಯವಾಗುತ್ತಿತ್ತೋ ಅದಕ್ಕಿಂತ ಹೆಚ್ಚಿನ ಕೆಲಸಗಳನ್ನು ಇಂದಿನ ಮೊಬೈಲ್ ಫೋನ್ ಬಳಸಿ ಸಾಧಿಸಿಕೊಳ್ಳಬಹುದು. ಜೊತೆಗೆ ಎಲ್ಲಿಗೆ ಬೇಕಿದ್ದರೂ ಸುಲಭವಾಗಿ ಕೊಂಡೊಯ್ಯುವ ಸೌಲಭ್ಯ ಬೇರೆ ಸಿಗುತ್ತದಲ್ಲ! ಹಾಗಾಗಿ ಮೊಬೈಲ್ ಫೋನುಗಳು ಕಂಪ್ಯೂಟರಿಗೆ ಪುಟ್ಟದೊಂದು ಪರ್ಯಾಯವಾಗಿ ರೂಪುಗೊಳ್ಳುತ್ತಿವೆ. ಸ್ಮಾರ್ಟ್‌ಫೋನುಗಳ ಪರದೆಯ ಗಾತ್ರ, ಪ್ರಾಸೆಸರಿನ ಸಂಸ್ಕರಣಾ ಸಾಮರ್ಥ್ಯ ಹಾಗೂ ಲಭ್ಯವಿರುವ ರ್‍ಯಾಮ್ ಪ್ರಮಾಣ ದಿನೇ ದಿನೇ ಹೆಚ್ಚುತ್ತಿರುವುದನ್ನು ನೋಡಿದರೆ ಫೋನಿಗೂ ಕಂಪ್ಯೂಟರಿಗೂ ಹೆಚ್ಚಿನ ವ್ಯತ್ಯಾಸವೇ ಇಲ್ಲದ ಪರಿಸ್ಥಿತಿ ಬರುತ್ತಿದೆಯೇನೋ ಎನ್ನಿಸದಿರದು. ಕಂಪ್ಯೂಟರಿನಲ್ಲಿ ದೊರಕುವ ಬಹುಪಾಲು ತಂತ್ರಾಂಶಗಳು ಆಪ್‌ಗಳ ರೂಪದಲ್ಲಿ ಈಗ ಮೊಬೈಲಿನಲ್ಲೂ ಸಿಗುತ್ತವೆ. ಹಾಗಾಗಿ ಕಚೇರಿಯ ಕೆಲಸವನ್ನೂ ಮೊಬೈಲಿನಲ್ಲೇ ಮಾಡಿಕೊಳ್ಳುವುದು ಸಾಧ್ಯವಾಗಿದೆ. ಟಚ್‌ಸ್ಕ್ರೀನಿನಲ್ಲಿ ಟೈಪಿಸುವುದು ಕಷ್ಟ ಎನ್ನುವವರಿಗೆ ಮೊಬೈಲ್ ಜೊತೆ ಬಳಸಲು ಪುಟ್ಟ ಕೀಬೋರ್ಡುಗಳೂ ಸಿಗುತ್ತಿವೆ!

ಮುಂದಿನ ವಾರ: ಛಾಯಾಗ್ರಹಣದ ಸಂಗಾತಿ | ಈವರೆಗಿನ ಮುಖಗಳು

ಸೋಮವಾರ, ಜೂನ್ 1, 2015

ವಿಜ್ಞಾನ ವಿಷಯಗಳನ್ನು ವರದಿ ಮಾಡುವುದು ಹೇಗೆ?

ಮೇ ೧೬, ೨೦೧೫ರಂದು ಬೆಂಗಳೂರಿನಲ್ಲಿ ನಡೆದ 'ಕನ್ನಡ ವಿಜ್ಞಾನ ಮತ್ತು ತಂತ್ರಜ್ಞಾನ ಬರಹಗಾರರ ಸಮ್ಮೇಳನ/ಕಾರ್ಯಾಗಾರ'ದಲ್ಲಿ ಮಾಡಿದ ಭಾಷಣದ ಪಠ್ಯರೂಪ
ಬೇಳೂರು ಸುದರ್ಶನ
  • ಭೂಕಂಪ, ಚಂಡಮಾರುತ, ಸುನಾಮಿ; ಎಬೋಲಾ, ಏಯ್ಡ್ಸ್‌; ನಕ್ಷತ್ರಪುಂಜ, ಗ್ರಹಣ; ಮಾಲಿನ್ಯ, ಕಸ, ಹವಾಗುಣ, ಬಿಸಿಯಾಗುತ್ತಿರುವ ಭೂಮಿ...
  • ದಕ್ಷಿಣಕನ್ನಡದಲ್ಲಿ ಎಂಡೋಸಲ್ಫಾನ್‌ ದುರಂತ, ಗೋಗಿಯಲ್ಲಿ ಯುರೇನಿಯಂ ಗಣಿಗಾರಿಕೆ ಅಪಾಯ, ಕೂಡಗಿಯಲ್ಲಿ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್‌ ಸ್ಥಾವರ, ಬೆಂಗಳೂರಿನಲ್ಲಿ ಮರಗಳ ಸರ್ವನಾಶ, ರೈತರಿಂದ ಬಿಟಿ ಬೆಳೆಗಳ ನಾಶ, ಅಣ್ಣಿಗೇರಿಯ ತಲೆಬುರುಡೆಗಳು...
ಹೀಗೆ ನೀವು ಹುಡುಕಿದಲ್ಲೆಲ್ಲ ವಿಜ್ಞಾನದ ವರದಿಗಾರಿಕೆಗೆ ಸುದ್ದಿಗಳಿವೆ. ಬಚ್ಚಿಡಲಾಗದ ಸತ್ಯಗಳಿವೆ. ಸರ್ಕಾರದ ಪ್ರತಿನಿಧಿಗಳು, ಸಾರ್ವಜನಿಕರು, ಸಾಮಾಜಿಕ ಕಾರ್ಯಕರ್ತರು ಪ್ರತಿದಿನವೂ ವಿಜ್ಞಾನ ವರದಿಗಾರಿಕೆಗೆ ಸಾಕಷ್ಟು ಸರಕುಗಳನ್ನು ಒದಗಿಸುತ್ತಲೇ ಇರುತ್ತಾರೆ. ನೋಡುವ ಕಣ್ಣು, ಬರೆಯುವ ಆಸಕ್ತಿ, ಹುಡುಕುವ ಮನಸ್ಸು ಇದ್ದರೆ ವಿಜ್ಞಾನ ವರದಿಗಾರಿಕೆ ಸುಲಭ!

`ವಿಜ್ಞಾನ ವರದಿಗಾರಿಕೆ' (Science Reporting) ಎಂದರೆ ಯಾವುದು ಎಂಬ ನಿರ್ದಿಷ್ಟತೆ ಇಟ್ಟುಕೊಳ್ಳಬೇಕು. ನೇಪಾಳದ ಭೂಕಂಪವು ಒಂದು ದುರಂತವೂ ಹೌದು; ವಿಜ್ಞಾನದ ವರದಿಗಾರಿಕೆಗೆ ಸಿಕ್ಕ ಅವಕಾಶವೂ ಹೌದು. ಇಲ್ಲಿ ಭೂಕಂಪದ ಹಿಂದಿದ್ದ ಕಾರಣಗಳನ್ನು ಗುರುತಿಸುವುದು, ಭೂಕಂಪದಲ್ಲಿ ಖಚಿತವಾಗಿ ಏನಾಯ್ತು ಎಂದು ಬರೆಯುವುದು, ಮುಂದೆ ಏನಾಗಬಹುದು ಎಂದು ವೈಜ್ಞಾನಿಕವಾಗಿ ಊಹಿಸುವುದು - ಇವು ವರದಿಗಾರಿಕೆಗೆ ಇರುವ ಅವಕಾಶಗಳು.

ಶುಕ್ರವಾರ, ಮೇ 29, 2015

ಸ್ಮಾರ್ಟ್‌ಫೋನ್ ಮುಖ ೧: ಪ್ರಪಂಚದ ಜೊತೆಗಿನ ಸಂಪರ್ಕಸೇತು

ಹೊರಪ್ರಪಂಚದೊಡನೆ ಸಂಪರ್ಕ ಬೆಳೆಸುವುದೇ ಮೊಬೈಲಿನ ಕೆಲಸ, ಸರಿ. ಆದರೆ ಅಂತರಜಾಲ ಸೌಲಭ್ಯವಿರುವ ಸ್ಮಾರ್ಟ್‌ಫೋನುಗಳ ದೆಸೆಯಿಂದ ಇದೀಗ ಸಂಪರ್ಕವೆಂಬ ಪರಿಕಲ್ಪನೆಯ ವ್ಯಾಖ್ಯೆಯೇ ಬದಲಾಗಿಬಿಟ್ಟಿದೆ. ಪರಸ್ಪರ ದೂರದಲ್ಲಿದ್ದ ಇಬ್ಬರು ವ್ಯಕ್ತಿಗಳು ಧ್ವನಿಯ ಮೂಲಕವೋ ಪಠ್ಯದ ಮೂಲಕವೋ ಮಾತ್ರವೇ ವ್ಯವಹರಿಸಬೇಕಿದ್ದ ಪರಿಸ್ಥಿತಿ ಈಗಿಲ್ಲ; ದೂರ ಜಾಸ್ತಿಯಿದ್ದಷ್ಟೂ ದೂರವಾಣಿ ಕರೆಯ ಬೆಲೆಯೂ ಜಾಸ್ತಿಯಾಗುತ್ತಿದ್ದ ಪರಿಸ್ಥಿತಿ ಕೂಡ ಇಲ್ಲ. ವಾಟ್ಸ್‌ಆಪ್‌ನಂತಹ ಸೌಲಭ್ಯಗಳು ಪಠ್ಯ, ಚಿತ್ರ ಹಾಗೂ ಧ್ವನಿರೂಪದಲ್ಲಿ ಯಾರ ಜೊತೆಗೆ ಯಾವಾಗ ಬೇಕಿದ್ದರೂ ಸಂಪರ್ಕದಲ್ಲಿರುವುದನ್ನು ಸಾಧ್ಯವಾಗಿಸಿವೆ, ಅದೂ ಅತ್ಯಂತ ಕಡಿಮೆ ವೆಚ್ಚದಲ್ಲಿ! ಕುಟುಂಬದ ಸದಸ್ಯರು ಬೇರೆಬೇರೆ ಊರು-ದೇಶಗಳಲ್ಲಿದ್ದರೂ ಕೂಡ ಇಂತಹ ಸೌಲಭ್ಯಗಳ ಮೂಲಕ ಸದಾಕಾಲ ಪರಸ್ಪರ ಸಂಪರ್ಕದಲ್ಲಿರುವುದು ಸಾಧ್ಯ. ಎಸ್‌ಟಿಡಿ-ಐ‌ಎಸ್‌ಡಿಗಳ ದುಬಾರಿ ಬೆಲೆಯ ಬಗ್ಗೆ ಚಿಂತೆಯಿಲ್ಲದೆ ಮಾತನಾಡಿಕೊಳ್ಳುವುದು ಕೂಡ ಈಗ ಬಹು ಸುಲಭ. ಅಂತೆಯೇ ಇಮೇಲ್ ವ್ಯವಸ್ಥೆಗಳು, ಟ್ವಿಟ್ಟರ್-ಫೇಸ್‌ಬುಕ್‌ನಂತಹ ಸಮಾಜ ಜಾಲಗಳೂ ಮೊಬೈಲ್ ಮೂಲಕ ನಮ್ಮ ಬದುಕಿಗೆ ಇನ್ನಷ್ಟು ಹತ್ತಿರ ಬಂದಿವೆ. ನಾವು ಎಲ್ಲಿದ್ದೇವೆ, ಏನು ಮಾಡುತ್ತಿದ್ದೇವೆ ಎನ್ನುವುದನ್ನೆಲ್ಲ ನಮ್ಮ ಆಪ್ತರಿಗೆ ಕ್ಷಣಾರ್ಧದಲ್ಲಿ ತಿಳಿಸುವ ಸೌಲಭ್ಯ ದೊರೆತಿರುವುದೂ ಮೊಬೈಲಿನಿಂದಲೇ!

ಮುಂದಿನ ವಾರ: ಕಂಪ್ಯೂಟರಿಗೊಂದು ಪುಟ್ಟ ಪರ್ಯಾಯ | ಈವರೆಗಿನ ಮುಖಗಳು

ಗುರುವಾರ, ಮೇ 28, 2015

ಮಾಯಾವಿ ಪ್ಲಾಸ್ಟಿಕ್

ಪ್ಲಾಸ್ಟಿಕ್ ಎಂಬ ಮಾಯೆ ಇಂದು ಜಗತ್ತನ್ನೇ ಆವರಿಸಿಕೊಂಡಿದೆ ಮತ್ತು ಇನ್ನೂ ಆವರಿಸಿಕೊಳ್ಳುತ್ತಿದೆ. ಅದರ ಒಳಿತು ಮತ್ತು ಕೆಡುಕುಗಳ ಅವಲೋಕನ 'ಮಾಯಾವಿ ಪ್ಲಾಸ್ಟಿಕ್ ವಸ್ತುಗಳು' ಎಂಬ ಈ ಪುಸ್ತಕದಲ್ಲಿ ಅನಾವರಣಗೊಂಡಿದೆ. ವಿಮಾನೋದ್ಯಮ, ಕೈಗಾರಿಕೆ, ವ್ಯವಸಾಯ, ವಾಹನ ತಯಾರಿಕೆ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಆಗಿರುವ ಅನುಕೂಲಗಳ ವಿವರ ಈ ಪುಸ್ತಕದಲ್ಲಿದೆ. ಹಾಗೆಯೇ ಪ್ಲಾಸ್ಟಿಕ್‌ನ ಅವ್ಯಾಹತ ಬಳಕೆಯಿಂದ ಪರಿಸರದ ಮೇಲೆ ಆಗುತ್ತಿರುವ ಪ್ರತಿಕೂಲ ಪರಿಣಾಮಗಳು ಮತ್ತು ಅವುಗಳನ್ನು ನಿರ್ವಹಣೆ ಮಾಡುವ ವಿಧಾನಗಳ ಬಗೆಗೂ ಈ ಪುಸ್ತಕ ಗಮನಹರಿಸುತ್ತದೆ. ಬಹುವರ್ಣದ ಚಿತ್ರಗಳು ಈ ಪುಸ್ತಕದ ಅಂದವನ್ನು ಹೆಚ್ಚಿಸಿವೆ.

ಮಾಯಾವಿ ಪ್ಲಾಸ್ಟಿಕ್ ವಸ್ತುಗಳು
ಲೇಖಕರು: ಡಾ. ಟಿ. ನಿರಂಜನ ಪ್ರಭು
ಪುಟಗಳು: xii + 54, ಬೆಲೆ: ರೂ. ೭೦
ಪ್ರಕಾಶಕರು: ಸಂಚಿಕೆ ಪ್ರಕಾಶನ, ಹೊಸಪೇಟೆ (ಮೊದಲ ಮುದ್ರಣ ೨೦೧೨)

ಬುಧವಾರ, ಮೇ 27, 2015

ಸ್ಮಾರ್ಟ್‌ಫೋನ್ ಹತ್ತು ಮುಖಗಳು

ಟಿ. ಜಿ. ಶ್ರೀನಿಧಿ

ಮೊಬೈಲ್ ದೂರವಾಣಿ ನಮ್ಮ ದೇಶಕ್ಕೆ ಕಾಲಿಟ್ಟದ್ದು ಸುಮಾರು ಎರಡು ದಶಕಗಳ ಹಿಂದೆ. ಅಂದಿನ ಹ್ಯಾಂಡ್‌ಸೆಟ್ಟುಗಳು ಇವತ್ತಿನ ಕಾರ್ಡ್‌ಲೆಸ್ ಫೋನುಗಳಿಗಿಂತ ದೊಡ್ಡದಾಗಿದ್ದವು. ಇನ್ನು ಫೋನಿನಲ್ಲಿ ಮಾತನಾಡಬೇಕು ಎಂದರಂತೂ ಅದು ನಿಮಿಷಕ್ಕೆ ಹತ್ತಾರು ರೂಪಾಯಿಗಳ ವ್ಯವಹಾರವಾಗಿತ್ತು. ಆ ದಿನಗಳಲ್ಲಿ ನಾವು ಮಾಡುವ ಕರೆಗಷ್ಟೇ ಅಲ್ಲ, ನಮಗೆ ಯಾರಾದರೂ ಕರೆಮಾಡಿದರೆ ಅದಕ್ಕೂ ನಾವೇ ದುಡ್ಡುಕೊಡಬೇಕಿತ್ತು. ಹೀಗೊಮ್ಮೆ ನಮ್ಮ ಪರಿಚಿತರೊಬ್ಬರಿಗೆ ಕೊರಿಯರ್ ಮೂಲಕ ಏನನ್ನೋ ಕಳುಹಿಸುವುದಿತ್ತು. ಲಕೋಟೆಯ ಮೇಲೆ ಅವರ ವಿಳಾಸದ ಜೊತೆಗೆ ಮೊಬೈಲ್ ಸಂಖ್ಯೆಯನ್ನೂ ಬರೆದದ್ದಕ್ಕಾಗಿ ಹೀಗೆಲ್ಲ ನನ್ನ ನಂಬರ್ ಬರೆಯುತ್ತೀಯಲ್ಲ, ಅವರು ವಿಳಾಸ ಕೇಳಿ ಫೋನು ಮಾಡಿದರೆ ನನಗೆಷ್ಟು ದುಡ್ಡು ಖರ್ಚಾಗುತ್ತೆ ಗೊತ್ತಾ? ಅಂತ ಬೈಸಿಕೊಂಡ ನೆನಪು ಇನ್ನೂ ಇದೆ!

ಪ್ರಾರಂಭಿಕ ವರ್ಷಗಳಲ್ಲಿ ಮೊಬೈಲಿನ ಉಪಯೋಗಗಳು ಬಹು ಸೀಮಿತವಾಗಿಯೇ ಇದ್ದವು. ದೂರವಾಣಿ ಕರೆ, ಎಸ್ಸೆಮ್ಮೆಸ್ - ಇವೆರಡೇ ಅಂದಿನ ಮುಖ್ಯ ಉಪಯೋಗಗಳಾಗಿದ್ದವು ಎಂದರೂ ಸರಿಯೇ.

ಮುಂದೆ ಮಾರುಕಟ್ಟೆಯಲ್ಲಿ ಸ್ಪರ್ಧೆ ಜಾಸ್ತಿಯಾಯಿತು, ಮೊಬೈಲ್ ಸಂಪರ್ಕ ಪಡೆಯುವುದು ಸುಲಭವಷ್ಟೇ ಅಲ್ಲ, ಬಹಳ ಅಗ್ಗವೂ ಆಯಿತು. ಮೊಬೈಲ್ ಸಂಪರ್ಕಕ್ಕಾಗಿ ಮಾಡಬೇಕಾದ ಖರ್ಚು ಕಡಿಮೆಯಾಗುತ್ತಿದ್ದಂತೆ ಅದರ ಜನಪ್ರಿಯತೆಯೂ ತಾನೇತಾನಾಗಿ ಏರಿತು. ಆಮೇಲೆ ಬಂದ ಸ್ಮಾರ್ಟ್‌ಫೋನುಗಳಂತೂ ಕ್ರಾಂತಿಯನ್ನೇ ತಂದವು; ಅವುಗಳ ಮೂಲಕ ಮೊಬೈಲುಗಳೆಲ್ಲ ಕಂಪ್ಯೂಟರುಗಳಾಗಿ ಜಗತ್ತೇ ನಮ್ಮ ಅಂಗೈಗೆ ಬಂತು.

ಸೋಮವಾರ, ಮೇ 25, 2015

ವಿಶ್ವಕೋಶಗಳಿಗಾಗಿ ಬರೆವಣಿಗೆ

ಮೇ ೧೬, ೨೦೧೫ರಂದು ಬೆಂಗಳೂರಿನಲ್ಲಿ ನಡೆದ 'ಕನ್ನಡ ವಿಜ್ಞಾನ ಮತ್ತು ತಂತ್ರಜ್ಞಾನ ಬರಹಗಾರರ ಸಮ್ಮೇಳನ/ಕಾರ್ಯಾಗಾರ'ದಲ್ಲಿ ಮಾಡಿದ ಭಾಷಣದ ಪಠ್ಯರೂಪ
ಯು. ಬಿ. ಪವನಜ

ವಿಜ್ಞಾನಬರೆವಣಿಗೆಯಲ್ಲಿ ಹಲವು ವಿಭಾಗಗಳಿವೆ. ಅವುಗಳನ್ನು ಸ್ಥೂಲವಾಗಿ ಎರಡು ವಿಭಾಗಗಳಾಗಿ ಮಾಡಬಹುದು. ಮೊದಲನೆಯದು ಜನಪ್ರಿಯ ವಿಜ್ಞಾನ ಬರೆವಣಿಗೆ. ಎರಡನೆಯದು ವಿಶ್ವಕೋಶ ನಮೂನೆಯ ಬರೆವಣಿಗೆ. ವಿಶ್ವಕೋಶಗಳಿಗೆ ಬರೆಯುವುದು ಹೇಗೆ ಎಂಬುದು ಈ ಲೇಖನದ ವಿಷಯ.

ವಿಶ್ವಕೋಶ ಎಂದರೇನು?
ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶದಲ್ಲಿ ವಿಶ್ವಕೋಶದ ಬಗೆಗೆ ಈ ರೀತಿ ವಿವರಣೆ ನೀಡಲಾಗಿದೆ:
ಜ್ಞಾನದ ವಿವಿಧ ಶಾಖೆಗಳ ಬಗೆಗಿನ ಮಾಹಿತಿಗಳನ್ನು ಸಂಪಾದಿಸಿ, ಸಂಸ್ಕರಿಸಿ, ಬಿಡಿಲೇಖನಗಳನ್ನು ಅಕಾರಾದಿಯಾಗಿ ಅಳವಡಿಸಿರುವ ಪರಾಮರ್ಶನ ಗ್ರಂಥ (ಎನ್‌ಸೈಕ್ಲೊಪೀಡಿಯ).

ಬುಧವಾರ, ಮೇ 20, 2015

ಮಕ್ಕಳ ವಿಜ್ಞಾನಕ್ಕೊಂದು ಮಾದರಿ

ಡಾ. ಎಮ್. ಜೆ. ಸುಂದರ್ ರಾಮ್ ಅವರ 'ಮಕ್ಕಳ ವಿಜ್ಞಾನ' ಕೃತಿಯ ಪರಿಚಯ
ಕೆ.ಎಸ್. ನವೀನ್

ಹೀಗೆ ಯೋಚಿಸಿ: ಜೀವಂತ ವ್ಯಕ್ತಿಯೊಬ್ಬನ ಜಠರಕ್ಕೊಂದು ರಂಧ್ರ ಕೊರೆದು ರೊಟ್ಟಿಯ ಚೂರಿಗೆ ದಾರ ಕಟ್ಟಿ ಅದರ ಮೂಲಕ ಜಠರದೊಳಗೆ ಇಳಿಬಿಟ್ಟು ಪದೇ ಪದೇ ಹೊರಕ್ಕೆ ತೆಗೆದು ಅದೆಷ್ಟು ಜೀರ್ಣವಾಗಿದೆ ಎಂದು ಪರೀಕ್ಷಿಸಿದರೆ...? ಇದ್ಯಾವ ರಾಕ್ಷಸ ಸಂಶೋಧನೆ ಎನ್ನುವಿರಾ? ಇರಿ ಇರಿ ಇದು ಇಂದಿನದಲ್ಲ ವೈದ್ಯ ಜಗತ್ತು ಆಹಾರ ಹೇಗೆ ಜೀರ್ಣವಾಗುತ್ತದೆ ಎಂಬುದು ತಿಳಿಯದಿದ್ದ ಕಾಲದಲ್ಲಿ ವೈದ್ಯವಿಜ್ಞಾನಿಯೊಬ್ಬರು ಅಕಸ್ಮಾತ್ ಆಗಿ ಗುಂಡು ತಗುಲಿ ಜಠರಕ್ಕೆ ಕಿಟಕಿ ಮೂಡಿತೇನೋ ಎಂಬಂತಾಗಿದ್ದ ವ್ಯಕ್ತಿಯ ಮೇಲೆ ಪ್ರಯೋಗ ನಡೆಸಿ ಜೀರ್ಣಕ್ರಿಯೆಯನ್ನು ಕುರಿತ ಅನೇಕ ಆವರೆಗೂ ತಿಳಿಯದಿದ್ದ ಸಂಗತಿಗಳನ್ನು ಕಂಡುಹಿಡಿಯುತ್ತಾನೆ! ಈ ವಿವರಗಳು ಡಾ. ಸುಂದರ್ ರಾಮ್ ಮಕ್ಕಳಿಗಾಗಿ ಬರೆದಿರುವ "ಮಕ್ಕಳ ವಿಜ್ಞಾನ" ಎಂಬ ಪುಸ್ತಕದಲ್ಲಿದೆ. ಒಂದು ಪತ್ತೆದಾರಿ ಕತೆಗಿಂತಲೂ ರೋಚಕವಾಗಿ ಆದರೆ ವಿಜ್ಞಾನಕ್ಕೆ ಒಂದಿನಿತೂ ಚ್ಯುತಿಬರದಂತೆ ಮಕ್ಕಳಿಗೆ ವಿಜ್ಞಾನ ಹೇಗೆ ಬರೆಯಬೇಕು ಎನ್ನುವುದಕ್ಕೊಂದು ಉತ್ತಮ ಉದಾಹರಣೆಯನ್ನು ಡಾ. ಸುಂದರ್ ರಾಮ್ ನಿರ್ಮಿಸಿಕೊಟ್ಟಿದ್ದಾರೆ.

"ಮಕ್ಕಳ ವಿಜ್ಞಾನ" ಎಂಬ ಈ ಪುಸ್ತಕದಲ್ಲಿ ಒಟ್ಟು ಒಟ್ಟು ೨೦ ಅಧ್ಯಾಯಗಳಿವೆ. ಪಠ್ಯಪುಸ್ತಕ ಸಂಘದ ಸಂಯೋಜಕರಾದ ಜಿ.ಎಸ್. ಮುಡಂಬಡಿತ್ತಾಯ ಅವರ ಮುನ್ನುಡಿಯೊಂದಿಗೆ ಅಧ್ಯಾಯಗಳನ್ನು ಯಥೋಚಿತವಾಗಿ ಜೋಡಿಸಲಾಗಿದೆ.

ಪ್ರತಿಯೊಂದು ಅಧ್ಯಾಯದಲ್ಲಿ ಇದರ ಓದುಗರು ಮಕ್ಕಳು ಎಂಬುದನ್ನು ಗಮನದಲ್ಲಿಟ್ಟುಕೊಂಡು ಬರೆದಿರುವುದು ಗೋಚರವಾಗುತ್ತದೆ.

ಸೋಮವಾರ, ಮೇ 18, 2015

ಪತ್ರಿಕೆಗಳಿಗೆ ವಿಜ್ಞಾನ ಲೇಖನಗಳು

ಮೇ ೧೬, ೨೦೧೫ರಂದು ಬೆಂಗಳೂರಿನಲ್ಲಿ ನಡೆದ 'ಕನ್ನಡ ವಿಜ್ಞಾನ ಮತ್ತು ತಂತ್ರಜ್ಞಾನ ಬರಹಗಾರರ ಸಮ್ಮೇಳನ/ಕಾರ್ಯಾಗಾರ'ದಲ್ಲಿ ಮಾಡಿದ ಭಾಷಣದ ಪಠ್ಯರೂಪ
ಟಿ. ಜಿ. ಶ್ರೀನಿಧಿ

ವಿಜ್ಞಾನ ತಂತ್ರಜ್ಞಾನದ ಪ್ರಪಂಚದಲ್ಲಿ ದಿನವೂ ಹೊಸ ಸಂಗತಿಗಳು ಘಟಿಸುತ್ತಿರುತ್ತವೆ. ಈ ಪೈಕಿ ಕೆಲವು ನಮ್ಮ ಪಾಲಿಗೆ ಮಾಹಿತಿಯಷ್ಟೇ ಆಗಿದ್ದರೆ ಇನ್ನು ಕೆಲವು ನಮ್ಮ ನೇರ ಸಂಪರ್ಕಕ್ಕೂ ಬರುವಂತಿರುತ್ತವೆ. ಇಂತಹ ಪ್ರತಿಯೊಂದು ಸಂಗತಿ ಘಟಿಸಿದಾಗಲೂ ಅದನ್ನು ಸಾಮಾನ್ಯ ಜನತೆಗೆ ತಿಳಿಸುವ ಕೆಲಸ ವಿಜ್ಞಾನ ಸಂವಹನಕಾರರದ್ದು. ಹೀಗೆ ವಿಜ್ಞಾನ-ತಂತ್ರಜ್ಞಾನವನ್ನು ಜನರಿಗೆ ತಲುಪಿಸುವ ಮಾರ್ಗಗಳಲ್ಲಿ ಪತ್ರಿಕೆಗಳಿಗೆ ಲೇಖನ ಬರೆಯುವುದು ಕೂಡ ಒಂದು. ಪತ್ರಿಕೆಗಳಿಗೆ ವಿಜ್ಞಾನ ಲೇಖನಗಳನ್ನು ಬರೆಯುವಾಗ ಗಮನದಲ್ಲಿಟ್ಟುಕೊಳ್ಳಬಹುದಾದ ಕೆಲವು ಅಂಶಗಳು ಇಲ್ಲಿವೆ.

ವಿಷಯದ ಆಯ್ಕೆ ಹೊಸ ಆವಿಷ್ಕಾರ, ಈಗಷ್ಟೆ ಘಟಿಸಿದ ಯಾವುದೋ ಸಂಗತಿ, ಪ್ರಮುಖ ಘಟನೆಯೊಂದರ ವಾರ್ಷಿಕೋತ್ಸವ ಅಥವಾ ಯಾವುದೋ ದಿನಾಚರಣೆಯ ಸಂದರ್ಭ - ಇವೆಲ್ಲವೂ ವಿಜ್ಞಾನ ಲೇಖನಕ್ಕೆ ಸೂಕ್ತ ವಿಷಯ ಒದಗಿಸಬಲ್ಲವು.

ಇಂತಹ ಯಾವುದೇ ವಿಷಯವನ್ನು ಥಟ್ಟನೆ ಗುರುತಿಸಬೇಕಾದರೆ ಸಂವಹನಕಾರರಾದ ನಾವು ನಿರಂತರವಾಗಿ ಅಧ್ಯಯನಶೀಲರಾಗಿರಬೇಕು, ಮಾಹಿತಿ ಸಂಗ್ರಹಣೆಯಲ್ಲಿ ತೊಡಗಿರಬೇಕು. ಸಂಗ್ರಹಿಸಿದ ಮಾಹಿತಿ ಬೇಕೆಂದಾಗ ಸಿಗುವಂತೆ ಇಟ್ಟುಕೊಳ್ಳಬೇಕಾದ್ದೂ ಅತ್ಯಗತ್ಯ.

ಭಾನುವಾರ, ಮೇ 17, 2015

ವಿಜ್ಞಾನ ಸಾಹಿತ್ಯದ ಮಾರ್ಗ ಪ್ರವರ್ತಕ ಪ್ರೊ. ಜೆ.ಆರ್. ಲಕ್ಷ್ಮಣರಾವ್

ಟಿ.ಆರ್. ಅನಂತರಾಮು

ಇದು 1937ರ ಸಂಗತಿ. ಕುವೆಂಪು ಅವರು ತಾರುಣ್ಯದಲ್ಲಿದ್ದ ಘಟ್ಟ; 32ರ ಹರೆಯ. ಮೈಸೂರಿನಲ್ಲಿ ಇಂಟರ್ ಮೀಡಿಯೇಟ್ ಕಾಲೇಜಿನಲ್ಲಿ ಅವರು ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ವನ್ನು ಬೋಧಿಸುವ ಮೊದಲು ವಿಜ್ಞಾನ ವಿದ್ಯಾರ್ಥಿಗಳನ್ನು ಕುರಿತು ‘ನಿಮ್ಮಲ್ಲಿ ಬಹುಪಾಲು ಜನ ಗ್ರಿಗೊರಿ ಮತ್ತು ಹಾಡ್ಜಸ್ ಪುಸ್ತಕದಲ್ಲಿ ಏನಿದೆಯೋ ಅದೇ ವಿಜ್ಞಾನ ಎಂದು ತಿಳಿದಿರುವಿರಿ.

ಅದು ಸರಿಯಲ್ಲ, ಪಠ್ಯಕ್ರಮದಲ್ಲಿ ಎರಡೋ, ಮೂರೋ ವಿಜ್ಞಾನ ಶಾಖೆಗಳನ್ನು ನಿಮ್ಮ ವ್ಯಾಸಂಗಕ್ಕೆ ನಿಗದಿ ಮಾಡಬಹುದು ಅಷ್ಟೇ. ಇನ್ನೂ ಉನ್ನತ ವ್ಯಾಸಂಗ ಕೈಗೊಂಡಾಗ ನಿಮ್ಮ ವ್ಯಾಸಂಗ ಯಾವುದಾದರೂ ಒಂದು ವಿಜ್ಞಾನ ಶಾಖೆಗೆ ಸೀಮಿತವಾಗುತ್ತದೆ. ಆದರೆ ನಿಮ್ಮ ವ್ಯಾಸಂಗವನ್ನು ಆ ಒಂದು ಶಾಖೆಗೆ ಸೀಮಿತಗೊಳಿಸಿ ನೀವು ಕೂಪಕೂರ್ಮ ಗಳಾಗಬಾರದು.

ಇತರ ಶಾಖೆಗಳ ಪರಿಚಯವನ್ನು ಸ್ಥೂಲವಾಗಿಯಾದರೂ ಮಾಡಿಕೊಳ್ಳಬೇಕು. ವಿಜ್ಞಾನದ ವ್ಯಾಪ್ತಿಯನ್ನರಿತು, ವಿಜ್ಞಾನ ಮಾರ್ಗದ ಪರಿಚಯ ಮಾಡಿಕೊಂಡು ವೈಜ್ಞಾನಿಕ ದೃಷ್ಟಿಯನ್ನು ಮೈಗೂಡಿಸಿಕೊಳ್ಳುವುದು ಬಹುಮುಖ್ಯ. ತಜ್ಞರಲ್ಲದ ಸಾಮಾನ್ಯ ಓದುಗರಿಗಾಗಿಯೇ ರಚಿಸಿದ ಪುಸ್ತಕಗಳಿರುತ್ತವೆ.

ಅಂಥ ಪುಸ್ತಕಗಳನ್ನೋದುವುದರಿಂದ ಇತರ ವಿಜ್ಞಾನ ಶಾಖೆಗಳ ಪರಿಚಯ ಮಾಡಿಕೊಳ್ಳಬಹುದು’ ಎಂದು ಹೇಳಿ ಪ್ರಖ್ಯಾತ ಖಗೋಳ ವಿಜ್ಞಾನಿ ಸರ್ ಜೇಮ್ಸ್ ಜೀನ್ಸ್ ಬರೆದಿರುವ ‘ಮೀಸ್ಟೀರಿಯಸ್ ಯೂನಿವರ್ಸ್’ ಎಂಬ ಪುಸ್ತಕವನ್ನು ತೋರಿಸಿದರು. ‘ಇದು ತುಂಬಾ ಸ್ವಾರಸ್ಯಕರವಾಗಿದೆ. ನಮ್ಮಂಥಹವರು ಸಹ ಇದನ್ನು ಓದಿ ಅರ್ಥಮಾಡಿಕೊಳ್ಳಬಹುದು’ ಎಂದು ಒಳ್ಳೆಯ ಪೀಠಿಕೆಯನ್ನೇ ಹಾಕಿದರು.

ಕುವೆಂಪು ಮಾತುಗಳು ಯಾರ ಮೇಲೆ ಹೇಗೆ ಪ್ರಭಾವ ಬೀರಿದವೋ, ವಿದ್ಯಾರ್ಥಿ ಜೆ.ಆರ್. ಲಕ್ಷ್ಮಣರಾವ್ ಅವರಂತೂ ಆ ಮಾತುಗಳ ಮೋಡಿಗಂತೂ ಸಿಲುಕಿದರು.

ಸೋಮವಾರ, ಮೇ 11, 2015

ಟ್ಯಾಬ್ಲೆಟ್ಟೂ ಹೌದು, ಲ್ಯಾಪ್‌ಟಾಪೂ ಹೌದು: ಇದು ಟೂ-ಇನ್-ಒನ್ ಕಂಪ್ಯೂಟರ್!

ಟಿ. ಜಿ. ಶ್ರೀನಿಧಿ

ಈಚಿನ ವರ್ಷಗಳಲ್ಲಿ ನಾವು ಸ್ಪರ್ಶಸಂವೇದಿ ಪರದೆಗಳಿಗೆ (ಟಚ್‌ಸ್ಕ್ರೀನ್), ಅದನ್ನು ಬಳಸುವ ಟ್ಯಾಬ್ಲೆಟ್ಟಿನಂತಹ ಸಾಧನಗಳಿಗೆ ಚೆನ್ನಾಗಿಯೇ ಒಗ್ಗಿಕೊಂಡಿದ್ದೇವೆ. ವಾಟ್ಸಾಪ್‌ನಲ್ಲಿ ಟೈಪಿಸಲಿಕ್ಕೆ, ಬ್ರೌಸಿಂಗ್ ಮಾಡಲಿಕ್ಕೆಲ್ಲ ಟಚ್‌ಸ್ಕ್ರೀನ್ ಉಪಯೋಗ ನಮಗೆ ಬಹಳ ಸಲೀಸು. ಸೋಫಾಗೆ ಒರಗಿಕೊಂಡೋ ಮಂಚದ ಮೇಲೆ ಮಲಗಿಕೊಂಡೋ ಯೂಟ್ಯೂಬ್ ನೋಡುವುದಕ್ಕೆ-ಕತೆಪುಸ್ತಕ ಓದುವುದಕ್ಕೂ ಟ್ಯಾಬ್ಲೆಟ್ಟುಗಳು ಹೇಳಿ ಮಾಡಿಸಿದ ಜೋಡಿ.

ಆದರೆ ಉದ್ದನೆಯದೊಂದು ಇಮೇಲನ್ನೋ ಬ್ಲಾಗಿನ ಬರಹವನ್ನೋ ಟೈಪಿಸಬೇಕೆಂದು ಹೇಳಿ, ಟ್ಯಾಬ್ಲೆಟ್ಟಿನ ಕಟ್ಟಾ ಅಭಿಮಾನಿಗಳೂ ಡೆಸ್ಕ್‌ಟಾಪೋ ಲ್ಯಾಪ್‌ಟಾಪೋ ಇದ್ದರೆ ಚೆನ್ನಾಗಿತ್ತಲ್ಲ ಎಂದು ಗೊಣಗಿಕೊಳ್ಳುತ್ತಾರೆ. ಈ ಕೆಲಸವನ್ನೆಲ್ಲ ಟಚ್‌ಸ್ಕ್ರೀನಿನಲ್ಲಿ ಮಾಡುವುದು ಸಾಧ್ಯವಿಲ್ಲ ಎಂದಲ್ಲ, ಕೀಲಿಮಣೆಯಲ್ಲಿ ಟೈಪಿಸಿದಷ್ಟು ವೇಗವಾಗಿ ಟಚ್‌ಸ್ಕ್ರೀನನ್ನು ಕುಟ್ಟುವುದು ಕಷ್ಟ ಎನ್ನುವುದು ಅವರ ಗೊಣಗಾಟಕ್ಕೆ ಕಾರಣ.

ನಿಜ, ಟ್ಯಾಬ್ಲೆಟ್ಟುಗಳನ್ನು ಸಣ್ಣಪುಟ್ಟ ಕೆಲಸಗಳಿಗೆ ಅಥವಾ ಮನರಂಜನೆಯ ಅಗತ್ಯಗಳಿಗೆ ಬಳಸಿದಷ್ಟು ಸುಲಭವಾಗಿ ಹೆಚ್ಚಿನ ಟೈಪಿಂಗ್ ನಿರೀಕ್ಷಿಸುವ ಕೆಲಸಗಳಿಗೆ ಬಳಸುವುದು ಸಾಧ್ಯವಾಗುವುದಿಲ್ಲ. ಹಾಗಾಗಿಯೇ ಬಹಳಷ್ಟು ಬಳಕೆದಾರರು ಟ್ಯಾಬ್ಲೆಟ್ಟನ್ನು ತಮ್ಮಲ್ಲಿರುವ ಡೆಸ್ಕ್‌ಟಾಪ್-ಲ್ಯಾಪ್‌ಟಾಪುಗಳ ಜೊತೆಗೆ ಬಳಸುತ್ತಾರೆ: ಇಂತಿಷ್ಟು ಕೆಲಸಕ್ಕೆ ಟ್ಯಾಬೆಟ್ಟು, ಮಿಕ್ಕಿದ್ದಕ್ಕೆ ಲ್ಯಾಪ್‌ಟಾಪು ಎನ್ನುವುದು ಅನೇಕರು ಪಾಲಿಸುವ ಸೂತ್ರ.

ಹಿಂದಿನ ಕಾಲದಲ್ಲಿ ಎಲ್ಲ ಮನೆಗಳಲ್ಲೂ ರೇಡಿಯೋ ಇರುತ್ತಿತ್ತು, ದೊಡ್ಡ ಪೆಟ್ಟಿಗೆಯ ಗಾತ್ರದ್ದು. ಆಮೇಲೆ ಯಾವಾಗಲೋ ಟೇಪ್ ರೆಕಾರ್ಡರ್ ಮಾರುಕಟ್ಟೆಗೆ ಬಂತು; ರೇಡಿಯೋದಲ್ಲಿ ಬರುವ ಹಾಡನ್ನಷ್ಟೇ ಕೇಳಬೇಕಾದ ಅನಿವಾರ್ಯತೆ ಹೋಗಿ ನಮಗಿಷ್ಟವಾದ ಹಾಡನ್ನು ಬೇಕಾದಾಗ ಬೇಕಾದಷ್ಟು ಸಲ ಕೇಳುವುದು ಸಾಧ್ಯವಾಯಿತು. ರೇಡಿಯೋ ಜೊತೆಗೆ ಈ ಹೊಸ ಸಾಧನವನ್ನೂ ಮನೆಯಲ್ಲಿಟ್ಟುಕೊಳ್ಳುವುದು ಒಂದಷ್ಟು ದಿನದ ಮಟ್ಟಿಗೆ ಫ್ಯಾಶನಬಲ್ ಅನಿಸಿತೇನೋ ಸರಿ; ಆದರೆ ಕೊಂಚ ಸಮಯದ ನಂತರ ಎರಡೆರಡು ಪೆಟ್ಟಿಗೆಗಳೇಕಿರಬೇಕು ಎನ್ನುವ ಯೋಚನೆ ಶುರುವಾಯಿತು. ಆಗ ಬಂದದ್ದು ರೇಡಿಯೋ ಸೌಲಭ್ಯವೂ ಇರುವ ಟೇಪ್‌ರೆಕಾರ್ಡರ್, ಅರ್ಥಾತ್ 'ಟೂ-ಇನ್-ಒನ್'.

ಕಂಪ್ಯೂಟರ್ ಲೋಕದ ಸದ್ಯದ ಪರಿಸ್ಥಿತಿ ಹೆಚ್ಚೂಕಡಿಮೆ ಹೀಗೆಯೇ ಇದೆ. ಲ್ಯಾಪ್‌ಟಾಪ್ - ಟ್ಯಾಬ್ಲೆಟ್ ಎರಡನ್ನೂ ನಿಭಾಯಿಸುವುದು ಬಲು ಕಿರಿಕಿರಿಯ ಸಂಗತಿ ಎಂಬ ಅಭಿಪ್ರಾಯ ಈಗಾಗಲೇ ಕೇಳಿಬರುತ್ತಿದೆ. ಎರಡೆರಡು ಸಾಧನಗಳಲ್ಲಿ ತಂತ್ರಾಂಶಗಳನ್ನು ನಿಭಾಯಿಸುವುದು, ಸದಾಕಾಲ ಚಾರ್ಜ್ ಇರುವಂತೆ ನೋಡಿಕೊಳ್ಳುವುದು ಮುಂತಾದ ತಲೆಬಿಸಿಯೆಲ್ಲ ಏಕೆ, ಇಲ್ಲೂ ಒಂದು ಟೂ-ಇನ್-ಒನ್ ಬರಬಹುದಲ್ಲ ಎನ್ನುವುದು ಅನೇಕರ ಮನಸ್ಸಿನಲ್ಲಿರುವ ಪ್ರಶ್ನೆ.

ಈ ಪ್ರಶ್ನೆಗೆ ಉತ್ತರ, ಟೂ-ಇನ್-ಒನ್ ಅಥವಾ ಹೈಬ್ರಿಡ್ ಕಂಪ್ಯೂಟರುಗಳ ರೂಪದಲ್ಲಿ ಈಗಾಗಲೇ ಸಿದ್ಧವಾಗಿಬಿಟ್ಟಿದೆ

ಬುಧವಾರ, ಮೇ 6, 2015

ಕಂಪ್ಯೂಟರ್ ವಿಜ್ಞಾನ ಮತ್ತು ನಾವು

ಕಂಪ್ಯೂಟರ್ ವಿಜ್ಞಾನದ ಪರಿಚಯ ಆ ಕ್ಷೇತ್ರದಲ್ಲಿ ಕೆಲಸಮಾಡುವವರಿಗಷ್ಟೆ ಸೀಮಿತವಾಗಿರಬೇಕೇ? ಹೀಗೊಂದು ಯೋಚನಾಲಹರಿ...
ಟಿ. ಜಿ. ಶ್ರೀನಿಧಿ

ನಮ್ಮ ದಿನನಿತ್ಯದ ಬದುಕಿನ ಹತ್ತಾರು ಕೆಲಸಗಳಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಕಂಪ್ಯೂಟರುಗಳನ್ನು ಬಳಸುತ್ತೇವೆ. ಡೆಸ್ಕ್‌ಟಾಪ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್‌ಗಳಿಂದ ಪ್ರಾರಂಭಿಸಿ ಅಂಗೈಯಲ್ಲಿನ ಸ್ಮಾರ್ಟ್‌ಫೋನುಗಳವರೆಗೆ ಹಲವು ಬಗೆಯ ಕಂಪ್ಯೂಟರುಗಳ ಪರಿಚಯ ನಮ್ಮೆಲ್ಲರಿಗೂ ಇದೆ.

ಕಂಪ್ಯೂಟರ್ ಬಳಕೆಯಾಗುತ್ತಿರುವುದು ನಮ್ಮ ವೈಯಕ್ತಿಕ ಕೆಲಸಗಳಲ್ಲಷ್ಟೇ ಅಲ್ಲ. ಕಚೇರಿಗಳಿಂದ ಕಾರ್ಖಾನೆಗಳವರೆಗೆ, ರಸ್ತೆಸಾರಿಗೆಯಿಂದ ರಾಕೆಟ್ಟುಗಳವರೆಗೆ ಅದೆಷ್ಟೋ ಕ್ಷೇತ್ರಗಳ ಅಸಂಖ್ಯ ವಿದ್ಯಮಾನಗಳು ಕಂಪ್ಯೂಟರುಗಳನ್ನು ಬಳಸುತ್ತಿವೆ. ಕಂಪ್ಯೂಟರುಗಳಿಂದಾಗಿ ನಮ್ಮ ಪ್ರಪಂಚ ಕೆಲಸಮಾಡುವ ವಿಧಾನವೇ ಬದಲಾಗುತ್ತಿದೆ ಎಂದರೂ ಸರಿಯೇ.

ಕಂಪ್ಯೂಟರುಗಳು ಇಷ್ಟೆಲ್ಲ ಕೆಲಸಮಾಡುತ್ತವೆ ಎಂದಮಾತ್ರಕ್ಕೆ ಅವಕ್ಕೆ ಸ್ವಂತ ಬುದ್ಧಿಯಿದೆ ಎಂದಾಗಲೀ, ಮಾಡುತ್ತಿರುವ ಕೆಲಸದ ಪರಿಣಾಮ ಅವಕ್ಕೆ ಅರ್ಥವಾಗುತ್ತದೆ ಎಂದಾಗಲೀ ಭಾವಿಸುವಂತಿಲ್ಲ. ತನ್ನಲ್ಲಿರುವ ಸಾಫ್ಟ್‌ವೇರ್ ಏನು ಹೇಳುತ್ತದೋ ಅದನ್ನು ಕಣ್ಣುಮುಚ್ಚಿಕೊಂಡು ಪಾಲಿಸುವುದಷ್ಟೇ ಕಂಪ್ಯೂಟರಿನ ಕೆಲಸ.

ಇಂತಿಷ್ಟು ಅಂಶಗಳು ಪೂರಕವಾಗಿದ್ದರೆ ಮಾತ್ರ ಸಾಲ ಮಂಜೂರು ಮಾಡಬೇಕೆಂದು ಸಾಫ್ಟ್‌ವೇರಿನಲ್ಲಿದೆ ಎಂದುಕೊಳ್ಳೋಣ; ಅದರಲ್ಲಿ ಒಂದೇ ಅಂಶ ವ್ಯತಿರಿಕ್ತವಾಗಿದ್ದರೂ ಸಾಲದ ಅರ್ಜಿ ತಿರಸ್ಕೃತವಾಗುತ್ತದೆ. ವಿಮಾನದ ಇಂತಿಷ್ಟು ಟಿಕೇಟುಗಳನ್ನು ಇಂತಿಷ್ಟೇ ಬೆಲೆಗೆ ಮಾರಬೇಕು ಎಂದು ಸಾಫ್ಟ್‌ವೇರ್ ಹೇಳಿದರೆ ಕಂಪ್ಯೂಟರ್ ಅದನ್ನು ಚಾಚೂತಪ್ಪದೆ ಪಾಲಿಸುತ್ತದೆ. ಮಾರಾಟಕ್ಕಿರುವ ವಸ್ತುಗಳ ಮೇಲೆ ಬೇರೆಬೇರೆ ಸಮಯಗಳಲ್ಲಿ ಬೇರೆಬೇರೆ ಪ್ರಮಾಣದ ರಿಯಾಯಿತಿ ನೀಡುವ ಆನ್‌ಲೈನ್ ಅಂಗಡಿಯ ಸಾಫ್ಟ್‌ವೇರ್ ಶೇ. ೨೫ರ ಬದಲು ಶೇ. ೯೫ರ ರಿಯಾಯಿತಿಯನ್ನು - ತಪ್ಪು ಲೆಕ್ಕಾಚಾರದಿಂದಾಗಿ - ಘೋಷಿಸಿದರೆ ಕಂಪ್ಯೂಟರ್ ಅದನ್ನೂ ಮರುಮಾತಿಲ್ಲದೆ ಅನುಷ್ಠಾನಗೊಳಿಸಿಬಿಡುತ್ತದೆ.

ಒಟ್ಟಿನಲ್ಲಿ ಯಾವುದೋ ಕೆಲಸವನ್ನು ಕಂಪ್ಯೂಟರ್ ಮಾಡುತ್ತದೆ ಎನ್ನುವುದಕ್ಕಿಂತ ಸಾಫ್ಟ್‌ವೇರ್ ಆ ಕೆಲಸವನ್ನು ಮಾಡಿಸುತ್ತದೆ ಎನ್ನುವುದೇ ಹೆಚ್ಚು ಸಮಂಜಸ. ಅಲ್ಲಿಗೆ ನಮ್ಮ ಬದುಕಿನ ಮೇಲೆ ಸಾಫ್ಟ್‌ವೇರಿನ ಪ್ರಭಾವ ಸಾಕಷ್ಟು ಪ್ರಮಾಣದಲ್ಲೇ ಇದೆ ಎನ್ನಬಹುದು.

ನಮಗೆ ಬೇಕೋ ಬೇಡವೋ, ಕಂಪ್ಯೂಟರುಗಳು ಮತ್ತು ಅವುಗಳಲ್ಲಿನ ಸಾಫ್ಟ್‌ವೇರ್ ನಮ್ಮ ಅನೇಕ ಕೆಲಸಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡುಬಿಟ್ಟಿವೆ ನಿಜ. ಆದರೆ ನಮಗೆ ಬೇಕಾದ ಕೆಲಸ ಮಾಡಿಕೊಡಲು ಅವುಗಳಿಗೆ ಸಾಧ್ಯವಾಗುವುದು ಹೇಗೆ?

ಸೋಮವಾರ, ಏಪ್ರಿಲ್ 27, 2015

ಸೂಪರ್‌ಕಂಪ್ಯೂಟರ್ ಸಮಾಚಾರ

ಟಿ. ಜಿ. ಶ್ರೀನಿಧಿ

ಕೆಲವು ದಿನಗಳ ಹಿಂದೆ ಭಾರತ ಸರಕಾರ 'ರಾಷ್ಟ್ರೀಯ ಸೂಪರ್‌ಕಂಪ್ಯೂಟಿಂಗ್ ಮಿಶನ್' ಎನ್ನುವ ಕಾರ್ಯಕ್ರಮವೊಂದನ್ನು ಘೋಷಿಸಿತು. ಒಟ್ಟು ನಾಲ್ಕೂವರೆ ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಭಾರತದಾದ್ಯಂತ ಸೂಪರ್‌ಕಂಪ್ಯೂಟರುಗಳ ಜಾಲವನ್ನೇ ನಿರ್ಮಿಸುವುದು ಈ ಕಾರ್ಯಕ್ರಮದ ಉದ್ದೇಶ.

ಸರಿ, ಆದರೆ ಈ ಸೂಪರ್‌ಕಂಪ್ಯೂಟರ್ ಎಂದರೇನು?

ಪ್ರಪಂಚದಲ್ಲಿ ಅನೇಕ ಬಗೆಯ ಕಂಪ್ಯೂಟರುಗಳಿರುವುದು ನಮಗೆಲ್ಲ ಗೊತ್ತಿರುವ ವಿಷಯವೇ. ಅವುಗಳ ಪೈಕಿ ಅತಿ ಹೆಚ್ಚು ಸಂಸ್ಕರಣಾ ಸಾಮರ್ಥ್ಯ  ಇರುವ ಕಂಪ್ಯೂಟರುಗಳಿಗೆ ಸೂಪರ್‌ಕಂಪ್ಯೂಟರ್‌ಗಳೆಂದು ಹೆಸರು.

ಬಹಳ ಕ್ಲಿಷ್ಟ ಲೆಕ್ಕಾಚಾರಗಳ ಅಗತ್ಯವಿರುವ ಕ್ಷೇತ್ರಗಳಲ್ಲಿ ಇವು ಬಳಕೆಯಾಗುತ್ತವೆ. ವಿಶ್ವದ ಹುಟ್ಟಿನ ಬಗ್ಗೆ ತಿಳಿದುಕೊಳ್ಳುವುದಿರಲಿ, ಭೂಕಂಪ-ಚಂಡಮಾರುತಗಳಂತಹ ವಿದ್ಯಮಾನಗಳ ವಿಶ್ಲೇಷಣೆಯಿರಲಿ - ಉನ್ನತ ಮಟ್ಟದ ವೈಜ್ಞಾನಿಕ ಸಂಶೋಧನೆಗಳಲ್ಲಿ ಸೂಪರ್‌ಕಂಪ್ಯೂಟರುಗಳ ಬಳಕೆ ಸಾಮಾನ್ಯ. ಅಣ್ವಸ್ತ್ರಗಳ ಪರೀಕ್ಷೆಯಲ್ಲೂ ಸೂಪರ್‌ಕಂಪ್ಯೂಟರುಗಳ ಸಹಾಯ ಪಡೆದುಕೊಳ್ಳುವ ಪ್ರಯತ್ನಗಳು ನಡೆದಿವೆ. ಹವಾಗುಣ ಬದಲಾವಣೆಯಂತಹ ಪ್ರಕ್ರಿಯೆಗಳ ಅಧ್ಯಯನದಲ್ಲಿ ಕೂಡ ಸೂಪರ್‌ಕಂಪ್ಯೂಟರ್ ಪಾತ್ರವನ್ನು ನೋಡುವುದು ಸಾಧ್ಯ.

ವೈದ್ಯಕೀಯ ರಂಗದಲ್ಲೂ ಸೂಪರ್‌ಕಂಪ್ಯೂಟರುಗಳ ಬಳಕೆ ಇದೆ - ಪ್ರೋಟೀನುಗಳ ರಚನೆಯ ಬಗ್ಗೆ ತಿಳಿದುಕೊಂಡು, ಅವುಗಳಲ್ಲಾಗುವ ಬದಲಾವಣೆಗೂ ಮಾನವರಲ್ಲಿ ಕಾಣಿಸಿಕೊಳ್ಳುವ ರೋಗಗಳಿಗೂ ನಡುವಿನ ಸಂಬಂಧವನ್ನು ಅಧ್ಯಯನ ಮಾಡುತ್ತಿರುವ 'ಬ್ಲೂ ಜೀನ್' ಸೂಪರ್‌ಕಂಪ್ಯೂಟರ್ ಕಳೆದ ದಶಕದಲ್ಲಿ ಸಾಕಷ್ಟು ಸುದ್ದಿಮಾಡಿತ್ತು. ಮಾನವ ದೇಹದಲ್ಲಿ ರಕ್ತಸಂಚಾರದ ವಿವರವಾದ ವಿಶ್ಲೇಷಣೆಗೂ ಸೂಪರ್‌ಕಂಪ್ಯೂಟರುಗಳನ್ನು ಬಳಸಲಾಗುತ್ತಿದೆ.

ಹಂದಿಜ್ವರದಂತಹ ರೋಗಗಳು ಕಾಣಿಸಿಕೊಂಡಾಗ ಅವುಗಳ ಸ್ವರೂಪ ಮತ್ತು ಹರಡುತ್ತಿರುವ ವಿಧಾನವನ್ನು ಅಧ್ಯಯನ ಮಾಡಿ ಕ್ಷಿಪ್ರವಾಗಿ ಪರಿಹಾರ ಕಂಡುಕೊಳ್ಳುವಲ್ಲೂ ಸೂಪರ್‌ಕಂಪ್ಯೂಟರುಗಳು ನೆರವಾಗಬಲ್ಲವು.

ಮಂಗಳವಾರ, ಏಪ್ರಿಲ್ 21, 2015

ಮೇ ೧೬ರಂದು ಕನ್ನಡ ವಿಜ್ಞಾನ ಬರಹಗಾರರ ಕಾರ್ಯಾಗಾರ

ಇಜ್ಞಾನ ವಾರ್ತೆ

ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಶಾಸ್ತ್ರಗಳಲ್ಲಿ ಅಭೂತಪೂರ್ವ ಬೆಳವಣಿಗೆಗಳು ನಡೆಯುತ್ತಿವೆ. ಇವುಗಳನ್ನು ಕುರಿತು ಕನ್ನಡದಲ್ಲಿ ಬರೆಯುವವರ ಸಂಖ್ಯೆ ವಿರಳವಾಗಿದೆ.  ವಿಶ್ವಕೋಶಗಳು, ವಿಕಿಪೀಡಿಯಾ, ಪಠ್ಯಪುಸ್ತಕಗಳು,  ಇ-ಪುಸ್ತಕಗಳು, ವಿಜ್ಞಾನ ಪತ್ರಿಕೆಗಳು, ಜನಪ್ರಿಯ ಪತ್ರಿಕೆಗಳಲ್ಲಿ ವಿಜ್ಞಾನ ಲೇಖನಗಳು, ಬ್ಲಾಗ್ ಬರಹಗಳು, ವಿಜ್ಞಾನ ಕಥಾಸಾಹಿತ್ಯ, ... ಹೀಗೆ ವಿಜ್ಞಾನ ಬರಹಗಾರರಿಗೆ ಲಭ್ಯವಾಗಿರುವ ಮಾಧ್ಯಮಗಳು ಹಲವಾರು.

ಕನ್ನಡ ವಿಜ್ಞಾನ ಬರಹಗಾರರು ವ್ಯವಸ್ಥಿತವಾಗಿ ಕೆಲಸ ಮಾಡಿದರೆ ವಿಜ್ಞಾನ ಸಾಹಿತ್ಯವನ್ನು ಸರಿಯಾದ ರೀತಿಯಲ್ಲಿ ಬೆಳೆಸಲು ಸಾಧ್ಯ ಎಂಬ ಆಶಯದಿಂದ ಮೇ ೧೬ರಂದು ಬೆಂಗಳೂರಿನಲ್ಲಿ ಕನ್ನಡ ವಿಜ್ಞಾನ - ತಂತ್ರಜ್ಞಾನ ಬರಹಗಾರರ ಸಮ್ಮೇಳನ ಮತ್ತು ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ವಿಜ್ಞಾನ ಸಂವಹನ ಕ್ಷೇತ್ರದ ಪರಿಣತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಸಕ್ತರಿಗೆ ಮಾರ್ಗದರ್ಶನ ನೀಡಲಿದ್ದಾರೆ.

ಸೋಮವಾರ, ಏಪ್ರಿಲ್ 20, 2015

ನೆಟ್ ನ್ಯೂಟ್ರಾಲಿಟಿಯ ಸುತ್ತಮುತ್ತ

ಟಿ. ಜಿ. ಶ್ರೀನಿಧಿ

ಈಚೆಗೆ ಕೆಲದಿನಗಳಿಂದ ಎಲ್ಲೆಡೆಯೂ ನೆಟ್ ನ್ಯೂಟ್ರಾಲಿಟಿಯದೇ ಸುದ್ದಿ. ಜಾಲಲೋಕದಲ್ಲಿ ಸಮಾನತೆ ಇರಬೇಕು, ಏನೇ ಆದರೂ ಭೇದಭಾವಕ್ಕೆ ಅವಕಾಶ ಬೇಡ ಎನ್ನುವುದು ಈ ಕುರಿತು ಮಾತನಾಡುತ್ತಿರುವ ಬಹುತೇಕ ಜನರ ಅಭಿಪ್ರಾಯ.

ಅದೇನೋ ಸರಿ. ಏಕೆಂದರೆ ಜಾಲಲೋಕದ ಮೂಲ ಕಲ್ಪನೆಯೇ ಸಮಾನತೆ. ಕಂಪ್ಯೂಟರ್ ಮತ್ತು ಅಂತರಜಾಲ ಸಂಪರ್ಕ ಇರುವ ಎಲ್ಲರಿಗೂ ಇಲ್ಲಿನ ಅವಕಾಶಗಳು ಮುಕ್ತ. ಅಂತಹ ಯಾರು ಬೇಕಾದರೂ ತಮ್ಮ ಐಡಿಯಾಗಳನ್ನು ಜಾಲಲೋಕದಲ್ಲಿ ಸಾಕಾರಗೊಳಿಸುವುದು, ಪ್ರಪಂಚವನ್ನೇ ಬದಲಿಸುವುದು ಸಾಧ್ಯ.

ವಿಶ್ವವ್ಯಾಪಿ ಜಾಲ, ಅಂದರೆ ವರ್ಲ್ಡ್‌ವೈಡ್ ವೆಬ್ ಸೃಷ್ಟಿಯ ಹಿಂದೆ ಇದ್ದದ್ದೂ ಇಂತಹುದೇ ಒಂದು ಕಲ್ಪನೆ. ಎರಡು-ಮೂರು ದಶಕಗಳ ಹಿಂದೆ ಟಿಮ್ ಬರ್ನರ್ಸ್-ಲೀ ವಿಶ್ವವ್ಯಾಪಿ ಜಾಲವನ್ನು ರೂಪಿಸಿದರಲ್ಲ, ಅವರು ಅದಕ್ಕಾಗಿ ಯಾವ ಪೇಟೇಂಟನ್ನೂ ಪಡೆದುಕೊಂಡಿಲ್ಲ - ಸಂಭಾವನೆಯ ನಿರೀಕ್ಷೆಯನ್ನೂ ಇಟ್ಟುಕೊಂಡಿಲ್ಲ. ಮುಂದೆ ಅವರದೇ ನೇತೃತ್ವದಲ್ಲಿ ಸ್ಥಾಪನೆಯಾದ ವರ್ಲ್ಡ್‌ವೈಡ್ ವೆಬ್ ಕನ್ಸಾರ್ಷಿಯಂ ಕೂಡ ಅಷ್ಟೆ, ಮಾನಕಗಳನ್ನು ಶುಲ್ಕರಹಿತ ತಂತ್ರಜ್ಞಾನದ ಸುತ್ತಲೇ ರೂಪಿಸುತ್ತಿದೆ.

ಆದರೆ ಈಚೆಗೆ ಜಾಲಲೋಕದ ವಾತಾವರಣದಲ್ಲಿ ಕೊಂಚ ಬದಲಾವಣೆ ಕಾಣುತ್ತಿದೆ. ಜಾಲಲೋಕದ ಸ್ವಾತಂತ್ರ್ಯವನ್ನು ಸರಕಾರಗಳು - ವಾಣಿಜ್ಯ ಸಂಸ್ಥೆಗಳು ನಿಯಂತ್ರಿಸಲು ಪ್ರಯತ್ನಿಸುತ್ತಿರುವುದೇ ಈ ಬದಲಾವಣೆಗೆ ಕಾರಣವಾಗಿರುವ ಅಂಶ. ಜಾಲಲೋಕದ ತಾಟಸ್ಥ್ಯ (ನೆಟ್ ನ್ಯೂಟ್ರಾಲಿಟಿ) ಕುರಿತ ಚರ್ಚೆಯನ್ನು ಹುಟ್ಟುಹಾಕಿರುವುದೂ ಇದೇನೇ.

ಸೋಮವಾರ, ಏಪ್ರಿಲ್ 13, 2015

ಆಕಾಶದಲ್ಲೂ ಅಂತರಜಾಲ

ಟಿ. ಜಿ. ಶ್ರೀನಿಧಿ


ಮನೆ-ಕಚೇರಿಗಳಲ್ಲಿ ವೈ-ಫಿ ಸಂಪರ್ಕ ಅಭ್ಯಾಸವಾದವರಿಗೆ, ನಗರಗಳಲ್ಲಿ ಸದಾಕಾಲ ಥ್ರೀಜಿ-ಫೋರ್‌ಜಿಗಳ ವ್ಯಾಪ್ತಿ ಪ್ರದೇಶದಲ್ಲೇ ಇರುವವರಿಗೆ ಅಂತರಜಾಲ ಸಂಪರ್ಕವೆನ್ನುವುದು ಜೀವನದ ಒಂದು ಅವಿಭಾಜ್ಯ ಅಂಗ. ಇಂತಹವರಿಗೆ ಪ್ರವಾಸದ ಸಂದರ್ಭದಲ್ಲೂ ನಿರಂತರವಾಗಿ ಅಂತರಜಾಲ ಸಂಪರ್ಕ ಇರಲೇಬೇಕು ಎನಿಸುತ್ತಿರುತ್ತದೆ.

ಹೋದ ಜಾಗದಲ್ಲೇನೋ ಸರಿ - ತೀರಾ ದೂರದ ಪ್ರದೇಶಗಳನ್ನು ಹೊರತುಪಡಿಸಿ ಬಹಳಷ್ಟು ಕಡೆ ಅಂತರಜಾಲ ಸಂಪರ್ಕ ಸಿಕ್ಕಿಬಿಡುತ್ತದೆ. ಕಾರಿನಲ್ಲೋ, ಬಸ್ಸು-ರೈಲಿನಲ್ಲೋ ಪ್ರಯಾಣಿಸುವಾಗಲೂ ಮೊಬೈಲ್ ಸಂಪರ್ಕ ಇದ್ದ ಬಹುತೇಕ ಕಡೆಗಳಲ್ಲೊ ಅಂತರಜಾಲಾಟ ಸಾಧ್ಯ.

"ಮೊಬೈಲ್ ಸಂಪರ್ಕ ಇದ್ದ ಕಡೆ" ಎನ್ನುವುದೇ ಇಲ್ಲಿನ ದೊಡ್ಡ ಸಮಸ್ಯೆ. ನಗರ ಪ್ರದೇಶಗಳಲ್ಲಿ, ಹೆದ್ದಾರಿಗಳಲ್ಲಿ ಮೊಬೈಲ್ ಸಂಪರ್ಕ ಸಮಸ್ಯೆಯೇನಲ್ಲ. ಆದರೆ ಹೆದ್ದಾರಿಗಳನ್ನು ಬಿಟ್ಟು ದೂರಹೋದಂತೆ ಮೊಬೈಲ್ ಸಂಪರ್ಕ ಸಿಗುವುದು ಕಷ್ಟವಾಗುತ್ತದೆ; ಅಂತರಜಾಲ ನಮ್ಮಿಂದ ದೂರವೇ ಉಳಿಯುತ್ತದೆ.

ಕಚೇರಿ ಜಂಜಾಟದಿಂದ ಬೇಸತ್ತು ಪ್ರವಾಸ ಹೊರಟವರಿಗೆ ಅಂತರಜಾಲದ ಕಾಟವಿಲ್ಲ ಎನ್ನುವುದು ಖುಷಿಯ ವಿಷಯವೇ ಇರಬಹುದು. ಆದರೆ ಪ್ರಯಾಣಿಸುತ್ತಿರುವುದು ಕೆಲಸದ ಮೇಲೆಯೇ ಆದರೆ? ಬೇಕೆಂದಾಗ ಅಂತರಜಾಲ ಸಂಪರ್ಕ ದೊರಕದಿದ್ದರೆ ಕೆಲಸವೂ ಹಾಳು, ಸಮಯವೂ ವ್ಯರ್ಥ.

ಹೌದು, ನಮ್ಮ ಇಂದಿನ ಪರಿಸ್ಥಿತಿ ಹೇಗಿದೆ ಎಂದರೆ ಒಂದಷ್ಟು ಕಾಲ ಅಂತರಜಾಲ ಸಂಪರ್ಕ ಇಲ್ಲದಿದ್ದರೆ ಕಚೇರಿಯ ಕೆಲಸವೇ ನಡೆಯುವುದಿಲ್ಲ. ಸಿಬ್ಬಂದಿ ಎಲ್ಲೇ ಇದ್ದರೂ ಸರಿ, ಅವರು ಬೇಕೆಂದಾಗ ಅಂತರಜಾಲ ಸಂಪರ್ಕಕ್ಕೆ ಸಿಗುವಂತಿರಬೇಕು ಎನ್ನುತ್ತವೆ ಸಂಸ್ಥೆಗಳು.

ಹೀಗಿರುವಾಗ ಕಚೇರಿ ಕೆಲಸದ ಮೇಲೆ ಪ್ರಯಾಣಿಸುವ ಉದ್ಯೋಗಿಗಳು ಅಥವಾ ವ್ಯಾಪಾರಸ್ಥರು ಸತತವಾಗಿ ಹಲವು ಗಂಟೆಗಳ ಕಾಲ ಅಂತರಜಾಲ ಸಂಪರ್ಕವಿಲ್ಲದೆ ಇರುವುದು ಎಲ್ಲಾದರೂ ಸಾಧ್ಯವೆ?

ಸೋಮವಾರ, ಏಪ್ರಿಲ್ 6, 2015

ಇಂದಿನ ಕನಸುಗಳ ಮುಂದಿನ ಪಯಣ

ಟಿ. ಜಿ. ಶ್ರೀನಿಧಿ


ತಂತ್ರಜ್ಞಾನ ಬೆಳೆದಂತೆ ನಮ್ಮ ದಿನನಿತ್ಯದ ಬದುಕಿನ ಹಲವು ಸಂಗತಿಗಳು ಬದಲಾಗಿವೆ. ಹೊಸಬಗೆಯ ಕಾರು-ಬಸ್ಸುಗಳು ಬಂದಿವೆ. ಅವುಗಳಿಗೆ ತಕ್ಕ ರಸ್ತೆಗಳೂ ಸಿದ್ಧವಾಗಿವೆ. ಹೊಸಹೊಸ ರೈಲುಗಳ ಮೂಲಕ ದೇಶದ ಮೂಲೆಮೂಲೆಗಳ ನಡುವೆ ಸಂಪರ್ಕ ಸಾಧ್ಯವಾಗಿದೆ. ಇಂದಿನ ವಿಮಾನಯಾನ ಹಿಂದಿನ ಬಸ್ ಪ್ರಯಾಣಗಳಿಗಿಂತ ಸುಲಭವಾಗಿದೆ.

ಪರಿಚಯವಾಗುತ್ತಿರುವುದು ಹೊಸಹೊಸ ವಾಹನಗಳಷ್ಟೆ ಅಲ್ಲ, ಅವುಗಳ ಕಾರ್ಯಕ್ಷಮತೆಯಲ್ಲೂ ಗಮನಾರ್ಹ ಬದಲಾವಣೆಗಳಾಗಿವೆ. ಜನರ ಆರ್ಥಿಕ ಮಟ್ಟ ಉತ್ತಮಗೊಳ್ಳುತ್ತಿರುವುದರ ಜೊತೆಗೆ ಉತ್ಪಾದನಾ ಕ್ಷೇತ್ರದ ಪ್ರಗತಿಯೂ ಸೇರಿಕೊಂಡು ವಾಹನಗಳ ಖರೀದಿ ಬಹುತೇಕ ಎಲ್ಲರಿಗೂ ಸಾಧ್ಯವಾಗುವಂತಾಗಿದೆ.

ವಿಷಯ ಇಷ್ಟೇ ಆಗಿದ್ದರೆ ಖುಷಿಪಡಬಹುದಿತ್ತೋ ಏನೋ. ಆದರೆ ಇದೇ ತಂತ್ರಜ್ಞಾನ ಆಧುನಿಕ ಜಗತ್ತಿನೆದುರು ದೊಡ್ಡ ಸವಾಲನ್ನೂ ಸೃಷ್ಟಿಸಿ ಇಟ್ಟುಬಿಟ್ಟಿದೆ.

ವಿಪರೀತವಾಗಿ ಹೆಚ್ಚುತ್ತಿರುವ ವಾಹನಗಳಿಂದಾಗಿ ಟ್ರಾಫಿಕ್ ಜಾಮ್ ಸಮಸ್ಯೆ ಜಗತ್ತಿನ ಬಹುತೇಕ ನಗರಗಳಲ್ಲಿ ಸಾಂಕ್ರಾಮಿಕ ಪಿಡುಗಿನಂತೆ ಹಬ್ಬುತ್ತಿದೆ. ಕಡಿಮೆ ಬೆಲೆಗೆ ವಾಹನಗಳನ್ನು ಸೃಷ್ಟಿಸುವ ಪೈಪೋಟಿ ಅಪಘಾತಗಳಿಗೆ, ಮಿತಿಮೀರಿದ ಮಾಲಿನ್ಯಕ್ಕೆ ಕಾರಣವಾಗಿದೆ. ಅತ್ಯಾಧುನಿಕ ಕಾರು-ಬಸ್ಸುಗಳ ಐಷಾರಾಮಿ ಸೌಲಭ್ಯಗಳು ಪ್ರಯಾಣಿಕರಿಗೆ ಟ್ರಾಫಿಕ್ ಜಾಮುಗಳಲ್ಲೇ ಹೆಚ್ಚಾಗಿ ಉಪಯೋಗಕ್ಕೆ ಬರುತ್ತಿವೆ!

ತಂತ್ರಜ್ಞಾನದ ಬಳಕೆಯಿಂದ ಹೊಸಬಗೆಯ ವಾಹನಗಳನ್ನು ಸೃಷ್ಟಿಸುವುದು - ಬೆಲೆ ಇಳಿಸುವುದು ಸಾಧ್ಯವಾದರೆ ಇಷ್ಟೆಲ್ಲ ವಾಹನಗಳು ಸೃಷ್ಟಿಸುವ ಅವಾಂತರವನ್ನು ತಪ್ಪಿಸುವುದೂ ಸಾಧ್ಯವಾಗಬೇಕಲ್ಲ!

ಸೋಮವಾರ, ಮಾರ್ಚ್ 30, 2015

ಟ್ಯಾಬ್ಲೆಟ್‌ಗೊಂದು ಕಾಲ ಫ್ಯಾಬ್ಲೆಟ್‌ಗೊಂದು ಕಾಲ

ಟಿ. ಜಿ. ಶ್ರೀನಿಧಿ

ಹಿಂದಾನೊಂದು ಕಾಲದಲ್ಲಿ ಮೊಬೈಲ್ ಫೋನುಗಳ ಗಾತ್ರ ಬಹಳ ಸಣ್ಣದಾಗಿರುತ್ತಿತ್ತು. ಅದರಲ್ಲೂ ಅರ್ಧಕ್ಕಿಂತ ಹೆಚ್ಚಿನ ಭಾಗವನ್ನು ಕೀಪ್ಯಾಡ್ ಆಕ್ರಮಿಸಿಕೊಳ್ಳುತ್ತಿದ್ದುದರಿಂದ ಪರದೆಯ ಗಾತ್ರ ಒಂದೆರಡು ಇಂಚುಗಳಷ್ಟಿದ್ದರೆ ಅದೇ ಹೆಚ್ಚು. ಮೊಬೈಲ್ ಫೋನಿನ ಬಳಕೆ ದೂರವಾಣಿ ಕರೆ, ಎಸ್ಸೆಮ್ಮೆಸ್ ಹಾಗೂ ಸರಳವಾದ ಆಟಗಳನ್ನು ಆಡುವುದಕ್ಕಷ್ಟೇ ಸೀಮಿತವಾಗಿದ್ದ ಕಾಲದಲ್ಲಿ ಇದೊಂದು ಕೊರತೆ ಎಂದೇನೂ ಎನಿಸುತ್ತಿರಲಿಲ್ಲ.

ಈ ಪರಿಸ್ಥಿತಿ ಬದಲಾದದ್ದು ಸ್ಮಾರ್ಟ್ ಫೋನುಗಳು ಮಾರುಕಟ್ಟೆಗೆ ಬಂದಾಗ. ಕಂಪ್ಯೂಟರಿನಲ್ಲಿ ಮಾಡುವ ಹೆಚ್ಚೂಕಡಿಮೆ ಎಲ್ಲ ಕೆಲಸಗಳನ್ನೂ ಮೊಬೈಲಿನಲ್ಲಿ ಮಾಡಬಹುದು ಎಂದಾಗ ನಮಗೆ ಮೊಬೈಲಿನ ಪರದೆಯ ಗಾತ್ರ ದೊಡ್ಡದಿರಬೇಕು ಎನಿಸಲು ಶುರುವಾಗಿರಬೇಕು. ಆವರೆಗೂ ಒಂದೆರಡು ಇಂಚಿನಷ್ಟೇ ಇದ್ದ ಮೊಬೈಲ್ ಪರದೆ ಮೂರು-ನಾಲ್ಕು ಇಂಚಿಗೆ ಬಡ್ತಿ ಪಡೆದದ್ದು ಆಗಲೇ.

ಸ್ಮಾರ್ಟ್ ಫೋನ್ ಬಳಕೆ ಹೆಚ್ಚಿದಂತೆ ಅವುಗಳನ್ನು ವಿವಿಧ ಉದ್ದೇಶಗಳಿಗಾಗಿ ಬಳಸುವುದು ಶುರುವಾಯಿತು. ಇಮೇಲ್ ಕಳುಹಿಸಲು, ಮೆಸೇಜ್ ಮಾಡಲು, ವೀಡಿಯೋ ನೋಡಲು, ಜಾಲತಾಣಗಳನ್ನು ಬ್ರೌಸ್ ಮಾಡಲು, ಇ-ಪುಸ್ತಕ ಓದಲಿಕ್ಕೆಲ್ಲ ಮೊಬೈಲ್ ಫೋನ್ ಬಳಸಬಹುದು ಎನ್ನುವಾಗ ನಾಲ್ಕಲ್ಲ, ನಾಲ್ಕೂವರೆ-ಐದು ಇಂಚಿನ ಪರದೆಯೂ ಸಾಲದಾಯಿತು.

ಅಷ್ಟರಲ್ಲಿ ಪ್ರಚಲಿತಕ್ಕೆ ಬಂದಿದ್ದ ಟ್ಯಾಬ್ಲೆಟ್‌ಗಳು ಈ ಸಮಸ್ಯೆಯನ್ನು ತಕ್ಕಮಟ್ಟಿಗೆ ಬಗೆಹರಿಸಿದವು. ದೂರವಾಣಿ ಕರೆ ಮಾಡುವುದರ ಜೊತೆಗೆ ಇಮೇಲ್-ಮೆಸೇಜ್ ಇತ್ಯಾದಿ ಕಳುಹಿಸಲಿಕ್ಕೆ, ಚೂರುಪಾರು ಬ್ರೌಸಿಂಗ್ ಮಾಡಲಿಕ್ಕಷ್ಟೆ ಮೊಬೈಲ್ ಬಳಸಿ; ವೀಡಿಯೋ ನೋಡುವುದಕ್ಕೆ ಪುಸ್ತಕ ಓದುವುದಕ್ಕೆ ಆಟ ಆಡುವುದಕ್ಕೆಲ್ಲ ಟ್ಯಾಬ್ಲೆಟ್ ಬಳಸಿದರಾಯಿತು ಎನ್ನುವ ಅಭಿಪ್ರಾಯವೂ ಮೂಡಿತು. ನಾಲ್ಕಿಂಚಿನ ಫೋನಿನೊಡನೆ ಹೋಲಿಸಿದಾಗ ಟ್ಯಾಬ್ಲೆಟ್ಟಿನ ಏಳು-ಎಂಟು ಇಂಚಿನ ಪರದೆ ಬಹಳ ಅನುಕೂಲಕರ ಎನಿಸಿದ್ದರಲ್ಲಿ ತಪ್ಪೂ ಇಲ್ಲ ಬಿಡಿ.

ಆದರೆ ಇಲ್ಲೊಂದು ಸಮಸ್ಯೆಯಿತ್ತು.
badge