ಟಿ. ಜಿ. ಶ್ರೀನಿಧಿ
ಅತ್ಯಂತ ಕಡಿಮೆ ಅವಧಿಯಲ್ಲಿ ಅತ್ಯಂತ ಹೆಚ್ಚು ಬದಲಾವಣೆಗಳನ್ನು ಕಂಡಿರುವ, ಕಾಣುತ್ತಿರುವ ಸಾಧನಗಳ ಪೈಕಿ ದೂರವಾಣಿಗೆ ಪ್ರಮುಖ ಸ್ಥಾನವಿದೆ. ರಸ್ತೆಗೊಂದು, ಊರಿಗೊಂದು ಇರುತ್ತಿದ್ದ ಫೋನುಗಳು ಪ್ರತಿ ಮನೆಗೆ, ಪ್ರತಿ ಕೈಗೂ ತಲುಪಿರುವುದು ಎಷ್ಟು ದೊಡ್ಡ ಸಾಧನೆಯೋ ದೂರವಾಣಿಯ ರೂಪರೇಷೆಯಲ್ಲಿ ಆಗಿರುವ ಬದಲಾವಣೆಯೂ ಅಷ್ಟೇ ಮಹತ್ವದ ಸಾಧನೆ.
ನಾವೆಲ್ಲ ಚಿಕ್ಕವರಾಗಿದ್ದಾಗ ನಮ್ಮ ದೊಡ್ಡಪ್ಪನ ಮನೆಯಲ್ಲೊಂದು ದೂರವಾಣಿ ಇತ್ತು. ಫೋನನ್ನು ನೋಡುವುದೇ ಅಪರೂಪವಾಗಿದ್ದ ಆ ಕಾಲದಲ್ಲಿ ಕೇಜಿ ತೂಕದ ಆ ಫೋನಿನ ರಿಸೀವರ್ ಎತ್ತಿ ಮಾತನಾಡುವುದೇ ಒಂದು ವಿಶೇಷ ಅನುಭವ. ಯಾವುದಾದರೂ ಕರೆಬಂದಾಗ ಅದನ್ನು ರಿಸೀವ್ ಮಾಡುವವರು ಯಾರು ಎನ್ನುವುದನ್ನು ತೀರ್ಮಾನಿಸಲು ಮಕ್ಕಳ ನಡುವೆ ಜಗಳ ನಡೆಯುತ್ತಿದ್ದದ್ದೂ ಉಂಟು.
ಈಗ, ನೂರು ಗ್ರಾಮ್ ಆಸುಪಾಸು ತೂಗುವ - ಕೆಲವೇ ಮಿಲೀಮೀಟರ್ ದಪ್ಪದ ಮೊಬೈಲುಗಳನ್ನು ನೋಡಿದಾಗ ದೂರವಾಣಿಯ ರೂಪಾಂತರ ಪರ್ವ ಸಂಪೂರ್ಣವಾಗಿದೆ ಎನ್ನಿಸದಿರದು. ಬರಿಯ ಮಾತನಾಡಲಷ್ಟೇ ಬಳಸಬಹುದಾಗಿದ್ದ ಅಷ್ಟುದೊಡ್ಡ ಯಂತ್ರದಿಂದ ಅಂಗೈ ಮೇಲಿನ ಕಂಪ್ಯೂಟರಿನಂತಹ ಇಂದಿನ ಗ್ಯಾಜೆಟ್ವರೆಗೆ ದೂರವಾಣಿ ಸಾಗಿಬಂದಿರುವ ಹಾದಿಯನ್ನು ನೋಡಿದಾಗ ಇನ್ನೇನು ತಾನೇ ಬದಲಾಗಲು ಸಾಧ್ಯ ಎಂಬ ಪ್ರಶ್ನೆ ಮೂಡಿದರೆ ಅದರಲ್ಲಿ ತಪ್ಪೂ ಇಲ್ಲ ಬಿಡಿ. ಆದರೆ ದೂರವಾಣಿಯ ಸ್ವರೂಪ ಬದಲಾಗುವ ಈ ಪ್ರಕ್ರಿಯೆ ಇನ್ನೂ ಮುಗಿದಿಲ್ಲ!
ಗುರುವಾರ, ಡಿಸೆಂಬರ್ 28, 2017
ಸೋಮವಾರ, ಡಿಸೆಂಬರ್ 25, 2017
ಮುಂದಿನ ಗುರಿ ಸ್ವಚ್ಛ ಬಾಹ್ಯಾಕಾಶ!
ಟಿ. ಜಿ. ಶ್ರೀನಿಧಿ
ಬೆಳಿಗ್ಗೆ ಟ್ಯಾಕ್ಸಿ ಹಿಡಿದು ಆಫೀಸಿಗೆ ಹೋಗುವುದರಿಂದ ಪ್ರಾರಂಭಿಸಿ ಸಂಜೆ ಮನೆಯಲ್ಲಿ ಕುಳಿತು ಧಾರಾವಾಹಿ ನೋಡುವವರೆಗೆ ದಿನನಿತ್ಯದ ಅದೆಷ್ಟೋ ಕೆಲಸಗಳು ಕೃತಕ ಉಪಗ್ರಹಗಳನ್ನು ಅವಲಂಬಿಸಿರುವ ವಿಷಯ ನಮಗೆಲ್ಲ ಗೊತ್ತೇ ಇದೆ. ಬಾಹ್ಯಾಕಾಶ ವಿಜ್ಞಾನದ ಹೊಸ ಸಾಧನೆಗಳ ಬಗೆಗೂ ನಾವು ಆಗಿಂದಾಗ್ಗೆ ಕೇಳುತ್ತಿರುತ್ತೇವೆ. ಹೊಸ ಉಪಗ್ರಹಗಳು ಗಗನಕ್ಕೆ ಚಿಮ್ಮಿದಂತೆಲ್ಲ ಹೊಸ ಸಾಧ್ಯತೆಗಳು ನಮ್ಮೆದುರು ತೆರೆದುಕೊಳ್ಳುತ್ತಲೇ ಹೋಗುತ್ತವೆ ಎನ್ನುವುದು ನಮ್ಮಲ್ಲಿ ಅನೇಕರ ಅಭಿಪ್ರಾಯ.
ಬೆಳಿಗ್ಗೆ ಟ್ಯಾಕ್ಸಿ ಹಿಡಿದು ಆಫೀಸಿಗೆ ಹೋಗುವುದರಿಂದ ಪ್ರಾರಂಭಿಸಿ ಸಂಜೆ ಮನೆಯಲ್ಲಿ ಕುಳಿತು ಧಾರಾವಾಹಿ ನೋಡುವವರೆಗೆ ದಿನನಿತ್ಯದ ಅದೆಷ್ಟೋ ಕೆಲಸಗಳು ಕೃತಕ ಉಪಗ್ರಹಗಳನ್ನು ಅವಲಂಬಿಸಿರುವ ವಿಷಯ ನಮಗೆಲ್ಲ ಗೊತ್ತೇ ಇದೆ. ಬಾಹ್ಯಾಕಾಶ ವಿಜ್ಞಾನದ ಹೊಸ ಸಾಧನೆಗಳ ಬಗೆಗೂ ನಾವು ಆಗಿಂದಾಗ್ಗೆ ಕೇಳುತ್ತಿರುತ್ತೇವೆ. ಹೊಸ ಉಪಗ್ರಹಗಳು ಗಗನಕ್ಕೆ ಚಿಮ್ಮಿದಂತೆಲ್ಲ ಹೊಸ ಸಾಧ್ಯತೆಗಳು ನಮ್ಮೆದುರು ತೆರೆದುಕೊಳ್ಳುತ್ತಲೇ ಹೋಗುತ್ತವೆ ಎನ್ನುವುದು ನಮ್ಮಲ್ಲಿ ಅನೇಕರ ಅಭಿಪ್ರಾಯ.
ಗುರುವಾರ, ಡಿಸೆಂಬರ್ 21, 2017
ಜಿಯೋಫೋನ್ ಬಂದಿದೆ, ಅದರಲ್ಲಿ ಏನಿದೆ?
ಅಭಿಷೇಕ್ ಜಿ. ಎಸ್.
ರಿಲಯನ್ಸ್ ಸಂಸ್ಥೆಯ ಜಿಯೋ ಉಚಿತ ಅಂತರ್ಜಾಲ ಸೇವೆಗಳನ್ನು ನೀಡುವುದರ ಮೂಲಕ ಬಹು ಬೇಗನೆ ಬಳಕೆದಾರರನ್ನು ತಲುಪಿದ್ದು ನಮಗೆಲ್ಲ ಗೊತ್ತೇ ಇದೆ. ಭಾರತದಾದ್ಯಂತ ಕೋಟ್ಯಂತರ ಬಳಕೆದಾರರು ಇದೀಗ ಜಿಯೋ ಸೇವೆಗಳನ್ನು ಬಳಸುತ್ತಿದ್ದಾರೆ.
ಇತರ ಸಂಸ್ಥೆಗಳಂತೆ ಮೊಬೈಲ್ ಸೇವೆಗಳಿಗೆ ಮಾತ್ರ ಸೀಮಿತವಾಗಿ ಉಳಿಯಲು ಬಯಸದ ಜಿಯೋ ಈಚೆಗೆ 'ಇಂಡಿಯಾದ ಸ್ಮಾರ್ಟ್ಫೋನ್' ಎಂಬ ಘೋಷಣೆಯೊಂದಿಗೆ ತನ್ನ ಮೊದಲ ಮೊಬೈಲ್ ಫೋನ್ ಆದ 'ಜಿಯೋಫೋನ್' ಅನ್ನು ಮಾರುಕಟ್ಟೆಗೆ ತಂದಿದೆ.
ರಿಲಯನ್ಸ್ ಸಂಸ್ಥೆಯ ಜಿಯೋ ಉಚಿತ ಅಂತರ್ಜಾಲ ಸೇವೆಗಳನ್ನು ನೀಡುವುದರ ಮೂಲಕ ಬಹು ಬೇಗನೆ ಬಳಕೆದಾರರನ್ನು ತಲುಪಿದ್ದು ನಮಗೆಲ್ಲ ಗೊತ್ತೇ ಇದೆ. ಭಾರತದಾದ್ಯಂತ ಕೋಟ್ಯಂತರ ಬಳಕೆದಾರರು ಇದೀಗ ಜಿಯೋ ಸೇವೆಗಳನ್ನು ಬಳಸುತ್ತಿದ್ದಾರೆ.
ಇತರ ಸಂಸ್ಥೆಗಳಂತೆ ಮೊಬೈಲ್ ಸೇವೆಗಳಿಗೆ ಮಾತ್ರ ಸೀಮಿತವಾಗಿ ಉಳಿಯಲು ಬಯಸದ ಜಿಯೋ ಈಚೆಗೆ 'ಇಂಡಿಯಾದ ಸ್ಮಾರ್ಟ್ಫೋನ್' ಎಂಬ ಘೋಷಣೆಯೊಂದಿಗೆ ತನ್ನ ಮೊದಲ ಮೊಬೈಲ್ ಫೋನ್ ಆದ 'ಜಿಯೋಫೋನ್' ಅನ್ನು ಮಾರುಕಟ್ಟೆಗೆ ತಂದಿದೆ.
ಸೋಮವಾರ, ಡಿಸೆಂಬರ್ 18, 2017
ತೂಕ - ಕೌತುಕ!
ವಿನಾಯಕ ಕಾಮತ್
ಒಂದು ಸರಳ ಪ್ರಶ್ನೆ.
ಎರಡು ವಸ್ತುಗಳಿವೆ. ಒಂದು ಭೂಮಿಯ ಮೇಲಿದ್ದರೆ, ಇನ್ನೊಂದು ಚಂದ್ರನ ಮೇಲಿದೆ. ಆದರೆ ಎರಡೂ ವಸ್ತುಗಳ ತೂಕ (weight) ಒಂದೇ! ಹಾಗಿದ್ದರೆ, ಯಾವುದಕ್ಕೆ ಹೆಚ್ಚಿನ ದ್ರವ್ಯರಾಶಿ (mass) ಇರುತ್ತದೆ? ಮೇಲಿನ ಪ್ರಶ್ನೆಗೆ ನಿಮ್ಮ ಉತ್ತರ, 'ತೂಕ ಒಂದೇ ಎಂದ ಮೇಲೆ ದ್ರವ್ಯರಾಶಿಯೂ ಒಂದೇ ಇರಬೇಕಲ್ಲವೇ?' ಅಥವಾ 'ತೂಕ ಮತ್ತು ದ್ರವ್ಯರಾಶಿಯ ನಡುವೆ ವ್ಯತ್ಯಾಸ ವಿದೆಯೇ?' ಎಂಬುದಾಗಿದ್ದರೆ, ನೀವು ಈ ಲೇಖನವನ್ನು ಖಂಡಿತ ಓದಬೇಕು!
ಒಂದು ಸರಳ ಪ್ರಶ್ನೆ.
ಎರಡು ವಸ್ತುಗಳಿವೆ. ಒಂದು ಭೂಮಿಯ ಮೇಲಿದ್ದರೆ, ಇನ್ನೊಂದು ಚಂದ್ರನ ಮೇಲಿದೆ. ಆದರೆ ಎರಡೂ ವಸ್ತುಗಳ ತೂಕ (weight) ಒಂದೇ! ಹಾಗಿದ್ದರೆ, ಯಾವುದಕ್ಕೆ ಹೆಚ್ಚಿನ ದ್ರವ್ಯರಾಶಿ (mass) ಇರುತ್ತದೆ? ಮೇಲಿನ ಪ್ರಶ್ನೆಗೆ ನಿಮ್ಮ ಉತ್ತರ, 'ತೂಕ ಒಂದೇ ಎಂದ ಮೇಲೆ ದ್ರವ್ಯರಾಶಿಯೂ ಒಂದೇ ಇರಬೇಕಲ್ಲವೇ?' ಅಥವಾ 'ತೂಕ ಮತ್ತು ದ್ರವ್ಯರಾಶಿಯ ನಡುವೆ ವ್ಯತ್ಯಾಸ ವಿದೆಯೇ?' ಎಂಬುದಾಗಿದ್ದರೆ, ನೀವು ಈ ಲೇಖನವನ್ನು ಖಂಡಿತ ಓದಬೇಕು!
ಗುರುವಾರ, ಡಿಸೆಂಬರ್ 14, 2017
ಸೈಬರ್ ಅಪರಾಧಗಳ ಲೋಕದಲ್ಲಿ
ಉದಯ ಶಂಕರ ಪುರಾಣಿಕ
ಇ-ಮೇಲ್, ಜಾಲತಾಣ, ಮೊಬೈಲ್ ಫೋನ್, ಬ್ಯಾಂಕು ಖಾತೆ, ಖಾಸಗಿ ದಾಖಲೆಗಳು, ವೈಯಕ್ತಿಕ ಮಾಹಿತಿ, ಹೀಗೆ ವಿವಿಧ ರೀತಿಯ ಸೈಬರ್ ಅಪರಾಧಗಳನ್ನು ಕುರಿತು ಸುದ್ದಿಗಳನ್ನು ಮಾಧ್ಯಮಗಳು ಪ್ರಕಟಿಸುತ್ತಿವೆ. ಈ ಕೆಲಸ ಮಾಡಿದ ಪಡ್ಡೆ ಹುಡುಗರು ಚೀನಾದಲ್ಲಿದ್ದಾರೆ, ಅವರು ಮನಸ್ಸು ಮಾಡಿದರೆ ಇಡೀ ಭಾರತವನ್ನು ಹ್ಯಾಕ್ ಮಾಡಬಲ್ಲರು ಎನ್ನುವಂತಹ ಮಾಹಿತಿಯನ್ನೆಲ್ಲ ಹೆಸರು ಹೇಳಲು ಇಚ್ಛಿಸದ ಸರ್ಕಾರಿ ಅಧಿಕಾರಿ ನೀಡಿದರು, ಸೈಬರ್ ಕ್ರೈಂ ವಿಭಾಗದ ಹಿರಿಯ ಅಧಿಕಾರಿ ಹೇಳಿದರು ಎನ್ನುವಂತಹ ವರದಿಗಳೂ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ.
ಇ-ಮೇಲ್, ಜಾಲತಾಣ, ಮೊಬೈಲ್ ಫೋನ್, ಬ್ಯಾಂಕು ಖಾತೆ, ಖಾಸಗಿ ದಾಖಲೆಗಳು, ವೈಯಕ್ತಿಕ ಮಾಹಿತಿ, ಹೀಗೆ ವಿವಿಧ ರೀತಿಯ ಸೈಬರ್ ಅಪರಾಧಗಳನ್ನು ಕುರಿತು ಸುದ್ದಿಗಳನ್ನು ಮಾಧ್ಯಮಗಳು ಪ್ರಕಟಿಸುತ್ತಿವೆ. ಈ ಕೆಲಸ ಮಾಡಿದ ಪಡ್ಡೆ ಹುಡುಗರು ಚೀನಾದಲ್ಲಿದ್ದಾರೆ, ಅವರು ಮನಸ್ಸು ಮಾಡಿದರೆ ಇಡೀ ಭಾರತವನ್ನು ಹ್ಯಾಕ್ ಮಾಡಬಲ್ಲರು ಎನ್ನುವಂತಹ ಮಾಹಿತಿಯನ್ನೆಲ್ಲ ಹೆಸರು ಹೇಳಲು ಇಚ್ಛಿಸದ ಸರ್ಕಾರಿ ಅಧಿಕಾರಿ ನೀಡಿದರು, ಸೈಬರ್ ಕ್ರೈಂ ವಿಭಾಗದ ಹಿರಿಯ ಅಧಿಕಾರಿ ಹೇಳಿದರು ಎನ್ನುವಂತಹ ವರದಿಗಳೂ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ.
ಸೋಮವಾರ, ಡಿಸೆಂಬರ್ 11, 2017
ಡೂಪ್ಲಿಕೇಟ್ ಡಾಟ್ ಕಾಮ್!
ಟಿ. ಜಿ. ಶ್ರೀನಿಧಿ
ಬಹುಮಾನದ ಆಮಿಷವನ್ನೋ ಖಾತೆ ಸ್ಥಗಿತಗೊಳಿಸುವ ಬೆದರಿಕೆಯನ್ನೋ ಒಡ್ಡಿ ನಮ್ಮ ಖಾಸಗಿ ಮಾಹಿತಿ ಕದಿಯಲು ಪ್ರಯತ್ನಿಸುವವರ ಹಲವು ಕತೆಗಳನ್ನು ನಾವು ಕೇಳಿದ್ದೇವೆ. ಇಂತಹ ಕುತಂತ್ರಿಗಳ ಗಾಳಕ್ಕೆ ಸಿಲುಕಿ ಮೋಸಹೋದವರ ಬಗೆಗೂ ಪತ್ರಿಕೆಗಳಲ್ಲಿ ಓದಿದ್ದೇವೆ.
ಇವರೆಲ್ಲ ಮೋಸಹೋದದ್ದು ಹೇಗೆಂದು ಹುಡುಕಿಕೊಂಡು ಹೊರಟರೆ ಸಿಗುವ ಉತ್ತರಗಳ ಪೈಕಿ ಅತ್ಯಂತ ಸಾಮಾನ್ಯವಾದದ್ದು - ಇಮೇಲ್ ಅಥವಾ ಎಸ್ಸೆಮ್ಮೆಸ್ನಲ್ಲಿ ಬಂದ ಕೊಂಡಿಯನ್ನು ಕ್ಲಿಕ್ ಮಾಡಿದ್ದು, ಆಗ ತೆರೆದುಕೊಂಡ ತಾಣದಲ್ಲಿ ಅದು ಕೇಳಿದ ಮಾಹಿತಿಯನ್ನೆಲ್ಲ ಭರ್ತಿಮಾಡಿದ್ದು!
ಬಹುಮಾನದ ಆಮಿಷವನ್ನೋ ಖಾತೆ ಸ್ಥಗಿತಗೊಳಿಸುವ ಬೆದರಿಕೆಯನ್ನೋ ಒಡ್ಡಿ ನಮ್ಮ ಖಾಸಗಿ ಮಾಹಿತಿ ಕದಿಯಲು ಪ್ರಯತ್ನಿಸುವವರ ಹಲವು ಕತೆಗಳನ್ನು ನಾವು ಕೇಳಿದ್ದೇವೆ. ಇಂತಹ ಕುತಂತ್ರಿಗಳ ಗಾಳಕ್ಕೆ ಸಿಲುಕಿ ಮೋಸಹೋದವರ ಬಗೆಗೂ ಪತ್ರಿಕೆಗಳಲ್ಲಿ ಓದಿದ್ದೇವೆ.
ಇವರೆಲ್ಲ ಮೋಸಹೋದದ್ದು ಹೇಗೆಂದು ಹುಡುಕಿಕೊಂಡು ಹೊರಟರೆ ಸಿಗುವ ಉತ್ತರಗಳ ಪೈಕಿ ಅತ್ಯಂತ ಸಾಮಾನ್ಯವಾದದ್ದು - ಇಮೇಲ್ ಅಥವಾ ಎಸ್ಸೆಮ್ಮೆಸ್ನಲ್ಲಿ ಬಂದ ಕೊಂಡಿಯನ್ನು ಕ್ಲಿಕ್ ಮಾಡಿದ್ದು, ಆಗ ತೆರೆದುಕೊಂಡ ತಾಣದಲ್ಲಿ ಅದು ಕೇಳಿದ ಮಾಹಿತಿಯನ್ನೆಲ್ಲ ಭರ್ತಿಮಾಡಿದ್ದು!
ಗುರುವಾರ, ಡಿಸೆಂಬರ್ 7, 2017
ಇದ್ದರೆ ಕೊಂಚವೇ ಎಚ್ಚರ, ವೈ-ಫೈ ಬಳಕೆ ಬಲು ಸರಳ!
ಟಿ. ಜಿ. ಶ್ರೀನಿಧಿ
ನಮ್ಮ ದೇಶದಲ್ಲಿ ಅಂತರಜಾಲ ಬಳಕೆ ಕಳೆದೊಂದು ವರ್ಷದಲ್ಲಿ ಹೆಚ್ಚಾಗಿದೆಯಲ್ಲ, ಆ ಏರಿಕೆಯ ಪ್ರಮಾಣ ಬಹುಶಃ ಜಾಗತಿಕ ಮಟ್ಟದಲ್ಲೇ ಒಂದು ದಾಖಲೆಯಿರಬೇಕು. ಮೊಬೈಲ್ ಡೇಟಾ ಬಳಕೆಯ ಪ್ರಮಾಣದಲ್ಲಂತೂ ವಿಶ್ವದ ರಾಷ್ಟ್ರಗಳ ಪೈಕಿ ನೂರೈವತ್ತನೇ ಸ್ಥಾನದಲ್ಲಿದ್ದ ಭಾರತ ಕಳೆದ ಒಂದೇ ವರ್ಷದಲ್ಲಿ ಮೊದಲ ಸ್ಥಾನಕ್ಕೇರಿಬಿಟ್ಟಿದೆ.
ಸದ್ಯ ಅಂತರಜಾಲ ಬಳಕೆಯ ದೊಡ್ಡದೊಂದು ಪಾಲು ಮೊಬೈಲ್ ಫೋನುಗಳ ಮೂಲಕವೇ ಆಗುತ್ತದೆ, ನಿಜ. ಆದರೆ ವೈ-ಫೈ (ನಿಸ್ತಂತು ಅಂತರಜಾಲ) ಬಳಕೆಯ ಪ್ರಮಾಣವೂ ಸಣ್ಣದೇನಲ್ಲ. ಕಚೇರಿಯ ಲ್ಯಾಪ್ಟಾಪ್, ಮನೆಯ ಸ್ಮಾರ್ಟ್ ಟೀವಿ, ಡೆಸ್ಕ್ಟಾಪ್, ಟ್ಯಾಬ್ಲೆಟ್ ಸೇರಿದಂತೆ ಅದೆಷ್ಟೋ ಸಾಧನಗಳು ಅಂತರಜಾಲದೊಡನೆ ಬೆಸೆದುಕೊಳ್ಳಲು ವೈ-ಫೈ ಸಂಪರ್ಕವನ್ನೇ ಅವಲಂಬಿಸಿರುತ್ತವೆ.
ನಮ್ಮ ದೇಶದಲ್ಲಿ ಅಂತರಜಾಲ ಬಳಕೆ ಕಳೆದೊಂದು ವರ್ಷದಲ್ಲಿ ಹೆಚ್ಚಾಗಿದೆಯಲ್ಲ, ಆ ಏರಿಕೆಯ ಪ್ರಮಾಣ ಬಹುಶಃ ಜಾಗತಿಕ ಮಟ್ಟದಲ್ಲೇ ಒಂದು ದಾಖಲೆಯಿರಬೇಕು. ಮೊಬೈಲ್ ಡೇಟಾ ಬಳಕೆಯ ಪ್ರಮಾಣದಲ್ಲಂತೂ ವಿಶ್ವದ ರಾಷ್ಟ್ರಗಳ ಪೈಕಿ ನೂರೈವತ್ತನೇ ಸ್ಥಾನದಲ್ಲಿದ್ದ ಭಾರತ ಕಳೆದ ಒಂದೇ ವರ್ಷದಲ್ಲಿ ಮೊದಲ ಸ್ಥಾನಕ್ಕೇರಿಬಿಟ್ಟಿದೆ.
ಸದ್ಯ ಅಂತರಜಾಲ ಬಳಕೆಯ ದೊಡ್ಡದೊಂದು ಪಾಲು ಮೊಬೈಲ್ ಫೋನುಗಳ ಮೂಲಕವೇ ಆಗುತ್ತದೆ, ನಿಜ. ಆದರೆ ವೈ-ಫೈ (ನಿಸ್ತಂತು ಅಂತರಜಾಲ) ಬಳಕೆಯ ಪ್ರಮಾಣವೂ ಸಣ್ಣದೇನಲ್ಲ. ಕಚೇರಿಯ ಲ್ಯಾಪ್ಟಾಪ್, ಮನೆಯ ಸ್ಮಾರ್ಟ್ ಟೀವಿ, ಡೆಸ್ಕ್ಟಾಪ್, ಟ್ಯಾಬ್ಲೆಟ್ ಸೇರಿದಂತೆ ಅದೆಷ್ಟೋ ಸಾಧನಗಳು ಅಂತರಜಾಲದೊಡನೆ ಬೆಸೆದುಕೊಳ್ಳಲು ವೈ-ಫೈ ಸಂಪರ್ಕವನ್ನೇ ಅವಲಂಬಿಸಿರುತ್ತವೆ.
ಸೋಮವಾರ, ಡಿಸೆಂಬರ್ 4, 2017
ಗ್ಯಾಜೆಟ್ ಜಗತ್ತಿಗೂ ಉಂಟು ಗಣಿಗಾರಿಕೆಯ ನಂಟು
ಟಿ. ಜಿ. ಶ್ರೀನಿಧಿ
ನೀವು ಶಾಲೆ ಅಥವಾ ಕಾಲೇಜಿನಲ್ಲಿ ರಸಾಯನವಿಜ್ಞಾನದ ವಿದ್ಯಾರ್ಥಿಯಾಗಿದ್ದರೆ ಪೀರಿಯಾಡಿಕ್ ಟೇಬಲ್, ಅರ್ಥಾತ್ ಆವರ್ತ ಕೋಷ್ಟಕವೆಂಬ ಹೆಸರು ನಿಮಗೆ ನೆನಪಿರುವುದು ಸಾಧ್ಯ. ಜಗತ್ತಿನಲ್ಲಿರುವ ಅಷ್ಟೂ ಧಾತುಗಳನ್ನು (ಎಲಿಮೆಂಟ್ಸ್) ಕ್ರಮಬದ್ಧವಾಗಿ ಜೋಡಿಸಿಟ್ಟು ಅವುಗಳೆಲ್ಲದರ ಕುರಿತು ಪ್ರಾಥಮಿಕ ಮಾಹಿತಿ ನೀಡುವುದು ಈ ಕೋಷ್ಟಕದ ವೈಶಿಷ್ಟ್ಯ.
ಸಾಧಾರಣ ರಾಸಾಯನಿಕ ವಿಧಾನಗಳ ಮೂಲಕ ಇವನ್ನು ಇನ್ನಷ್ಟು ಸರಳ ಪದಾರ್ಥಗಳನ್ನಾಗಿ ವಿಭಜಿಸುವುದು ಸಾಧ್ಯವಾಗುವುದಿಲ್ಲ ಎನ್ನುವುದು ಧಾತುಗಳ ಪ್ರಮುಖ ಲಕ್ಷಣ. ಇವು ಲೋಹ, ಅಲೋಹ, ಅನಿಲ ಮುಂತಾದ ಹಲವಾರು ಗುಂಪುಗಳ ಪೈಕಿ ಯಾವುದಕ್ಕಾದರೂ ಸೇರಿರುವುದು ಸಾಧ್ಯ.
ನೀವು ಶಾಲೆ ಅಥವಾ ಕಾಲೇಜಿನಲ್ಲಿ ರಸಾಯನವಿಜ್ಞಾನದ ವಿದ್ಯಾರ್ಥಿಯಾಗಿದ್ದರೆ ಪೀರಿಯಾಡಿಕ್ ಟೇಬಲ್, ಅರ್ಥಾತ್ ಆವರ್ತ ಕೋಷ್ಟಕವೆಂಬ ಹೆಸರು ನಿಮಗೆ ನೆನಪಿರುವುದು ಸಾಧ್ಯ. ಜಗತ್ತಿನಲ್ಲಿರುವ ಅಷ್ಟೂ ಧಾತುಗಳನ್ನು (ಎಲಿಮೆಂಟ್ಸ್) ಕ್ರಮಬದ್ಧವಾಗಿ ಜೋಡಿಸಿಟ್ಟು ಅವುಗಳೆಲ್ಲದರ ಕುರಿತು ಪ್ರಾಥಮಿಕ ಮಾಹಿತಿ ನೀಡುವುದು ಈ ಕೋಷ್ಟಕದ ವೈಶಿಷ್ಟ್ಯ.
ಸಾಧಾರಣ ರಾಸಾಯನಿಕ ವಿಧಾನಗಳ ಮೂಲಕ ಇವನ್ನು ಇನ್ನಷ್ಟು ಸರಳ ಪದಾರ್ಥಗಳನ್ನಾಗಿ ವಿಭಜಿಸುವುದು ಸಾಧ್ಯವಾಗುವುದಿಲ್ಲ ಎನ್ನುವುದು ಧಾತುಗಳ ಪ್ರಮುಖ ಲಕ್ಷಣ. ಇವು ಲೋಹ, ಅಲೋಹ, ಅನಿಲ ಮುಂತಾದ ಹಲವಾರು ಗುಂಪುಗಳ ಪೈಕಿ ಯಾವುದಕ್ಕಾದರೂ ಸೇರಿರುವುದು ಸಾಧ್ಯ.
ಶುಕ್ರವಾರ, ಡಿಸೆಂಬರ್ 1, 2017
ಅಂಗೈಯಲ್ಲೇ ಗ್ರಂಥಾಲಯ, ಇದು ಡಿಜಿಟಲ್ ಲೈಬ್ರರಿ!
ಡಿಸೆಂಬರ್ ೧, ಪುಸ್ತಕಗಳನ್ನು ಇ-ಲೋಕಕ್ಕೆ ಕರೆತಂದ 'ಪ್ರಾಜೆಕ್ಟ್ ಗುಟನ್ಬರ್ಗ್' ಯೋಜನೆ ಪ್ರಾರಂಭವಾದ ದಿನ. ಇಂತಹ ಡಿಜಿಟಲ್ ಗ್ರಂಥಾಲಯಗಳ ಕುರಿತು ಇಜ್ಞಾನದಲ್ಲಿ ಹಿಂದೊಮ್ಮೆ ಪ್ರಕಟವಾಗಿದ್ದ ಲೇಖನವನ್ನು ನಿಮ್ಮ ವಿರಾಮದ ಓದಿಗಾಗಿ ಮತ್ತೆ ಪ್ರಕಟಿಸುತ್ತಿದ್ದೇವೆ.
ಟಿ. ಜಿ. ಶ್ರೀನಿಧಿ
ತಂತ್ರಜ್ಞಾನ ಲೋಕದಲ್ಲಿ ಕೆಲವು ಘಟನೆಗಳಿಗೆ ಎಲ್ಲಿಲ್ಲದ ಮಹತ್ವ, ಜಗತ್ತನ್ನೇ ಬದಲಿಸಿದ ಶ್ರೇಯ.
ಈ ಘಟನೆಗಳಲ್ಲಿ ಹೊಸ ಸಂಗತಿಗಳ ಆವಿಷ್ಕಾರವೇ ಆಗಿರಬೇಕು ಎಂದೇನೂ ಇಲ್ಲ. ಆಗಲೇ ಅಸ್ತಿತ್ವದಲ್ಲಿರುವ ಪರಿಕಲ್ಪನೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕವೂ ಇಂತಹ ಮೈಲಿಗಲ್ಲುಗಳು ಸೃಷ್ಟಿಯಾಗುವುದುಂಟು.
ಇಂತಹುದೊಂದು ಘಟನೆಯ ಹಿಂದೆ ಇದ್ದ ವ್ಯಕ್ತಿ ಜರ್ಮನಿಯ ಯೊಹಾನೆಸ್ ಗುಟನ್ಬರ್ಗ್. ಏಷಿಯಾದ ಹಲವೆಡೆ ಹಂತಹಂತಗಳಲ್ಲಿ ರೂಪುಗೊಂಡಿದ್ದ ಮುದ್ರಣ ತಂತ್ರಜ್ಞಾನವನ್ನು ಕೊಂಚ ಸುಧಾರಿಸಿ, ಪ್ರಾಯೋಗಿಕವಾಗಿ ಅಳವಡಿಸಿದ ಆತನ ಸಾಧನೆ ಮುದ್ರಣ ತಂತ್ರಜ್ಞಾನದ ಉಗಮಕ್ಕೆ ಕಾರಣವಾಯಿತು. ಆ ಮೂಲಕ ಜ್ಞಾನಪ್ರಸಾರಕ್ಕೆ ಹೊಸ ವೇಗ ದೊರಕಿತು; ಮಾಹಿತಿಯನ್ನು ಯಾರು ಯಾವಾಗ ಬೇಕಿದ್ದರೂ ಪಡೆದುಕೊಳ್ಳಬಹುದೆಂಬ ಸಾಧ್ಯತೆ ಜಗತ್ತಿಗೆ ಗೋಚರಿಸಿತು.
ಮುಂದೆ ಕೆಲ ಶತಮಾನಗಳ ನಂತರ ಜ್ಞಾನಪ್ರಸಾರಕ್ಕೆ ಇಷ್ಟೇ ಮಹತ್ವದ ಕೊಡುಗೆ ನೀಡಿದ ಸಾಧನೆಗಳ ಸಾಲಿನಲ್ಲಿ ಅಂತರಜಾಲಕ್ಕೆ (ಇಂಟರ್ನೆಟ್) ಪ್ರಮುಖ ಸ್ಥಾನವಿರುವುದು ನಮಗೆಲ್ಲ ಗೊತ್ತೇ ಇದೆ. ಇದೇ ಅಂತರಜಾಲದ ಮೂಲಕ ಜ್ಞಾನಪ್ರಸಾರದ ವಿನೂತನ ಮಾರ್ಗವೊಂದನ್ನು ತೋರಿಸಿಕೊಟ್ಟ ಸಾಧನೆಯ ಜೊತೆಯಲ್ಲೂ ಗುಟನ್ಬರ್ಗ್ ಹೆಸರೇ ಇರುವುದು ವಿಶೇಷ.
ತಂತ್ರಜ್ಞಾನ ಲೋಕದಲ್ಲಿ ಕೆಲವು ಘಟನೆಗಳಿಗೆ ಎಲ್ಲಿಲ್ಲದ ಮಹತ್ವ, ಜಗತ್ತನ್ನೇ ಬದಲಿಸಿದ ಶ್ರೇಯ.
ಈ ಘಟನೆಗಳಲ್ಲಿ ಹೊಸ ಸಂಗತಿಗಳ ಆವಿಷ್ಕಾರವೇ ಆಗಿರಬೇಕು ಎಂದೇನೂ ಇಲ್ಲ. ಆಗಲೇ ಅಸ್ತಿತ್ವದಲ್ಲಿರುವ ಪರಿಕಲ್ಪನೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕವೂ ಇಂತಹ ಮೈಲಿಗಲ್ಲುಗಳು ಸೃಷ್ಟಿಯಾಗುವುದುಂಟು.
ಇಂತಹುದೊಂದು ಘಟನೆಯ ಹಿಂದೆ ಇದ್ದ ವ್ಯಕ್ತಿ ಜರ್ಮನಿಯ ಯೊಹಾನೆಸ್ ಗುಟನ್ಬರ್ಗ್. ಏಷಿಯಾದ ಹಲವೆಡೆ ಹಂತಹಂತಗಳಲ್ಲಿ ರೂಪುಗೊಂಡಿದ್ದ ಮುದ್ರಣ ತಂತ್ರಜ್ಞಾನವನ್ನು ಕೊಂಚ ಸುಧಾರಿಸಿ, ಪ್ರಾಯೋಗಿಕವಾಗಿ ಅಳವಡಿಸಿದ ಆತನ ಸಾಧನೆ ಮುದ್ರಣ ತಂತ್ರಜ್ಞಾನದ ಉಗಮಕ್ಕೆ ಕಾರಣವಾಯಿತು. ಆ ಮೂಲಕ ಜ್ಞಾನಪ್ರಸಾರಕ್ಕೆ ಹೊಸ ವೇಗ ದೊರಕಿತು; ಮಾಹಿತಿಯನ್ನು ಯಾರು ಯಾವಾಗ ಬೇಕಿದ್ದರೂ ಪಡೆದುಕೊಳ್ಳಬಹುದೆಂಬ ಸಾಧ್ಯತೆ ಜಗತ್ತಿಗೆ ಗೋಚರಿಸಿತು.
ಮುಂದೆ ಕೆಲ ಶತಮಾನಗಳ ನಂತರ ಜ್ಞಾನಪ್ರಸಾರಕ್ಕೆ ಇಷ್ಟೇ ಮಹತ್ವದ ಕೊಡುಗೆ ನೀಡಿದ ಸಾಧನೆಗಳ ಸಾಲಿನಲ್ಲಿ ಅಂತರಜಾಲಕ್ಕೆ (ಇಂಟರ್ನೆಟ್) ಪ್ರಮುಖ ಸ್ಥಾನವಿರುವುದು ನಮಗೆಲ್ಲ ಗೊತ್ತೇ ಇದೆ. ಇದೇ ಅಂತರಜಾಲದ ಮೂಲಕ ಜ್ಞಾನಪ್ರಸಾರದ ವಿನೂತನ ಮಾರ್ಗವೊಂದನ್ನು ತೋರಿಸಿಕೊಟ್ಟ ಸಾಧನೆಯ ಜೊತೆಯಲ್ಲೂ ಗುಟನ್ಬರ್ಗ್ ಹೆಸರೇ ಇರುವುದು ವಿಶೇಷ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)