ಮಂಗಳವಾರ, ಜನವರಿ 24, 2012

ಕಂಪ್ಯೂಟರ್ ಇತಿಹಾಸದ ಪುಟಗಳಿಂದ

ಟಿ. ಜಿ. ಶ್ರೀನಿಧಿ

ನಮ್ಮ ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ಮಾಹಿತಿ ತಂತ್ರಜ್ಞಾನದ ಕೈವಾಡ ಇರುವ ಇಂದಿನ ಪರಿಸ್ಥಿತಿಯಲ್ಲಿ ಕಂಪ್ಯೂಟರ್ ಒಂದು ಕುತೂಹಲಹುಟ್ಟಿಸುವ ವಸ್ತುವಾಗಿ ಉಳಿದಿಲ್ಲ, ನಿಜ. ಆದರೆ ಕಳೆದ ಒಂದು ಶತಮಾನಕ್ಕಿಂತ ಕಡಿಮೆ ಸಮಯದಲ್ಲಿ ಕಂಪ್ಯೂಟರ್ ಜಗತ್ತು ವಿಕಾಸಗೊಂಡ ರೀತಿಯತ್ತ ನೋಡಿದರೆ ಅದು ಮಾತ್ರ ನಿಜಕ್ಕೂ ವಿಸ್ಮಯಕಾರಿ. ಕೋಣೆಗಾತ್ರದ ಆನೆತೂಕದ ದೈತ್ಯ ಯಂತ್ರಗಳಿಂದ ಪ್ರಾರಂಭಿಸಿ ಅಂಗೈ ಮೇಲಿಟ್ಟುಕೊಳ್ಳಬಹುದಾದ ಇಂದಿನ ಹೈಟೆಕ್ ಉಪಕರಣಗಳವರೆಗೆ ಕಂಪ್ಯೂಟಿಂಗ್ ತಂತ್ರಜ್ಞಾನ ಬೆಳೆದುಬಂದ ಬಗೆ ಅಷ್ಟು ರೋಚಕವಾದದ್ದು. ಆ ಪ್ರಕ್ರಿಯೆಯ ಪ್ರತಿಯೊಂದು ಘಟ್ಟವೂ ವಿಶಿಷ್ಟ, ವಿಭಿನ್ನ.

ಹಾಲೆರಿತ್ ಮತ್ತು ಪಂಚ್ಡ್ ಕಾರ್ಡು
ಜೋಸೆಫ್ ಜಾಕಾರ್ಡ್ ತಯಾರಿಸಿದ ಮಗ್ಗದ ಪ್ರೇರಣೆಯಿಂದ ಚಾರ್ಲ್ಸ್ ಬ್ಯಾಬೇಜ್ ಮಾಡಿದ ವಿನ್ಯಾಸಗಳು, ಹಾಗೂ ಅವುಗಳಿಂದಾಗಿ ಪಂಚ್ಡ್ ಕಾರ್ಡುಗಳು ಕಂಪ್ಯೂಟರ್ ಪ್ರಪಂಚ ಪ್ರವೇಶಿಸಿದ ಚಾರಿತ್ರಿಕ ಘಟನೆ ನಮಗೆಲ್ಲ ಗೊತ್ತೇ ಇದೆ (ಡಿಸೆಂಬರ್ ೨೦, ೨೦೧೧ರ ವಿಜ್ಞಾಪನೆ ನೋಡಿ).

ಇದರ ನಂತರದ ಮಹತ್ವದ ಘಟನೆ ನಡೆದದ್ದು ಅಮೆರಿಕಾದಲ್ಲಿ.

ಮಂಗಳವಾರ, ಜನವರಿ 17, 2012

ಕ್ಯಾಮೆರಾ ಕತೆಗಳು

ಡಿಜಿಟಲ್ ಕ್ಯಾಮೆರಾ ಗುಂಗಿನಲ್ಲಿ ಒಂದು ಲಹರಿ

ಟಿ. ಜಿ. ಶ್ರೀನಿಧಿ

ಹಿಂದಿನ ಕಾಲದಲ್ಲಿ, ಅಂದರೆ ಸುಮಾರು ಹತ್ತು ವರ್ಷಕ್ಕೂ ಮೊದಲು, ಫೋಟೋ ತೆಗೆಯಬೇಕು ಎಂದರೆ ಕ್ಯಾಮೆರಾಗಳಿಗೆ ರೀಲು ಹಾಕಿಸಬೇಕಾಗುತ್ತಿತ್ತು. ಆಗ ಸಿಗುತ್ತಿದ್ದ ಕ್ಯಾಮೆರಾಗಳು - ಫಿಲಂ ರೀಲುಗಳ ಮಟ್ಟಿಗೆ ಕೊಡಕ್ ಸಂಸ್ಥೆಗೆ ಒಂದು ರೀತಿಯ ಸೂಪರ್ ಸ್ಟಾರ್ ಪಟ್ಟವೇ ಇತ್ತು. ಫೋಟೋಗ್ರಫಿ ಉತ್ಪನ್ನಗಳ ಮಾರುಕಟ್ಟೆಯ ಬಹುತೇಕ ಭಾಗವನ್ನು ತನ್ನ ಹಿಡಿತದಲ್ಲೇ ಇಟ್ಟುಕೊಂಡಿದ್ದ ಆ ಸಂಸ್ಥೆ ಸೂಪರ್ ಸ್ಟಾರ್ ಆಗುವುದು ಸಹಜ ತಾನೆ!

ಆದರೆ ಫೋಟೋಗ್ರಫಿ ಲೋಕದ ಬದಲಾದ ಪರಿಸ್ಥಿತಿಯಲ್ಲಿ ಸ್ಟಾರ್ ಪಟ್ಟ ಉಳಿಸಿಕೊಳ್ಳುವುದು ಕೊಡಕ್‌ಗೆ ಸಾಧ್ಯವಾಗಲಿಲ್ಲ; ಡಿಜಿಟಲ್ ಉತ್ಪನ್ನಗಳತ್ತ ಮುಖಮಾಡಲು ಪ್ರಯತ್ನಿಸಿದರೂ ಆ ಪ್ರಯತ್ನದಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ. ಹೀಗಾಗಿ ಈಚಿನ ಕೆಲವರ್ಷಗಳಲ್ಲಿ ಕೊಡಕ್ ಸಂಸ್ಥೆ ಹೆಚ್ಚೂಕಡಿಮೆ ನೇಪಥ್ಯಕ್ಕೇ ಸರಿದುಬಿಟ್ಟಿತ್ತು.

ಈಗ ಇದ್ದಕ್ಕಿದ್ದಂತೆ ಕೊಡಕ್ ಸಂಸ್ಥೆ ನೆನಪಿಗೆ ಬರಲು ಕಾರಣವಾದದ್ದು ಕೆಲದಿನಗಳ ಹಿಂದೆ ಕೇಳಿಬಂದ ಸುದ್ದಿ. ತೀವ್ರ ಹಣಕಾಸಿನ ಸಮಸ್ಯೆಗಳಿಗೆ ಸಿಲುಕಿರುವ ಆ ಸಂಸ್ಥೆ ದಿವಾಳಿಯಾಗುವತ್ತ ಸಾಗಿದೆ ಎಂಬ ಆ ಸುದ್ದಿಯಿಂದ ತಂತ್ರಜ್ಞಾನ ಲೋಕದಲ್ಲಿ ಇನ್ನೂ ಕೆಲ ನೆನಪುಗಳು ಮರುಕಳಿಸಿದ್ದವು.

ಅಂತಹ ಒಂದು ನೆನಪು ೧೯೭೫ನೇ ಇಸವಿಯದು.

ಭಾನುವಾರ, ಜನವರಿ 15, 2012

ಪತ್ರಿಕೆಗಳಲ್ಲಿ '...ಬಿಸ್ಕತ್ತು ...ಟ್ಯಾಬ್ಲೆಟ್ಟು'

ಜನವರಿ ೧೫, ೨೦೧೨ರ ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ಬರೆಹ
* * *
ಜನವರಿ ೧೬, ೨೦೧೨ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾಗಿರುವ ಬರೆಹ

ಮಂಗಳವಾರ, ಜನವರಿ 10, 2012

ವೈರಸ್ ತಡೆಗೆ ಆಂಟಿವೈರಸ್

ಟಿ. ಜಿ. ಶ್ರೀನಿಧಿ

ಕಳೆದ ವಾರದಲ್ಲಿ ಒಂದು ಸುದ್ದಿ ಕೇಳಿಬಂತು - ಇಂಗ್ಲೆಂಡ್ ಹಾಗೂ ಫ್ರಾನ್ಸಿನ ಸುಮಾರು ನಲವತ್ತೈದು ಸಾವಿರ ಬಳಕೆದಾರರ ಫೇಸ್‌ಬುಕ್ ಪಾಸ್‌ವರ್ಡ್‌ಗಳು ಕಳವಾಗಿವೆ ಎನ್ನುವುದು ಆ ಸುದ್ದಿಯ ಸಾರಾಂಶ.

ಈ ಕಳವನ್ನು ಪತ್ತೆಮಾಡಿದ ಕಂಪ್ಯೂಟರ್ ಸುರಕ್ಷತಾ ತಜ್ಞರು ಇದೆಲ್ಲ ಹೇಗಾಯಿತು ಎನ್ನುವುದನ್ನೂ ವಿವರಿಸಿದ್ದರು: ದುಷ್ಕರ್ಮಿಗಳ ದುರುದ್ದೇಶ ಕುತಂತ್ರಾಂಶವೊಂದರ ಬೆನ್ನೇರಿ ಇಷ್ಟೆಲ್ಲ ಹಾವಳಿ ಮಾಡಿತ್ತು! ಬಳಕೆದಾರರನ್ನು ಮೋಸಗೊಳಿಸಿ ಅವರ ಪಾಸ್‌ವರ್ಡ್ ಕದಿಯಲು ರ್‍ಯಾಮ್ನಿಟ್ ಎಂಬ ಹೆಸರಿನ ವರ್ಮ್ ಅನ್ನು ಬಳಸಲಾಗಿತ್ತಂತೆ. ಈ ಹಿಂದೆ ಬ್ಯಾಂಕ್ ಖಾತೆಗಳ ಮಾಹಿತಿ ಕದಿಯಲು ಇದೇ ವರ್ಮ್ ಬಳಕೆಯಾಗಿದ್ದ ಇತಿಹಾಸವಿದೆ. ಈ ಬಾರಿ ಇದರ ಸಹಾಯದಿಂದ ಕದ್ದ ಪಾಸ್‌ವರ್ಡ್ ಉಪಯೋಗಿಸಿ ಬಳಕೆದಾರರ ಫೇಸ್‌ಬುಕ್ ಖಾತೆ ಪ್ರವೇಶಿಸುವ ದುಷ್ಕರ್ಮಿಗಳು ಅದನ್ನು ವೈಯಕ್ತಿಕ ಮಾಹಿತಿಯ ಕಳವು, ಕುತಂತ್ರಾಂಶಗಳ ಹರಡುವಿಕೆ ಮುಂತಾದ ಕುಕೃತ್ಯಗಳಿಗೆ ಬಳಸಬಹುದು ಎಂದು ತಜ್ಞರು ಹೇಳುತ್ತಾರೆ.

ಇಂತಹ ನೂರಾರು ಪೀಡೆಗಳು ಕಂಪ್ಯೂಟರ್ ಪ್ರಪಂಚದ ತುಂಬೆಲ್ಲ ಇವೆ. ಇವುಗಳಿಂದೆಲ್ಲ ಪಾರಾಗಲು ಕಂಪ್ಯೂಟರ್ ತಜ್ಞರು ಹೇಳುವುದು ಒಂದೇ ರಾಮಬಾಣದ ಹೆಸರು. ಅದೇ ವೈರಸ್ ವಿರೋಧಿ ತಂತ್ರಾಂಶ, ಅರ್ಥಾತ್ ಆಂಟಿವೈರಸ್!

ಮಂಗಳವಾರ, ಜನವರಿ 3, 2012

ಪ್ರೋಗ್ರಾಮಿಂಗ್ ಪ್ರಪಂಚ

ಟಿ. ಜಿ. ಶ್ರೀನಿಧಿ

ಕಂಪ್ಯೂಟರ್ ಏನೇನೆಲ್ಲ ಮಾಡುತ್ತದಲ್ಲ! ಮದುವೆ ಇನ್ವಿಟೇಷನ್ ವಿನ್ಯಾಸದಿಂದ ಪ್ರಾರಂಭಿಸಿ ರಾಕೆಟ್ ಉಡಾವಣೆಯ ನಿಯಂತ್ರಣದವರೆಗೆ ಈಗ ಎಲ್ಲವುದಕ್ಕೂ ಕಂಪ್ಯೂಟರ್ ಬೇಕೇ ಬೇಕು.

ಆದರೆ ಕಂಪ್ಯೂಟರ್‌ಗೆ ಸ್ವಂತ ಬುದ್ಧಿ ಇರುವುದಿಲ್ಲ. ಇಂತಿಂತಹ ಕೆಲಸಗಳನ್ನು ಇಂಥದ್ದೇ ರೀತಿಯಲ್ಲಿ ಮಾಡು ಎಂದು ಹೇಳದ ಹೊರತು ಅದು ಯಾವ ಕೆಲಸವನ್ನೂ ಮಾಡುವುದಿಲ್ಲ, ಮತ್ತು ನಾವು ಹೇಳಿದ ಕೆಲಸವನ್ನು ನಾವು ಹೇಳಿದಂತೆ ಮಾತ್ರ ಮಾಡುತ್ತದೆ. ಉದಾಹರಣೆಗೆ ಒಂದು + ಒಂದು ಎಷ್ಟು ಎಂದು ಯಾರಾದರೂ ಕೇಳಿದಾಗ ಹನ್ನೊಂದು ಎಂದು ಉತ್ತರಿಸಲು ಅದಕ್ಕೆ ಹೇಳಿಕೊಟ್ಟಿದ್ದೇವೆ ಎಂದುಕೊಳ್ಳೋಣ; ಆಮೇಲೆ ಅದೆಷ್ಟು ಬಾರಿ ಕೇಳಿದರೂ ಸಿಗುವುದು ಒಂದು + ಒಂದು = ಹನ್ನೊಂದು ಎಂಬ ಉತ್ತರವೇ!

ಹೀಗೆ ಪ್ರತಿಯೊಂದು ಕೆಲಸವನ್ನೂ ಮಾಡಲು ಕಂಪ್ಯೂಟರ್‌ಗೆ ಕೊಡಬೇಕಾದ ನಿರ್ದೇಶನಗಳನ್ನು ಪ್ರೋಗ್ರಾಮ್(ಕ್ರಮವಿಧಿ)ಗಳ ರೂಪದಲ್ಲಿ ಬರೆಯಲಾಗಿರುತ್ತದೆ. ಕಂಪ್ಯೂಟರ್ ಯಾವುದೇ ಕೆಲಸ ಮಾಡುವಾಗಲೂ ಅದಕ್ಕೆ ಸಂಬಂಧಪಟ್ಟ ಪ್ರೋಗ್ರಾಮಿನಲ್ಲಿರುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುತ್ತದೆ.
badge