ಬುಧವಾರ, ಜನವರಿ 31, 2018

ಮೊಬೈಲ್ ಸಿಗ್ನಲ್ ಸುತ್ತಮುತ್ತ

ಟಿ. ಜಿ. ಶ್ರೀನಿಧಿ


ಮೊಬೈಲ್ ಫೋನ್ ಯಾರಿಗೆ ತಾನೇ ಗೊತ್ತಿಲ್ಲ? ಹಿರಿಯ-ಕಿರಿಯ, ಬಡವ-ಶ್ರೀಮಂತರೆಂಬ ಯಾವುದೇ ಭೇದಭಾವವಿಲ್ಲದೆ ಎಲ್ಲರೂ ಯಾವಾಗಲೂ ಬಳಸುವ ಸಾಧನ ಅದು. ಇಂತಹ ಸರ್ವಾಂತರ್ಯಾಮಿ ಮೊಬೈಲನ್ನು ಹಲವಾರು ಮಂದಿ ಸೆಲ್ ಫೋನ್ ಎಂದು ಕರೆಯುತ್ತಾರೆ. ಕೆಲವರಂತೂ ಈ ಹೆಸರನ್ನು ಇನ್ನೂ ಹ್ರಸ್ವಗೊಳಿಸಿ 'ಸೆಲ್' ಎಂದಷ್ಟೇ ಕರೆಯುವುದೂ ಉಂಟು.

ಈ ಅಭ್ಯಾಸಕ್ಕೆ ಕಾರಣ ಮೊಬೈಲ್ ಜಾಲಗಳ (ನೆಟ್‌ವರ್ಕ್) ವಿನ್ಯಾಸ.

ಸೋಮವಾರ, ಜನವರಿ 29, 2018

ಟೆಕ್ ಸಂತೆಯಲ್ಲಿ ಬ್ಯಾಟರಿಯದೇ ಚಿಂತೆ!

ಟಿ. ಜಿ. ಶ್ರೀನಿಧಿ


ದಸರಾ ಸಂದರ್ಭದಲ್ಲಿ ಮೈಸೂರಿನಲ್ಲಿ ವಸ್ತುಪ್ರದರ್ಶನ ನಡೆಯುತ್ತದಲ್ಲ, ಅದೇ ರೀತಿ ಅಮೆರಿಕಾದ ಲಾಸ್ ವೇಗಾಸ್‌ ನಗರದಲ್ಲೂ ವರ್ಷಕ್ಕೊಂದು ಬಾರಿ ವಿಶೇಷ ಪ್ರದರ್ಶನವೊಂದನ್ನು ಏರ್ಪಡಿಸಲಾಗುತ್ತದೆ. ಟೆಕ್ ಲೋಕದಲ್ಲಿ ಬಹಳ ಜನಪ್ರಿಯವಾದ ಈ ಸಂತೆಯ ಹೆಸರು 'ಕನ್ಸ್ಯೂಮರ್ ಇಲೆಕ್ಟ್ರಾನಿಕ್ಸ್ ಶೋ', ಸಂಕ್ಷಿಪ್ತವಾಗಿ ಸಿಇಎಸ್.

ಮೊಬೈಲ್ ಫೋನ್, ಕಂಪ್ಯೂಟರ್, ಕ್ಯಾಮೆರಾ, ರೋಬಾಟ್, ಡ್ರೋನ್ - ಹೀಗೆ ನೂರೆಂಟು ಬಗೆಯ ವಿದ್ಯುನ್ಮಾನ ಸಾಧನಗಳಿಗೆ ಸಂಬಂಧಪಟ್ಟಂತೆ ಕಳೆದೊಂದು ವರ್ಷದಲ್ಲಿ ಏನೆಲ್ಲ ಹೊಸತು ಘಟಿಸಿದೆ ಎನ್ನುವುದನ್ನು ಜಗತ್ತಿಗೆ ಪರಿಚಯಿಸುವುದು ಸಿಇಎಸ್‌ನ ಉದ್ದೇಶ. ಜನವರಿ ೭ರಿಂದ ೧೨ರವರೆಗೆ ನಡೆದ ಈ ವರ್ಷದ ಸಿಇಎಸ್‌ನಲ್ಲೂ ಇಂತಹ ಹಲವಾರು ಹೊಸ ಬೆಳವಣಿಗೆಗಳು ಬೆಳಕಿಗೆ ಬಂದವು, ವಿಶ್ವದೆಲ್ಲೆಡೆ ಸುದ್ದಿಯಾದವು.

ಬೆಳಕಿಗೆ ಬಂದ ಸುದ್ದಿಗಳ ಜೊತೆಗೆ ಪ್ರದರ್ಶನದ ಸಭಾಂಗಣವೊಂದರಲ್ಲಿ ಬೆಳಕಿಲ್ಲದಂತಾಗಿದ್ದೂ ಸುದ್ದಿಯಾಗಿದ್ದು ಈ ವರ್ಷದ ವಿಶೇಷ. ವಿದ್ಯುನ್ಮಾನ ಸಾಧನಗಳ ಪ್ರದರ್ಶನದಲ್ಲಿ ಅವುಗಳ ಜೀವಾಳವಾದ ವಿದ್ಯುತ್ ಸಂಪರ್ಕ ಕೈಕೊಟ್ಟ ಈ ಘಟನೆ, ಸಹಜವಾಗಿಯೇ, ಸಾಕಷ್ಟು ಚರ್ಚೆಗೆ ಕಾರಣವಾಯಿತು.

ಮಂಗಳವಾರ, ಜನವರಿ 23, 2018

'ಮೆಲ್ಟ್‌ಡೌನ್' ಮತ್ತು 'ಸ್ಪೆಕ್ಟರ್': ಲೇಟೆಸ್ಟ್ ಸುದ್ದಿ ಏನು?

ವಿದ್ಯುನ್ಮಾನ ಸಾಧನಗಳ ಸೆಂಟ್ರಲ್ ಪ್ರಾಸೆಸಿಂಗ್ ಯುನಿಟ್‌ (ಸಿಪಿಯು) ವಿನ್ಯಾಸದಲ್ಲಿ ಪತ್ತೆಯಾಗಿರುವ ಎರಡು ದೋಷಗಳು - 'ಮೆಲ್ಟ್‌ಡೌನ್' ಮತ್ತು 'ಸ್ಪೆಕ್ಟರ್' - ಟೆಕ್ ಲೋಕದಲ್ಲಿ ಸಂಚಲನವನ್ನೇ ಸೃಷ್ಟಿಸಿವೆ. ಈ ಸಮಸ್ಯೆಯನ್ನು ಪರಿಚಯಿಸುವ ವಿಶೇಷ ಲೇಖನ ಇಜ್ಞಾನ ಡಾಟ್ ಕಾಮ್‌ನಲ್ಲಿ ಕಳೆದ ವಾರ ಪ್ರಕಟವಾಗಿತ್ತು. 'ಮೆಲ್ಟ್‌ಡೌನ್' ಮತ್ತು 'ಸ್ಪೆಕ್ಟರ್' ಸುತ್ತಲಿನ ಸದ್ಯದ ಪರಿಸ್ಥಿತಿ ಏನು? ಈ ಕುರಿತು ಟೆಕ್ ಲೋಕದಲ್ಲಿ ಏನೆಲ್ಲ ನಡೆದಿದೆ? ವಿವರಗಳು ಇಲ್ಲಿವೆ.

ಉದಯ ಶಂಕರ ಪುರಾಣಿಕ


ಸ್ಪೆಕ್ಟರ್ ಮತ್ತು ಮೆಲ್ಟ್‌ಡೌನ್ ಲೋಪಗಳನ್ನು ಸರಿಪಡಿಸಲು ಅಗತ್ಯವಾದ ತಂತ್ರಾಂಶ ಪ್ಯಾಚುಗಳನ್ನು ಅಭಿವೃದ್ಧಿಪಡಿಸಿ, ಗ್ರಾಹಕರಿಗೆ ಬಿಡುಗಡೆ ಮಾಡಲು ಹಲವಾರು ಸಂಸ್ಥೆಗಳು ಕೆಲಸ ಮಾಡುತ್ತಿವೆ. ಆದರೆ ಇದು ಅಂದುಕೊಂಡಷ್ಟು ಸುಲಲಿತವಾಗಿ ನೆಡೆಯದಿರುವುದು ವಿವಿಧ ಸಂಸ್ಥೆಗಳ ನಡುವೆ ಆರೋಪ - ಪ್ರತ್ಯಾರೋಪಗಳಿಗೆ ಎಡೆ ಮಾಡಿಕೊಡುತ್ತಿದೆ. ಈ ನಡುವೆ ಸೈಬರ್ ಅಪರಾಧಿಗಳು, ನಕಲಿ ಪ್ಯಾಚ್ ಬಿಡುಗಡೆ ಮಾಡಿ, ಮಾಲ್‌ವೇರ್‌ಗಳನ್ನು ಬಳಸಲು ಮುಂದಾಗಿರುವುದು ಆತಂಕ ಸೃಷ್ಟಿಸಿದೆ.

ಬುಧವಾರ, ಜನವರಿ 17, 2018

ಪಾಠ ಹೇಳುವ ಯಂತ್ರ, ಪಾಠ ಕಲಿಯುವ ಯಂತ್ರ

ಟಿ. ಜಿ. ಶ್ರೀನಿಧಿ


ಮಾಹಿತಿ ತಂತ್ರಜ್ಞಾನದ ಸವಲತ್ತುಗಳ ಮಾತು ಬಂದಾಗಲೆಲ್ಲ ಶಿಕ್ಷಣ ಕ್ಷೇತ್ರದಲ್ಲಿ ಅವುಗಳ ಉಪಯುಕ್ತತೆ ಕುರಿತು ಚರ್ಚೆಯಾಗುವುದು ಸಾಮಾನ್ಯ. ಐಟಿ ಬಳಕೆಯಿಂದ ಶಿಕ್ಷಣದ ಗುಣಮಟ್ಟವನ್ನು ಬದಲಿಸಬಹುದು ಎಂಬ ಹೇಳಿಕೆಗಳು, ಅಂತಹ ಹೇಳಿಕೆಗಳಿಗೆ ಬೆಂಬಲವಾಗಿ ನಿಲ್ಲುವ ನೈಜ ಉದಾಹರಣೆಗಳು ನಮ್ಮ ಗಮನಕ್ಕೆ ಬರುವುದೂ ಅಪರೂಪವೇನಲ್ಲ. "ಕಂಪ್ಯೂಟರು - ಮೊಬೈಲು ಬಂದು ವಿದ್ಯಾರ್ಥಿಗಳೆಲ್ಲ ಹಾಳಾಗಿ ಹೋದ್ರು" ಎಂದು ಬೈಯುವವರೂ ಅವುಗಳ ಪರಿಣಾಮಕಾರಿ ಬಳಕೆ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಬಲ್ಲದು ಎಂದು ಒಪ್ಪುವಂತಹ ಪರಿಸ್ಥಿತಿ ಇದೀಗ ನಿರ್ಮಾಣವಾಗುತ್ತಿದೆ.

ಇಂತಹ ಉದಾಹರಣೆಗಳು ವಿದ್ಯಾರ್ಥಿಗಳ ಬುದ್ಧಿಮತ್ತೆಯನ್ನು ಪೋಷಿಸುವ ಅನೇಕ ಹೊಸ ಮಾರ್ಗಗಳನ್ನು ತೋರಿಸುತ್ತವೆ, ನಿಜ. ಆದರೆ ಬುದ್ಧಿಮತ್ತೆಯೆನ್ನುವುದೇನು ಬರೀ ಮನುಷ್ಯರ ಸ್ವತ್ತೇ? ಜೀವವೇ ಇಲ್ಲದ ಯಂತ್ರಗಳಲ್ಲೂ ಬುದ್ಧಿಮತ್ತೆಯನ್ನು ವಿಕಾಸಗೊಳಿಸಲು ಇದೇ ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ಬಳಸಲಾಗುತ್ತಿದೆ.

ಶನಿವಾರ, ಜನವರಿ 13, 2018

ಇಜ್ಞಾನ ವಿಶೇಷ: 'ಮೆಲ್ಟ್‌ಡೌನ್' ಮತ್ತು 'ಸ್ಪೆಕ್ಟರ್' ಸುತ್ತ ಇಷ್ಟೆಲ್ಲ ಭಯ ಏಕೆ?

ಉದಯ ಶಂಕರ ಪುರಾಣಿಕ


ಜನವರಿ ೧, ೨೦೧೮ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಜಗತ್ತು ಮುಳುಗಿತ್ತು. ವರ್ಷ ೨೦೧೭ರ ಅಂತ್ಯದಲ್ಲಿ ನಿರೀಕ್ಷಿಸಲಾಗಿದ್ದ ಸುನಾಮಿ, ಪ್ರಳಯ, ಪರಮಾಣು ಯುದ್ಧ ಮೊದಲಾದ ಯಾವುದೂ ಸಂಭವಿಸದಿರುವುದು ಜನರಿಗೆ ನೆಮ್ಮದಿ ತಂದಿತ್ತು.

ಇದಾದ ಎರಡೇ ದಿನಕ್ಕೆ - ಜನವರಿ ೩, ೨೦೧೮ರಂದು ಗೂಗಲ್‌ನ 'ಪ್ರಾಜೆಕ್ಟ್ ಜೀರೋ' ಮತ್ತು ಇನ್ನಿತರ ಯೋಜನೆಗಳಲ್ಲಿ ಕೆಲಸ ಮಾಡುವ ತಂತ್ರಜ್ಞರು, ಸೆಂಟ್ರಲ್ ಪ್ರಾಸೆಸಿಂಗ್ ಯುನಿಟ್‌ಗಳ (ಸಿಪಿಯು) ವಿನ್ಯಾಸದಲ್ಲಿ ಕಂಡು ಬಂದ ಮೂರು ದೋಷಗಳ ಮಾಹಿತಿಯನ್ನು ಬಿಡುಗಡೆ ಮಾಡಿದರು.

ಸೋಮವಾರ, ಜನವರಿ 8, 2018

ಕಂಪ್ಯೂಟರ್ ಜೊತೆ ಮಾತು-ಕತೆ!

ಟಿ. ಜಿ. ಶ್ರೀನಿಧಿ


ಕಂಪ್ಯೂಟರಿನೊಡನೆ ನಮ್ಮ ಒಡನಾಟದ ಬಹುಪಾಲು ಕೀಲಿಮಣೆ ಹಾಗೂ ಮೌಸ್ ಮೂಲಕವೇ ನಡೆಯುವುದು ಸಾಮಾನ್ಯ. ಮೊಬೈಲ್ ಫೋನುಗಳಲ್ಲೂ ಅಷ್ಟೇ: ಕರೆಮಾಡಬೇಕಾದ ಸಂಖ್ಯೆಯನ್ನು ಒತ್ತಲು, ಸಂದೇಶಗಳನ್ನು ಟೈಪ್ ಮಾಡಲು, ಆಪ್ ಬಳಸಲು ನಾವು ಕೀಲಿಮಣೆಯನ್ನೇ ಹೆಚ್ಚಾಗಿ ಬಳಸುತ್ತೇವೆ. ಕೀಲಿಮಣೆಯಿಲ್ಲದ ಸ್ಮಾರ್ಟ್‌ವಾಚ್‌ನಂತಹ ಸಾಧನಗಳಲ್ಲೂ ನಮ್ಮ ಕೆಲಸ ಸಾಗಬೇಕಾದರೆ ಪರದೆಯನ್ನು ಸ್ಪರ್ಶಿಸುವುದು, ಬೇಕಾದ ಸೌಲಭ್ಯವನ್ನು ಆಯ್ದುಕೊಳ್ಳುವುದು ಅನಿವಾರ್ಯ.

ಇದರ ಅರ್ಥ ಇಷ್ಟೇ, ಯಂತ್ರಗಳ ಜೊತೆಗಿನ ನಮ್ಮ ಸಂವಹನ ಇಂದಿಗೂ ಮೌಖಿಕವಲ್ಲದ (ನಾನ್-ವರ್ಬಲ್) ಮಾರ್ಗಗಳನ್ನೇ ಹೆಚ್ಚಾಗಿ ಅವಲಂಬಿಸಿದೆ. ಕೀಲಿಮಣೆಯ ಕೀಲಿಗಳನ್ನು ಒತ್ತುವುದು, ಟಚ್ ಸ್ಕ್ರೀನ್ ಮೇಲಿನ ಸಂಕೇತಗಳನ್ನು ಸ್ಪರ್ಶಿಸುವುದೆಲ್ಲ ಈ ಬಗೆಯ ಸಂವಹನದ್ದೇ ಉದಾಹರಣೆಗಳು.

ಹೀಗೇಕೆ? ಇತರ ಮನುಷ್ಯರೊಡನೆ ಮಾತನಾಡುವಂತೆ ನಾವು ಯಂತ್ರಗಳೊಡನೆ ಮಾತನಾಡುವುದು ಸಾಧ್ಯವಿಲ್ಲವೇ?

ಶುಕ್ರವಾರ, ಜನವರಿ 5, 2018

ಮೊಬೈಲ್ ಒಳಗಿನ ಸೆನ್ಸರ್ ಸಾಮ್ರಾಜ್ಯ

ಟಿ. ಜಿ. ಶ್ರೀನಿಧಿ


ಬೈಕಿನ ಕೀಲಿ ತಿರುಗಿಸುತ್ತಿದ್ದಂತೆಯೇ ಅದರಲ್ಲಿ ಎಷ್ಟು ಪೆಟ್ರೋಲ್ ಇದೆ ಎಂಬ ಮಾಹಿತಿ ನಮ್ಮ ಕಣ್ಣಿಗೆ ಬೀಳುತ್ತದೆ. ದೊಡ್ಡ ಹೋಟಲಿನಲ್ಲಿ ಊಟ ಮುಗಿಸಿ ಕೈತೊಳೆಯಲು ಹೋದರೆ ಅಲ್ಲಿನ ನಲ್ಲಿ ನಾವು ಕೈಯೊಡ್ಡಿದ ಕೂಡಲೇ ಸ್ವಯಂಚಾಲಿತವಾಗಿ ನೀರು ಬಿಡುತ್ತದೆ. ರಿವರ್ಸ್ ಗೇರಿನಲ್ಲಿದ್ದಾಗ ಯಾವುದಾದರೂ ವಸ್ತುವೋ ವ್ಯಕ್ತಿಯೋ ಅಡ್ಡಬಂದರೆ ಸದ್ದುಮಾಡಿ ಎಚ್ಚರಿಸುವ ವ್ಯವಸ್ಥೆ ಕೆಲ ಕಾರುಗಳಲ್ಲಿರುವುದೂ ನಮಗೆ ಗೊತ್ತು.

ಇದನ್ನೆಲ್ಲ ಸಾಧ್ಯವಾಗಿಸುವುದು ಸೆನ್ಸರ್ ಎಂಬ ವಸ್ತು. ಸೆನ್ಸರುಗಳನ್ನು ಕನ್ನಡದಲ್ಲಿ 'ಸಂವೇದಿ'ಗಳೆಂದು ಕರೆಯುತ್ತಾರೆ. ನಿರ್ದಿಷ್ಟ ಸಂಗತಿಗಳನ್ನು ಗ್ರಹಿಸಿ ಅದಕ್ಕೆ ಪೂರ್ವನಿರ್ಧಾರಿತ ಪ್ರತಿಕ್ರಿಯೆ ನೀಡುವುದು (ಉದಾ: ಬೈಕಿನಲ್ಲಿರುವ ಪೆಟ್ರೋಲ್ ಪ್ರಮಾಣವನ್ನು ಮಾಪಕದಲ್ಲಿ ತೋರಿಸುವುದು) ಇವುಗಳ ಕೆಲಸ.

ನಾವು ಪ್ರತಿದಿನವೂ ಬಳಸುವ ಸ್ಮಾರ್ಟ್‌ಫೋನುಗಳಲ್ಲೂ ಇಂತಹ ಅನೇಕ ಸೆನ್ಸರುಗಳಿರುತ್ತವೆ, ಮತ್ತು ನಮಗೆ ಗೊತ್ತಿಲ್ಲದೆಯೇ ನಾವು ಅವುಗಳ ಪ್ರಯೋಜನ ಪಡೆಯುತ್ತಿರುತ್ತೇವೆ.

ಸೋಮವಾರ, ಜನವರಿ 1, 2018

ಕಾರ್ಡ್ ಕತೆ

ಟಿ. ಜಿ. ಶ್ರೀನಿಧಿ


'ಕ್ಯಾಶ್‌ಲೆಸ್' ಎಂದಕೂಡಲೇ ನಮಗೆ ನೆನಪಾಗುವ ಸಂಗತಿಗಳಲ್ಲಿ ಕಾರ್ಡುಗಳಿಗೆ ಮೊದಲ ಸ್ಥಾನ. ಎಟಿಎಂ ಕಾರ್ಡ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ - ಹೀಗೆ ಒಂದಲ್ಲ ಒಂದು ಬಗೆಯ ಕಾರ್ಡಿನ ಪರಿಚಯ ನಮ್ಮೆಲ್ಲರಿಗೂ ಉಂಟಲ್ಲ!

'ಪ್ಲಾಸ್ಟಿಕ್ ಹಣ' ಎಂದು ಕರೆಸಿಕೊಳ್ಳುವ ಈ ಕಾರ್ಡುಗಳ ಕಾರ್ಯವೈಖರಿ ಮೇಲ್ನೋಟಕ್ಕೆ ಬಹಳ ಸರಳ ಎನ್ನಿಸುತ್ತದೆ: ನಿಮ್ಮ ಕಾರ್ಡ್ ವಿವರವನ್ನೂ ಹಣ ಪಡೆದುಕೊಳ್ಳಲು ದೃಢೀಕರಣವನ್ನೂ ನೀವು ಅಂಗಡಿಯವರಿಗೆ ನೀಡುತ್ತೀರಿ, ಅವರು ಅದನ್ನು ಬ್ಯಾಂಕಿಗೆ ಕಳಿಸಿ ನಿಮ್ಮ ಖಾತೆಯಿಂದ ತಮ್ಮ ಖಾತೆಗೆ ಹಣ ಪಡೆದುಕೊಳ್ಳುತ್ತಾರೆ.

ಅದೆಲ್ಲ ಸರಿ, ಆದರೆ ಇಷ್ಟೇ ಅಗಲದ ಆ ಕಾರ್ಡು ಇಷ್ಟೆಲ್ಲ ಮಾಡುವುದು ಹೇಗೆ?
badge