ಭಾನುವಾರ, ನವೆಂಬರ್ 26, 2017

ಆಡಳಿತ, ತಂತ್ರಜ್ಞಾನ ಮತ್ತು ಕನ್ನಡ

೮೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭ ನವೆಂಬರ್ ೨೬, ೨೦೧೭ರಂದು ನಡೆದ 'ಕನ್ನಡ ತಂತ್ರಜ್ಞಾನ' ಗೋಷ್ಠಿಯಲ್ಲಿ ಇ-ಆಡಳಿತ ಅನುಷ್ಠಾನದ ಸಮಸ್ಯೆಗಳ ಕುರಿತು ಮಂಡಿಸಿದ ಅಭಿಪ್ರಾಯಗಳ ಸಾರಾಂಶ

ಕೆ. ಎ. ದಯಾನಂದ, ಕ.ಆ.ಸೇ.

ಕ್ಷೀರ ಸಾಗರದೊಳಗಿದ್ದು ಹಂಸ ಹಾಲ ಬಯಸಲುಂಟೆ
ಕಡಲೊಳಗಿದ್ದ ಕಪ್ಪೆ ಜಲವ ಬಯಸಲುಂಟೆ
ಪುಷ್ಪದೊಳಗಿದ್ದ ದುಂಬಿ ಪರಿಮಳವ ಅರಸಲುಂಟೆ
ಎದೆಂತಯ್ಯ ತಾ ಲಿಂಗದೊಳಗಿದ್ದು ಬೇರೆ ಇತರ
ಕಾವ್ಯದೊಳಗಿರ್ಪ ಭ್ರಾಂತರನೇನೆಂಬೆನಯ್ಯ ಗುಹೇಶ್ವರ

20ನೇ ಶತಮಾನದಲ್ಲಿ ಬಳಸುವ ಜನಸಂಖ್ಯೆ ನಶಿಸಿದ ಕಾರಣ ಅಥವ ಜನ ಭಾಷೆಯನ್ನು ಸಂವಹನಕ್ಕೆ ಬಳಸದೇ ಇರುವುರಿಂದ 110 ಭಾಷೆಗಳು ನಾಶವಾಗಿವೆ. ಆಧುನಿಕತೆಯ ವೇಗದಲ್ಲಿ ಈ ನಾಶದ ಪ್ರಕ್ರಿಯೆಯು ಕೂಡ ವೇಗ ಪಡೆದುಕೊಂಡಿದ್ದು 21ನೇ ಶತಮಾನದ ಮೊದಲ ಅವಧಿಯಲ್ಲಿನ ಕೇವಲ 16 ವರ್ಷಗಳಲ್ಲಿ 12 ಭಾಷೆಗಳು ನಾಶವಾಗಿವೆ.

ಭಾಷೆಯನ್ನು ಕೇವಲ ಜನರಾಡುವ ಭಾಷೆಯಾಗಿ ಹೆಚ್ಚು ಬಳಕೆ ಮಾಡಿದ ಮಾತ್ರಕ್ಕೆ ಭಾಷೆ ಉಳಿಯುವುದೂ ಇಲ್ಲ ಬೆಳೆಯುವುದೂ ಇಲ್ಲ. ಭಾಷೆಯನ್ನು ನಮ್ಮ ಸಂವಹನದ ಮತ್ತು ಆರ್ಥಿಕ ಬದುಕಿನ ಭಾಗವಾಗಿ ಬಳಕೆ ಮಾಡಿದಾಗ ಮಾತ್ರ ಭಾಷೆ ಉಳಿಯುತ್ತದೆ ಹಾಗೂ ಬೆಳೆಯುತ್ತದೆ.

ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಬಳಕೆ

೮೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ 'ವಿಜ್ಞಾನ, ತಂತ್ರಜ್ಞಾನ ಮತ್ತು ಕನ್ನಡದ ಬಳಕೆ' ಗೋಷ್ಠಿಯಲ್ಲಿ ಮಂಡಿಸಿದ ಅಭಿಪ್ರಾಯಗಳ ಸಾರಾಂಶ

ಉದಯ ಶಂಕರ ಪುರಾಣಿಕ  

ನಿರಂತರ ಸಂಶೋಧನೆ ಮತ್ತು ಆವಿಷ್ಕಾರಗಳಿಂದಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವಪೂರ್ಣ ಬದಲಾವಣೆಗಳಾಗುತ್ತಿವೆ. ಹೊಸ ಸಂಶೋಧನೆಗಳು, ಆವಿಷ್ಕಾರಗಳು ಮತ್ತು ತಂತ್ರಜ್ಞಾನಾಧಾರಿತ ಸೇವೆಗಳನ್ನು ಕನ್ನಡ ಭಾಷೆಯಲ್ಲಿ ನೀಡುವುದರಿಂದ ಹೇಗೆ
೧) ಮಾತೃ ಭಾಷೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಬಹುದು
೨) ಅರಣ್ಯ ಸಂರಕ್ಷಣೆ ಮಾಡಬಹುದು
೩) ದೀರ್ಘ ಕಾಲದ ಅಂತರ ರಾಜ್ಯ ಜಲವಿವಾದಗಳನ್ನು ಪರಿಹರಿಸಿಕೊಳ್ಳಬಹುದು
೪) ಮಳೆ, ಬೆಳೆ, ಪಶುರೋಗ ಮುನ್ಸೂಚನೆ ಮೊದಲಾದ ಮಾಹಿತಿಯನ್ನು ರೈತರಿಗೆ ನೀಡಬಹುದು
೫) ಕನ್ನಡಿಗರಿಗೆ ಹೆಚ್ಚಿನ ಉದ್ಯೋಗವಕಾಶಗಳು ದೊರೆಯುವಂತೆ ಮಾಡಬಹುದು

ಈ ೫ ಪ್ರಮುಖ ವಿಷಯಗಳನ್ನು ಕುರಿತು ಚರ್ಚಿಸುವ ಮೊದಲು, ಇದುವರೆಗೆ ತಂತ್ರಜ್ಞಾನ ಮತ್ತು ಸೇವೆಗಳಲ್ಲಿ ಕನ್ನಡದ ಸೌಲಭ್ಯ ಇರುವುದನ್ನು ಕುರಿತು ತಿಳಿದುಕೊಳ್ಳೋಣ.

ಗುರುವಾರ, ನವೆಂಬರ್ 23, 2017

ಈ ವಾರದ ವಿಶೇಷ: ಸೆಲ್ಫಿಗೆಂದೇ ಹೊಸ ಫೋನು

ಅಭಿಷೇಕ್ ಜಿ. ಎಸ್.

ಈಚಿನ ವರ್ಷಗಳಲ್ಲಿ ಮೊಬೈಲ್ ಫೋನಿನ ಅತಿಮುಖ್ಯ ಉಪಯೋಗಗಳಲ್ಲಿ ಸ್ಥಾನಪಡೆದುಕೊಂಡಿರುವುದು ಸೆಲ್ಫಿ. ಮೊಬೈಲ್ ಫೋನ್ ಬಳಕೆ ಹಾಗೂ ಸಮಾಜಜಾಲಗಳ (ಸೋಶಿಯಲ್ ನೆಟ್‌ವರ್ಕ್) ಜನಪ್ರಿಯತೆ ಎರಡೂ ಬೆಳೆದಂತೆ ಸೆಲ್ಫಿಗಳನ್ನು ಕ್ಲಿಕ್ ಮಾಡುವುದು ಹಾಗೂ ಇತರರೊಡನೆ ಹಂಚಿಕೊಳ್ಳುವುದು ಇದೀಗ ಸರ್ವೇಸಾಮಾನ್ಯವಾದ ಸಂಗತಿಯಾಗಿದೆ. [ಓದಿ: ಸೆಲ್ಫಿ ಸುತ್ತಮುತ್ತ]

ಸೆಲ್ಫಿ ಜನಪ್ರಿಯತೆ ಹೆಚ್ಚುತ್ತಿರುವಂತೆಯೇ ಸೆಲ್ಫಿ ಛಾಯಾಗ್ರಹಣವನ್ನೇ ಪ್ರಮುಖಾಂಶವಾಗಿಟ್ಟುಕೊಂಡ ಮೊಬೈಲುಗಳೂ ಮಾರುಕಟ್ಟೆಗೆ ಬರುತ್ತಿವೆ. ತೈವಾನಿನ ಟೆಕ್ ದಿಗ್ಗಜ ಏಸುಸ್ ಇತ್ತೀಚೆಗೆ ಪರಿಚಯಿಸಿರುವ 'ಜೆನ್‌ಫೋನ್ ೪ ಸೆಲ್ಫಿ ಪ್ರೋ' ಇಂತಹ ಫೋನುಗಳಿಗೊಂದು ಉದಾಹರಣೆ.

ಶುಕ್ರವಾರ, ನವೆಂಬರ್ 17, 2017

ವಾರಾಂತ್ಯ ವಿಶೇಷ: ತಂತ್ರಜ್ಞಾನದಲ್ಲಿ ಕನ್ನಡವೆಂದರೆ ಟೈಪಿಂಗ್ ಮಾತ್ರವೇ ಅಲ್ಲ!

ಟಿ. ಜಿ. ಶ್ರೀನಿಧಿ


ನವೆಂಬರ್ ತಿಂಗಳಿನಲ್ಲಿ ಎಲ್ಲೆಡೆಯೂ ಕನ್ನಡದ ನಾಳೆಗಳದೇ ಮಾತು. ನಮ್ಮ ಭಾಷೆ ತಂತ್ರಜ್ಞಾನಕ್ಕೆ ತೆರೆದುಕೊಳ್ಳಬೇಕು, ವಿಶ್ವದ ಇತರ ಭಾಷೆಗಳಲ್ಲಿ ಲಭ್ಯವಿರುವ ಸವಲತ್ತುಗಳು ನಮ್ಮ ಭಾಷೆಯಲ್ಲೂ ಸಿಗಬೇಕು ಎನ್ನುವಂತಹ ಹೇಳಿಕೆಗಳು ಅತಿಹೆಚ್ಚುಬಾರಿ ಕೇಳಸಿಗುವುದು ಬಹುಶಃ ಈ ತಿಂಗಳಲ್ಲೇ ಇರಬೇಕು.

ತಂತ್ರಜ್ಞಾನದಲ್ಲಿ ಕನ್ನಡ ಎಂದರೇನು?

ಸೋಮವಾರ, ನವೆಂಬರ್ 13, 2017

ಕನ್ನಡ: ನಿನ್ನೆ, ಇಂದು ಮತ್ತು ನಾಳೆ

ಇಜ್ಞಾನ ವಾರ್ತೆ

ಕನ್ನಡ ಭಾಷೆಯ ಇತಿಹಾಸ, ವರ್ತಮಾನ ಹಾಗೂ ಭವಿಷ್ಯ ಕುರಿತ 'ಕನ್ನಡ: ನಿನ್ನೆ, ಇಂದು ಮತ್ತು ನಾಳೆ' ವಿಚಾರಸಂಕಿರಣ ಬರುವ ನವೆಂಬರ್ ೧೯ರಂದು ನಡೆಯಲಿದೆ. ವಿಜ್ಞಾನ, ತಂತ್ರಜ್ಞಾನ, ಕನ್ನಡ ಹಾಗೂ ಸಂಸ್ಕೃತಿ ಕುರಿತ ವಿವಿಧ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಇಜ್ಞಾನ ಟ್ರಸ್ಟ್ ಸ್ವಯಂಸೇವಾ ಸಂಸ್ಥೆ ನವಕರ್ನಾಟಕ ಪ್ರಕಾಶನದ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಈ ವಿಚಾರಸಂಕಿರಣ ನಡೆಯಲಿದ್ದು ಕಾರ್ಯಕ್ರಮ ನವೆಂಬರ್ ೧೯, ೨೦೧೭ರ ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ಪ್ರಾರಂಭವಾಗಲಿದೆ.

ಗುರುವಾರ, ನವೆಂಬರ್ 9, 2017

ಹುಷಾರು, ಫಿಶಿಂಗ್ ಗಾಳಕ್ಕೆ ಸಿಕ್ಕಬೇಡಿ!

ಟಿ. ಜಿ. ಶ್ರೀನಿಧಿ


ಮೊನ್ನೆ ಬೆಳಿಗ್ಗೆ ನನ್ನ ಪರಿಚಯದ ಹಿರಿಯರಿಂದ ಒಂದು ಇಮೇಲ್ ಬಂತು. "ನಾನು ಸ್ಪೇನ್‍ಗೆ ಬಂದಿದ್ದೆ, ಹುಷಾರು ತಪ್ಪಿದೆ. ನಿನ್ನ ಬಳಿ ಅರ್ಜೆಂಟಾಗಿ ಮಾತನಾಡಬೇಕು, ಈ ಸಂಖ್ಯೆಗೆ ಕರೆಮಾಡು" ಎನ್ನುವುದು ಇಮೇಲಿನ ಸಾರಾಂಶ. ಆ ಹಿರಿಯರು ಆಗಿಂದಾಗ್ಗೆ ವಿದೇಶ ಪ್ರವಾಸ ಮಾಡುವವರೇ ಆದರೂ ಎಂದೂ ಇಂತಹ ಇಮೇಲ್ ಕಳಿಸಿದವರಲ್ಲ. ಹೀಗಾಗಿ ಅವರ ಮನೆಯ ಲ್ಯಾಂಡ್‍ಲೈನನ್ನೂ ಮೊಬೈಲನ್ನೂ ಸಂಪರ್ಕಿಸಲು ಪ್ರಯತ್ನಿಸಿದೆ. ನಾಲ್ಕು ಪ್ರಯತ್ನದ ನಂತರ ಮೊಬೈಲಿನಲ್ಲಿ ಸಿಕ್ಕವರು ನಾನೆಲ್ಲೂ ಹೋಗಿಲ್ಲ, ನಿನಗೆ ಬಂದಿರುವುದು ನಕಲಿ ಇಮೇಲ್ ಎಂದು ಖಚಿತಪಡಿಸಿದರು.

ಹಿಂದೆ ವಿದೇಶಗಳಲ್ಲಷ್ಟೇ ನಡೆಯುತ್ತಿದ್ದ, ಮಾಧ್ಯಮಗಳ ಮೂಲಕ ನಮಗೆ ತಿಳಿಯುತ್ತಿದ್ದ ಇಂತಹ ಹಗರಣಗಳು ಇದೀಗ ನಮ್ಮ ದೇಶದಲ್ಲೂ ವ್ಯಾಪಕವಾಗಿ ಬೆಳೆಯುತ್ತಿವೆ.

ಸೋಮವಾರ, ನವೆಂಬರ್ 6, 2017

ಮೊಬೈಲ್ ಫೋನ್ ಅಡಿಕ್ಷನ್: ಹೈಟೆಕ್ ಚಟವೊಂದರ ಹಿಂದೆಮುಂದೆ

'ಮೈತ್ರಿ'

ಈ ಪ್ರಪಂಚದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಅಭ್ಯಾಸವಿರುತ್ತದೆ. ಹಾಡು ಹೇಳುವುದು, ಹರಟೆ ಹೊಡೆಯುವುದು, ಮೂಗಿಗೆ ಬೆರಳು ಹಾಕುವುದು, ಸುಳ್ಳು ಹೇಳುವುದು, ಸಿಗರೇಟು ಸೇದುವುದು, ಹೆಂಡ ಕುಡಿಯುವುದು - ಹೀಗೆ ಇಂತಹ ಅಭ್ಯಾಸಗಳು ಯಾವ ರೀತಿಯದ್ದಾದರೂ ಆಗಿರುವುದು ಸಾಧ್ಯ.

ಕೆಲವೊಮ್ಮೆ ಕೆಲವು ಅಭ್ಯಾಸಗಳು ನಿಯಂತ್ರಣಗಳನ್ನೆಲ್ಲ ಮೀರಿ ಬೆಳೆದುಬಿಡುತ್ತವೆ. ಕಚೇರಿಯ ವೇಳೆಯಲ್ಲೂ ಗೆಳೆಯರೊಡನೆ ಹರಟುವ ಆಸೆಯಾಗುವುದು, ಎಷ್ಟು ಸಿಗರೇಟ್ ಸೇದಿದರೂ ಸಾಲದೆನ್ನಿಸುವುದೆಲ್ಲ ಇಂತಹ ಪರಿಸ್ಥಿತಿಯಲ್ಲೇ.

ಚಟ ಎಂದು ಕರೆಯುವುದು ಇದನ್ನೇ. ಹೆಸರಾಂತ ವಿಜ್ಞಾನಿ, ಲೇಖಕ ಡಾ. ಬಿ. ಜಿ. ಎಲ್. ಸ್ವಾಮಿ ತಮ್ಮ 'ಸಾಕ್ಷಾತ್ಕಾರದ ದಾರಿಯಲ್ಲಿ' ಕೃತಿಯಲ್ಲಿ "ಇಷ್ಟು ದೊರಕಿದರೆ ಅಷ್ಟು ಬೇಕೆಂಬಾಸೆ, ಅಷ್ಟು ದೊರಕಿದರೆ ಮತ್ತಷ್ಟರಾಸೆ"ಯನ್ನು ಹುಟ್ಟಿಸುವುದೇ ಚಟ ಎಂದು ಹೇಳುತ್ತಾರೆ.

ಈ ಕೃತಿಯಲ್ಲಿ ಎಲೆ-ಅಡಕೆ, ತಂಬಾಕು, ಅಫೀಮು-ಗಾಂಜಾ, ಕಾಫಿ-ಟೀಗಳನ್ನೆಲ್ಲ ಚಟಕ್ಕೆ ಉದಾಹರಣೆಗಳೆಂದು ಪಟ್ಟಿಮಾಡಲಾಗಿದೆ. ಸ್ವಾಮಿಯವರು ಈಗ ಇದ್ದಿದ್ದರೆ ಖಂಡಿತಾ ಇನ್ನೊಂದು ವಸ್ತುವನ್ನೂ ಈ ಸಾಲಿಗೆ ಸೇರಿಸಿರುತ್ತಿದ್ದರು ಅನ್ನಿಸುತ್ತದೆ.

ಆ ವಸ್ತುವೇ ಮೊಬೈಲ್ ಫೋನು!

ಬುಧವಾರ, ನವೆಂಬರ್ 1, 2017

ರಾಜ್ಯೋತ್ಸವದ ದಿನ ಖುಷಿಯದೊಂದು ಸುದ್ದಿ

ಇಜ್ಞಾನ ವಿಶೇಷ

ಕರ್ನಾಟಕ ರಾಜ್ಯೋತ್ಸವದ ದಿನ ಈ ವಿಷಯ ಹಂಚಿಕೊಳ್ಳಲು ಖುಷಿಯಾಗುತ್ತಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೆರವಿನೊಡನೆ ಇಜ್ಞಾನ ಟ್ರಸ್ಟ್ ರೂಪಿಸಿರುವ 'ಕಂಪ್ಯೂಟರ್-ತಂತ್ರಜ್ಞಾನ ಪದವಿವರಣ ಕೋಶ' ಕೃತಿ ಬಿಡುಗಡೆಯಾಗಿದೆ. ನಿನ್ನೆ (ಅಕ್ಟೋಬರ್ ೩೧) ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಈ ಕೃತಿಯ ಲೋಕಾರ್ಪಣೆ ನೆರವೇರಿಸಿದರು.
badge