ಗುರುವಾರ, ಏಪ್ರಿಲ್ 28, 2011

ಮಲಿನ ಗಾಳಿಯ ಮರುಚೇತನ ಸಾಧ್ಯ

ಕೊಳ್ಳೇಗಾಲ ಶರ್ಮ

ಬೆಂಗಳೂರಿನ ಉಸಿರುಗಟ್ಟಿಸುವ ಹೊಗೆಗಾಳಿಯಿಂದ ತಪ್ಪಿಸಿಕೊಂಡು ತುಸು ಆರಾಮ ಪಡೆಯಲು ಪ್ರತಿ ವಾರವೂ ವಾಹನದಲ್ಲಿ ಬೇರಾವುದೋ ಊರಿಗೆ ಓಟಕೀಳುವವರಲ್ಲಿ ನೀವೂ ಒಬ್ಬರಾಗಿದ್ದರೆ ಇದೋ ಇಲ್ಲೊಂದು ಸಮಾಧಾನಕರವಾದ ಸುದ್ದಿ. ನವದೆಹಲಿಯಲ್ಲಿ ಕೆಲವು ವರ್ಷಗಳ ಹಿಂದೆ ಅನುಷ್ಠಾನಕ್ಕೆ ಬಂದ ವಾಯುಮಾಲಿನ್ಯವನ್ನು ನಿಯಂತ್ರಿಸುವ ಕ್ರಮಗಳು ಮಲಿನವಾಗಿರುವ ಗಾಳಿಯ ದುಷ್ಪ್ರಭಾವವನ್ನು ಕಡಿಮೆ ಮಾಡುತ್ತವೆ ಎನ್ನುವ ಸುದ್ದಿಯನ್ನು ಅಟ್ಮಾಸ್ಫೆರಿಕ್ ಎನ್‌ವಿರಾನ್‌ಮೆಂಟ್ ಪತ್ರಿಕೆ ಪ್ರಕಟಿಸಿದೆ. ಅಮೆರಿಕೆಯ ಅಯೋವಾ ವಿಶ್ವವಿದ್ಯಾನಿಲಯದ ಭೂಗೋಳವಿಜ್ಞಾನಿ ಭಾರತ ಸಂಜಾತ ನರೇಶ್ ಕುಮಾರ್ ಬ್ರೌನ್ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರಜ್ಞ ಆಂಡ್ರ್ಯೂ ಫಾಸ್ಟರ್ ಜೊತೆಗೂಡಿ ಪ್ರಕಟಿಸಿರುವ ಒಂದು ವಿಶ್ಲೇಷಣಾ ಪ್ರಬಂಧವೊಂದು ಈ ತೀರ್ಮಾನಕ್ಕೆ ಬಂದಿದೆ.

ಮಂಗಳವಾರ, ಏಪ್ರಿಲ್ 26, 2011

ಇದು ಸೋಶಿಯಲ್ ನ್ಯೂಸ್

ಟಿ ಜಿ ಶ್ರೀನಿಧಿ

೨೦೦೮ರಲ್ಲೇ ಪ್ರಾರಂಭವಾಗಿದ್ದರೂ ನಿರೀಕ್ಷಿತ ಜನಪ್ರಿಯತೆ ಗಳಿಸುವಲ್ಲಿ ವಿಫಲವಾದ ಯಾಹೂ ಬಜ್ ಸೇವೆ ಏಪ್ರಿಲ್ ೨೧, ೨೦೧೧ರಿಂದ ಸ್ಥಗಿತಗೊಳ್ಳಲಿದೆ ಎಂಬ ಸುದ್ದಿ ಈಚೆಗೆ ಕೆಲ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿತ್ತು. ಯಾಹೂ ಡಾಟ್ ಕಾಮ್‌ನಲ್ಲಿ ಅಂಥದ್ದೊಂದು ಸೇವೆ ಲಭ್ಯವಿತ್ತು ಎನ್ನುವುದೇ ಬಹಳಷ್ಟು ಜನಕ್ಕೆ ಗೊತ್ತಿರಲಿಲ್ಲ; ಹೀಗಾಗಿ ಅದು ನಿಂತುಹೋದ ಸುದ್ದಿ ಓದಿದವರಲ್ಲಿ ಅನೇಕರು ಕೇಳಿದ ಪ್ರಶ್ನೆ - "ಯಾಹೂ ಬಜ್ ಅಂದರೇನು?"

ಸೋಶಿಯಲ್ ನ್ಯೂಸ್ ವಿಶ್ವವ್ಯಾಪಿ ಜಾಲದ ಬಳಕೆದಾರರು ಬೇರೆಬೇರೆ ತಾಣಗಳಲ್ಲಿ ನೋಡಿ, ಓದಿ, ಮೆಚ್ಚಿದ ಮಾಹಿತಿಯನ್ನು ಇತರರೊಡನೆ ಒಂದೇ ವೇದಿಕೆಯಲ್ಲಿ ಹಂಚಿಕೊಳ್ಳಲು ಸಹಾಯಮಾಡುವ ತಾಣಗಳನ್ನು ಸೋಶಿಯಲ್ ನ್ಯೂಸ್ ಅಥವಾ ಸಾಮಾಜಿಕ ಸುದ್ದಿತಾಣಗಳು ಎಂದು ಕರೆಯುತ್ತಾರೆ.

ಈಗಷ್ಟೆ ಕಣ್ಣುಮುಚ್ಚಿದ ಯಾಹೂ ಬಜ್ ಕೂಡ ಇಂತಹುದೇ ಒಂದು ತಾಣ.

ಮಂಗಳವಾರ, ಏಪ್ರಿಲ್ 19, 2011

ಇಮೇಲ್ ಕ್ರಾಂತಿಯ ನಾಲ್ಕು ದಶಕ

ಟಿ ಜಿ ಶ್ರೀನಿಧಿ

ಇಮೇಲ್ ಕಂಡುಹಿಡಿದದ್ದು ಯಾರು? ಗಣಕಲೋಕದಲ್ಲಿ ಕೇಳಿಬರುವ ಅನೇಕ ಉತ್ತರವಿಲ್ಲದ ಪ್ರಶ್ನೆಗಳಲ್ಲಿ ಇದೂ ಒಂದು.

ಹೌದು, ಇಮೇಲ್ ತಂತ್ರಜ್ಞಾನವನ್ನು ಯಾರೋ ಒಬ್ಬ ವಿಜ್ಞಾನಿ ಯಾವುದೋ ಒಂದು ದಿನ ಇದ್ದಕ್ಕಿದ್ದಂತೆ ಕಂಡುಹಿಡಿಯಲಿಲ್ಲ; ಗಣಕಲೋಕದ ಅದೆಷ್ಟೋ ಆವಿಷ್ಕಾರಗಳಂತೆ ಸಾಕಷ್ಟು ದೀರ್ಘವಾದ ಅವಧಿಯಲ್ಲಿ ಅನೇಕ ತಂತ್ರಜ್ಞರ ಶ್ರಮದಿಂದ ವಿಕಾಸವಾದ ತಂತ್ರಜ್ಞಾನ ಅದು.

ಆದರೆ ಇಮೇಲ್ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ ಅನೇಕ ಸಂಗತಿಗಳಿವೆ - ಇಮೇಲ್ ವಿಳಾಸಗಳಲ್ಲಿ @ ಚಿಹ್ನೆಯ ಬಳಕೆ ಪ್ರಾರಂಭವಾದದ್ದು ಇಂತಹ ಮೈಲಿಗಲ್ಲುಗಳಲ್ಲಿ ಅತ್ಯಂತ ಮಹತ್ವಪೂರ್ಣವಾದದ್ದು.

ಆ ಸಾಧನೆಗೆ ಈಗ ನಲವತ್ತು ವರ್ಷ.

ಸೋಮವಾರ, ಏಪ್ರಿಲ್ 18, 2011

ಗಣಕಿಂಡಿ ಅಂಕಣಕ್ಕೆ ನೂರರ ಸಂಭ್ರಮ

ಕನ್ನಡಪ್ರಭದಲ್ಲಿ ಪ್ರಕಟವಾಗುತ್ತಿರುವ ಡಾ| ಯು ಬಿ ಪವನಜ ಅವರ 'ಗಣಕಿಂಡಿ' ಅಂಕಣಕ್ಕೆ ಈಗ ನೂರು ವಾರದ ಸಂಭ್ರಮ. ನೂರು ಎಂಬ ವಿಷಯದ ಸುತ್ತಲೇ ರಚಿಸಲಾಗಿರುವ ಗಣಕಿಂಡಿಯ ಈ ವಾರದ ಕಂತು ಇಲ್ಲಿದೆ.

ಗುರುವಾರ, ಏಪ್ರಿಲ್ 14, 2011

ನೀರಸ ವಿಷಯದ ಅದ್ಭುತ ಪತ್ರಿಕೆಗಳು

ಕೊಳ್ಳೇಗಾಲ ಶರ್ಮ

ಏನು ಮಾರಾಯರೇ! ನಿಮ್ಮ ಹೆಸರು ಓದಿ ನೀವೆಲ್ಲೋ ಬಹಳ ವಯಸ್ಸಾದವರಿರಬೇಕು ಅಂದುಕೊಂಡಿದ್ದೆ. ಈಗ ನಮ್ಮ ಜೊತೆಯಿಲ್ಲದ ಹಿರಿಯ ಸಂಪಾದಕ ಸಂತೋಷ ಕುಮಾರ್ ಗುಲ್ವಾಡಿ ಇಪ್ಪತ್ತೈದು ವರ್ಷಗಳ ಹಿಂದೆ ಮೊತ್ತ ಮೊದಲು ಭೇಟಿಯಾದಾಗ ನನ್ನನ್ನು ಕುರಿತು ಹೇಳಿದ ಮಾತು ಇದು. ಲೇಖನವನ್ನು ಓದಿಯೇ ಲೇಖಕರ ಸ್ವರೂಪವನ್ನು ಊಹಿಸಿಕೊಳ್ಳುತ್ತಿದ್ದ ಕಾಲ ಅದು. ಗುಲ್ವಾಡಿಯವರಾದರೂ ಕೇವಲ ವಯಸ್ಸು ಹೆಚ್ಚಿಸಿದ್ದರು. ನನಗೆ ಪರಿಚಿತರಾದ ಪ್ರಖ್ಯಾತ ಹಾಸ್ಯ ಸಾಹಿತಿಗಳೊಬ್ಬರಿದ್ದಾರೆ. ಮುಖತಃ ಭೇಟಿ ಮಾಡಿದಾಗ ಅವರ ಮುಖದ ಮೇಲೆ ಮುಗುಳ್ನಗುವೂ ಕಾಣಿಸಲಿಕ್ಕಿಲ್ಲ. ಆದರೆ ಬಾಯಿ ಬಿಟ್ಟರೋ, ನೀವು ನಗುತ್ತಲೇ ಇರುತ್ತೀರಿ. ಅಷ್ಟು ಹಾಸ್ಯ! ಹೀಗಾಗಿ ಬರೆಹಕ್ಕೂ, ಲೇಖಕರ ಸ್ವರೂಪಕ್ಕೂ ಏನಕೇನ ಸಂಬಂಧವಿರಲಿಕ್ಕಿಲ್ಲ.

ಬುಧವಾರ, ಏಪ್ರಿಲ್ 13, 2011

ಪ್ರಜಾವಾಣಿಯಲ್ಲಿ ಇ-ಜ್ಞಾನ ಡಾಟ್ ಕಾಮ್

ಪ್ರಜಾವಾಣಿ ಏಪ್ರಿಲ್ ೧೩, ೨೦೧೧ರ ಸಂಚಿಕೆಯ ತಂತ್ರಜ್ಞಾನ ಪುರವಣಿಯಲ್ಲಿ ಇ-ಜ್ಞಾನ ಡಾಟ್ ಕಾಮ್ ಪರಿಚಯ ಪ್ರಕಟವಾಗಿದೆ. ಇದಕ್ಕೆ ಕಾರಣರಾದವರಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು.

ಮಂಗಳವಾರ, ಏಪ್ರಿಲ್ 12, 2011

ಸುರಕ್ಷಿತ ಜಾಲತಾಣಗಳ ಸುತ್ತ

ಟಿ ಜಿ ಶ್ರೀನಿಧಿ

ಆನ್‌ಲೈನ್ ಬ್ಯಾಂಕಿಂಗ್ - ವಿಶ್ವವ್ಯಾಪಿ ಜಾಲದ ಅತ್ಯಂತ ಜನಪ್ರಿಯ ಉಪಯೋಗಗಳಲ್ಲೊಂದು. ಪಕ್ಕದ ಬೀದಿಯ ಬ್ಯಾಂಕಿಗೆ ಹೋಗಿ ಮಾಡಬಹುದಾದ ಬಹುತೇಕ ಕೆಲಸಗಳನ್ನೆಲ್ಲ ನಮ್ಮ ಗಣಕದ ಮುಂದೆಯೇ ಕುಳಿತು ಮಾಡುವ ಸೌಲಭ್ಯವನ್ನು ಈ ವ್ಯವಸ್ಥೆ ನಮಗೆ ಒದಗಿಸಿಕೊಟ್ಟಿದೆ.

ನೀವು ಆನ್‌ಲೈನ್ ಬ್ಯಾಂಕಿಂಗ್ ವ್ಯವಸ್ಥೆ ಬಳಸಿದ್ದರೆ ಅಂತಹ ಸೇವೆ ಒದಗಿಸುವ ತಾಣ ಇತರ ಸಾಮಾನ್ಯ ತಾಣಗಳಿಗಿಂತ ಕೊಂಚ ಬೇರೆ ರೀತಿ ಇರುವುದನ್ನು ನೋಡಿರಬಹುದು - ಅವುಗಳ ವಿಳಾಸ ಇತರ ತಾಣಗಳಂತೆ 'http://' ಎಂದು ಪ್ರಾರಂಭವಾಗುವ ಬದಲು 'https://' ಎಂದು ಪ್ರಾರಂಭವಾಗಿರುತ್ತದೆ; ಜೊತೆಗೆ ನೀವು ಆ ತಾಣ ತೆರೆದಾಗ ಪರದೆಯ ಮೇಲೆ ಪುಟ್ಟದೊಂದು ಬೀಗದ ಚಿತ್ರವೂ ಕಾಣಿಸಿಕೊಂಡಿರುತ್ತದೆ.

ನೀವು ತೆರೆದಿರುವ ತಾಣ ನಿಮ್ಮ ವಹಿವಾಟು ನಡೆಸಲು ಸಾಕಷ್ಟು ಸುರಕ್ಷಿತವಾಗಿದೆ ಎಂದು ತಿಳಿಸುವ ಅಂಶಗಳು ಇವು.

ಸೋಮವಾರ, ಏಪ್ರಿಲ್ 11, 2011

ರೈಲುಗಳ ಲೋಕ

ರೈಲು ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ? ಅದರ ಚುಕುಬುಕು ಸದ್ದಂತೂ ಮಕ್ಕಳಿಗೆ ಅಚ್ಚುಮೆಚ್ಚು. ರೈಲು ಪ್ರಯಾಣವೂ ಅಷ್ಟೆ; ನಿಲ್ದಾಣದಲ್ಲಿನ ಗಡಿಬಿಡಿ, ತಿಂಡಿತಿನಿಸು ಮಾರಾಟಗಾರರ ಕೂಗು, ಸೇತುವೆ ಮೇಲೆ ಸುರಂಗದ ಒಳಗೆ ರೈಲಿನ ಓಟ - ಪ್ರತಿಯೊಂದೂ ವಿಶಿಷ್ಟ ಅನುಭವವೇ.

ರೈಲುಗಳಲ್ಲಿ ಅದೆಷ್ಟೋ ವಿಧಗಳಿವೆ. ಹಿಂದಿನ ಕಾಲದಲ್ಲಿ ಎಲ್ಲ ರೈಲುಗಳೂ ಕಲ್ಲಿದ್ದಲನ್ನು ಉರಿಸಿ ನೀರಿನ ಹಬೆಯನ್ನು ಉತ್ಪಾದಿಸಿಕೊಂಡು ಅದರ ಶಕ್ತಿಯಿಂದ ಚಲಿಸುತ್ತಿದ್ದವು. ಹೀಗಾಗಿಯೇ ರೈಲುಗಳಿಗೆ ಉಗಿಬಂಡಿ ಎಂಬ ಹೆಸರು ಬಂದದ್ದು.

ಮಂಗಳವಾರ, ಏಪ್ರಿಲ್ 5, 2011

ಮತ್ತೆ ಸುದ್ದಿಮಾಡಿದ ಸ್ಪೇಸ್ ಟೂರಿಸಂ

ಟಿ ಜಿ ಶ್ರೀನಿಧಿ

ಮನುಕುಲದ ಇತಿಹಾಸದಲ್ಲಿ ಪ್ರತಿಯೊಂದು ಹೊಸ ಆವಿಷ್ಕಾರ ನಡೆದಾಗಲೂ ಅದಕ್ಕೆ ವ್ಯಾಪಕವಾದ ಪ್ರತಿರೋಧಗಳು ವ್ಯಕ್ತವಾಗುತ್ತಲೇ ಬಂದಿವೆ. ಬೆಂಕಿಯ ಬಳಕೆಯಿಂದ ಪ್ರಾರಂಭಿಸಿ ವಿದ್ಯುತ್ತಿನ ಬಳಕೆಯವರೆಗೆ, ಕಾರು-ಬಸ್ಸು-ರೈಲುಗಳಿಂದ ವಿಮಾನದವರೆಗೆ, ಅಲೆಗ್ಸಾಂಡರ್ ಗ್ರಹಾಂಬೆಲ್‌ನ ದೂರವಾಣಿಯಿಂದ ಹಿಡಿದು ಇತ್ತೀಚಿನ ಮೊಬೈಲ್ ದೂರವಾಣಿಗಳವರೆಗೆ ಎಲ್ಲ ಹೊಸ ಉಪಕರಣ-ಸಲಕರಣೆಗಳೂ ಜನಪ್ರಿಯವಾಗುವ ಮುನ್ನ ಸಾಕಷ್ಟು ಉಪೇಕ್ಷೆ-ತಾತ್ಸಾರಕ್ಕೆ ತುತ್ತಾಗಿವೆ.

ಸೋಮವಾರ, ಏಪ್ರಿಲ್ 4, 2011

ಹೊಸ ಕಣಜ ಬಂದಿದೆ!

ಇ-ಜ್ಞಾನ ವಾರ್ತೆ 

'ಕಣಜ' ಅಂತರಜಾಲ ಕನ್ನಡ ಜ್ಞಾನಕೋಶದ ಹೊಸ ಆವೃತ್ತಿ ಇದೀಗ ಅನಾವರಣಗೊಂಡಿದೆ. ಈ ಜಾಲತಾಣವು ಈಗ ಪರೀಕ್ಷಾರ್ಥವಾಗಿ ಹಲವು ಲೇಖನಗಳನ್ನು / ಪುಸ್ತಕ ಭಾಗಗಳನ್ನು ಪ್ರಕಟಿಸಿದ್ದು ಎಲ್ಲವೂ ಸಂಪಾದನೆಯ ವಿವಿಧ ಹಂತದಲ್ಲಿವೆ. ಕಣಜಕ್ಕೆ ಭೇಟಿನೀಡಲು ಇಲ್ಲಿ ಕ್ಲಿಕ್ ಮಾಡಿ.   
badge