ಶುಕ್ರವಾರ, ನವೆಂಬರ್ 30, 2018

ವೀಕೆಂಡ್ ಇಜ್ಞಾನ: ಏನಿದು ಬೊಕೆ ಎಫೆಕ್ಟ್?

ಟಿ. ಜಿ. ಶ್ರೀನಿಧಿ


ಸಾಂಪ್ರದಾಯಿಕ ಕ್ಯಾಮೆರಾಗಳ ಸ್ಥಾನದಲ್ಲಿ ಮೊಬೈಲ್ ಫೋನ್ ಬಂದು ಕುಳಿತಿರುವುದು ಇದೀಗ ಹಳೆಯ ವಿಷಯ. ಆಪ್ತರೊಡನೆ ಸೆಲ್ಫಿ ತೆಗೆದುಕೊಳ್ಳುವುದಷ್ಟೇ ಅಲ್ಲ, ಪ್ರವಾಸ-ಸಭೆ-ಸಮಾರಂಭಗಳ ನೆನಪುಗಳನ್ನು ಸೆರೆಹಿಡಿಯುವುದೂ ಇದೀಗ ಮೊಬೈಲಿನದೇ ಕೆಲಸ.

ಹೀಗಿರುವಾಗ, ಸಾಂಪ್ರದಾಯಿಕ ಕ್ಯಾಮೆರಾಗಳಲ್ಲಿರುವ ಸವಲತ್ತುಗಳು ಮೊಬೈಲಿನಲ್ಲೂ ಸಿಗಬೇಕು ಎನ್ನಿಸುವುದು ಸಹಜವೇ. ಮೊಬೈಲ್ ಕ್ಯಾಮೆರಾಗಳಲ್ಲಿ ಇಂತಹ ಸವಲತ್ತುಗಳನ್ನು ನೀಡಲು ಮೊಬೈಲ್ ತಯಾರಕರೂ ಸತತವಾಗಿ ಪ್ರಯತ್ನಿಸುತ್ತಿರುತ್ತಾರೆ.

ಹೊಸ ಮೊಬೈಲುಗಳ ಜಾಹೀರಾತಿನಲ್ಲಿ ಕ್ಯಾಮೆರಾ ವೈಶಿಷ್ಟ್ಯಗಳ ವರ್ಣನೆ ಹೆಚ್ಚುಹೆಚ್ಚಾಗಿ ಕಾಣಿಸುತ್ತಿರುವುದರ ಕಾರಣವೂ ಇದೇ. ಹೆಚ್ಚು ಸುದ್ದಿಯಲ್ಲಿರುವ ಇಂತಹ ವೈಶಿಷ್ಟ್ಯಗಳ ಪೈಕಿ ಚಿತ್ರಗಳಲ್ಲಿ 'ಬೊಕೆ ಎಫೆಕ್ಟ್' ಮೂಡಿಸುವ ಸಾಮರ್ಥ್ಯವೂ ಒಂದು.

ಬುಧವಾರ, ನವೆಂಬರ್ 21, 2018

ವಿಶ್ವ ಟೀವಿ ದಿನ ವಿಶೇಷ: ಟೀವಿ ಠೀವಿ

ಟಿ. ಜಿ. ಶ್ರೀನಿಧಿ

ತನ್ನಲ್ಲಿರುವ ಮಾಹಿತಿಯನ್ನು ಒಂದೇಬಾರಿಗೆ ಅನೇಕರಿಗೆ ತಲುಪಿಸಬೇಕೆನ್ನುವ ಮಾನವನ ಅಪೇಕ್ಷೆ ಬಹಳ ಹಿಂದಿನದು. ಹಿಂದಿನಕಾಲದಲ್ಲಿ ಸಂದೇಶಗಳನ್ನು ಡಂಗುರ ಸಾರಿಸುತ್ತಿದ್ದರಂತಲ್ಲ, ಅದರ ಹಿನ್ನೆಲೆಯಲ್ಲಿದ್ದದ್ದು ಇದೇ ಅಪೇಕ್ಷೆ. ಇಂದಿನ ವೆಬ್‌ಸೈಟು-ಸೋಶಿಯಲ್ ಮೀಡಿಯಾಗಳ ಉದ್ದೇಶವೂ ಬಹಳ ಭಿನ್ನವೇನಲ್ಲ.

ಹೀಗೆ ಮಾಹಿತಿ ಪ್ರಸರಣ ಬೆಳೆದುಬಂದ ಹಾದಿಯಲ್ಲಿ ಕೆಲವು ಮಹತ್ವದ ಮೈಲಿಗಲ್ಲುಗಳನ್ನು ನಾವು ನೋಡಬಹುದು. ಪ್ರಸರಣದ ವ್ಯಾಪ್ತಿಯನ್ನು ಗಮನಾರ್ಹವಾಗಿ ವಿಸ್ತರಿಸಿದ, ದೊಡ್ಡ ಸಮುದಾಯಗಳನ್ನು ತಲುಪಲು ಸಾಧ್ಯವಾಗಿಸಿದ ರೇಡಿಯೋ ಜಾಲದ ಬೆಳವಣಿಗೆ ಇಂತಹ ಮೈಲಿಗಲ್ಲುಗಳಿಗೊಂದು ಉದಾಹರಣೆ.

ಇಂಥದ್ದೇ ಇನ್ನೊಂದು ಮೈಲಿಗಲ್ಲು ಟೀವಿ ಜಾಲಗಳ ಹುಟ್ಟು.

ಸೋಮವಾರ, ನವೆಂಬರ್ 12, 2018

'ವಿಜ್ಞಾನ'ವೆಂಬ ವಿಶಿಷ್ಟ ಪ್ರಯತ್ನ

ಟಿ. ಜಿ. ಶ್ರೀನಿಧಿ


"ಆಂಗ್ಲಭಾಷಾಭ್ಯಾಸವು ನಮ್ಮ ದೇಶದಲ್ಲಿ ದಿನೇದಿನೇ ಅಭಿವೃದ್ಧಿಯಾಗುತ್ತಿದ್ದರೂ ವಿಜ್ಞಾನದ ವಿಷಯವಾಗಿ ಮಾತ್ರ ವಿಶೇಷ ಶ್ರದ್ಧೆಯು ತೋರಿಬಂದಿಲ್ಲ. ಆ ಭಾಗದಲ್ಲಿ ಈಗೀಗ ಕಣ್ಣುಬಿಡುತ್ತಿದ್ದೇವೆ. ಜನಸಾಮಾನ್ಯದಲ್ಲೆಲ್ಲಾ ಈ ವಿಜ್ಞಾನವನ್ನು ಹರಡಿದ ಹೊರತು ದೇಶವು ಅಭಿವೃದ್ಧಿಸ್ಥಿತಿಗೆ ಬರಲಾರದು..." ಇಂದಿನ ಪರಿಸ್ಥಿತಿಯನ್ನೇ ಕುರಿತು ಹೇಳಿದಂತೆ ತೋರುವ ಈ ಮಾತುಗಳು ಪ್ರಕಟವಾದದ್ದು ಇಂದಿಗೆ ನೂರು ವರ್ಷಗಳ ಹಿಂದೆ, ೧೯೧೮ನೇ ಇಸವಿಯಲ್ಲಿ.

ಈ ಮಾತುಗಳನ್ನು ಪ್ರಕಟಿಸಿದ್ದು 'ವಿಜ್ಞಾನ'ವೆಂಬ ಪತ್ರಿಕೆ. ನಮ್ಮ ಭಾಷೆಯಲ್ಲಿ ಪ್ರಕಟವಾದ ಈ ರೀತಿಯ ಮೊತ್ತಮೊದಲ ಪತ್ರಿಕೆ ಎಂಬ ಹೆಗ್ಗಳಿಕೆ ಈ ಪತ್ರಿಕೆಯದ್ದು.

ಗುರುವಾರ, ನವೆಂಬರ್ 8, 2018

ಮೊಬೈಲ್ ಫೋನ್: ಪರದೆ ಸುತ್ತಲಿನ ಪರದಾಟ

ಟಿ. ಜಿ. ಶ್ರೀನಿಧಿ

ಮೊಬೈಲ್ ಫೋನುಗಳು ಮಾರುಕಟ್ಟೆಗೆ ಬಂದ ಹೊಸತರಲ್ಲಿ ಅವುಗಳ ಪರದೆ ಬಹಳ ಚಿಕ್ಕದಾಗಿರುತ್ತಿತ್ತು. ಅನೇಕ ಮೊಬೈಲುಗಳ ಪರದೆ ಅವುಗಳಲ್ಲಿದ್ದ ಕೀಲಿಮಣೆಗಿಂತ ಚಿಕ್ಕದಾಗಿರುತ್ತಿದ್ದದ್ದೂ ಉಂಟು.

ಮೊಬೈಲ್ ಫೋನಿನ ಸವಲತ್ತುಗಳು ಹೆಚ್ಚಿದಂತೆ ಅವುಗಳ ಪರದೆಯ ಗಾತ್ರವೂ ಹೆಚ್ಚುತ್ತ ಬಂತು. ಸ್ಪರ್ಶಸಂವೇದಿ ಪರದೆಗಳು (ಟಚ್ ಸ್ಕ್ರೀನ್) ಬಳಕೆಗೆ ಬಂದಮೇಲಂತೂ ಇದು ಇನ್ನಷ್ಟು ಜಾಸ್ತಿಯಾಯಿತು. ಸ್ಮಾರ್ಟ್‌ಫೋನುಗಳು ಜನಪ್ರಿಯವಾದಂತೆ ಮೊಬೈಲಿನ ಬಹುಭಾಗವನ್ನು ಪರದೆಗಳೇ ಆವರಿಸಿರುವುದು ಕೂಡ ಸಾಮಾನ್ಯವಾಯಿತು.

ಯಾವುದೇ ಸ್ಮಾರ್ಟ್‌ಫೋನ್ ನೋಡಿದರೂ ಅದರ ಪರದೆಯ ಸುತ್ತ ಚೌಕಟ್ಟಿನಂತಹ ಅಂಚುಗಳಿರುವುದನ್ನು ನಾವು ನೋಡಬಹುದು. ತಾಂತ್ರಿಕ ಪರಿಭಾಷೆಯಲ್ಲಿ 'ಬೆಜ಼ೆಲ್' ಎಂದು ಕರೆಯುವುದು ಈ ಚೌಕಟ್ಟನ್ನೇ.

ಮಂಗಳವಾರ, ನವೆಂಬರ್ 6, 2018

ಕನ್ನಡದ ಮೊದಲ ವಿಜ್ಞಾನ ಪತ್ರಿಕೆಗೆ ನೂರು ವರ್ಷ: ನವೆಂಬರ್ ೧೧ರಂದು 'ಕನ್ನಡ ಪತ್ರಿಕೆಗಳಲ್ಲಿ ವಿಜ್ಞಾನ' ಸಂವಾದ ಕಾರ್ಯಕ್ರಮ

ಇಜ್ಞಾನ ವಾರ್ತೆ

ಕನ್ನಡದ ಮೊದಲ ವಿಜ್ಞಾನ ಪತ್ರಿಕೆ 'ವಿಜ್ಞಾನ' ಪ್ರಕಟವಾಗಿ ಇದೀಗ ನೂರು ವರ್ಷ ಸಂದಿದ್ದು, ಈ ಸಂದರ್ಭದಲ್ಲಿ ಬೆಂಗಳೂರಿನ  ಬಿ. ವಿ. ಜಗದೀಶ್ ವಿಜ್ಞಾನ ಕೇಂದ್ರವು ಇಜ್ಞಾನ ಟ್ರಸ್ಟ್ ಹಾಗೂ ಉದಯಭಾನು ಕಲಾಸಂಘದ ಸಹಯೋಗದೊಡನೆ ಸಂವಾದ ಕಾರ್ಯಕ್ರಮವೊಂದನ್ನು ಏರ್ಪಡಿಸಿದೆ.

ಈ ಕಾರ್ಯಕ್ರಮ ಬರುವ ನವೆಂಬರ್ ೧೧ರಂದು ಬೆಳಿಗ್ಗೆ ೧೦ ಗಂಟೆಯಿಂದ ಜಯನಗರದ ನ್ಯಾಶನಲ್ ಕಾಲೇಜು ಆವರಣದಲ್ಲಿರುವ ಬಿ. ವಿ. ಜಗದೀಶ್ ವಿಜ್ಞಾನ ಕೇಂದ್ರದಲ್ಲಿ ನಡೆಯಲಿದೆ. ಕನ್ನಡದ ಮುದ್ರಣ ಮಾಧ್ಯಮ, ಟೀವಿ, ರೇಡಿಯೋ ಹಾಗೂ ಜಾಲತಾಣಗಳಲ್ಲಿ ವಿಜ್ಞಾನ ಸಂವಹನದ ಸ್ಥಿತಿ-ಗತಿಗಳನ್ನು ಕುರಿತು ಆಯಾ ಕ್ಷೇತ್ರದ ಪರಿಣತರೊಡನೆ ಈ ಸಂದರ್ಭದಲ್ಲಿ ಚರ್ಚೆಗೆ ಅವಕಾಶ ಇರಲಿದೆ.

ದಿವಂಗತ ಬೆಳ್ಳಾವೆ ವೆಂಕಟನಾರಣಪ್ಪ ಹಾಗೂ ನಂಗಪುರಂ ವೆಂಕಟೇಶ ಅಯ್ಯಂಗಾರರು ೧೯೧೮ರಲ್ಲಿ ಪ್ರಾರಂಭಿಸಿದ್ದ 'ವಿಜ್ಞಾನ' ಪತ್ರಿಕೆ ಕನ್ನಡ ಪತ್ರಿಕೋದ್ಯಮದಲ್ಲೊಂದು ಮಹತ್ವದ ಮೈಲಿಗಲ್ಲು. ವಿಜ್ಞಾನ ಬರಹಗಳನ್ನು ಸಾಮಾನ್ಯ ಓದುಗರಿಗೂ ಪರಿಚಯಿಸಿದ ಈ ಅಪರೂಪದ ಪ್ರಯತ್ನದ ಕುರಿತು ಇದೇ ಸಂದರ್ಭದಲ್ಲಿ ಪ್ರೊ. ಎಚ್. ಆರ್. ರಾಮಕೃಷ್ಣರಾವ್ ಉಪನ್ಯಾಸ ನೀಡಲಿದ್ದಾರೆ.

ಗುರುವಾರ, ನವೆಂಬರ್ 1, 2018

ಟೆಕ್ ಲೋಕದಲ್ಲಿ ಕನ್ನಡ

ಟಿ. ಜಿ. ಶ್ರೀನಿಧಿ


ತಂತ್ರಜ್ಞಾನದಲ್ಲಿ ಕನ್ನಡವೆಂದರೆ ಕಂಪ್ಯೂಟರಿನಲ್ಲೋ ಮೊಬೈಲಿನಲ್ಲೋ ಕನ್ನಡ ಅಕ್ಷರಗಳನ್ನು ಮೂಡಿಸುವುದು ಎಂಬ ಅಭಿಪ್ರಾಯ ಒಂದು ಕಾಲದಲ್ಲಿತ್ತು. ಈ ಪರಿಸ್ಥಿತಿ ಬದಲಾಗಿ ಬಹಳ ದಿನಗಳೇ ಆಗಿವೆ. ತಂತ್ರಜ್ಞಾನದ ಭಾಷೆಯೆಂದೇ ಹೆಸರಾದ ಇಂಗ್ಲಿಷಿನಲ್ಲಿ ಏನೇನು ಸಾಧ್ಯವೋ ಅದೆಲ್ಲ ಕನ್ನಡದಲ್ಲೂ ಸಾಧ್ಯವಾಗಬೇಕು ಎನ್ನುವುದು ಇಂದಿನ ಸ್ಥಿತಿ. ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸವೂ ಆಗಿದೆ.
badge