ಶನಿವಾರ, ಜನವರಿ 30, 2016

ಜೆನ್‌ಫೋನ್ ಜೂಮ್: ಡಿಜಿಟಲ್ ಕ್ಯಾಮೆರಾಗೆ ಮೊಬೈಲಿನ ಸವಾಲು

ಟಿ. ಜಿ. ಶ್ರೀನಿಧಿ


ಮೊಬೈಲ್ ಕ್ಯಾಮೆರಾ ಮಾಯಾಜಾಲದ ಕುರಿತು ಇಜ್ಞಾನದಲ್ಲಿ ಈ ಹಿಂದೆ ಪ್ರಕಟವಾದ ಲೇಖನ ನಿಮಗೆ ನೆನಪಿರಬಹುದು. "ಮೊಬೈಲ್ ಫೋನ್ ಬಂದ ಮೇಲೆ ತಮ್ಮ ಮಹತ್ವ ಕಳೆದುಕೊಂಡ ಸಾಧನಗಳ ಪೈಕಿ ಡಿಜಿಟಲ್ ಕ್ಯಾಮೆರಾಗೆ ಪ್ರಮುಖ ಸ್ಥಾನ" ಎನ್ನುವ ಅಂಶಕ್ಕೆ ಆ ಲೇಖನದಲ್ಲಿ ಒತ್ತು ಕೊಡಲಾಗಿತ್ತು.

ಈಗ ಮಾರುಕಟ್ಟೆಗೆ ಬರುತ್ತಿರುವ ಹೊಸ ಮೊಬೈಲುಗಳನ್ನು ನೋಡಿದರೆ ಈ ಅಂಶ ಇನ್ನಷ್ಟು ಸ್ಪಷ್ಟವಾಗುತ್ತ ಹೋಗುತ್ತದೆ. ಏಕೆಂದರೆ ಡಿಜಿಟಲ್ ಕ್ಯಾಮೆರಾಗಳಿಗೆ ಪೂರಕವಾಗಿ ರೂಪುಗೊಂಡ ಮೊಬೈಲ್ ಕ್ಯಾಮೆರಾಗಳು ಇದೀಗ ಅವುಗಳಿಗೆ ಸಶಕ್ತ ಪರ್ಯಾಯವಾಗಿಯೂ ಬೆಳೆಯುತ್ತಿವೆ.

ಈ ಅನಿಸಿಕೆಗೆ ಪುಷ್ಟಿಕೊಡುವಂತಹ ವಿಶಿಷ್ಟ ಮೊಬೈಲ್ ದೂರವಾಣಿಯೊಂದು ಇದೀಗ ಬಂದಿದೆ. ಏಸಸ್ ಸಂಸ್ಥೆ ರೂಪಿಸಿರುವ 'ಜೆನ್‌ಫೋನ್ ಜೂಮ್' ಎಂಬ ಈ ಮೊಬೈಲ್ ೨೦೧೬ರ ಜನವರಿ ೨೨ರಂದು ಆಗ್ರಾದಲ್ಲಿ ನಡೆದ ಕಾರ್ಯಕ್ರಮದ ಮೂಲಕ ಅಧಿಕೃತವಾಗಿ ಭಾರತೀಯ ಮಾರುಕಟ್ಟೆ ಪ್ರವೇಶಿಸಿತು. ಈ ಸಾಧನದ ಪರಿಚಯ ಇಗೋ ಇಲ್ಲಿದೆ ನಿಮಗಾಗಿ!

ಮಂಗಳವಾರ, ಜನವರಿ 26, 2016

ಜಾಲಲೋಕದಲ್ಲಿ ಸುಳ್ಳುಗಳ ಜಾಲ

ಟಿ. ಜಿ. ಶ್ರೀನಿಧಿ

ಇದು ಮಾಹಿತಿಯ ಯುಗ. ಎಲ್ಲ ಕಡೆಗಳಿಂದ ಎಲ್ಲ ಸಮಯದಲ್ಲೂ ನಮ್ಮತ್ತ ಮಾಹಿತಿಯ ಮಹಾಪೂರವೇ ಹರಿದು ಬರುತ್ತಿರುತ್ತದೆ.

ಒಂದು ನಿಮಿಷದ ಅವಧಿ ಬಹಳಷ್ಟು ಸಂದರ್ಭಗಳಲ್ಲಿ ನಮಗೆ ಕ್ಷುಲ್ಲಕವೆಂದು ತೋರುತ್ತದಲ್ಲ, ಇಷ್ಟೇ ಸಮಯ ಮಾಹಿತಿಯ ಲೋಕದಲ್ಲಿ ಅದೆಷ್ಟೋ ಚಟುವಟಿಕೆಗಳಿಗೆ ಸಾಕ್ಷಿಯಾಗಿರುತ್ತದೆ. ಫೇಸ್‌ಬುಕ್ ಗೋಡೆಯ ಮೇಲೆ ಒಂದು ನಿಮಿಷದ ಅವಧಿಯಲ್ಲಿ ಅದೆಷ್ಟೋ ಸಾವಿರ ಹೊಸ ಪೋಸ್ಟುಗಳು ಕಾಣಿಸಿಕೊಳ್ಳುತ್ತವೆ, ಹತ್ತಾರು ಲಕ್ಷ ಲೈಕುಗಳು ದಾಖಲಾಗುತ್ತವೆ. ಲಕ್ಷಗಟ್ಟಲೆ ಟ್ವೀಟುಗಳು, ವಾಟ್ಸ್‌ಆಪ್ ಸಂದೇಶಗಳು, ಇನ್ಸ್‌ಟಾಗ್ರಾಮಿನ ಚಿತ್ರಗಳು, ಯೂಟ್ಯೂಬ್ ವೀಡಿಯೋಗಳೆಲ್ಲ ಮಾಹಿತಿಯ ಈ ಮಹಾಪೂರಕ್ಕೆ ತಮ್ಮ ಕೊಡುಗೆ ಸಲ್ಲಿಸುತ್ತವೆ.

ಇಷ್ಟೆಲ್ಲ ಪ್ರಮಾಣದಲ್ಲಿ ಹರಿದುಬರುತ್ತದಲ್ಲ ಮಾಹಿತಿ, ಅದು ನಮ್ಮ ಬದುಕಿನಲ್ಲಿ ಗಮನಾರ್ಹ ಬದಲಾವಣೆಗಳನ್ನು ತಂದಿದೆ. ವಿಭಿನ್ನ ವಿಷಯಗಳನ್ನು ಕುರಿತ ಅರಿವು, ಹೊಸ ಒಳನೋಟಗಳನ್ನೆಲ್ಲ ಎಲ್ಲಿ ಯಾವಾಗ ಬೇಕಾದರೂ ಪಡೆದುಕೊಳ್ಳುವುದು ಸಾಧ್ಯವಾಗಿದೆ.

ಎಡೆಬಿಡದೆ ನಿರಂತರವಾಗಿ ಹರಿದುಬರುವ ಅಷ್ಟೂ ಮಾಹಿತಿ ಉಪಯುಕ್ತವಾದುದಾಗಿದ್ದರೆ ಹ್ಯಾಪಿ ಎಂಡಿಂಗ್ ಸಿನಿಮಾದಂತೆ ಒಳ್ಳೆಯದೇ ಆಯಿತು ಬಿಡಿ ಎನ್ನಬಹುದಿತ್ತು - ಜ್ಞಾನದ ಸಿರಿ ಎಷ್ಟಿದ್ದರೂ ಒಳ್ಳೆಯದೇ ತಾನೆ! ಆದರೆ ನೈಜ ಸ್ಥಿತಿ ಕೊಂಚ ಬೇರೆಯೇ:

ಮಂಗಳವಾರ, ಜನವರಿ 19, 2016

ಜಂತರ್ ಮಂತರ್ ಬಗೆಗೊಂದು ಪುಟಿಯುವ ಪುಟಗಳ ಪುಸ್ತಕ!

ಪ್ರಾಚೀನ ಭಾರತದಲ್ಲಿ ಏನಿತ್ತು ಏನಿರಲಿಲ್ಲ ಎನ್ನುವುದು ಸದಾಕಾಲ ಚರ್ಚೆಗೆ ಗ್ರಾಸವಾಗುವ ವಿಷಯ. ಒಂದು ಬಣ ನಮ್ಮಲ್ಲಿ ಎಲ್ಲವೂ ಇತ್ತು ಎಂದರೆ ಇನ್ನೊಂದು ಬಣ ಮೊದಲ ಬಣವನ್ನು ಹೀಗಳೆಯುವುದರಲ್ಲೇ ತೃಪ್ತಿ ಕಂಡುಕೊಳ್ಳುತ್ತದೆ. ಈ ಗಲಾಟೆಯಲ್ಲಿ ಪ್ರಾಚೀನ ಭಾರತದಲ್ಲಿ ನಿಜಕ್ಕೂ ಏನೆಲ್ಲ ಇತ್ತು ಎನ್ನುವ ಸಂಗತಿ, ಮತ್ತದರ ವಿವರಗಳು ಯಾವ ಬಣಕ್ಕೂ ಸೇರದ ನಮ್ಮಂತಹವರನ್ನು ತಲುಪುವುದೇ ಇಲ್ಲ.

ಈ ಕೊರತೆಯನ್ನು ಕೊಂಚಮಟ್ಟಿಗೆ ತುಂಬಿಕೊಡುವ ಅಪರೂಪದ ಕೆಲಸವೊಂದು ಇದೀಗ - ಅದೂ ಕನ್ನಡದಲ್ಲಿ - ನಡೆದಿದೆ, ಡಾ. ಬಿ. ಎಸ್. ಶೈಲಜಾ ಹಾಗೂ ಶ್ರೀ ವಿ. ಎಸ್. ಎಸ್. ಶಾಸ್ತ್ರಿಯವರ ಪರಿಕಲ್ಪನೆ 'ಜಂತರ್ ಮಂತರ್ - ಜೈಸಿಂಗ್ ವೀಕ್ಷಣಾಲಯಗಳು' ಎನ್ನುವ ಪುಸ್ತಕವಾಗಿ ಹೊರಬಂದಿದೆ. ಜೈಪುರ - ದೆಹಲಿಗಳಲ್ಲೆಲ್ಲ ಇರುವ ಪ್ರಾಚೀನ ಭಾರತದ ವೀಕ್ಷಣಾಲಯ ಜಂತರ್ ಮಂತರ್‌‌ನ ಬಗ್ಗೆ ನಾವೆಲ್ಲ ಕೇಳಿದ್ದೇವಲ್ಲ, ಈ ಪುಸ್ತಕ ಅಲ್ಲಿನ ಯಂತ್ರಗಳು ಹಾಗೂ ಅವುಗಳ ಕಾರ್ಯವೈಖರಿಯನ್ನು ವಿವರವಾಗಿ ಪರಿಚಯಿಸುತ್ತದೆ.

ಗುರುವಾರ, ಜನವರಿ 14, 2016

ಓಸಿಆರ್ ಎಂಬ ಅಕ್ಷರ ಜಾಣ

ಟಿ. ಜಿ. ಶ್ರೀನಿಧಿ

ಒಬ್ಬೊಬ್ಬರ ಕೈಬರಹ ಒಂದೊಂದು ರೀತಿ. ಕೆಲವರದ್ದು ಮುತ್ತು ಪೋಣಿಸಿದಷ್ಟು ಸುಂದರವಾಗಿದ್ದರೆ ಇನ್ನು ಕೆಲವರು ಬರೆದದ್ದು ಇಂಕಿನಲ್ಲಿ ಬಿದ್ದ ಜಿರಲೆ ಓಡಾಡಿದಂತೆ ಕಾಣುತ್ತದೆ.

ಇಷ್ಟೆಲ್ಲ ವಿವಿಧ ಬಗೆಯ ಕೈಬರಹಗಳನ್ನು ಓದುವುದು ದೊಡ್ಡ ಸವಾಲೇ ಸರಿ. ಚೆಂದದ ಬರಹಗಳನ್ನೇನೋ ಸರಾಗವಾಗಿ ಓದಬಹುದು; ಆದರೆ ಸುಸ್ಪಷ್ಟವಲ್ಲದ ಕೈಬರಹದಲ್ಲಿ ಏನು ಬರೆದಿದ್ದಾರೆ ಎಂದು ತಿಳಿಯುವುದೇ ಕಷ್ಟ. ಡಾಕ್ಟರು ಬರೆದದ್ದನ್ನೆಲ್ಲ ಸರಾಗವಾಗಿ ಓದಿಕೊಳ್ಳಲು ಎಲ್ಲರೂ ಮೆಡಿಕಲ್ ಸ್ಟೋರಿನವರೇ ಆಗಲು ಸಾಧ್ಯವೇ?

ಚಿಕ್ಕಂದಿನಿಂದಲೇ ಅಕ್ಷರಗಳ ಪರಿಚಯವಿದ್ದು, ಅವುಗಳ ಗಾತ್ರ-ವಿನ್ಯಾಸಗಳಲ್ಲಿನ ಬದಲಾವಣೆಗಳನ್ನು ಸುಲಭವಾಗಿ ಗುರುತಿಸುವ ಶಕ್ತಿಯೂ ಇರುವ ನಮ್ಮ ಕಥೆಯೇ ಹೀಗೆ. ಇನ್ನು ಯಾರೋ ಗೀಚಿದ ಬರಹವನ್ನು ಓದು ಎಂದು ಕಂಪ್ಯೂಟರಿಗೆ ಹೇಳಿದರೆ ಏನಾಗಬೇಡ? ಕೈಬರಹ ಹಾಗಿರಲಿ, ಮುದ್ರಿತ ಅಕ್ಷರಗಳನ್ನಾದರೂ ಓದಲು ಕಂಪ್ಯೂಟರಿಗೆ ಸಾಧ್ಯವೇ?

ಖಂಡಿತಾ ಸಾಧ್ಯ.
badge