ಮಂಗಳವಾರ, ಜುಲೈ 31, 2018

ನಿಮ್ಮ ಫೋನಿನಲ್ಲಿ ಎಷ್ಟು ಕ್ಯಾಮೆರಾ ಇದೆ?

ಟಿ. ಜಿ. ಶ್ರೀನಿಧಿ


ಫೋಟೋ ತೆಗೆಸಿಕೊಳ್ಳುವುದೇ ವಿಶೇಷ ಸಂಭ್ರಮವಾಗಿದ್ದ ಕಾಲವೂ ಒಂದಿತ್ತು. ನಾವೆಲ್ಲ ಶಾಲೆಗೆ ಹೋಗುತ್ತಿದ್ದಾಗ ಅದೊಂದು ವಿಶೇಷ ವಾರ್ಷಿಕ ಆಚರಣೆ. ಛಾಯಾಗ್ರಾಹಕರು ಶಾಲೆಗೆ ಬರುವುದು, ಅವರಿಂದ ಫೋಟೋ ತೆಗೆಸಿಕೊಳ್ಳಲು ನಾವೆಲ್ಲ ಸಿದ್ಧವಾಗಿರುವುದು - ಇದೆಲ್ಲ ಅಂದಿನ ಕಾಲಕ್ಕೆ ದೊಡ್ಡ ಸಂಗತಿಗಳು.

ಆಮೇಲೆ ಮನೆಗಳಿಗೂ ಕ್ಯಾಮೆರಾ ಬಂತು. ಅದು ಡಿಜಿಟಲ್ ಆದಮೇಲಂತೂ ಕ್ಯಾಮೆರಾಗಳ ಸಂಖ್ಯೆ ಇನ್ನಷ್ಟು ಜಾಸ್ತಿಯಾಯಿತು. ಫೋಟೋ ತೆಗೆಸಿಕೊಳ್ಳುವುದು ವಿಶೇಷ ಎನ್ನುವ ಭಾವನೆ ಹೋಗಿ ದಿನನಿತ್ಯದ ಅನುಭವಗಳ ಪೈಕಿ ಅದೂ ಒಂದು ಎನ್ನಿಸಲು ಶುರುವಾಯಿತು.

ಶುಕ್ರವಾರ, ಜುಲೈ 27, 2018

ಬೆರಳ ತುದಿಯ ಜಗತ್ತು

ನಮ್ಮ ಬೆರಳುಗಳ ಫೋಟೋ ಪಡೆದ ದುಷ್ಕರ್ಮಿಗಳು ಅದನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಸೆಲ್ಫಿಗಳಲ್ಲಿ ನಿಮ್ಮ ಬೆರಳು ಕಾಣದಂತೆ ನೋಡಿಕೊಳ್ಳಿ ಎಂಬ ಸಲಹೆಯೂ ಕೇಳಸಿಗುತ್ತಿದೆ. ಈ ಸಂದರ್ಭದಲ್ಲಿ ಬೆರಳ ತುದಿಯ ಫಿಂಗರ್‌ಪ್ರಿಂಟ್ ಜಗತ್ತಿನಲ್ಲೊಂದು ಸುತ್ತು...   
ಟಿ. ಜಿ. ಶ್ರೀನಿಧಿ


ಶ್ರೀಕೃಷ್ಣ ಪರಮಾತ್ಮ ಒಂದೇ ಬೆರಳಿನಿಂದ ಗೋವರ್ಧನಗಿರಿಯನ್ನು ಎತ್ತಿದ್ದನಂತೆ. ಇಂತಹ ಸಾಧನೆಗಳೆಲ್ಲ ನಮ್ಮಂತಹ ಹುಲುಮಾನವರಿಗೆ ಸಾಧ್ಯವಾಗದಿದ್ದರೂ ಇಂದಿನ ತಂತ್ರಜ್ಞಾನ ನಮ್ಮ ಬೆರಳುಗಳಿಗೂ ಒಂದಷ್ಟು ವಿಶೇಷ ಶಕ್ತಿಗಳನ್ನು ತಂದುಕೊಟ್ಟಿದೆ.

ಇಂತಹ ಹಲವು ಶಕ್ತಿಗಳ ಹಿನ್ನೆಲೆಯಲ್ಲಿರುವುದು ನಮ್ಮ ಬೆರಳ ಗುರುತು, ಅರ್ಥಾತ್ ಫಿಂಗರ್ ಪ್ರಿಂಟ್.

ಬುಧವಾರ, ಜುಲೈ 25, 2018

ಸೈಬರ್ ಜಗತ್ತಿನ ಕರಾಳ ಮುಖ

ಉದಯ ಶಂಕರ ಪುರಾಣಿಕ


ಡಿಸೆಂಬರ್ 1984ರಲ್ಲಿ ನಡೆದ ಭೋಪಾಲ ಅನಿಲ ದುರಂತದ ಬಗ್ಗೆ ನೀವು ಕೇಳಿರಬಹುದು. ಆ ದುರಂತದಲ್ಲಿ ಸಾವಿರಾರು ಜನ ಸಾವಿಗೀಡಾದರೆ, ಐದು ಲಕ್ಷಕ್ಕೂ ಹೆಚ್ಚು ಜನ ಅದರ ಪರಿಣಾಮಗಳಿಂದಾಗಿ ಸಂಕಷ್ಟ ಅನುಭವಿಸಿದರು.

ಇಂತಹ ಘೋರ ದುರಂತವೊಂದು ಉಕ್ರೇನ್‍ ದೇಶದಲ್ಲಿ ಕೆಲವು ದಿನಗಳ ಹಿಂದೆ ನಡೆಯಲಿತ್ತು.

ಮಂಗಳವಾರ, ಜುಲೈ 24, 2018

ಜುಲೈ ೨೯: ಇಜ್ಞಾನ ಟ್ರಸ್ಟ್‌ನಿಂದ ಬೆಂಗಳೂರಿನಲ್ಲಿ ಹಲವು ಕಾರ್ಯಕ್ರಮ

ಇಜ್ಞಾನ ವಾರ್ತೆ

ಬೇರೆಬೇರೆ ಕ್ಷೇತ್ರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡದಲ್ಲೇ ಒದಗಿಸುವ ತನ್ನ ಪ್ರಯತ್ನಗಳ ಮುಂದುವರಿಕೆಯಾಗಿ ಇಜ್ಞಾನ ಟ್ರಸ್ಟ್ ಬರುವ ಜುಲೈ ೨೯ರಂದು 'ಕನ್ನಡ ನೆಲ-ಜಲ : ನಾಳಿನ ಅರಿವು' ವಿಚಾರ ಸಂಕಿರಣವನ್ನು ಏರ್ಪಡಿಸಿದೆ. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ವಿವಿಧ ವಿಷಯತಜ್ಞರು ಇಂದಿನ ಮಹತ್ವದ ವಿಷಯಗಳಾದ ಪರಿಸರ, ಇಂಧನ ಹಾಗೂ ಆಹಾರ ಕುರಿತು ಕನ್ನಡದಲ್ಲಿ ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ.

ಸೋಮವಾರ, ಜುಲೈ 23, 2018

ತಿರುಪು ಮೊಳೆಗೂ ಉಂಟು ತಂತ್ರಜ್ಞಾನದ ನಂಟು!

ಟಿ. ಜಿ. ಶ್ರೀನಿಧಿ


ತಂತ್ರಜ್ಞಾನದ ಬಳಕೆ ಎಂದತಕ್ಷಣ ನಮಗೆ ನೆನಪಾಗುವ ಉದಾಹರಣೆಗಳಲ್ಲಿ ಯಂತ್ರಗಳಿಗೆ ಮೊದಲ ಸ್ಥಾನ. ಸಣ್ಣ ಕ್ಯಾಲ್ಕುಲೇಟರಿನಿಂದ ಬೃಹದಾಕಾರದ ರಾಕೆಟ್‌ವರೆಗೆ ಯಂತ್ರ ಯಾವುದೇ ಆಗಿದ್ದರೂ ಅವುಗಳ ರಚನೆ ಬಹಳ ಸಂಕೀರ್ಣವಾಗಿರುವುದು ಸಾಮಾನ್ಯ.

ಹಾಗೆಂದು ತಂತ್ರಜ್ಞಾನದ ಬಳಕೆ ಸಂಕೀರ್ಣ ವಿಷಯಗಳಿಗೆ ಮಾತ್ರ ಸೀಮಿತ ಎಂದು ಹೇಳಬಹುದೇ? ಖಂಡಿತಾ ಇಲ್ಲ. ಏಕೆಂದರೆ ಸಂಕೀರ್ಣ ಯಂತ್ರಗಳ ರಚನೆ ಹಾಗೂ ಕಾರ್ಯಾಚರಣೆಯಲ್ಲಿ ತಂತ್ರಜ್ಞಾನ ಹೇಗೆ ಸಹಾಯ ಮಾಡುತ್ತದೆಯೋ ಅದೇ ರೀತಿ ಬಹಳ ಸರಳವೆನಿಸುವ ಸಂಗತಿಗಳ ಹಿನ್ನೆಲೆಯಲ್ಲೂ ತಂತ್ರಜ್ಞಾನದ ಕೈವಾಡ ಇರುತ್ತದೆ. ಬಹಳಷ್ಟು ಸಾರಿ ಇದು ನಮ್ಮ ಗಮನಕ್ಕೇ ಬಂದಿರುವುದಿಲ್ಲ ಎಂದರೂ ಸರಿಯೇ!

ಇಂತಹ ಸರಳ ಸಂಗತಿಗಳಿಗೆ ತಿರುಪು ಮೊಳೆ, ಅರ್ಥಾತ್ ಸ್ಕ್ರೂ , ಒಂದು ಉತ್ತಮ ಉದಾಹರಣೆ. ಇವನ್ನು ಬಳಸದ ಯಂತ್ರಗಳೇ ಇಲ್ಲ ಎಂದರೂ ತಪ್ಪಾಗಲಿಕ್ಕಿಲ್ಲ.

ಬುಧವಾರ, ಜುಲೈ 18, 2018

ಮಾನ್ಸೂನ್ ಹಂಗಾಮ ಕೊಡುಗೆ: ರೂ. 501ಕ್ಕೆ* ಜಿಯೋಫೋನ್!

ಇಜ್ಞಾನ ವಿಶೇಷ


ರಿಲಯನ್ಸ್ ಜಿಯೋ ಸಂಸ್ಥೆ ಕಳೆದವರ್ಷ ಪರಿಚಯಿಸಿದ ಜಿಯೋಫೋನ್ ಅಪಾರ ಜನಪ್ರಿಯತೆ ಗಳಿಸಿರುವುದು ನಮಗೆಲ್ಲ ಗೊತ್ತೇ ಇದೆ. 1500 ರೂಪಾಯಿಗಳಿಗೆ ಫೋನು, ತಿಂಗಳಿಗೆ 49 ರೂಪಾಯಿಗೆ ಅಪರಿಮಿತ ಕರೆ ಸೌಲಭ್ಯ ನೀಡಿದ ಈ ಫೋನು ಇದೀಗ ರೂ. 501 ವಾಸ್ತವಿಕ ಬೆಲೆಗೆ ಗ್ರಾಹಕರಿಗೆ ದೊರಕಲಿದೆ. ಹೇಗೆ? ತಿಳಿಯಲು ಈ ಬರಹ ಓದಿ!

ಮಂಗಳವಾರ, ಜುಲೈ 17, 2018

ವಿಶ್ವ ಎಮೋಜಿ ದಿನ ವಿಶೇಷ: ಇಂದು ಸ್ಮೈಲಿ ದಿನ!

ಟಿ. ಜಿ. ಶ್ರೀನಿಧಿ


ಪಠ್ಯ ಸಂದೇಶ, ಅಂದರೆ ಟೆಕ್ಸ್ಟ್ ಮೆಸೇಜುಗಳ ವಿನಿಮಯಕ್ಕಾಗಿ ವಾಟ್ಸ್ಆಪ್‍ ಹಾಗೂ ಫೇಸ್‍ಬುಕ್‍ನಂತಹ ಮಾಧ್ಯಮಗಳನ್ನು ಬಳಸುವುದು ಈಚಿನ ವರ್ಷಗಳಲ್ಲಿ ವ್ಯಾಪಕವಾಗಿರುವ ಅಭ್ಯಾಸ. ಇಂತಹ ಸಂದೇಶಗಳಲ್ಲಿ ಭಾವನೆಗಳನ್ನು ವ್ಯಕ್ತಪಡಿಸಲು ನೆರವಾಗುವ ಚಿತ್ರರೂಪದ ಸಂಕೇತಗಳ ಬಳಕೆಯೂ ಗಮನಾರ್ಹವಾಗಿ ಹೆಚ್ಚಿದೆ. ಇದು ಯಾವ ಮಟ್ಟ ತಲುಪಿದೆಯೆಂದರೆ ನಮ್ಮ ಅದೆಷ್ಟೋ ಸಂದೇಶಗಳಲ್ಲಿ ಇಂತಹ ಸಂಕೇತಗಳು ಮಾತ್ರವೇ ಇರುತ್ತವೆ!

ಪಠ್ಯಸಂದೇಶಗಳ ಜಗತ್ತಿನಲ್ಲಿ ಇಷ್ಟು ದೊಡ್ಡ ಬದಲಾವಣೆ ತಂದ ಶ್ರೇಯ ಈ ಸಂಕೇತಗಳದ್ದು. ಸಾಮಾನ್ಯ ಬಳಕೆಯಲ್ಲಿ ಸ್ಮೈಲಿಗಳೆಂದೂ ಅಧಿಕೃತವಾಗಿ 'ಎಮೋಜಿ'ಗಳೆಂದೂ ಗುರುತಿಸುವುದು ಇವನ್ನೇ.

ಸೋಮವಾರ, ಜುಲೈ 16, 2018

ಬಲ್ಬು-ಫ್ಯಾನುಗಳೂ ಈಗ ಸ್ಮಾರ್ಟ್!

ಯಶಸ್ವಿನಿ ವೈ.


ಎಲ್ಲರ ಮನೆ ದೋಸೆಯೂ ತೂತು ಎನ್ನುವ ಮಾತೊಂದಿದೆ. ಅದರಂತೆ ಬಹುಪಾಲು ಮನೆಗಳ ದೊಡ್ಡ ಸಮಸ್ಯೆಯೆಂದರೆ ಮನೆಯ ಎಲ್ಲ ಸದಸ್ಯರನ್ನೂ ಒಟ್ಟಿಗೆ ಊಟಕ್ಕೆ ಸೇರಿಸುವುದು. ಬೇರೆ ಸಮಯದಲ್ಲಿ ಅಲ್ಲಲ್ಲೇ ಇರುವ ಮನೆಯ ಸದಸ್ಯರು ಊಟದ ಹೊತ್ತಿಗೆ ಸರಿಯಾಗಿ ಅವರವರ ಕೆಲಸದಲ್ಲಿ ಕಳೆದುಹೋಗಿರುತ್ತಾರೆ. ಒಬ್ಬರು ಟಿವಿ ಮುಂದಿದ್ದರೆ ಇನ್ನೊಬ್ಬರು ರೂಮಿನಲ್ಲಿ ಮೊಬೈಲಿನಲ್ಲಿ  ಮಗ್ನ. ಇನ್ನೊಬ್ಬರಿಗೆ ಹೋಮ್‌ವರ್ಕ್ ಮಾಡಲು ಅದೇ ಮಹೂರ್ತ.

ಇಂತಹ ಪರಿಸ್ಥಿತಿಯ ಬದಲು ಊಟದ ಸಮಯಕ್ಕೆ ಸರಿಯಾಗಿ ಗೋಡೆಯ ಮೇಲಿನ ದೀಪವೇ ಸೂಚನೆ ಕೊಡುವಂತಿದ್ದರೆ? ನಿದ್ರಿಸುವ ವೇಳೆಗೆ ಸರಿಯಾಗಿ ದೀಪಗಳು ತಾವೇ ಆರಿಹೋಗುವಂತಿದ್ದರೆ? ಇಂತಹ ಅನೇಕ ಸಾಧ್ಯತೆಗಳನ್ನು ಇಂದಿನ ತಂತ್ರಜ್ಞಾನ ತೆರೆದಿಟ್ಟಿದೆ.

ಮಂಗಳವಾರ, ಜುಲೈ 10, 2018

ಕತೆ ಹೆಣೆಯುವ 'ಸ್ಟೋರಿವೀವರ್'

ಇಜ್ಞಾನ ವಿಶೇಷ


ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸುವ ಅತ್ಯಂತ ಸುಲಭದ ಮಾರ್ಗವೆಂದರೆ ಅವರಿಗೆ ಕತೆಪುಸ್ತಕಗಳ ರುಚಿ ತೋರಿಸುವುದು. ಅಪ್ಪ-ಅಮ್ಮ ಅಥವಾ ತಾತ-ಅಜ್ಜಿಯರಿಂದ ಕೇಳಿ ಕತೆಗಳ ಬಗ್ಗೆ ಚಿಕ್ಕಂದಿನಲ್ಲೇ ಕುತೂಹಲ ಬೆಳೆಸಿಕೊಂಡ ಮಕ್ಕಳು ಮುಂದೆ ಪುಸ್ತಕಗಳ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳುವುದು ಬಹುತೇಕ ಖಚಿತವೇ ಎನ್ನಬಹುದು.

ಹೀಗೆಂದು ಮಕ್ಕಳಿಗೆ ಪುಸ್ತಕಗಳನ್ನು ಒದಗಿಸಲು ಹೊರಡುವ ಪೋಷಕರಿಗೆ ಎದುರಾಗುವ ಮುಖ್ಯ ಸಮಸ್ಯೆಗಳೆಂದರೆ ಪುಸ್ತಕಗಳಲ್ಲಿ ವೈವಿಧ್ಯದ ಕೊರತೆ ಹಾಗೂ ಹೆಚ್ಚು ಹೆಚ್ಚು ಪುಸ್ತಕಗಳನ್ನು ಕೊಳ್ಳಲು ಹಿಂಜರಿಯುವಂತೆ ಮಾಡುವ ದುಬಾರಿ ಬೆಲೆಗಳು.

ಶನಿವಾರ, ಜುಲೈ 7, 2018

ಜಿಯೋಫೋನ್ ಜಗದಲ್ಲಿ ಹೊಸ ಸುದ್ದಿಗಳ ಸಮಯ!

ಇಜ್ಞಾನ ವಿಶೇಷ

ರಿಲಯನ್ಸ್ ಜಿಯೋ ಸಂಸ್ಥೆ ಕಳೆದವರ್ಷ ಪರಿಚಯಿಸಿದ ಜಿಯೋಫೋನ್ ಅಪಾರ ಜನಪ್ರಿಯತೆ ಗಳಿಸಿರುವುದು ನಮಗೆಲ್ಲ ಗೊತ್ತೇ ಇದೆ. 1500 ರೂಪಾಯಿಗಳಿಗೆ ಫೋನು, ತಿಂಗಳಿಗೆ 49 ರೂಪಾಯಿಗೆ ಅಪರಿಮಿತ ಕರೆ ಸೌಲಭ್ಯ ನೀಡಿದ ಈ ಫೋನಿನ ಬಗ್ಗೆ ಇದೀಗ ಇನ್ನೂ ಒಂದು ಹೊಸ ಸುದ್ದಿ ಬಂದಿದೆ. ಇತರ ಫೀಚರ್ ಫೋನ್ ಬಳಕೆದಾರರು ಅತ್ಯಂತ ಕಡಿಮೆ ಬೆಲೆಗೆ ಜಿಯೋಫೋನ್ ಪಡೆಯುವ ಹಾಗೂ ಕೊಂಚವೇ ಹೆಚ್ಚಿನ ಬೆಲೆಗೆ ಹಲವು ಉನ್ನತ ಸೌಲಭ್ಯಗಳ 'ಜಿಯೋಫೋನ್ 2' ಕೊಳ್ಳಬಹುದಾದ ಸಾಧ್ಯತೆಯ ಬಗ್ಗೆ ಜುಲೈ 5, 2018ರಂದು ನಡೆದ ರಿಲಯನ್ಸ್ ವಾರ್ಷಿಕ ಮಹಾಸಭೆಯಲ್ಲಿ ಘೋಷಿಸಲಾಗಿದೆ. ಅಷ್ಟೇ ಅಲ್ಲ, ವಾಟ್ಸ್‌ಆಪ್ ಹಾಗೂ ಯೂಟ್ಯೂಬ್‌ನಂತಹ ಜನಪ್ರಿಯ ಆಪ್‌ಗಳೂ ಇನ್ನುಮುಂದೆ ಜಿಯೋಫೋನ್ ಗ್ರಾಹಕರಿಗೆ ದೊರಕಲಿವೆ.

ಈ ಕೊಡುಗೆಗಳ ವೈಶಿಷ್ಟ್ಯವೇನು, ಇವನ್ನು ನಾವು ಪಡೆದುಕೊಳ್ಳುವುದು ಹೇಗೆ? ವಿವರ ಇಲ್ಲಿದೆ!

ಬುಧವಾರ, ಜುಲೈ 4, 2018

ವಿಸಿಆರ್ ನೆನಪಿದೆಯೇ?

ಟಿ. ಜಿ. ಶ್ರೀನಿಧಿ


ಇಂದಿನ ಸನ್ನಿವೇಶದಲ್ಲಿ ವಿಸಿಆರ್ ಎಂಬ ಹೆಸರೇ ಅನೇಕರಿಗೆ ಅಪರಿಚಿತ. ಆದರೆ ಒಂದೆರಡು ದಶಕಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಬೇಕೆಂದಾಗ ಸಿನಿಮಾ ಟಾಕೀಸುಗಳಿಗೆ ಹೋಗಲಾರದ ಅದೆಷ್ಟೋ ಮಂದಿಗೆ ಆಗ ಅವರ ಇಷ್ಟದ ಸಿನಿಮಾ ತೋರಿಸುತ್ತಿದ್ದದ್ದು ಇದೇ ಮಾಯಾಪೆಟ್ಟಿಗೆ.

ಅಂದಹಾಗೆ ವಿಸಿಆರ್ ಎನ್ನುವುದು 'ವೀಡಿಯೋ ಕ್ಯಾಸೆಟ್ ರೆಕಾರ್ಡರ್' ಎಂಬ ಹೆಸರಿನ ಹ್ರಸ್ವರೂಪ. ಇದನ್ನು ವಿಸಿಪಿ, ಅಂದರೆ 'ವೀಡಿಯೋ ಕ್ಯಾಸೆಟ್ ಪ್ಲೇಯರ್' ಎಂದೂ ಕರೆಯಲಾಗುತ್ತಿತ್ತು. ಧ್ವನಿಯನ್ನಷ್ಟೇ ಕೇಳಿಸುತ್ತಿದ್ದ ಆಡಿಯೋ ಕ್ಯಾಸೆಟ್ಟುಗಳಿಗಿಂತ ನಾಲ್ಕಾರು ಪಟ್ಟು ದೊಡ್ಡದಾದ ಕ್ಯಾಸೆಟ್ಟುಗಳನ್ನು ಬಳಸಿ ಚಲನಚಿತ್ರಗಳನ್ನು ತೋರಿಸುತ್ತಿದ್ದದ್ದು ಈ ಮಾಯಾಪೆಟ್ಟಿಗೆಯ ಹೆಚ್ಚುಗಾರಿಕೆ.

ಇಷ್ಟೇ ಹೇಳಿದರೆ ವಿಸಿಆರ್ ವೈಶಿಷ್ಟ್ಯವನ್ನು ಪೂರ್ತಿಯಾಗಿ ವಿವರಿಸಿದಂತೆ ಆಗುವುದಿಲ್ಲ.
badge