ಬುಧವಾರ, ಮಾರ್ಚ್ 28, 2018

ಆಚಿನ ಲೋಕದಲ್ಲಿ ಅಂತರಜಾಲ

ಟಿ. ಜಿ. ಶ್ರೀನಿಧಿ


ಕೆಲವೇ ವರ್ಷಗಳ ಹಿಂದೆ ಬಹಳ ದುಬಾರಿಯಾಗಿದ್ದ, ಅಷ್ಟೇನೂ ಅವಶ್ಯಕವಲ್ಲದ್ದು ಎನಿಸುತ್ತಿದ್ದ ಅಂತರಜಾಲ ಸಂಪರ್ಕ ಇದೀಗ ನಮ್ಮ ಅಗತ್ಯಗಳಲ್ಲೊಂದಾಗಿ ಬೆಳೆದುನಿಂತಿದೆ. ಅಂತರಜಾಲ ಸಂಪರ್ಕ ಎಲ್ಲ ಕಡೆಗಳಲ್ಲೂ ಲಭ್ಯವಾದಂತೆ ಎಲ್ಲಿಂದ ಬೇಕಿದ್ದರೂ ವೀಡಿಯೋ ಕಾಲ್ ಮಾಡುವುದು, ಲೈವ್ ವೀಡಿಯೋ ಬಿತ್ತರಿಸುವುದು ಸಾಧ್ಯವಾಗಿದೆ.

ದೇಶವಿದೇಶಗಳಲ್ಲಿನ ಪ್ರೇಕ್ಷಣೀಯ ಸ್ಥಳಗಳಷ್ಟೇ ಏಕೆ, ಮುಂದೊಮ್ಮೆ ಪ್ರವಾಸಕ್ಕೆಂದು ಚಂದ್ರನ ಮೇಲೆಯೇ ಲ್ಯಾಂಡ್ ಆಗುವಂತೆ ಮಾಡಲು ಹಲವು ಪ್ರಯತ್ನಗಳು ನಡೆದಿವೆ. ಅಂತಹ ಪ್ರಯತ್ನಗಳು ಕೈಗೂಡುವ ಹೊತ್ತಿಗೆ, ಅಥವಾ ಅದಕ್ಕಿಂತ ಮೊದಲೇ, ಚಂದ್ರನ ಮೇಲೆ ೪ಜಿ ಮೊಬೈಲ್ ಜಾಲ ರೂಪಿಸುವ ಯೋಜನೆಯೊಂದು ಸಿದ್ಧವಾಗಿದೆ ಎನ್ನುವುದು ಇದೀಗ ಕೇಳಿಬಂದಿರುವ ಸುದ್ದಿ.

ಸೋಮವಾರ, ಮಾರ್ಚ್ 19, 2018

ಟೆಕ್ ಪ್ರೀತಿ ಶುರುವಾದ ರೀತಿ

ಟಿ. ಜಿ. ಶ್ರೀನಿಧಿ


ಇಂದು ನಮ್ಮ ಬದುಕಿನ ಮೇಲೆ ವಿದ್ಯುನ್ಮಾನ (ಇಲೆಕ್ಟ್ರಾನಿಕ್) ಸಾಧನಗಳ ಪ್ರಭಾವ ಅತ್ಯಂತ ವ್ಯಾಪಕವಾಗಿದೆ. ಲ್ಯಾಪ್‌ಟಾಪ್‌ನಿಂದ ಮೊಬೈಲ್ ಫೋನಿನವರೆಗೆ, ಕಾರಿನಿಂದ ಟೀವಿಯವರೆಗೆ ನೂರೆಂಟು ಸಾಧನಗಳು ಈಗ ಸ್ಮಾರ್ಟ್ ಆಗಿವೆ, ನಮ್ಮ ಬದುಕನ್ನು ಪ್ರಭಾವಿಸುತ್ತಿವೆ.

ಇಂದಿನ ಈ ಎಲ್ಲ ಸ್ಮಾರ್ಟ್ ಸಾಧನಗಳೂ ಒಂದಲ್ಲ ಒಂದು ರೀತಿಯ ಕಂಪ್ಯೂಟರುಗಳೇ. ಅವುಗಳ ಬಾಹ್ಯ ರೂಪ ಹೇಗೆಯೇ ಇದ್ದರೂ ಮೂಲಭೂತ ರಚನೆ ಹೆಚ್ಚೂಕಡಿಮೆ ಒಂದೇ ರೀತಿಯದು. ಆಯಾ ಸಾಧನ ಮಾಡುವ ಕೆಲಸ ಎಂಥದ್ದು ಎನ್ನುವುದರ ಮೇಲೆ ಈ ರಚನೆಯ ಸಂಕೀರ್ಣತೆ ಬದಲಾಗುತ್ತದೆ, ಅಷ್ಟೇ.

ಈಗ ಇಷ್ಟೆಲ್ಲ ಸಾಮಾನ್ಯವಾಗಿದ್ದರೂ ಕಂಪ್ಯೂಟರುಗಳ ವಿನ್ಯಾಸ ಯಾವಾಗಲೂ ಹೀಗೆಯೇ ಇರಲಿಲ್ಲ.

ಸೋಮವಾರ, ಮಾರ್ಚ್ 12, 2018

ಹಕ್ಕಿಗಳಿಗೇಕೆ ಶಾಕ್ ಹೊಡೆಯುವುದಿಲ್ಲ?

ವಿದ್ಯುತ್ ತಂತಿಗಳ ಮೇಲೆ ಕುಳಿತುಕೊಳ್ಳುವ ಹಕ್ಕಿಗಳಿಗೆ ವಿದ್ಯುದಾಘಾತವಾಗುವುದಿಲ್ಲ ಎನ್ನುವುದು ನಮಗೆ ಗೊತ್ತು. ಅಪರೂಪಕ್ಕೊಮ್ಮೆ ಅವು ಇಲೆಕ್ಟ್ರಿಕ್ ಶಾಕ್‌ನಿಂದಾಗಿ ಸಾಯುವುದನ್ನು ಕೂಡ ನಾವು ನೋಡಿದ್ದೇವೆ. ಈ ವಿಚಿತ್ರ ವಿದ್ಯಮಾನಗಳಿಗೆ ಕಾರಣ ಏನು? ವಿವರಣೆ ಇಲ್ಲಿದೆ.

ವಿನಾಯಕ ಕಾಮತ್


ಜಲ ವಿದ್ಯುತ್ ಸ್ಥಾವರದಲ್ಲೋ ಅಥವಾ ಅಣು ವಿದ್ಯುತ್ ಸ್ಥಾವರದಲ್ಲೋ ಉತ್ಪತ್ತಿಯಾದ ವಿದ್ಯುತ್ತನ್ನು ಬಳಕೆದಾರರಿಗೆ ತಲುಪಿಸಬೇಕಷ್ಟೇ? ಈ ಕೆಲಸವನ್ನು ಎರಡು ಹಂತಗಳಲ್ಲಿ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಉತ್ಪಾದನಾ ಸ್ಥಳದಿಂದ, ವಿತರಣಾ ಕೇಂದ್ರಕ್ಕೆ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಪ್ರವಾಹ ಅಥವಾ ಇಲೆಕ್ಟ್ರಿಕ್ ಕರೆಂಟ್ ನ ವರ್ಗಾವಣೆ. ಇದನ್ನು ಎತ್ತರದಲ್ಲಿರುವ ದೊಡ್ಡ ಕಂಬಗಳಿಂದ ಏರ್ಪಟ್ಟಿರುವ ತಂತಿಯ ಜಾಲಗಳ ಮೂಲಕ ಮಾಡುತ್ತಾರೆ. ಎರಡನೇ ಹಂತದಲ್ಲಿ ವಿದ್ಯುತ್ ಪ್ರಸರಣದ ಉಪಕೇಂದ್ರಗಳ ಮೂಲಕ, ‘ಕರೆಂಟ್’ ಬಳಕೆದಾರರಿಗೆ ವಿತರಿಸಲ್ಪಡುತ್ತದೆ. ಈ ಎರಡನೇ ಹಂತದಲ್ಲಿ ಕೂಡ ಕಂಬಗಳ ಮೂಲಕ ಬೆಸೆದು ಕೊಂಡಿರುವ ತಂತಿಗಳ ಮೂಲಕವೇ ಕರೆಂಟ್ ಸಾಗಿಸಲ್ಪಡುತ್ತದೆ. ವಿದ್ಯುತ್ ವಿತರಣೆಯನ್ನು ಭೂಗತ ತಂತಿಗಳ ಮೂಲಕವೂ ಮಾಡಬಹುದು. ಆದರೆ, ನಮ್ಮ ದೇಶದಲ್ಲಿ ಹೆಚ್ಚಾಗಿ ವಿದ್ಯುತ್ ವಿತರಣೆಯನ್ನು,  ರಸ್ತೆಯ ಅಕ್ಕ ಪಕ್ಕದಲ್ಲಿ ಹಾದು ಹೋಗುವ ಕಂಬಗಳ ಮೂಲಕವೇ ಪೂರೈಸುತ್ತಾರೆ.

ಬುಧವಾರ, ಮಾರ್ಚ್ 7, 2018

ವಿಜ್ಞಾನದ ಹಾದಿಯಲ್ಲಿ ಭಾರತ: ೪: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸಾಧನೆಗಳು, ಮುಂದಿನ ಹೆಜ್ಜೆಗಳು

ಉದಯ ಶಂಕರ ಪುರಾಣಿಕ
ಟಿ. ಜಿ. ಶ್ರೀನಿಧಿ


ಸ್ವಾತಂತ್ರ್ಯಾನಂತರದ ಏಳು ದಶಕಗಳ ಅವಧಿಯಲ್ಲಿ ನಮ್ಮ ದೇಶ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿ ಬಹುಮುಖಿಯಾದದ್ದು. ಕೃಷಿ, ಆರೋಗ್ಯ, ರಕ್ಷಣೆ, ದೂರಸಂಪರ್ಕ, ಐಟಿ, ಬಾಹ್ಯಾಕಾಶ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತದ ಪ್ರಗತಿಯ ಪ್ರಾತಿನಿಧಿಕ ಪರಿಚಯ ನೀಡುವ ಲೇಖನಸರಣಿಯನ್ನು ಇಜ್ಞಾನ ಡಾಟ್ ಕಾಮ್ ಪ್ರಕಟಿಸುತ್ತಿದೆ. ಈ ಸರಣಿಯ ನಾಲ್ಕನೆಯ ಲೇಖನ ಇಲ್ಲಿದೆ.

ಸೋಮವಾರ, ಮಾರ್ಚ್ 5, 2018

ವಿಜ್ಞಾನದ ಹಾದಿಯಲ್ಲಿ ಭಾರತ: ೩: ಬಾಹ್ಯಾಕಾಶ ಹಾಗೂ ದೂರಸಂಪರ್ಕ ತಂತ್ರಜ್ಞಾನ

ಉದಯ ಶಂಕರ ಪುರಾಣಿಕ
ಟಿ. ಜಿ. ಶ್ರೀನಿಧಿ


ಸ್ವಾತಂತ್ರ್ಯಾನಂತರದ ಏಳು ದಶಕಗಳ ಅವಧಿಯಲ್ಲಿ ನಮ್ಮ ದೇಶ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿ ಬಹುಮುಖಿಯಾದದ್ದು. ಕೃಷಿ, ಆರೋಗ್ಯ, ರಕ್ಷಣೆ, ದೂರಸಂಪರ್ಕ, ಐಟಿ, ಬಾಹ್ಯಾಕಾಶ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತದ ಪ್ರಗತಿಯ ಪ್ರಾತಿನಿಧಿಕ ಪರಿಚಯ ನೀಡುವ ಲೇಖನಸರಣಿಯನ್ನು ಇಜ್ಞಾನ ಡಾಟ್ ಕಾಮ್ ಪ್ರಕಟಿಸುತ್ತಿದೆ. ಈ ಸರಣಿಯ ಮೂರನೆಯ ಲೇಖನ ಇಲ್ಲಿದೆ.

ಶುಕ್ರವಾರ, ಮಾರ್ಚ್ 2, 2018

ವಿಜ್ಞಾನದ ಹಾದಿಯಲ್ಲಿ ಭಾರತ: ೨: ಮೂಲಸೌಕರ್ಯ ಹಾಗೂ ರಕ್ಷಣಾ ಕ್ಷೇತ್ರ

ಉದಯ ಶಂಕರ ಪುರಾಣಿಕ
ಟಿ. ಜಿ. ಶ್ರೀನಿಧಿ


ಸ್ವಾತಂತ್ರ್ಯಾನಂತರದ ಏಳು ದಶಕಗಳ ಅವಧಿಯಲ್ಲಿ ನಮ್ಮ ದೇಶ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿ ಬಹುಮುಖಿಯಾದದ್ದು. ಕೃಷಿ, ಆರೋಗ್ಯ, ರಕ್ಷಣೆ, ದೂರಸಂಪರ್ಕ, ಐಟಿ, ಬಾಹ್ಯಾಕಾಶ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತದ ಪ್ರಗತಿಯ ಪ್ರಾತಿನಿಧಿಕ ಪರಿಚಯ ನೀಡುವ ಲೇಖನಸರಣಿಯನ್ನು ಇಜ್ಞಾನ ಡಾಟ್ ಕಾಮ್ ಪ್ರಕಟಿಸುತ್ತಿದೆ. ಈ ಸರಣಿಯ ಎರಡನೆಯ ಲೇಖನ ಇಲ್ಲಿದೆ.
badge