ಮಂಗಳವಾರ, ಆಗಸ್ಟ್ 9, 2016

ಸಿಮ್ ಕಾರ್ಡಿನ ಕಾಲು ಶತಮಾನ

ಟಿ. ಜಿ. ಶ್ರೀನಿಧಿ


ಮೊಬೈಲ್ ಸಂಪರ್ಕ ಪಡೆಯಲು ಏನೆಲ್ಲ ಬೇಕು? ಮೊದಲಿಗೆ ಒಂದು ಮೊಬೈಲ್ ಫೋನ್ ಬೇಕು, ಆಮೇಲೊಂದು ಸಿಮ್ ಕಾರ್ಡ್ ಬೇಕು!

ಹೌದು, ನಿಮ್ಮ ಮೊಬೈಲ್ ಫೋನು ಯಾವುದೇ ಇರಲಿ - ಸ್ಮಾರ್ಟ್ ಆಗಿರಲಿ ಇಲ್ಲದಿರಲಿ - ಜಿಎಸ್‌ಎಂ ತಂತ್ರಜ್ಞಾನ ಬಳಸುವುದಾದರೆ ಅದರಲ್ಲೊಂದು ಸಿಮ್ ಅಂತೂ ಇರಲೇಬೇಕು. 'ಸಿಮ್' ಎಂಬ ಹೆಸರು 'ಸಬ್‌ಸ್ಕ್ರೈಬರ್  ಐಡೆಂಟಿಫಿಕೇಶನ್ ಮಾಡ್ಯೂಲ್' (ಚಂದಾದಾರರನ್ನು ಗುರುತಿಸುವ ಘಟಕ) ಎನ್ನುವುದರ ಹ್ರಸ್ವರೂಪ. ಹೆಸರೇ ಹೇಳುವಂತೆ ಚಂದಾದಾರರನ್ನು ಗುರುತಿಸಿ ಮೊಬೈಲ್ ಜಾಲದೊಡನೆ ಅವರ ಸಂಪರ್ಕ ಏರ್ಪಡಿಸುವಲ್ಲಿ ಈ ಪುಟ್ಟ ಬಿಲ್ಲೆಯದು ಮಹತ್ವದ ಪಾತ್ರ.

ಈ ವಿಶಿಷ್ಟ ಸಾಧನ ಸೃಷ್ಟಿಯಾಗಿ ಇದೀಗ ಇಪ್ಪತ್ತೈದು ವರ್ಷ. ತಂತ್ರಜ್ಞಾನ ಲೋಕದ ಮಟ್ಟಿಗೆ ಇದೊಂದು ಬಹುದೊಡ್ಡ ಅವಧಿ. ಇಷ್ಟೆಲ್ಲ ಸಮಯದವರೆಗೂ ಚಾಲ್ತಿಯಲ್ಲಿ ಉಳಿದುಕೊಂಡಿರುವುದು ಸಿಮ್‌ನ ಹಿರಿಮೆಯೇ ಸರಿ!

ಶುಕ್ರವಾರ, ಜುಲೈ 22, 2016

ಗೋಧಿಯ ಕುರಿತು ಗೊಂದಲ ಬೇಕಿಲ್ಲ

ಡಾ. ಶರಣಬಸವೇಶ್ವರ ಅಂಗಡಿ

ಗೆಳೆಯ ಗೋವಿಂದ ಒಮ್ಮೆ ತಮಾಷೆಗೆ 'ಗೋಧಿ ಅದೇ ವ್ಹೀಟ್‌ನಲ್ಲಿ ಹೀಟ್ ಇದೆ, ರೈಸ್‌ನಲ್ಲಿ ಐಸ್ ಇದೆ, ಅದಕ್ಕೇ ಚಪಾತಿ ತಿಂದರೆ ಉಷ್ಣ, ಅನ್ನವುಂಡರೆ ತಂಪು' ಅಂದಿದ್ದ. ಮೊನ್ನೆ, ತಮ್ಮನ್ನು ಯೋಗಗುರು ಎಂದು ಕರೆದುಕೊಳ್ಳುವ ಅನಂತ್‌ಜಿ ಎನ್ನುವ ವ್ಯಕ್ತಿ ಗೋಧಿಯನ್ನು ನಿಂದಿಸುವುದಲ್ಲದೇ, ಅಕ್ಕಿಯನ್ನು ಅನಿಷ್ಟವೆಂದದ್ದು, ದೇಶದ ಕೃಷಿಯನ್ನು, ಹಸಿರು ಕ್ರಾಂತಿಯನ್ನು ನಿರಾಧಾರವಾಗಿ, ಅವೈಜ್ಞಾನಿಕವಾಗಿ ಹಿಗ್ಗಾಮುಗ್ಗಾ ಟೀಕಿಸಿದ್ದನ್ನು ಕೇಳಿದಾಗ ಗೋವಿಂದನ ಹಳೆಯ ಜೋಕ್ ನೆನಪಾಯ್ತು. ಹಿಂದೊಮ್ಮೆ ಇದೇ ಅನಂತ್‌ಜಿ ಗೋಧಿಯನ್ನು ದುಷ್ಟ ಧಾನ್ಯವೆಂದಿದ್ದು ಸುದ್ದಿಯಾಗಿತ್ತು. ಅದಕ್ಕೆ(ಅವರೇ ಹೇಳಿದ್ದು) ಬಂದ ಸಾವಿರಾರು ಫೋನ್ ಕರೆಗಳಿಗೆ, ಮತ್ತು ಮಿಸ್ಡ್‌ಕಾಲ್‌ಗಳಿಗೆ ಪ್ರತಿಕ್ರಿಯೆಯಾಗಿ ಸುಮಾರು ಅರ್ಧಗಂಟೆಯ ಒಂದು ಆಡಿಯೋ ಕ್ಲಿಪ್ ತೇಲಿಬಿಟ್ಟಿದ್ದಾರೆ. ಅದನ್ನು ವಾಟ್ಸಾಪ್‌ನಲ್ಲಿ ಕೇಳುವ ಅವಕಾಶ ನನಗೂ ಸಿಕ್ಕಿತು. ಅವರ ಆ 'ಜ್ಞಾನ'ದಲ್ಲಿ ಹೇರಳ ತಪ್ಪುಗಳಿವೆ. ಅದು ಜನಸಾಮಾನ್ಯರಿಗೆ ತಿಳಿದಿರಲಿ ಎಂದು ಈ ಲೇಖನದ ಉದ್ದೇಶ.

ಬುಧವಾರ, ಜುಲೈ 20, 2016

ಸಮಾಜ ಜಾಲಗಳ ಮೊಬೈಲ್ ಅವತಾರ

ಟಿ. ಜಿ. ಶ್ರೀನಿಧಿ

ಮೊಬೈಲ್ ದೂರವಾಣಿಗಳ ಬಳಕೆ ಹೆಚ್ಚಿದಂತೆ ನಮ್ಮ ಅದೆಷ್ಟೋ ಚಟುವಟಿಕೆಗಳು ಮೊಬೈಲ್ ಕೇಂದ್ರಿತವಾಗಿಬಿಟ್ಟಿವೆ. ಇಂತಹ ಚಟುವಟಿಕೆಗಳ ಸಾಲಿನಲ್ಲಿ ಸೋಶಿಯಲ್ ನೆಟ್‌ವರ್ಕ್‌ಗಳ ಬಳಕೆಗೂ ಪ್ರಮುಖ ಸ್ಥಾನವಿದೆ.

ಹೌದು, ಸೋಶಿಯಲ್ ನೆಟ್‌ವರ್ಕ್‌ಗಳು ಪರಿಚಯವಾದಾಗ ಕಂಪ್ಯೂಟರಿನಲ್ಲಿ ಮಾತ್ರವೇ ಅವನ್ನು ಬಳಸುತ್ತಿದ್ದ ನಾವು ಈಗ ಅವುಗಳ ಬಳಕೆಯನ್ನು ಹೆಚ್ಚೂಕಡಿಮೆ ಪೂರ್ತಿಯಾಗಿಯೇ ಮೊಬೈಲಿಗೆ ವರ್ಗಾಯಿಸಿಬಿಟ್ಟಿದ್ದೇವೆ. ಮೊಬೈಲುಗಳು ಸದಾಕಾಲ ನಮ್ಮ ಜೊತೆಗಿರುತ್ತವಲ್ಲ, ಹಾಗಾಗಿಯೋ ಏನೋ ಅವು ಸಮಾಜಜಾಲಗಳಲ್ಲಿ ನಮ್ಮ ಎಲ್ಲ ಚಟುವಟಿಕೆಗಳಿಗೂ ಸರಿಯಾದ ಜೋಡಿಯಾಗಿ ಬೆಳೆದಿವೆ.

ಮೊದಲಿಗೆ ಸಮಾಜಜಾಲಗಳ ವೆಬ್‌ಸೈಟನ್ನು ತೆರೆಯಲಷ್ಟೆ ಮೊಬೈಲ್ ಫೋನ್ ಬಳಕೆಯಾಗುತ್ತಿತ್ತು. ನಂತರ ನಮ್ಮ ಫೋನುಗಳು ಹೆಚ್ಚು ಸ್ಮಾರ್ಟ್ ಆದಂತೆ, ಆಪ್‌ಗಳ ಪ್ರಭಾವ ಜಾಸ್ತಿಯಾದಂತೆ ಸಮಾಜಜಾಲಗಳ ಆಪ್‌ಗಳು ನಮ್ಮ ಮೊಬೈಲಿಗೆ ಬಂದು ಕುಳಿತವು. ಫೇಸ್‌ಬುಕ್‌ನದೊಂದು ಆಪ್, ಟ್ವಿಟರ್‌ನದೊಂದು ಆಪ್ ಎಂದು ಸಮಾಜಜಾಲಗಳ ಆಪ್‌ಗಳು ಒಂದೊಂದಾಗಿ ನಮ್ಮ ಮೊಬೈಲನ್ನು ಸೇರಿಕೊಂಡವು.

ಸೋಮವಾರ, ಜುಲೈ 18, 2016

ನಾವು ಆಕಳಿಸುವುದೇಕೆ?

ಕೊಳ್ಳೇಗಾಲ ಶರ್ಮ

ಬಹುಶಃ ಶೀರ್ಷಿಕೆಯನ್ನು ಓದಿಯೇ ನೀವು ಆಕಳಿಸುವುದಕ್ಕೆ ಆರಂಭಿಸಿದ್ದೀರೆಂದರೆ ಅದು ಲೇಖನದ ತಪ್ಪಲ್ಲ. ಹಾಂ. ನೀವು ಮಹಿಳೆಯರಾಗಿದ್ದರೆ ಖಂಡಿತ ಆಕಳಿಸಿರುತ್ತೀರಿ. ಪುರುಷರಾದರೆ ಆ ಸಾಧ್ಯತೆ ಸ್ವಲ್ಪ ಕಡಿಮೆ. ಇದೇನಿದು? ಆಕಳಿಕೆಗೂ, ಗಂಡು-ಹೆಣ್ಣಿಗೂ ಸಂಬಂಧ ಯಾಕೆ ಕಲ್ಪಿಸುತ್ತಿದ್ದೀರಿ ಎಂದಿರಾ? ಇದು ಹೇಳಿದ್ದು ನಾನಲ್ಲ. ಇಟಲಿಯ ಪೀಸಾ ವಿಶ್ವವಿದ್ಯಾನಿಲಯದ ಮನಶ್ಶಾಸ್ತ್ರಜ್ಞೆ ಎಲಿಸಬೆಟ್ಟಾ ಪಲಾಜಿ ಮತ್ತು ಸಂಗಡಿಗರು ಹೀಗೊಂದು ಹೊಸ ತರ್ಕವನ್ನು ಮುಂದಿಟ್ಟಿದ್ದಾರೆ.

ಆಕಳಿಕೆ ಒಂದು ವಿಚಿತ್ರವಾದ ನಿಗೂಢ ವಿದ್ಯಮಾನ. ಬೇಸರವಾದಾಗ ಅಥವಾ ನಿದ್ರೆ ಬಂದಾಗಷ್ಟೆ ಆಕಳಿಕೆ ಬರುತ್ತದೆನ್ನುವುದು ಸಾಮಾನ್ಯ ನಂಬಿಕೆ. ಬಹುಮಟ್ಟಿಗೆ ಇದು ನಿಜವೂ ಹೌದು. ಇದಕ್ಕಾಗಿಯೇ ಆಕಳಿಕೆ ಎಂದರೆ ಬಹುಶಃ ಮಿದುಳಿಗೆ ಹೆಚ್ಚಿನ ಆಕ್ಸಿಜನ್ ಒದಗಿಸುವ ವಿದ್ಯಮಾನವಿರಬಹುದು ಎನ್ನುವ ನಂಬಿಕೆಯೂ ಇತ್ತು. ಏಕೆಂದರೆ ಆಕ್ಸಿಜನ್ ಕೊರತೆಯಾದಾಗ ಮಿದುಳು ತನ್ನಂತಾನೇ ನಿದ್ರೆಗೆ ಜಾರುತ್ತದೆ. ಅದನ್ನು ತಪ್ಪಿಸಲೆಂದು ಗಾಳಿಯನ್ನು ಹೆಚ್ಚಾಗಿ ಹೀರಿ, ಹೆಚ್ಚು ಆಕ್ಸಿಜನ್ನು ಒದಗುವಂತೆ ಮಿದುಳಿಗೆ ರಕ್ತದ ಸರಬರಾಜನ್ನು ಹೆಚ್ಚಿಸಲು ನಿಸರ್ಗ ಹೂಡಿರುವ ತಂತ್ರವೇ ಆಕಳಿಕೆ ಎನ್ನುವುದು ಬಲು ಹಿಂದಿನಿಂದ ಬಂದ ನಂಬಿಕೆ.

ಗುರುವಾರ, ಜುಲೈ 7, 2016

ಶ್ವಾನ ಸ್ವರ್ಗಾರೋಹಣ

ರೋಹಿತ್ ಚಕ್ರತೀರ್ಥ

೧೯೫೭ರ ಚಳಿಗಾಲ. ಅಮೆರಿಕ ಮತ್ತು ಸೋವಿಯೆಟ್ ರಷ್ಯದ ನಡುವೆ ಜಗತ್ತಿನ ದೊಡ್ಡಣ್ಣನಾಗಲು ಶೀತಲ ಸಮರ ಅರ್ಥಾತ್ ಕೋಲ್ಡ್ ವಾರ್ ನಡೆಯುತ್ತಿದ್ದ ಸಮಯ. ಸೋವಿಯಟ್ ರಷ್ಯದ ಅಧ್ಯಕ್ಷ ನಿಕಿಟ ಕ್ರುಶ್ಚೇವ್ ದೇಶದ ಎಲ್ಲ ರಾಕೆಟ್ ತಂತ್ರಜ್ಞರನ್ನು ಒಂದು ಔತಣ ಕೂಟಕ್ಕೆ ಕರೆದಿದ್ದರು. ಸ್ಪುಟ್ನಿಕ್ ೧ರ ಅಭೂತಪೂರ್ವ ಯಶಸ್ಸಿನ ವಿಜಯ ದುಂಧುಬಿಯಾಗಿತ್ತು ಈ ಔತಣ ಕೂಟ. ಸೋವಿಯೆಟ್ ಕೂಟದ ಅಂತರಿಕ್ಷ ಯೋಜನೆಗಳ ಪಿತಾಮಹ ಎಂದೇ ಕರೆಯಲ್ಪಟ್ಟ ಸೆರ್ಗಿ ಕೊರೊಲೆವ್ ಕೂಡ ಅಲ್ಲಿದ್ದರು. ನಿಕಿಟ ಕ್ರುಶ್ಚೇವ್, ನೆರೆದಿದ್ದ ಗಣ್ಯರನ್ನು ಅವರ ಸಾಧನೆಗಳಿಗಾಗಿ ಅಭಿನಂದಿಸಿ, ಸೋವಿಯೆಟ್ ಕೂಟದ ಅಂತರಿಕ್ಷ ಸಾಧನೆಗಳನ್ನು ಕೊಂಡಾಡಿ, ವೋಡ್ಕದ ಗ್ಲಾಸೆತ್ತಿ ಘೋಷಿಸಿದರು: ಇದೇ ವರ್ಷದ ನವೆಂಬರ್ ೭ರಂದು ನಾವು ಬೊಲ್ಶೆವಿಕ್ ಕ್ರಾಂತಿಯ ನಲವತ್ತನೆ ವರ್ಷದ ಸಂಭ್ರಮಾಚರಣೆ ಮಾಡುತ್ತಿದ್ದೇವೆ. ಅದರ ನೆನಪಿಗಾಗಿ ನಮ್ಮ ರಾಷ್ಟ್ರ ಇನ್ನೊಂದು ಸ್ಪುಟ್ನಿಕ್‌ನ್ನು ಅಂತರಿಕ್ಷಕ್ಕೆ ಹಾರಿಬಿಡಬೇಕು!

ನೆರೆದ ತಂತ್ರಜ್ಞರು ಮತ್ತು ವಿಜ್ಞಾನಿಗಳ ಬೆನ್ನುಹುರಿ ಆ ಚಳಿಯ ಕೊರೆತದಲ್ಲೂ 'ಚುಳ್' ಎಂದಿತು!

ಬುಧವಾರ, ಜೂನ್ 29, 2016

ಮನುಷ್ಯನೇಕೆ ಇಷ್ಟು ಬುದ್ಧಿವಂತ ಪ್ರಾಣಿ?

ಕೊಳ್ಳೇಗಾಲ ಶರ್ಮ

ಈ ವಿಶ್ವದಲ್ಲಿ ಇರುವ ಅತ್ಯಂತ ವಿಚಿತ್ರ ಪ್ರಾಣಿ ಯಾವುದು ಗೊತ್ತೇ? ಅದೇ ನಾವು. ನಾವು ಮನುಷ್ಯರಲ್ಲಿ ಇತರೆ ಪ್ರಾಣಿಗಳಿಗಳಿಗಿಲ್ಲದ ಎಷ್ಟೊಂದು ವಿಶೇಷ ಗುಣಗಳಿವೆ ಎಂದರೆ ಬಹುಶಃ ನಮ್ಮನ್ನು ಬೇರಾವುದೋ ಗ್ರಹದ ಜೀವಿಯಿರಬಹುದು ಎಂದು ವರ್ಗೀಕರಿಸಿದರೂ ತಪ್ಪಿಲ್ಲ. ಬೇರಾವುದೋ ಪ್ರಾಣಿ ಯಾಕೆ, ಮನುಷ್ಯನ ಕುಟುಂಬಕ್ಕೇ ಸೇರಿದ ವಾನರಗಳಿಗೂ ನಮಗೂ ಅಜಗಜಾಂತರ ವ್ಯತ್ಯಾಸವಿದೆ. ಎದ್ದು ಕಾಣುವ ಕೆಲವು ವ್ಯತ್ಯಾಸಗಳೆಂದರೆ ನಿರರ್ಗಳ ಮಾತು, ಸಂವಹನ ಕಲೆ, ಸಹಕಾರಿ ಪ್ರವೃತ್ತಿ, ಶಿಶುಪಾಲನೆಯ ಗುಣ, ನೇರ ನಡೆ ಮತ್ತು ಕುಶಲ ಬುದ್ಧಿವಂತಿಕೆ. ಇಷ್ಟೊಂದು ವಿಶಿಷ್ಟ ಗುಣಗಳು ಮಾನವನಿಗಷ್ಟೆ ಬಂದದ್ದೇಕೆ ಎನ್ನುವುದರ ಬಗ್ಗೆ ವಿಜ್ಞಾನಿಗಳಿಗೆ ಅವಿರತ ಕುತೂಹಲ. ಏಕೆಂದರೆ ಈ ಗುಣಗಳಿಂದಾಗಿಯೇ ಮನುಷ್ಯ ಇರುವುದೊಂದೇ ಪ್ರಪಂಚವನ್ನು ಆಳುವಷ್ಟು ಪ್ರಬಲನಾಗಿದ್ದಾನೆ ಎನ್ನಬಹುದು.

ಮತ್ತೊಂದು ದೃಷ್ಟಿಯಿಂದಲೂ ಮನುಷ್ಯ ಬಲು ವಿಶಿಷ್ಟ. ಇಡೀ ವಿಶ್ವವನ್ನೇ ಆಳುವ ಏಕೈಕ ಪ್ರಾಣಿಯೆನ್ನಿಸಿಕೊಂಡಿದ್ದರೂ ಇವನೇನು ಮಹಾ ಬಲಶಾಲಿಯಲ್ಲ.

ಸೋಮವಾರ, ಜೂನ್ 27, 2016

ಲೈಟ್ಸ್! ಆಕ್ಷನ್!! ಕ್ಯಾಮೆರಾ!!!

ಟಿ. ಜಿ. ಶ್ರೀನಿಧಿ 


ಪ್ರವಾಸ ಹೊರಟಾಗ ಜೊತೆಯಲ್ಲಿ ಕ್ಯಾಮೆರಾ ಕೊಂಡೊಯ್ಯುವ ಅಭ್ಯಾಸ ನಮಗೆಲ್ಲ ಗೊತ್ತಿರುವುದೇ. ಹೋದ ಜಾಗ, ಅಲ್ಲಿ ಕಂಡ ದೃಶ್ಯಗಳನ್ನೆಲ್ಲ ಛಾಯಾಚಿತ್ರ ಅಥವಾ ವೀಡಿಯೋ ರೂಪದಲ್ಲಿ ಸೆರೆಹಿಡಿದಿಟ್ಟುಕೊಳ್ಳಲು - ನೆನಪುಗಳನ್ನು ರೂಪಿಸಿಕೊಳ್ಳಲು ಈ ಅಭ್ಯಾಸ ನೆರವಾಗುತ್ತದೆ.

ಮೈಸೂರು ಅರಮನೆಯ ಮುಂದೆ ನಿಂತು, ತಾಜಮಹಲ್ ಎದುರಿನ ಬೆಂಚಿನ ಮೇಲೆ ಕುಳಿತು ಫೋಟೋ ತೆಗೆಸಿಕೊಳ್ಳುವುದು ಸುಲಭ. ಅಂತಹ ಸಂದರ್ಭಗಳಲ್ಲಿ ಮೊಬೈಲ್ ಕ್ಯಾಮೆರಾ ಅಷ್ಟೇ ಏಕೆ, ಇಷ್ಟುದ್ದ ಲೆನ್ಸಿನ ಭಾರೀ ಡಿಎಸ್‌ಎಲ್‌ಆರ್ ಬೇಕಾದರೂ ಜೊತೆಗಿಟ್ಟುಕೊಂಡಿರಬಹುದು.

ಆದರೆ ಕೆಲ ಸಂದರ್ಭಗಳಲ್ಲಿ ಫೋಟೋ ಕ್ಲಿಕ್ಕಿಸಲು ಅದೆಷ್ಟೇ ಆಸೆಯಾಗುತ್ತಿದ್ದರೂ ಕ್ಯಾಮೆರಾ ಹಿಡಿಯುವುದೇ ಸಾಧ್ಯವಾಗುವುದಿಲ್ಲ. ಬೆಟ್ಟದ ಮೇಲೆ ಕಡಿದಾದ ಹಾದಿಯಲ್ಲಿ ನಡೆಯುವುದೇ ಕಷ್ಟವಾದಾಗ ಕ್ಯಾಮೆರಾ ಹಿಡಿಯುವುದಾದರೂ ಹೇಗೆ? ಅದೂ ಒಂದೊಮ್ಮೆ ಸಾಧ್ಯವಾಗಬಹುದೇನೋ. ಆದರೆ ವಿಶ್ವದ ಅತಿ ಎತ್ತರದ ಹೆದ್ದಾರಿಯಲ್ಲಿ ಬೈಕು ಓಡಿಸುವಾಗ, ಹಾರುವ ವಿಮಾನದಿಂದ ಸ್ಕೈ‌ಡೈವಿಂಗ್ ಮಾಡುವಾಗ, ಸಮುದ್ರದಾಳದಲ್ಲಿ ಹವಳಗಳನ್ನು ನೋಡುವಾಗಲೆಲ್ಲ ಫೋಟೋ ತೆಗೆಯಬೇಕೆಂದರೆ??

ಶನಿವಾರ, ಜೂನ್ 25, 2016

ಯಾವ ಸ್ವರ್ಗದ ಹೂವೋ ಈ ಟೆರೆನ್ಸ್ ಟಾವೋ!

ರೋಹಿತ್ ಚಕ್ರತೀರ್ಥ


ಅಡಿಲೇಡ್ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಸ್ನಾತಕೋತ್ತರ ಗಣಿತ ತರಗತಿ. ಕ್ಯಾಲ್ಕುಲಸ್ಸಿನ ಮೇಲೆ ಯಾವುದೋ ಗಹನ ಪ್ರಶ್ನೆಯನ್ನು ಪ್ರೊಫೆಸರ್ ಬೋರ್ಡಿನ ಮೇಲೆ ಬಿಡಿಸುತ್ತಿದ್ದಾರೆ. ಗಣಿತದ ಸಿಕ್ಕುಸಿಕ್ಕಾದ ಸಾಲುಗಳನ್ನು ಒಡೆಯುತ್ತ ಒಂದೊಂದು ಹೆಜ್ಜೆ ಮುಂದುವರಿಯುತ್ತಲೇ ಅವರಿಗೆ ಹಾದಿ ತಪ್ಪಿದ ಅರಿವಾಗಿದೆ. ಜಿಂಕೆಯ ಹಿಂದೆ ಹೋಗಿ ದಾರಿ ತಪ್ಪಿದ ದುಷ್ಯಂತನಂತೆ ಬೆಪ್ಪಾಗಿ ನಿಂತಿದ್ದಾರೆ. ಅವರ ಲೆಕ್ಕದ ತಲೆಬುಡ ಅರ್ಥವಾಗದಿದ್ದರೂ ವಿದ್ಯಾರ್ಥಿಗಳು ಈ ಶೋಕದಲ್ಲಿ ನಾವೂ ಭಾಗವಹಿಸಬೇಕು ಎನ್ನುವಂತೆ ಜೋಲುಮುಖ ಮಾಡಿ ಕೂತಿದ್ದಾರೆ. ಅಷ್ಟರಲ್ಲಿ ಆ ನೀರವ ಮೌನವನ್ನು ಸೀಳಿಕೊಂಡು ಒಂದು ಪುಟಾಣಿ ಕೀರಲು ದನಿ ಬಂದಿದೆ. ಆ ಚೋಟುದ್ದದ ಹುಡುಗ ಎದ್ದುನಿಂತು ಗುರುಗಳು ಎಲ್ಲಿ ತಪ್ಪಿದ್ದಾರೆ ಎನ್ನುವುದನ್ನು ಕರಾರುವಾಕ್ಕಾಗಿ ತೋರಿಸಿ, ಮುಂದಿನ ಸಾಲುಗಳನ್ನು ಹೇಗೆ ಬರೆದರೆ ಈ ತೊಂದರೆಯಿಂದ ಪಾರಾಗಬಹುದು ಎನ್ನುವ ದಾರಿ ತೋರುತ್ತಾನೆ. ಕ್ಷಣಕಾಲ ಎಲ್ಲವನ್ನೂ ಮರೆತು ಅವನ ಮುಖವನ್ನೇ ನೆಟ್ಟದೃಷ್ಟಿಯಿಂದ ನೋಡುವ ಗುರುಗಳು "ವಾಹ್! ಎಂತಹ ಸುಂದರ ಪರಿಹಾರ! ಮತ್ತದಕ್ಕೆ ಎಷ್ಟೊಂದು ಅರ್ಥಪೂರ್ಣವಾದ ನಿರೂಪಣೆ!" ಎಂದು ಮನದುಂಬಿ ಹೇಳಿ ಚಪ್ಪಾಳೆ ತಟ್ಟಿಯೇಬಿಡುತ್ತಾರೆ. ಹುಡುಗನಿಗೆ ಕ್ಲಾಸಿನ ಮುಂದೆ ದೊಡ್ಡವನಾದೆನೆಂಬ ಮುಜುಗರ, ಹಿತವಾದ ರೋಮಾಂಚನ, ಎದೆಯಲ್ಲಿ ಖುಷಿಯ ತಬಲ.

ಯಾಕೆಂದರೆ ಅವನಿಗಿನ್ನೂ ಆಗ, ನಂಬಿದರೆ ನಂಬಿ, ಕೇವಲ ಒಂಬತ್ತು ವರ್ಷ!

ಮಂಗಳವಾರ, ಜೂನ್ 21, 2016

ಮೀನಿನ ಬ್ಯಾಟರಿ!

ಕೊಳ್ಳೇಗಾಲ ಶರ್ಮ


ಈ ವಾರ ಮೀನಿನದ್ದೇ ಸುದ್ದಿ. ಮೊನ್ನೆ ನಮ್ಮೂರ ಐಯಂಗಾರ್ ಬೇಕರಿಯಲ್ಲಿಯೂ ಮಂಗಳೂರಿನಿಂದ ಮೀನಿನ ಸರಬರಾಜು ಕಡಿಮೆಯಾಗಿರುವ ಬಗ್ಗೆ ಭಯಂಕರ ಚರ್ಚೆ ನಡೆದಿತ್ತು. ಈ ವರ್ಷ ಮಳೆರಾಯ ಕಾಲಿಡಲು ಹಿಂಜರಿಯುತ್ತಿರುವ ಕಾರಣ ಕಡಲಮೀನಿನ ಸಂತತಿಯೂ ಕಡಿಮೆಯಾಗಿದೆ ಎನ್ನುವುದು ಚರ್ಚೆ. ಇದರ ಬೆನ್ನಲ್ಲೇ ಇನ್ನೊಂದು ಸುದ್ದಿ. ಮೀನುಗಳು ಮನುಷ್ಯರ ಮುಖಚರ್ಯೆಯನ್ನು ಗುರುತಿಸಬಲ್ಲುವಂತೆ. ಅಂದರೆ ಅವು ನಮ್ಮನ್ನೂ, ನಿಮ್ಮನ್ನೂ ಬೇರೆ ಬೇರೆ ವ್ಯಕ್ತಿಗಳೆಂದು ಗುರುತಿಸಬಲ್ಲವು ಎನ್ನುವ ಸುದ್ದಿ. ಇದಷ್ಟೇ ಸಾಲದು ಎನ್ನುವಂತೆ ಇನ್ನೊಂದು ಸುದ್ದಿಯೂ ಬಂದಿದೆ. ಅದೆಂದರೆ ನಮ್ಮ, ನಿಮ್ಮ ಮೊಬೈಲು ಫೋನುಗಳನ್ನು ಚಾಲಿಸುವಂತಹ ಬ್ಯಾಟರಿ ತಯಾರಿಸುವುದು.

ಷಾಕ್ ಆಯಿತೇ! ಇದೇನು ‘ನಾನ್-ವೆಜ್’ ಬ್ಯಾಟರಿ ಎಂದಿರಾ?

ಸೋಮವಾರ, ಜೂನ್ 20, 2016

ವಿಜ್ಞಾನಲೋಕಕ್ಕೆ ಹತ್ತರ ಹರ್ಷ

ಟಿ. ಜಿ. ಶ್ರೀನಿಧಿ

ವಿಜ್ಞಾನ-ತಂತ್ರಜ್ಞಾನಗಳ ವಿಷಯಕ್ಕೆ ಬಂದರೆ ಅವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದು. ಆದರೆ ಮುಖ್ಯವಾಹಿನಿಯ ಪತ್ರಿಕೆಗಳಲ್ಲಿ ಈ ವಿಷಯಕ್ಕೆ ಎಷ್ಟು ತಾನೇ ಜಾಗ ನೀಡಲು ಸಾಧ್ಯ?

ಹಾಗೆಂದು ಸುಮ್ಮನಿರುವುದೂ ಸಾಧ್ಯವಿಲ್ಲವಲ್ಲ! ಈ ಕೊರತೆಯನ್ನು ತುಂಬಿಕೊಡಲು ವಿಜ್ಞಾನ ಪತ್ರಿಕೆಗಳು ಪ್ರಯತ್ನಿಸುತ್ತವೆ. ಸಾಮಾನ್ಯ ಪತ್ರಿಕೆಗಳಿಗಿಂತ ಹೆಚ್ಚು ಪ್ರಮಾಣದ ಮಾಹಿತಿಯನ್ನು ಆದಷ್ಟೂ ಹೆಚ್ಚು ವಿವರಗಳೊಡನೆ ನೀಡುವ ಸಾಧ್ಯತೆ ಈ ಪತ್ರಿಕೆಗಳ ವೈಶಿಷ್ಟ್ಯ. ವಿಷಯ ಕ್ಲಿಷ್ಟವೆಂದು ಸಾಮಾನ್ಯ ಪತ್ರಿಕೆಗಳಲ್ಲಿ ಜಾಗಪಡೆಯದ ಸಂಗತಿಗಳನ್ನೂ ಇವು ಓದುಗರಿಗೆ ತಲುಪಿಸಬಲ್ಲವು.

ಕನ್ನಡದಲ್ಲಿ ಅನೇಕ ವಿಜ್ಞಾನ ಪತ್ರಿಕೆಗಳು ಬಂದುಹೋಗಿವೆ. ಒಂದು ಶತಮಾನದಷ್ಟು ಹಿಂದೆ ಬೆಳ್ಳಾವೆ ವೆಂಕಟನಾರಣಪ್ಪನವರು ಪ್ರಾರಂಭಿಸಿ ನಡೆಸಿದ 'ವಿಜ್ಞಾನ'ದಿಂದ ಇತ್ತೀಚಿನವರೆಗೂ ಅನೇಕ ಪತ್ರಿಕೆಗಳು ಕನ್ನಡದ ಓದುಗರನ್ನು ತಲುಪಲು ಪ್ರಯತ್ನಿಸಿವೆ.

ಗುರುವಾರ, ಜೂನ್ 16, 2016

ಹೀಗೊಂದು ಗಣಿತದ ಕತೆ: ಶಿಷ್ಯರ ಬುದ್ಧಿವಂತಿಕೆ

ರೋಹಿತ್ ಚಕ್ರತೀರ್ಥ

ಛಲ ಬಿಡದ ತ್ರಿವಿಕ್ರಮನು, ಮತ್ತೆ, ಆ ಹಳೇ ಮರದ ಕೊಂಬೆಗೆ ಹಾರಿಹೋಗಿ ತಲೆಕೆಳಗಾಗಿ ನೇತುಬಿದ್ದಿದ್ದ ಬೇತಾಳವನ್ನು ಇಳಿಸಿ ಬೆನ್ನಿಗೆ ಹಾಕಿಕೊಂಡು ಕಾಡಿನ ದಾರಿಯಲ್ಲಿ ನಡೆಯತೊಡಗಿದನು. ಆಗ ಬೇತಾಳವು, "ರಾಜಾ, ಮರಳಿ ಯತ್ನವ ಮಾಡು ಎಂಬ ಮಾತಿನಲ್ಲಿ ನೂರಕ್ಕೆ ನೂರರಷ್ಟು ನಂಬಿಕೆ ಇಟ್ಟು ದೃಢ ಮನಸ್ಸಿನಿಂದ ಕೆಲಸ ಮಾಡುತ್ತಿರುವ ನಿನ್ನ ಅವಸ್ಥೆಯನ್ನು ಕಂಡಾಗ ಮೆಚ್ಚುಗೆಯೂ ಕನಿಕರವೂ ಒಟ್ಟಿಗೇ ಮೂಡುತ್ತವೆ. ಒಂದೇ ಕೆಲಸವನ್ನು ಮತ್ತೆಮತ್ತೆ ಮಾಡುವ ಸಂದರ್ಭ ಬಂದಾಗ, ಅದನ್ನು ಸರಳಗೊಳಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆಯಾದರೂ ನೀನು ಯೋಚಿಸುವುದು ಬೇಡವೇ? ಅದಕ್ಕೆ ತಕ್ಕ ಹಾಗೆ ಒಂದು ಕತೆ ನನಗೆ ನೆನಪಾಗುತ್ತಿದೆ. ಗಮನವಿಟ್ಟು ಕೇಳು" ಎಂದು ತನ್ನ ಕತೆಯ ಬುಟ್ಟಿ ಬಿಚ್ಚಿತು.

ಅದು ಮೂರನೇ ತರಗತಿ. ಕ್ಲಾಸಿನೊಳಗೆ ಬಂದ ಮೇಸ್ಟ್ರಿಗೆ ಅಂದೇಕೋ ಮಹಾಜಾಡ್ಯ ಆವರಿಸಿದಂತಿದೆ. ಈ ಮಕ್ಕಳಿಗೆ ಸುಲಭಕ್ಕೆ ಬಿಡಿಸಲಾಗದ ಲೆಕ್ಕ ಕೊಟ್ಟು ಅರ್ಧ-ಮುಕ್ಕಾಲು ಗಂಟೆ ಒದ್ದಾಡಿಸಿಬಿಟ್ಟರೆ ತನ್ನ ಪೀರಿಯಡ್ಡು ಮುಗಿಯುತ್ತದೆ ಎಂಬ ಹಂಚಿಕೆ ಹಾಕಿದವರೇ "ಒಂದರಿಂದ ನೂರರವರೆಗಿನ ಎಲ್ಲ ಸಂಖ್ಯೆಗಳ ಮೊತ್ತ ಎಷ್ಟು ಹುಡುಕಿ ನೋಡುವಾ" ಎಂದು ಸವಾಲು ಹಾಕಿ ಕುರ್ಚಿಯಲ್ಲಿ ಸುಖಾಸೀನರಾಗಿದ್ದಾರೆ. ಮೇಸ್ಟ್ರು ಕಾಲ ಅಂಗುಷ್ಠದಲ್ಲಿ ಹೇಳಿದ್ದನ್ನು ಭಕ್ತಿಯಿಂದ ಶಿರಸಾವಹಿಸಿ ಮಾಡುವ ಮಕ್ಕಳು ಕೂಡಲೇ ಹಲಗೆ ಬಳಪ ಎತ್ತಿಕೊಳ್ಳುತ್ತಾರೆ. ತಮ್ಮ ಶಕ್ತ್ಯಾನುಸಾರ ಪ್ರಶ್ನೆಯ ಚಕ್ರವ್ಯೂಹವನ್ನು ಭೇದಿಸಲು ಸನ್ನದ್ಧರಾಗುತ್ತಾರೆ.

ಮಂಗಳವಾರ, ಜೂನ್ 14, 2016

ಸೀನಿನ ಲೆಕ್ಕಾಚಾರ!

ಕೊಳ್ಳೇಗಾಲ ಶರ್ಮ


ನಾನು ಸೀನಿದಾಗಲೆಲ್ಲ ಕೇಳುತ್ತಿದ್ದ ಮಾತು. “ಅಯ್ಯೋ. ಒಂಟಿ ಸೀನು ಸೀನಿಬಿಟ್ಟೆಯಲ್ಲೋ? ಇನ್ನೊಂದು ಸೀನು ಸೀನಿಬಿಡು.” ಇದು ಅಮ್ಮ ಸೀನಿನಿಂದ ನಾನು ಪಡುತ್ತಿದ್ದ ಅವಸ್ಥೆಯನ್ನು ಕಂಡು ತಮಾಷೆ ಮಾಡಲು ಹೇಳುತ್ತಿದ್ದಳೋ, ಅಥವಾ ಸೀನಿದ್ದರಿಂದಾದ ಮುಜುಗರ ಕಡಿಮೆಯಾಗುವಂತೆ ಸಮಾಧಾನ ಮಾಡಲು ಹೇಳುತ್ತಿದ್ದಳೋ ಗೊತ್ತಿಲ್ಲ. ಒಟ್ಟಾರೆ ಸೀನುವುದು ಎಂದರೆ ಕಸಿವಿಸಿಯ ವಿಷಯ ಎನ್ನುವುದಂತೂ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಯಾಗಿ ಬಿಟ್ಟಿದೆ. ಅಮ್ಮ ಏನೋ ಇನ್ನೊಮ್ಮೆ ಸೀನು ಎಂದು ಬಿಡುತ್ತಿದ್ದಳು. ಆದರೆ ಹಾಗೆ ಬೇಕೆಂದ ಹಾಗೆ, ಬೇಕಾದಷ್ಟು ಬಾರಿ ಸೀನಲು ಆದೀತೇ? ಅದೇನು ನಮ್ಮ ಮಾತು ಕೇಳುವ ವಿದ್ಯಮಾನವೇ?

ಹೀಗೆಂದು ನಾವು ನೀವು ಹೇಳಿಬಿಡಬಹುದು. ಆದರೆ ಅಮೆರಿಕದ ತಂತ್ರಜ್ಞಾನದ ಕಾಶಿ ಮಸ್ಯಾಚುಸೆಟ್ಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಯಲ್ಲಿ ಭೌತವಿಜ್ಞಾನಿಯಾಗಿರುವ ಲಿಡಿಯಾ ಬೋರೊಯಿಬಾ ಹೀಗೆನ್ನುವುದಿಲ್ಲ. ಹಾಗಂತ ಆಕೆಗೆ ಸದಾ ಸೀನುವ ಖಾಯಿಲೆ ಇದೆ ಎನ್ನಬೇಡಿ. ಆಕೆ ಸೀನಿನ ಭೌತಶಾಸ್ತ್ರವನ್ನು ಲೆಕ್ಕ ಹಾಕುತ್ತಿರುವ ವಿಜ್ಞಾನಿ ಅಷ್ಟೆ. ಬೇಕೆಂದಾಗ ನಿಮಗೆ ಸೀನು ತರಿಸಿ, ನೀವು ಸೀನುವ ಸಂದರ್ಭದಲ್ಲಿ ನಡೆಯುವ ವಿದ್ಯಮಾನವನ್ನು ಕೂಲಂಕಷವಾಗಿ ಲೆಕ್ಕಾಚಾರ ಹಾಕುವ ಕೆಲಸದಲ್ಲಿ ಲಿಡಿಯಾ ನಿರತೆ. ಈಕೆಯ ಪ್ರಕಾರ ಸೀನುವ ಬಗ್ಗೆ ನಮಗೆ ಹೆಚ್ಚೇನೂ ತಿಳಿದಿಲ್ಲವಂತೆ.

ನಿಜ. ಮೂಗಿಗೆ ಒಂದಿಷ್ಟು ಕಿರಿಕಿರಿಯಾದಾಗ ಫಟಾರನೆ ಆಗುವ ಮಹಾಸ್ಫೋಟವೇ ಸೀನು.

ಬುಧವಾರ, ಜೂನ್ 8, 2016

ಗ್ಯಾಜೆಟ್ ಇಜ್ಞಾನ: ಹೊಸ ಲೆನೋವೋ‌ ಫೋನ್ ಸದ್ಯದಲ್ಲೇ ಮಾರುಕಟ್ಟೆಗೆ

ಟಿ. ಜಿ. ಶ್ರೀನಿಧಿ



ಅಪ್‌ಡೇಟ್: ಲೆನೋವೋ ವೈಬ್ K5 ರೂ. ೬,೯೯೯ರ ಮುಖಬೆಲೆಯೊಡನೆ ಬಿಡುಗಡೆಯಾಗಿದೆ. 

ಈಚಿನ ದಿನಗಳಲ್ಲಿ ನಮ್ಮ ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುವೇ ಇಲ್ಲ. ಹಲವು ಮೊಬೈಲ್ ನಿರ್ಮಾತೃಗಳ ಹತ್ತಾರು ಮಾದರಿಯ ಹೊಸ ಫೋನುಗಳು ಸದಾಕಾಲ ಸುದ್ದಿಮಾಡುತ್ತಲೇ ಇರುತ್ತವೆ.

ಈ ಬಿಡುವಿಲ್ಲದ ಚಟುವಟಿಕೆಯಿಂದಾಗಿ ಮೊಬೈಲ್ ಗ್ರಾಹಕರಿಗೆ ಲಭ್ಯವಿರುವ ಆಯ್ಕೆಗಳು ದಿನೇದಿನೇ ಹೆಚ್ಚುತ್ತಿವೆ. ಅಷ್ಟೇ ಅಲ್ಲ, ಮೊಬೈಲಿನಲ್ಲಿ ದೊರಕುವ ಸೌಲಭ್ಯಗಳೂ ಹೆಚ್ಚುತ್ತಿವೆ. ಮೊದಲಿಗೆ ದುಬಾರಿ ಫೋನುಗಳಲ್ಲಷ್ಟೆ ಕಾಣಿಸಿಕೊಂಡ ಅದೆಷ್ಟೋ ಅನುಕೂಲಗಳು ಅವುಗಳ ಹೋಲಿಕೆಯಲ್ಲಿ ಸಾಕಷ್ಟು ಕಡಿಮೆ ಬೆಲೆಯ ಮಾದರಿಗಳಲ್ಲೂ ಸಿಗುತ್ತಿವೆ. ಹಾಗಾಗಿಯೇ ಏನೋ, ಹತ್ತು ಸಾವಿರ ರೂಪಾಯಿಯ ಆಸುಪಾಸಿನಲ್ಲಿ ಸಾಕಷ್ಟು ಉತ್ತಮವಾದ ಫೋನ್ ಕೊಳ್ಳುವುದು ಇದೀಗ ಸಾಧ್ಯವಾಗಿದೆ.

ಹಾಗೆಂದು ಎಲ್ಲಾದರೂ ಸುಮ್ಮನಿರುವುದು ಸಾಧ್ಯವೇ, ಉತ್ತಮ ಮೊಬೈಲ್ ಫೋನುಗಳನ್ನು ಅದಕ್ಕಿಂತ ಕಡಿಮೆ ಬೆಲೆಯಲ್ಲಿ ನೀಡುವ ಪ್ರಯತ್ನಗಳೂ ಸಾಗಿವೆ. ಕಳೆದ ವರ್ಷ ಮಾರುಕಟ್ಟೆಗೆ ಬಂದು ಭಾರೀ ಜನಪ್ರಿಯತೆ ಗಳಿಸಿಕೊಂಡಿದ್ದ ಲೆನೋವೋ A6000 ಹಾಗೂ A6000 ಪ್ಲಸ್ ಇಂತಹ ಫೋನುಗಳಿಗೆ ಉತ್ತಮ ಉದಾಹರಣೆಗಳು.

ಈ ಪ್ರಯತ್ನದ ಮುಂದುವರೆದ ಅಂಗವಾಗಿ ಲೆನೋವೋ ಸಂಸ್ಥೆ ತನ್ನ 'ವೈಬ್ K5' ಮಾದರಿಯನ್ನು ಈ ತಿಂಗಳು (ಜೂನ್ ೨೦೧೬) ಭಾರತೀಯ ಮಾರುಕಟ್ಟೆಗೆ ಬಿಡುಗಡೆಮಾಡುವ ನಿರೀಕ್ಷೆಯಿದೆ.

ಮಂಗಳವಾರ, ಜೂನ್ 7, 2016

ಪ್ರಣಯದಾಟವೂ ಕಾಂತಶಕ್ತಿಯೂ

ಕೊಳ್ಳೇಗಾಲ ಶರ್ಮ

ಪ್ರಣಯದಾಟ ಕಾಂತ-ಕಾಂತೆಯರ ನಡುವೆ ನಡೆಯುತ್ತದೆ. ಅದರಲ್ಲನೇನು ವಿಶೇಷ? ಎಂದಿರಾ? ನಿಜ. ಪ್ರಣಯದಾಟ ಗಂಡು-ಹೆಣ್ಣಿನ ನಡುವಿನ ಆಕರ್ಷಣೆಯ ಫಲ. ಗಂಡು ಹೆಣ್ಣನ್ನು ಆಕರ್ಷಿಸುತ್ತದೋ, ಹೆಣ್ಣು ಗಂಡನ್ನು ಆಕರ್ಷಿಸುತ್ತದೋ, ಗೊತ್ತಿಲ್ಲ. ಒಟ್ಟಾರೆ ಸಂತಾನಾಭಿವೃದ್ಧಿಯಲ್ಲಿ ಪ್ರಣಯದಾಟಗಳು ಪ್ರಮುಖ ಪಾತ್ರ ವಹಿಸುತ್ತವೆನ್ನುವುದು ಮಾತ್ರ ನಿಜ. ಈ ಆಟ ಕೇವಲ ಹೆಣ್ಣು, ಗಂಡಿನ ನಡುವಿನ ಆಕರ್ಷಣೆಯಲ್ಲ. ಇದರಲ್ಲಿ ಈ ಭೂಮಿಯ ಕಾಂತ ಶಕ್ತಿಯ ಪ್ರಭಾವವೂ ಇದೆಯಂತೆ.

ಗಂಡು-ಹೆಣ್ಣಿನ ನಡುವೆ ನಡೆಯುವ ಪ್ರಣಯಕೇಳಿಯನ್ನು ವಿದ್ಯುತ್ ಅಥವಾ ಅಯಸ್ಕಾಂತ ಶಕ್ತಿಯು ಪ್ರಭಾವಿಸುತ್ತದೆನ್ನುವ ಸ್ವಾರಸ್ಯಕರ (ಶಾಕಿಂಗ್ ಸುದ್ದಿ ಅಂದರೂ ಸರಿಯೇ. ಆಕರ್ಷಕ ಸುದ್ದಿ ಅಂದರೂ ಸರಿಯೇ!) ಸುದ್ದಿಯನ್ನು ತೈವಾನಿನ ಚಾಂಗ್ ಗುನ್ ವಿವಿಯ ವಿಜ್ಞಾನಿ ಚಿಯಾಲಿನ್ ವೂ ಮತ್ತು ಸಂಗಡಿಗರು ಇತ್ತೀಚಿನ ಪಿಎಲ್ಓಎಸ್ ಒನ್ ಪತ್ರಿಕೆಯಲ್ಲಿ ವರದಿ ಮಾಡಿದ್ದಾರೆ.

ಗುರುವಾರ, ಜೂನ್ 2, 2016

ಗತಿಸಿಹೋದವು ಆ ದಿನಗಳು!

ರೋಹಿತ್ ಚಕ್ರತೀರ್ಥ

"ನಮ್ ಕಾಲದಲ್ಲಿ ನೋಡಬೇಕಿತ್ತು!" ಎಂದೇ ಹಲವು ಹಿರಿಯರ ಕತೆಗಳು ಶುರುವಾಗುವುದು. ಹಿಂದಿನ ಕಾಲದಲ್ಲಿ ಏನಿತ್ತು? ಫಾಸ್ಟ್ ಟ್ರೇನು, ಏರೋಪ್ಲೇನುಗಳು ಇರಲಿಲ್ಲ. ಕಾಗದ, ತಂತಿ ಬಿಟ್ಟರೆ ಬೇರಾವ ಸಂವಹನ ಮಾಧ್ಯಮವೂ ಇರಲಿಲ್ಲ. ಕಪ್ಪುಬಿಳುಪು ಟಿವಿಯಲ್ಲಿ ದೂರದರ್ಶನ ಹಾಕಿದ್ದನ್ನೇ ಮೂರು ಹೊತ್ತು ನೋಡುತ್ತ ಕೂರಬೇಕಿತ್ತು. ಫೇಸ್‌ಬುಕ್ ಬಿಡಿ, ಈಗಿನವರಿಗೆ ಪರಿಚಯವಿಲ್ಲದ ಮೈಸ್ಪೇಸ್, ಆರ್ಕುಟ್ ಮುಂತಾದ ಪಳೆಯುಳಿಕೆಗಳು ಕೂಡ ಇರದ ಕಾಲ ಅದು. ಅಂಥಾದ್ದರಲ್ಲಿ ಯಾವ ಸುಖ-ಸೌಕರ್ಯ ಇಲ್ಲದ ಆ ಶಿಲಾಯುಗವನ್ನು ಗೋಲ್ಡನ್ ಏಜ್ ಅಂತೀರಲ್ಲ, ತಲೆ ಕೆಟ್ಟಿದೆಯೇ ಎಂದು ಈಗಿನವರು ಕೇಳಿಯಾರು. ತಡೆಯಿರಿ, ಇನ್ನೈವತ್ತು ವರ್ಷಗಳು ಹೋದರೆ ಇದೇ ಮಂದಿ "ನಮ್ಮ ಕಾಲದಲ್ಲಿ ಎಷ್ಟೊಂದು ಚೆನ್ನಿತ್ತು! ಸಂವಹನಕ್ಕೆ ಸ್ಮಾರ್ಟ್ ಫೋನ್ ಬಿಟ್ಟರೆ ಬೇರೇನಿರಲಿಲ್ಲ!" ಎನ್ನುವ ಕಾಲ ಬರುತ್ತದೆ.

ಮಂಗಳವಾರ, ಮೇ 31, 2016

ಅಪ್ಪನ ಬೆಲೆ ಏನು ಗೊತ್ತೇ?

ಕೊಳ್ಳೇಗಾಲ ಶರ್ಮ

Frédéric SALEIN / Wikimedia Commons

ಮನೆ ಜಗಳದ ವಿಷಯ ಅಲ್ಲ ಬಿಡಿ. ಇದು ಜೀವಿವಿಜ್ಞಾನದ ವಿಸ್ಮಯ. ಹೌದು. ಜೀವಿಗಳಲ್ಲಿ ಗಂಡು ಹೆಣ್ಣು ಎನ್ನುವ ಭೇದವನ್ನು ಯಃಕಶ್ಚಿತ್ ಕೀಟಗಳಿಂದ ಮಾನವನವರೆಗೂ ಕಾಣುತ್ತೇವೆ. ಜೀವಿಗಳ ಬೆಳೆವಣಿಗೆ, ಉಳಿವಿಗೆ ಹೆಣ್ಣಿನ ಕೊಡುಗೆ ಏನೆಂಬುದನ್ನು ವಿವರಿಸಬೇಕಿಲ್ಲ. ನೂರಾರು ಸಂತಾನವನ್ನು ಹೆರುವ ಹೊಣೆ ಹೆಣ್ಣಿನದ್ದೇ. ಅದಕ್ಕೇ ಅದಕ್ಕೆ ಅಮ್ಮನ ಪಟ್ಟ. ಹಾಗಿದ್ದರೆ ಗಂಡಿನ ಪಾತ್ರವೇನು? ಕೇವಲ ಸಂತಾನಾಭಿವೃದ್ಧಿ ಮಾಡಲಿ ಎಂದು ಹೆಣ್ಣಿಗೆ ವೀರ್ಯಾಣುವನ್ನು ಕೊಡುವುದಷ್ಟೆ ಗಂಡಿನ ಕೆಲಸವೆ? ಅಥವಾ ಅದಕ್ಕಿಂತಲೂ ಹೆಚ್ಚಿನದೇನಾದರೂ ಇದೆಯೋ? ಇದು ಪ್ರಶ್ನೆ.

ಈ ಪ್ರಶ್ನೆಯೊಳಗೆ ಅಡಗಿದೆ ಅಪ್ಪನ ಕುರಿತ ಇನ್ನೊಂದು ಪ್ರಶ್ನೆ.

ಭಾನುವಾರ, ಮೇ 29, 2016

ಜೆನ್‌ಫೋನ್ ಮ್ಯಾಕ್ಸ್ ಇದೀಗ ಇನ್ನಷ್ಟು ಶಕ್ತಿಶಾಲಿ!

ಟಿ. ಜಿ. ಶ್ರೀನಿಧಿ

ಮೊಬೈಲ್ ಫೋನಿನ ಬ್ಯಾಟರಿ ಕೈಕೊಟ್ಟಾಗ ಬಳಸಲೆಂದು ಪವರ್ ಬ್ಯಾಂಕ್ ಇಟ್ಟುಕೊಂಡಿರುವುದು ನಮಗೆಲ್ಲ ಅಭ್ಯಾಸವಾಗಿದೆ. ಆ ಪವರ್‌ಬ್ಯಾಂಕ್ ನಮ್ಮ ಫೋನಿನಲ್ಲೇ ಇರುವಂತಿದ್ದರೆ? ನಮ್ಮ ಗೆಳೆಯರ ಫೋನಿನ ಬ್ಯಾಟರಿಯನ್ನು ಅದರಿಂದಲೇ ಚಾರ್ಜ್ ಮಾಡುವಂತಿದ್ದರೆ?

ಐದು ಸಾವಿರ ಎಂಎ‌ಎಚ್ ಸಾಮರ್ಥ್ಯದ ಬ್ಯಾಟರಿಯೊಡನೆ ಈ ಕನಸನ್ನು ನನಸಾಗಿಸಿರುವ ಏಸಸ್ ಜೆನ್‌ಫೋನ್ ಮ್ಯಾಕ್ಸ್ ಮೊಬೈಲಿನ ಪರಿಚಯ ಈ ಹಿಂದೆ ಇಜ್ಞಾನ ಡಾಟ್ ಕಾಮ್‌ನಲ್ಲಿ ಪ್ರಕಟವಾಗಿತ್ತು [ಮೊಬೈಲೂ ಹೌದು, ಪವರ್‌ಬ್ಯಾಂಕೂ ಹೌದು!]. ಈ ವಿಶಿಷ್ಟ ಮೊಬೈಲಿನ ಹೊಸ ಆವೃತ್ತಿಯನ್ನು ಇದೀಗ ಪರಿಚಯಿಸಲಾಗಿದೆ ಎನ್ನುವುದು ಇಂದಿನ ಸುದ್ದಿ.

ಏಸಸ್ ಜೆನ್‌ಫೋನ್ ಮ್ಯಾಕ್ಸ್‌ನ ಈ ಹೊಸ ಆವೃತ್ತಿ ಹೆಚ್ಚು ಶಕ್ತಿಶಾಲಿ ಪ್ರಾಸೆಸರ್, ಹೆಚ್ಚು ಶೇಖರಣಾ ಸಾಮರ್ಥ್ಯ, ಹೆಚ್ಚು ಸಾಮರ್ಥ್ಯದ ರ್‍ಯಾಮ್ ಆಯ್ಕೆಗಳು ಹಾಗೂ ಆಂಡ್ರಾಯ್ಡ್‌ನ ಲೇಟೆಸ್ಟ್ ಆವೃತ್ತಿಯೊಡನೆ (೬.೦.೧, ಮಾರ್ಶ್‌ಮೆಲ್ಲೋ) ಮಾರುಕಟ್ಟೆಗೆ ಬಂದಿದೆ.

ಗುರುವಾರ, ಮೇ 26, 2016

ಇಜ್ಞಾನ ವಿಶೇಷ ಲೇಖನ: ಮಿದುಳು ಎಂಬ ಹೆಡ್ಡಾಫೀಸು

ರೋಹಿತ್ ಚಕ್ರತೀರ್ಥ

ಗಿರೀಶ ಕಾರ್ನಾಡರ "ಹಯವದನ" ನಾಟಕದಲ್ಲಿ ಒಂದು ಪ್ರಸಂಗ ಬರುತ್ತದೆ. ಕಪಿಲ ಮತ್ತು ದೇವದತ್ತ ಎಂಬ ಇಬ್ಬರು ಗೆಳೆಯರು ಕಾಳಿಯ ದೇಗುಲದಲ್ಲಿ ಕತ್ತಿ ಹಿರಿದು ಹೋರಾಡಿ ಪರಸ್ಪರರ ರುಂಡಗಳನ್ನು ಕಡಿದುಹಾಕುತ್ತಾರೆ. ದೇವದತ್ತನ ಪತ್ನಿ ಪದ್ಮಿನಿ ಅಲ್ಲಿಗೆ ಬಂದು, ಕಡಿದು ಚೆಲ್ಲಿದ ದೇಹಗಳನ್ನು ನೋಡಿ ಭಯಭೀತಳಾದಾಗ ಕಾಳಿ ಪ್ರತ್ಯಕ್ಷಳಾಗಿ, ಅವರಿಬ್ಬರ ರುಂಡಗಳನ್ನೂ ಮರಳಿ ದೇಹಗಳಿಗೆ ಜೋಡಿಸಿಟ್ಟರೆ ತಾನವರಿಗೆ ಜೀವ ಕೊಡುತ್ತೇನೆಂದು ಹೇಳುತ್ತಾಳೆ. ಗಡಿಬಿಡಿಯಲ್ಲಿ ಪದ್ಮಿನಿ ಕಪಿಲನ ತಲೆಯನ್ನು ದೇವದತ್ತನಿಗೂ ದೇವದತ್ತನದನ್ನು ಕಪಿಲನಿಗೂ ಜೋಡಿಸಿಡುತ್ತಾಳೆ. ಈ ಆಟವನ್ನು ನೋಡಿಯೂ ವಿಧಿಲಿಖಿತ ಎಂದು ಸುಮ್ಮನಿರುವ ಕಾಳಿ ಅವರಿಗೆ ಜೀವ ಕೊಟ್ಟುಬಿಡುತ್ತಾಳೆ. ಈಗ ಪದ್ಮಿನಿಯ ಗಂಡ ಯಾರು? ಕಪಿಲನೋ ದೇವದತ್ತನೋ? ಅಸಲಿಗೆ ಯಾರು ಕಪಿಲ ಯಾರು ದೇವದತ್ತ, ಎಂಬ ತಾತ್ತ್ವಿಕಸಮಸ್ಯೆ ಹುಟ್ಟುತ್ತದೆ. ಒಬ್ಬ ಋಷಿಯ ಬಳಿ ಹೋದಾಗ ಅವನು ಅಂಗಗಳಲ್ಲಿ ತಲೆಯೇ ಉತ್ತಮಾಂಗ. ಹಾಗಾಗಿ ದೇವದತ್ತನ ತಲೆಯಿರುವವನೇ ದೇವದತ್ತ ಎಂದು ತೀರ್ಪು ಕೊಡುತ್ತಾನೆ.

ಮನುಷ್ಯನಿಗೆ ತಲೆ ಎಷ್ಟು ಮುಖ್ಯ? ಅವನ ಅಸ್ತಿತ್ವಕ್ಕೆ ಅರ್ಥವಂತಿಕೆ ತರುವ ಭಾಗ ಯಾವುದು ಎಂಬ ಚರ್ಚೆ ಶತಶತಮಾನಗಳಿಂದ ನಡೆದುಬಂದಿದೆ.

ಮಂಗಳವಾರ, ಮೇ 24, 2016

ಅನ್ಯಗ್ರಹ ಜೀವಿಗಳು ಹೇಗಿರಬಹುದು?

ಕೊಳ್ಳೇಗಾಲ ಶರ್ಮ

ಮಂಗಳನಿಂದಲೋ, ಶುಕ್ರನಿಂದಲೋ ಜೀವಿಗಳು ಭೂಮಿಗೆ ಬಂದು ಇಳಿದರೆ ಏನಪ್ಪಾ ಅನ್ನುವ ಆತಂಕ ಇಂದು ನಿನ್ನೆಯದಲ್ಲ. ಸುಮಾರು 120 ವರ್ಷಗಳ ಹಿಂದೆ ಸುಪ್ರಸಿದ್ಧ ಆಂಗ್ಲ ಲೇಖಕ ಹೆಚ್. ಜಿ. ವೆಲ್ಸ್ 'ದಿ ವಾರ್ ಆಫ್ ದಿ ವರ್ಲ್ಡ್ಸ್' (ಲೋಕಗಳ ಕದನ) ಎನ್ನುವ ಪುಸ್ತಕವನ್ನು ಬರೆದಿದ್ದ. ಫ್ರೆಂಚರು ಮತ್ತು ಆಂಗ್ಲರ ನಡುವಿನ ಯುದ್ಧಗಳ ವಿಡಂಬನೆಯಾಗಿದ್ದ ಈ ಕಥೆಯಲ್ಲಿ ಮಂಗಳಗ್ರಹವಾಸಿಗಳು ಇಂಗ್ಲೆಂಡಿನ ಮೇಲೆ ಆಕ್ರಮಣ ಮಾಡಿದರೆಂದಿತ್ತು. ಇದೇ ಕಥೆಯನ್ನು ಕೆಲವು ದಶಕಗಳ ಅನಂತರ ಅಮೆರಿಕದ ರೇಡಿಯೋ ಒಂದು ನಾಟಕವನ್ನಾಗಿ ಪ್ರಸಾರ ಮಾಡಿದಾಗ, ಆಗಷ್ಟೆ ಎರಡನೇ ಮಹಾಯುದ್ಧದ ಬಿಸಿಯನ್ನು ಕಂಡಿದ್ದ ಅಮೆರಿಕನ್ನರು, ನಾಟಕವನ್ನೇ ನಿಜವೆಂದು ತಿಳಿದು ಬೆಚ್ಚಿ ಬಿದ್ದಿದ್ದು ಚರಿತ್ರೆ. ಒಟ್ಟಾರೆ ಅನ್ಯಗ್ರಹವಾಸಿಗಳು ಎಂದರೆ ಬೆಚ್ಚುವ ಬೆದರುವವರೇ ಜಾಸ್ತಿ. ನಮ್ಮಲ್ಲೂ ಅನ್ಯಗ್ರಹವಾಸಿಗಳ ಬಗ್ಗೆ ಇರುವ ಕಲ್ಪನೆಗಳು ಸುಂದರವೇನಲ್ಲ! ನಾಗಲೋಕ, ನರಕಲೋಕ ಎಂದೆಲ್ಲ ಹೇಳುವ ವಿಚಿತ್ರ ವಿಶ್ವದ ಜೀವಿಗಳು ಅತ್ತ ಮಾನವರೂ ಅಲ್ಲದ, ಇತ್ತ ಪ್ರಾಣಿಗಳೂ ಅಲ್ಲದ ರೂಪಗಳು. 

ಯಾವುದೋ ಜೀವಿಯ ತಳಿಗುಣವನ್ನು ಇನ್ಯಾವುದೋ ಜೀವಿಗೆ ತಳುಕಿಸುವಷ್ಟು ಜೀವವಿಜ್ಞಾನದ ಅರಿವನ್ನು ಪಡೆದಿರುವ ಇಂದಿನ ದಿನಗಳಲ್ಲಿಯೂ, ಅನ್ಯಗ್ರಹಜೀವಿಗಳ ಬಗ್ಗೆ ಇದೇ ಬಗೆಯ ಕಲ್ಪನೆಗಳೇ ಚಾಲ್ತಿಯಲ್ಲಿವೆ ಎನ್ನುವುದು ವಿಚಿತ್ರವಾದರೂ ಸತ್ಯ. ಕೆಲವು ಕಥೆಗಳಲ್ಲಿಯಂತೂ ಹುಳುಗಳಂತೆ ಕಾಣುವ ದೈತ್ಯ ಜೀವಿಗಳು ಭೂಮಿಯನ್ನು ದಂಡೆತ್ತಿ ಬರುವಂತೆ ತೋರಿಸಲಾಗುತ್ತದೆ. ಇನ್ನು ಕೆಲವು ಕಲ್ಪನೆಗಳಲ್ಲಿ ಅನ್ಯಗ್ರಹಜೀವಿಗೆ ಇರುವ ಅದ್ಭುತ ಶಕ್ತಿ, ಸಾಮರ್ಥ್ಯಗಳು ಬೆರಗುಗೊಳಿಸುತ್ತವೆ. ಉದಾಹರಣೆಗೆ, ಹೃತಿಕ್ ರೋಷನ್ ನಟಿಸಿದ 'ಕ್ರಿಷ್' ಚಿತ್ರದಲ್ಲಿ ಅನುವಂಶೀಯವಾಗಿ ಪೆದ್ದನಾಗಿರುವ ಹೃತಿಕ್ ರೋಷನ್ ಅನ್ಯಗ್ರಹಜೀವಿಯೊಂದರ ಜೊತೆಗೆ ಗೆಳೆತನ ಬೆಳೆಸುತ್ತಾನೆ. ಆ ಜೀವಿ ಅವನಿಗೆ ಅತಿಮಾನುಷ ಶಕ್ತಿಯನ್ನು ತುಂಬುತ್ತದೆ. ಇದೇ ಕಥೆಯನ್ನು ಮುಂದುವರೆಸಿದ 'ಕ್ರಿಷ್ 2' ನಲ್ಲಿ ಅತಿ ಮಾನುಷ ಶಕ್ತಿಯ ಕ್ರಿಷ್ ನ ಮಗನಿಗೂ ಆ ಶಕ್ತಿ ಬಂದಿರುತ್ತದೆ. ಇವೆಲ್ಲ ನಿಜವೇ? ಹೀಗಾಗಬಹುದೇ?

ಸೋಮವಾರ, ಮೇ 23, 2016

ಎಂಬಿಪಿಎಸ್ ಎಂದರೇನು?

ಒಂದಲ್ಲ ಒಂದು ಸಾಧನದ ಮೂಲಕ ನಾವು ಸದಾಕಾಲ ಅಂತರಜಾಲ ಸಂಪರ್ಕವನ್ನು ಬಳಸುತ್ತಲೇ ಇರುತ್ತೇವಲ್ಲ, ಹಾಗೆ ಬಳಸುವಾಗ ಸಂಪರ್ಕದ ವೇಗದ ಬಗೆಗೂ ಕೇಳಿರುತ್ತೇವೆ: ೮ ಎಂಬಿಪಿಎಸ್, ೧೬ ಎಂಬಿಪಿಎಸ್, ೫೦ ಎಂಬಿಪಿಎಸ್... ಹೀಗೆ.

ಎಂಬಿ ಅಂದರೆ ಮೆಗಾಬೈಟ್ ಸರಿ, ಆದರೆ ಇದೇನಿದು ಎಂಬಿಪಿಎಸ್?

ಗುರುವಾರ, ಮೇ 19, 2016

ಕಂಪ್ಯೂಟರಿನ ಪುಟಾಣಿ ರೂಪ

ಟಿ. ಜಿ. ಶ್ರೀನಿಧಿ

ಕಂಪ್ಯೂಟರುಗಳು ಮೊದಲಿಗೆ ಕಾಣಿಸಿಕೊಂಡಿದ್ದು ಬೆರಳೆಣಿಕೆಯಷ್ಟು ಸಂಶೋಧನಾಲಯಗಳಲ್ಲಿ, ಪ್ರತಿಷ್ಠಿತ ಕಾಲೇಜು-ವಿವಿಗಳಲ್ಲಿ, ದೊಡ್ಡದೊಡ್ಡ ಸಂಸ್ಥೆಗಳಲ್ಲಿ ಮಾತ್ರವೇ. ಒಂದೊಂದು ಕಂಪ್ಯೂಟರು ಒಂದೊಂದು ಕೋಣೆಯ ತುಂಬ ತುಂಬಿಕೊಂಡಿರುತ್ತಿದ್ದ ಕಾಲ ಅದು. ಪೂರ್ತಿ ಕಂಪ್ಯೂಟರಿನ ಮಾತು ಹಾಗಿರಲಿ, ಅವರ ಕಚೇರಿಯಲ್ಲಿದ್ದ ಹಾರ್ಡ್ ಡಿಸ್ಕು - ಬರಿಯ ಎರಡು ಜಿಬಿ ಸಾಮರ್ಥ್ಯದ್ದು - ಹಳೆಯ ವಾಶಿಂಗ್ ಮಶೀನಿನಷ್ಟು ದೊಡ್ಡದಾಗಿತ್ತು ಎಂದು ಹಿರಿಯ ಬ್ಯಾಂಕ್ ಅಧಿಕಾರಿ ಶ್ರೀಧರ ಈಚೆಗಷ್ಟೆ ನೆನಪಿಸಿಕೊಳ್ಳುತ್ತಿದ್ದರು.

ಆ ದಿನಗಳಿಂದ ಇಂದಿನವರೆಗೆ ಕಂಪ್ಯೂಟರ್ ಜಗತ್ತಿನಲ್ಲಿ ಅಸಂಖ್ಯ ಬದಲಾವಣೆಗಳಾಗಿವೆ. ಕಂಪ್ಯೂಟರಿನ ಸಾಮರ್ಥ್ಯ - ದತ್ತಾಂಶ ಸಂಸ್ಕರಿಸುವುದಾಗಲಿ, ಸಂಸ್ಕರಿಸಿದ ಮಾಹಿತಿಯನ್ನು ಉಳಿಸಿಟ್ಟುಕೊಳ್ಳುವುದಾಗಲಿ - ಅಪಾರವಾಗಿ ಹೆಚ್ಚಿದೆ. ಸಾಮರ್ಥ್ಯ ಹೆಚ್ಚಾಗಿರುವುದರ ಜೊತೆಗೆ ಕಂಪ್ಯೂಟರಿನ ಗಾತ್ರವೂ ಗಮನಾರ್ಹವಾಗಿ ಕುಗ್ಗಿದೆ. ಗಾತ್ರದ ಹೋಲಿಕೆಯಲ್ಲಿ ಅಂದಿನ ಕೋಣೆಗಾತ್ರದ ಕಂಪ್ಯೂಟರುಗಳೆಲ್ಲಿ, ಇಂದಿನ ಲ್ಯಾಪ್‌ಟಾಪುಗಳೆಲ್ಲಿ!?

ಮಂಗಳವಾರ, ಮೇ 17, 2016

ಅನ್ಯಗ್ರಹ ಜೀವಿಗಳು ಪ್ರವಾಸ ಬಂದರೇ?

ಕೊಳ್ಳೇಗಾಲ ಶರ್ಮ

ಈಚೆಗೊಂದು ದಿನ ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಸೂಳೆಕೆರೆ ಗ್ರಾಮದಲ್ಲಿ ಅನ್ಯಗ್ರಹ ಜೀವಿಗಳು ಕಾಣಿಸಿಕೊಂಡರಂತೆ. ಗ್ರಾಮಸ್ಥರು ಗದ್ದೆಯಿಂದ  ಹಿಂದಿರುಗುವ ವೇಳೆ ರಾತ್ರಿ ಇದ್ದಕ್ಕಿದ್ದಹಾಗೆ ಆಕಾಶದಲ್ಲಿ ಬೆಂಕಿಯ ಚೆಂಡಿನಂತಹ ಪ್ರಕಾಶ ಕಾಣಿಸಿಕೊಂಡಿತು, ಅದರ ಜೊತೆಗೆ ತಟ್ಟೆಯ ರೀತಿಯ ವಸ್ತುವೊಂದು ಕಾಣಿಸಿಕೊಂಡಿತು ಎಂದು ಪತ್ರಿಕೆಯ ವರದಿಗಳು ಹೇಳಿದುವು. ಸುದ್ದಿ ಬಯಲಾದ ಕೂಡಲೇ ಟೀವಿ ಚಾನೆಲೊಂದರಿಂದ “ಸರ್ ಒಂದು ಚರ್ಚೆ ಇಟ್ಟುಕೊಂಡಿದ್ದೇವೆ. ದಯವಿಟ್ಟು ಸ್ಟುಡಿಯೋಗೆ ಬಂದು ಚರ್ಚೆಯಲ್ಲಿ ಭಾಗವಹಿಸಿ,” ಎಂದು ಆಹ್ವಾನವೂ ಬಂತು. ಯಾವ ರೀತಿ ಇತ್ತಂತೆ ಅನ್ಯಗ್ರಹ ಜೀವಿ ಎಂದು ಕೇಳಿದ್ದಕ್ಕೆ ‘ನೋ ಐಡಿಯಾ ಸರ್, ಅದನ್ನು ನೋಡಿದವರೂ ಬರುತ್ತಾರೆ. ಅವರನ್ನೇ ಕೇಳೋಣ’ ಎನ್ನುವ ಉತ್ತರ ಬಂತು. ನೋಡಿದವರು ಪ್ರತ್ಯಕ್ಷವಾಗದಿದ್ದರಿಂದ ಚರ್ಚೆಯೂ ನಡೆಯಲಿಲ್ಲ ಅನ್ನುವುದು ಬೇರೆ ಮಾತು. ಆದರೆ ಹೀಗೊಂದು ವೇಳೆ ಅನ್ಯಗ್ರಹಗಳಲ್ಲಿ ಜೀವಿಗಳಿದ್ದರೆ ಅವರು ಹೇಗಿರಬಹುದು? ನಮ್ಮ ಭೂಮಿಯಂತಹ ಗ್ರಹಕ್ಕೆ ಅವರು ಬರಬಹುದೇ? ಬಂದರೆ ವಲಸೆ ಬರುತ್ತಾರೋ? ಆಕ್ರಮಣ ಮಾಡಲು ಬರಬಹುದೋ? ಇವೆಲ್ಲ ಪ್ರಶ್ನೆಗಳು ನನ್ನ ತಲೆಯನ್ನೂ ಕೊರೆಯತೊಡಗಿದುವು.

ಇವೆಲ್ಲಕ್ಕಿಂತಲೂ ಮುಖ್ಯವಾದ ಪ್ರಶ್ನೆಗಳು.  ಅನ್ಯಜೀವಿಗಳಿರಬಹುದಾದರೆ ಎಲ್ಲಿ? ಎಷ್ಟು ದೂರದಲ್ಲಿರಬಹುದು?

ಸೋಮವಾರ, ಮೇ 16, 2016

ಆಪ್‌ಬರ್ಗರ್!

ಸ್ಮಾರ್ಟ್‌ಫೋನುಗಳು ಸರ್ವಾಂತರ್ಯಾಮಿಯಾಗಿರುವ ಈ ಕಾಲದಲ್ಲಿ ಆಪ್‌ಗಳ (ಮೊಬೈಲ್ ತಂತ್ರಾಂಶ) ವಿಷಯ ನಮಗೆಲ್ಲ ಗೊತ್ತು. ಬನ್‌ನ ಎರಡು ತುಣುಕುಗಳ ನಡುವೆ ಕರಿದ / ಬೇಯಿಸಿದ ತಿಂಡಿಯನ್ನೂ ತರಕಾರಿ-ಬೆಣ್ಣೆ-ಚೀಸ್ ಇತ್ಯಾದಿಗಳನ್ನೂ ಇಟ್ಟು ತಯಾರಿಸುವ ಬರ್ಗರ್ ಪರಿಚಯವೂ ಇದೆ. ಆದರೆ ಆಪ್‍ಗೂ ಬರ್ಗರ್‌ಗೂ ಎತ್ತಣಿಂದೆತ್ತ ಸಂಬಂಧ?

ಗುರುವಾರ, ಮೇ 12, 2016

ಇಜ್ಞಾನ ವಿಶೇಷ ಲೇಖನ: 'ವಸುಧೈವ ಕುಟುಂಬಕಮ್'

ರೋಹಿತ್ ಚಕ್ರತೀರ್ಥ

ಕೆಲವು ವರ್ಷಗಳ ಹಿಂದೆ ರಾಮಕೃಷ್ಣ ಬೆಳ್ಳೂರು ಎಂಬವರು ಒಂದು ಚಿತ್ರಸರಣಿ ಮಾಡಿದ್ದರು. ಮಹಾವಿಜ್ಞಾನಿ ಐನ್‌ಸ್ಟೈನ್‌ರನ್ನೂ ಕನ್ನಡದ ಸಾಹಿತ್ಯಮೇರು ಶಿವರಾಮ ಕಾರಂತರನ್ನೂ ಅಕ್ಕಪಕ್ಕದಲ್ಲಿಟ್ಟು ನೋಡಿದರೆ ಅವರೇ ಇವರಾ ಎಂದು ಗೊಂದಲವಾಗುವಷ್ಟು ಅವರಿಬ್ಬರ ಚಹರೆಗಳೂ ಹೋಲುವುದನ್ನು ತೋರಿಸಿ "ಎಷ್ಟೊಂದು ಸೇಮ್ ಇದ್ದಾರಲ್ವಾ?" ಎಂದು ಕೇಳಿದ್ದರು. ಗಡ್ಡ-ಮೀಸೆ ಬಿಟ್ಟ ಕೆ.ಎಸ್. ಅಶ್ವಥ್‌ರನ್ನು ಗೆಲಿಲಿಯೋ ಪಕ್ಕದಲ್ಲಿ ಕೂರಿಸಿದರೂ ಇದೇ ಗೊಂದಲ. ಕರ್ನಾಟಕದ ರಾಜ್ಯಪಾಲರಾಗಿದ್ದ ಖುರ್ಷಿದ್ ಆಲಂ ಖಾನ್ ಮತ್ತು ಚಿತ್ರನಟ ಬ್ರಹ್ಮಾವರ ಸದಾಶಿವ ರಾವ್ ನೋಡಲು ಒಂದೇ ರೀತಿ ಇದ್ದರು. ರಿಸರ್ವ್ ಬ್ಯಾಂಕ್‌ನ ಗವರ್ನರ್ ಆಗಿದ್ದ ಸುಬ್ಬಾ ರಾವ್‌ರನ್ನು ನಮ್ಮ "ಥಟ್ ಅಂತ ಹೇಳಿ" ಖ್ಯಾತಿಯ ಡಾ. ನಾ. ಸೋಮೇಶ್ವರ ಪಕ್ಕದಲ್ಲಿ ನಿಲ್ಲಿಸಿದರೆ ನಿಜವ್ಯಕ್ತಿಯೊಬ್ಬರು ತನ್ನ ಮೇಣದ ಪ್ರತಿಮೆಯೊಂದಿಗೆ ನಿಂತಿದ್ದಾರೋ ಎಂದು ಭಾಸವಾಗುತ್ತದೆ. ನಿತಿನ್ ಮುಖೇಶ್ ಎಂಬ ಹಾಡುಗಾರನನ್ನು ಟಿ.ಎಂ. ಕೃಷ್ಣ ಎಂಬ ಕರ್ನಾಟಕ ಸಂಗೀತಗಾರರ ಪಕ್ಕದಲ್ಲಿ ಕೂರಿಸಿದರೆ ಇವರೇನು ಅವಳಿ-ಜವಳೀನಾ ಅಂತ ಕೇಳುವಷ್ಟು ಅವರಿಬ್ಬರೂ ಸೇಮ್‌ಸೇಮ್. ನಮ್ಮ ನಡುವಿನ ಹೆಮ್ಮೆಯ ವಿಜ್ಞಾನಿ ರೊದ್ದಂ ನರಸಿಂಹ ತಮ್ಮ ಎಂದಿನ ಕೋಟು ಪ್ಯಾಂಟಿನ ಪೋಷಾಕು ತೆಗೆದು ಪಟ್ಟೆ ಪೀತಾಂಬರ ಉಟ್ಟುಕೊಂಡರೆ ಯಾರಾದರೂ "ವಿದ್ಯಾಭೂಷಣರೇ, ಒಂದು ಹಾಡು ಹಾಡಿ" ಅಂತ ಪೀಡಿಸಿಯಾರು!

ಮಂಗಳವಾರ, ಮೇ 10, 2016

ಇಜ್ಞಾನದ ಹತ್ತನೆಯ ವರ್ಷ

ವಿಜ್ಞಾನ-ತಂತ್ರಜ್ಞಾನಗಳ ಬಗ್ಗೆ ಬೇಕಾದಷ್ಟು ಮಾಹಿತಿ ಸಿಗುವ ಕನ್ನಡದ ಜಾಲತಾಣವೊಂದನ್ನು ರೂಪಿಸಬೇಕು ಎನ್ನುವ ಕನಸಿಗೆ ಈಗ ಹತ್ತು ವರ್ಷ. ಕಳೆದ ದಶಕದ ಮಧ್ಯಭಾಗದಲ್ಲಿ ಪರಿಚಿತರಾದ ಹೆಸರಾಂತ ವಿಜ್ಞಾನ ಬರಹಗಾರ ಕೊಳ್ಳೇಗಾಲ ಶರ್ಮರೂ ನಾನೂ ಮಾತನಾಡುವಾಗ ಹೀಗೊಂದು ತಾಣ ಇರಬೇಕು ಎನ್ನುವ ಪ್ರಸ್ತಾಪ ಬಹಳಷ್ಟು ಬಾರಿ ಬಂದುಹೋಗಿತ್ತು.

ಈ ಪ್ರಯೋಗವನ್ನು ಒಮ್ಮೆ ಪ್ರಯತ್ನಿಸಿ ನೋಡಿಯೇಬಿಡೋಣ ಎಂದು ಹೊರಟಾಗ ತಾಣದ ಹೆಸರೇನಿರಬೇಕು ಎನ್ನುವ ಪ್ರಶ್ನೆ ಬಂತು. ಆಗ ನೆರವಾದವನು ಮಿತ್ರ ನಂದಕಿಶೋರ್. ಅವನು ಥಟ್ಟನೆ ಹೇಳಿದ ಹೆಸರೇ 'ಇಜ್ಞಾನ'. ಏನನ್ನೂ ಹೇಳದೆ ಏನೇನೆಲ್ಲ ಹೇಳುವ ಹೆಸರು ಅದು. ಇದೇನು 'ವಿಜ್ಞಾನ'ದ ಗ್ರಾಮ್ಯ ಅಪಭ್ರಂಶವೇ, ಅಥವಾ ವಿದ್ಯುನ್ಮಾನ (ಇ-) ಜ್ಞಾನಕ್ಕೆ ನೀವಿಟ್ಟ ಹೆಸರೇ ಎಂದು ಹಲವರು ಕೇಳಿದ್ದುಂಟು.

ಹೆಸರಿನ ಅರ್ಥ ಏನೇ ಇರಲಿ. 'ಇಜ್ಞಾನ'ವೆಂಬ ಹೆಸರಿಟ್ಟುಕೊಂಡು ಶುರುವಾದ, ವಿಜ್ಞಾನ-ತಂತ್ರಜ್ಞಾನಗಳ ಬಗ್ಗೆ ಕನ್ನಡದಲ್ಲಿ ನಿರಂತರವಾಗಿ ಮಾಹಿತಿ ಹಂಚಿಕೊಳ್ಳುತ್ತ ಬಂದ ತಾಣಕ್ಕೆ ಇದೀಗ ಹತ್ತನೆಯ ವರ್ಷದ ಸಂಭ್ರಮ.

ಗುರುವಾರ, ಮೇ 5, 2016

ವಿಶ್ವ ಪಾಸ್‌ವರ್ಡ್ ದಿನ ವಿಶೇಷ: ನಿಮ್ಮ ಪಾಸ್‌ವರ್ಡ್ ಜೋಪಾನ!

ಡಿಜಿಟಲ್ ಪ್ರಪಂಚದಲ್ಲಿ ನಮ್ಮ ಮಾಹಿತಿಯನ್ನೆಲ್ಲ ಸುರಕ್ಷಿತವಾಗಿಡಲು, ಅದು ಅಪಾತ್ರರ ಕೈಗೆ ಸಿಗದಂತೆ ನೋಡಿಕೊಳ್ಳಲು, ನಮ್ಮ ಮಾಹಿತಿ ನಮಗಷ್ಟೆ ಗೊತ್ತು ಎಂಬ ಸಮಾಧಾನದ ಭಾವನೆ ಮೂಡಿಸಲು ಪಾಸ್‌ವರ್ಡ್ ಬೇಕೇಬೇಕು. ವಿಶ್ವ ಪಾಸ್‌ವರ್ಡ್ ದಿನದಂದು (ಮೇ ೫) ಈ ಲೇಖನವನ್ನು ಮರುಪ್ರಕಟಿಸುವ ಮೂಲಕ ನಾವು ಪಾಸ್‌ವರ್ಡ್ ಮಹತ್ವವನ್ನು ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ.. 
ಟಿ. ಜಿ. ಶ್ರೀನಿಧಿ


ಆಲಿಬಾಬನ ಕತೆ ಗೊತ್ತಲ್ಲ, ಅದರಲ್ಲಿ ನಲವತ್ತು ಮಂದಿ ಕಳ್ಳರು ತಾವು ಕದ್ದು ತಂದ ಸಂಪತ್ತನ್ನೆಲ್ಲ ಒಂದು ಗುಹೆಯಲ್ಲಿ ಅವಿಸಿಡುತ್ತಿರುತ್ತಾರೆ. ಮತ್ತೆ ಕಳ್ಳತನಕ್ಕೆ ಹೋದಾಗ ಬೇರೆ ಕಳ್ಳರು ಬಂದು ಇವರ ಸಂಪತ್ತನ್ನೇ ಕದ್ದುಬಿಡಬಾರದಲ್ಲ, ಅದಕ್ಕಾಗಿ 'ಬಾಗಿಲು ತೆರೆಯೇ ಸೇಸಮ್ಮ' ಎಂದು ಹೇಳದ ಹೊರತು ಗುಹೆಯೊಳಕ್ಕೆ ಯಾರೂ ಹೋಗಲಾಗದಂತಹ ವ್ಯವಸ್ಥೆಯನ್ನೂ ರೂಪಿಸಿಕೊಂಡಿರುತ್ತಾರೆ.

ಕಳ್ಳರ ಬಂದೋಬಸ್ತು ಜೋರಾಗಿಯೇ ಇತ್ತು ನಿಜ. ಆದರೆ ಆಲಿಬಾಬ ಯಾವಾಗ ಅವರ ಗುಪ್ತಸಂಕೇತವನ್ನು ಕೇಳಿಸಿಕೊಂಡನೋ ಅಲ್ಲಿಂದ ಸೇಸಮ್ಮ ಆಲಿಬಾಬನಿಗೂ ಬಾಗಿಲು ತೆರೆಯಲು ಶುರುಮಾಡಿದಳು!

ಆಲಿಬಾಬನ ಈ ಕತೆ ಕಲ್ಪನೆಯದೇ ಇರಬಹುದು.

ಸೋಮವಾರ, ಮೇ 2, 2016

ಬಿಟ್‌ಕಾಯಿನ್ ಸೃಷ್ಟಿಕರ್ತ ಮರೆಯಿಂದ ಹೊರಬಂದನೇ?


ಬಿಟ್‌ಕಾಯಿನ್ ಎನ್ನುವುದು ಅಂತರಜಾಲ ಲೋಕದಲ್ಲಿ ಜನಪ್ರಿಯತೆ ಗಳಿಸಿಕೊಳ್ಳುತ್ತಿರುವ ವರ್ಚುಯಲ್ ಹಣ. ಭಾರತದಲ್ಲಿ ರೂಪಾಯಿ, ಅಮೆರಿಕಾದಲ್ಲಿ ಡಾಲರುಗಳೆಲ್ಲ ಇದ್ದ ಹಾಗೆ ಅಂತರಜಾಲದ ಹಣ ಇದು. ಅಂತರಜಾಲ ಹೇಗೆ ಮಿಥ್ಯಾಲೋಕವೋ ಅಲ್ಲಿ ಚಲಾವಣೆಯಾಗುವ ಈ 'ಬಿಟ್‌ಕಾಯಿನ್' ಕೂಡ ವರ್ಚುಯಲ್, ಅಂದರೆ ಕಣ್ಣಿಗೆ ಕಾಣದ, ಕರೆನ್ಸಿಯೇ.

ಈಚಿನ ಕೆಲ ವರ್ಷಗಳಲ್ಲಿ ಈ ಬಿಟ್‌ಕಾಯಿನ್ ಸಾಕಷ್ಟು ಸುದ್ದಿಮಾಡಿದೆ. ಈ ಬಗ್ಗೆ ಇಜ್ಞಾನವೂ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಲೇಖನಗಳು, ಸುದ್ದಿಗಳು ಪ್ರಕಟವಾಗಿವೆ. [ಓದಿ: ಕಳೆದ ಹಾರ್ಡ್‌ಡಿಸ್ಕ್ ನೆಪದಲ್ಲಿ ಕಾಣದ ದುಡ್ಡಿನ ಕುರಿತು...]

ಸೋಮವಾರ, ಏಪ್ರಿಲ್ 25, 2016

'eಜ್ಞಾನ' ತಂದ ಸಂತೋಷ

ಕಳೆದ ಗುರುವಾರದಿಂದ (ಏಪ್ರಿಲ್ ೨೧, ೨೦೧೬) ವಿಜಯವಾಣಿಯಲ್ಲಿ ಪ್ರಕಟವಾಗುತ್ತಿರುವ 'eಜ್ಞಾನ' ಅಂಕಣದ ಮೊದಲ ಮೂರು ಕಂತುಗಳನ್ನು ಈ ವಾರದ 'ಇಫ್ರೆಶ್'ನಲ್ಲಿ ಖುಷಿಯಿಂದ ಪ್ರಕಟಿಸುತ್ತಿದ್ದೇವೆ. ಈ ಅಂಕಣ ಕುರಿತ ಹಲವು ಪ್ರತಿಕ್ರಿಯೆಗಳು ಬಂದಿವೆ, ಬರುತ್ತಿವೆ. ಇಂತಹ ಪ್ರತಿಕ್ರಿಯೆಗಳೇ ಬರವಣಿಗೆಗೆ ಸ್ಫೂರ್ತಿತುಂಬುವ ಸಂಗತಿಗಳು. ನಿಮ್ಮ ಅನಿಸಿಕೆ-ಅಭಿಪ್ರಾಯಗಳನ್ನು ದಯಮಾಡಿ ಹೀಗೆಯೇ ಹಂಚಿಕೊಳ್ಳುತ್ತಿರಿ, ಬರಹಗಳು ಹೇಗಿದ್ದರೆ ನಿಮಗಿಷ್ಟ ಎಂದು ಹೇಳುವುದನ್ನೂ ಮರೆಯದಿರಿ.

ಭಾನುವಾರ, ಏಪ್ರಿಲ್ 24, 2016

ಟೆಕ್ಸ್ಟ್ ಬುಕ್ ಅಲ್ಲ, ಇದು ಟೆಕ್ ಬುಕ್!


ಟಿ. ಜಿ. ಶ್ರೀನಿಧಿ ಹೊಸ ಪುಸ್ತಕ 'ಟೆಕ್ಸ್ಟ್ ಬುಕ್ ಅಲ್ಲ, ಇದು ಟೆಕ್ ಬುಕ್!' ಬರುವ ಮೇ ೮ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಈ ಪುಸ್ತಕವನ್ನು ನೀವೀಗ ಆನ್‌ಲೈನ್ ಮೂಲಕ ಮುಂಗಡವಾಗಿ ಕಾಯ್ದಿರಿಸಬಹುದು ಹಾಗೂ ಶೇ. ೨೦ರ ವಿಶೇಷ ರಿಯಾಯಿತಿ ಪಡೆಯಬಹುದು!

ಶುಕ್ರವಾರ, ಏಪ್ರಿಲ್ 22, 2016

ವಿಜಯವಾಣಿಯಲ್ಲಿ ಇಜ್ಞಾನ

ಟಿ. ಜಿ. ಶ್ರೀನಿಧಿಯವರ ದೈನಿಕ ಅಂಕಣ 'eಜ್ಞಾನ' ಏಪ್ರಿಲ್ ೨೧, ೨೦೧೬ರಿಂದ ವಿಜಯವಾಣಿಯಲ್ಲಿ ಪ್ರತಿದಿನವೂ ಪ್ರಕಟವಾಗುತ್ತದೆ (ಪುರವಣಿ ವಿಭಾಗದಲ್ಲಿ). ತಂತ್ರಜ್ಞಾನ ಕ್ಷೇತ್ರದ ವಿವಿಧ ಸಂಗತಿಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡುವ ಪ್ರಯತ್ನ ಇದು. ಅಂಕಣದ ಕುರಿತು ನಿಮ್ಮ ಅನಿಸಿಕೆ, ಅಭಿಪ್ರಾಯಗಳಿಗೆ ಸ್ವಾಗತ.

ಸೋಮವಾರ, ಏಪ್ರಿಲ್ 18, 2016

ಪಾರಂಪರಿಕ ದಿನದಂದು ಐಟಿ ಇತಿಹಾಸದ ನೆನಪು

ಇದು ಇಜ್ಞಾನ ಡಾಟ್ ಕಾಮ್‌ನಲ್ಲಿ ಇಂದಿನಿಂದ ಪ್ರಕಟವಾಗುತ್ತಿರುವ ಹೊಸ ಸಾಪ್ತಾಹಿಕ ಅಂಕಣ 'ಇಫ್ರೆಶ್'ನ ಮೊದಲ ಕಂತು. ಅಂಕಣದ ಬಗ್ಗೆ ನಿಮ್ಮ ಅನಿಸಿಕೆ-ಅಭಿಪ್ರಾಯಗಳಿಗೆ ಸ್ವಾಗತ!
ಇವತ್ತು (ಏಪ್ರಿಲ್ ೧೮) ವರ್ಲ್ಡ್ ಹೆರಿಟೇಜ್ ಡೇ, ಅಂದರೆ ವಿಶ್ವ ಪಾರಂಪರಿಕ ದಿನವಂತೆ. ಹಾಗೆಂದು ಮೊದಲು ನೆನಪಿಸಿದ್ದು ಫೇಸ್‌ಬುಕ್. ಒಳ್ಳೆಯದು ಬಿಡಿ, ಫೇಸ್‌ಬುಕ್‌ನಲ್ಲಿ ಅವರಿವರ ಜಗಳದ ಸುದ್ದಿಯ ಜೊತೆಗೆ ಒಂದಷ್ಟು ಉಪಯುಕ್ತ ಮಾಹಿತಿಯೂ ಸಿಗುತ್ತದೆ ಎಂದಾಯಿತು.

ವರ್ಲ್ಡ್ ಹೆರಿಟೇಜ್ ಎಂದತಕ್ಷಣ ನಮಗೆ ನೆನಪಿಗೆ ಬರುವುದು ವಿಶ್ವ ಪಾರಂಪರಿಕ ತಾಣಗಳು. ಈಜಿಪ್ಟಿನ ಪಿರಮಿಡ್‌ಗಳಿಂದ ಮಾಲಿಯ ಟಿಂಬಕ್ಟುವರೆಗೆ, ರಾಜಸ್ಥಾನದ ಕೋಟೆಗಳಿಂದ ನಮ್ಮ ಪಶ್ಚಿಮಘಟ್ಟಗಳವರೆಗೆ ಅದೆಷ್ಟೋ ತಾಣಗಳನ್ನು ಯುನೆಸ್ಕೋ ಈ ಪಟ್ಟಿಗೆ ಸೇರಿಸಿದೆ.

ಬುಧವಾರ, ಏಪ್ರಿಲ್ 13, 2016

ಇಜ್ಞಾನದಿಂದ ಹೊಸದೊಂದು ಪುಸ್ತಕ

ಇಜ್ಞಾನ ಡಾಟ್ ಕಾಮ್ ಹೊಸದೊಂದು ಪುಸ್ತಕವನ್ನು ನಿಮಗೆ ತಲುಪಿಸಲು ಸಜ್ಜಾಗುತ್ತಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳುತ್ತೇವೆ. ನಿರೀಕ್ಷಿಸಿ!


ಮಂಗಳವಾರ, ಏಪ್ರಿಲ್ 12, 2016

ಜಾಲಲೋಕದಲ್ಲಿ ಚಿತ್ರಗಳ ಛಾಯೆ

ಟಿ. ಜಿ. ಶ್ರೀನಿಧಿ

ವಿಶ್ವವ್ಯಾಪಿ ಜಾಲದಲ್ಲಿ ಪ್ರಕಟವಾದ ಮೊದಲ ಚಿತ್ರ
ಈ ವಿಶ್ವವ್ಯಾಪಿ ಜಾಲ (ವರ್ಲ್ಡ್‌ವೈಡ್ ವೆಬ್) ಇದೆಯಲ್ಲ, ಇದು ಮಾಹಿತಿಯ ಮಹಾಸಾಗರ. ಎಲ್ಲ ವಿಷಯಗಳನ್ನು ಕುರಿತ ಎಲ್ಲ ಬಗೆಯ ಮಾಹಿತಿಯೂ ಇಲ್ಲಿ ಲಭ್ಯ. ಈ ಮಾಹಿತಿ ಯಾವ ರೂಪದಲ್ಲಾದರೂ ಇರಬಹುದು - ಪಠ್ಯ, ಚಿತ್ರ, ಧ್ವನಿ, ವೀಡಿಯೋ,... ಹೀಗೆ.

ಚಿತ್ರರೂಪದ ಮಾಹಿತಿಯೆಂದರೆ ನಮಗೆ ಬಹಳ ಪ್ರೀತಿ. ಚಿತ್ರಗಳಿಲ್ಲದ ಉದ್ದನೆಯ ಬರಹವನ್ನೂ ಅಷ್ಟೇ ಉದ್ದದ ಚಿತ್ರಲೇಖನವನ್ನೂ ಒಟ್ಟಿಗೆ ಕೊಟ್ಟರೆ ಚಿತ್ರಗಳಿರುವ ಲೇಖನವನ್ನು ಮೆಚ್ಚುವವರೇ ಹೆಚ್ಚುಮಂದಿ. 'ಪಾತಾಳದಲ್ಲಿ ಪಾಪಚ್ಚಿ' ಕೃತಿಯಲ್ಲಿ ಪಾಪಚ್ಚಿ ಹೇಳುತ್ತಾಳಲ್ಲ, ಹಾಗೆ ಚಿತ್ರಗಳಿಲ್ಲದ ಬರಹ ಹೂವಿಲ್ಲದ ಗಿಡದಂತೆ!

ಹಾಗಾಗಿ ಜಾಲಲೋಕದಲ್ಲೂ ಚಿತ್ರಗಳ ಭರಾಟೆ ಜೋರು. ಚಿತ್ರಗಳಿಲ್ಲದ ಜಾಲತಾಣಗಳೇ ಇಲ್ಲವೆಂದರೂ ಸರಿಯೇ. ಸಮಾಜಜಾಲಗಳಲ್ಲಂತೂ (ಸೋಶಿಯಲ್ ನೆಟ್‌ವರ್ಕ್) ನಾವು ಕೂತಿದ್ದು - ನಿಂತದ್ದು. ಕಂಡಿದ್ದು - ತಿಂದದ್ದರ ಚಿತ್ರಗಳನ್ನೆಲ್ಲ ಹಂಚಿಕೊಳ್ಳುತ್ತಲೇ ಇರುತ್ತೇವೆ.

ಮಂಗಳವಾರ, ಏಪ್ರಿಲ್ 5, 2016

ಇಜ್ಞಾನ ಹತ್ತನೆಯ ವರ್ಷ

ಇಜ್ಞಾನ ಸದ್ಯದಲ್ಲೇ ತನ್ನ ಒಂಬತ್ತನೇ ವರ್ಷವನ್ನು ಪೂರೈಸಲಿದೆ. ಹತ್ತನೆಯ ವರ್ಷವನ್ನು ವೈವಿಧ್ಯಮಯ ಕಾರ್ಯಕ್ರಮಗಳೊಡನೆ ಆಚರಿಸುವ ಉದ್ದೇಶ ನಮ್ಮದು. ಹೆಚ್ಚಿನ ವಿವರಗಳನ್ನು ಇಷ್ಟರಲ್ಲೇ ಹಂಚಿಕೊಳ್ಳಲಾಗುವುದು. ನಿರೀಕ್ಷಿಸಿ!

ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ, ಆಯೋಜನೆಯಲ್ಲಿ ನೆರವಾಗುವ ಮೂಲಕ ನೀವು ನಮ್ಮೊಡನೆ ಕೈಜೋಡಿಸಬಹುದು. ಕಾರ್ಯಕ್ರಮಗಳ ಆಯೋಜನೆಯಲ್ಲಿ ನೆರವು ನೀಡುವ ಆಸಕ್ತಿಯಿರುವವರು, ಆ ಕುರಿತು ಪ್ರಶ್ನೆಗಳಿರುವವರು ದಯಮಾಡಿ ನಮ್ಮನ್ನು ಸಂಪರ್ಕಿಸಿ. ಇಮೇಲ್ ಕಳುಹಿಸಲು ಬಯಸುವವರು ಈ ವಿಳಾಸವನ್ನು ಸಂಪರ್ಕಿಸಬಹುದು: ejnana.com[at]gmail.com  

ಬುಧವಾರ, ಮಾರ್ಚ್ 30, 2016

'ಕಾಡು ಕಲಿಸುವ ಪಾಠ'ಕ್ಕೆ ಅಕಾಡೆಮಿ ಬಹುಮಾನ

ಕರ್ನಾಟಕ ಸಾಹಿತ್ಯ ಅಕಾಡೆಮಿ ೨೦೧೩ನೇ ಸಾಲಿನ ಪುಸ್ತಕ ಬಹುಮಾನಗಳನ್ನು ಪ್ರಕಟಿಸಿದ್ದು ಶ್ರೀ ಟಿ. ಎಸ್. ಗೋಪಾಲ್ ಅವರ 'ಕಾಡು ಕಲಿಸುವ ಪಾಠ' ಕೃತಿಗೆ ವಿಜ್ಞಾನ ಸಾಹಿತ್ಯ ಪ್ರಕಾರದ ಬಹುಮಾನ ದೊರೆತಿದೆ. ಅವರಿಗೆ ಇಜ್ಞಾನ ಬಳಗದ ಹಾರ್ದಿಕ ಅಭಿನಂದನೆಗಳು.


'ಕಾಡು ಕಲಿಸುವ ಪಾಠ' - ಪ್ರಕೃತಿಶಿಬಿರಕ್ಕೊಂದು ಕೈಪಿಡಿ

ಬುಧವಾರ, ಮಾರ್ಚ್ 23, 2016

ಮೊಬೈಲ್ ಲೋಕದಲ್ಲೊಂದು ಹೊಸ ಅಲೆ

ಹಿಂದೆ ಕಂಪ್ಯೂಟರುಗಳಲ್ಲಿ ಮಾಡುತ್ತಿದ್ದಂತೆ ಮೊಬೈಲುಗಳನ್ನೂ ಅಪ್‌ಗ್ರೇಡ್ ಮಾಡುವಂತಿದ್ದರೆ ಎಷ್ಟು ಚೆನ್ನಾಗಿತ್ತು! ರ್‍ಯಾಮ್ ಸಾಲದೆಬಂದಾಗ ಒಂದೆರಡು ಜಿಬಿ ಹೆಚ್ಚುವರಿ ರ್‍ಯಾಮ್ ಸೇರಿಸುವಂತಿದ್ದರೆ, ಕ್ಯಾಮೆರಾ ಚೆನ್ನಾಗಿಲ್ಲ ಎನ್ನಿಸಿದಾಗ ಹೊಸ ಕ್ಯಾಮೆರಾ ಅಳವಡಿಸಿಕೊಳ್ಳುವಂತಿದ್ದರೆ?
ಟಿ. ಜಿ. ಶ್ರೀನಿಧಿ


ಅತ್ಯಂತ ದುಬಾರಿ ಫೋನಿನ ಬೆಲೆ ಎಷ್ಟಿರಬಹುದು ಎಂದು ಯಾರಾದರೂ ಕೇಳಿದರೆ ನಾವು ಅರವತ್ತು-ಎಪ್ಪತ್ತು ಸಾವಿರ ರೂಪಾಯಿಯ ಫೋನಿಗಳನ್ನು ನೆನಪಿಸಿಕೊಳ್ಳುತ್ತೇವೆ. ಕಡಿಮೆ ಬೆಲೆಗೆ ಆದಷ್ಟೂ ಹೆಚ್ಚಿನ ಸೌಲಭ್ಯಗಳನ್ನು ನೀಡುವ ಫೋನುಗಳು ಜನಪ್ರಿಯವಾಗುತ್ತಿರುವ ಈ ಕಾಲದಲ್ಲಿ ಅರವತ್ತು-ಎಪ್ಪತ್ತು ಸಾವಿರ ರೂಪಾಯಿ ಬೆಲೆಯ ಮೊಬೈಲು ದುಬಾರಿಯೆನಿಸುವುದರಲ್ಲಿ ಆಶ್ಚರ್ಯವೂ ಇಲ್ಲ ಬಿಡಿ.

ಆದರೆ ಈ ಫೋನುಗಳು "ಅತ್ಯಂತ ದುಬಾರಿ" ಎನ್ನುವ ಪಟ್ಟದ ಹತ್ತಿರಕ್ಕೂ ಬರುವುದಿಲ್ಲ ಎನ್ನುವುದು ತಮಾಷೆಯ ವಿಷಯ. ಏಕೆಂದರೆ ಮೊಬೈಲ್ ಲೋಕದ ಮಹಾರಾಜರ ಬೆಲೆ ಹಲವು ಲಕ್ಷಗಳಲ್ಲಿರುತ್ತದೆ - ಕೆಲವೊಮ್ಮೆ ಕೋಟಿಗಳಲ್ಲಿರುವುದೂ ಉಂಟು.

ಮೊಬೈಲಿನ ಬೆಲೆ ಲಕ್ಷಗಳಲ್ಲಿ, ಕೋಟಿಗಳಲ್ಲಿ ಇರಲು ಅದರಲ್ಲೇನು ಚಿನ್ನ-ಬೆಳ್ಳಿ-ವಜ್ರವೈಡೂರ್ಯಗಳಿರುತ್ತವೆಯೇ?

ಖಂಡಿತಾ ಇರುತ್ತವೆ.

ಸೋಮವಾರ, ಮಾರ್ಚ್ 7, 2016

ಇಮೇಲ್‌‌ಗೊಂದು ವಿಳಾಸ ಕೊಟ್ಟ ರೇ ಟಾಮ್ಲಿನ್‌ಸನ್

ಟಿ. ಜಿ. ಶ್ರೀನಿಧಿ
ಖ್ಯಾತ ಕಂಪ್ಯೂಟರ್ ತಜ್ಞ ರೇ ಟಾಮ್ಲಿನ್‌ಸನ್ ನಿಧನರಾಗಿದ್ದಾರೆ. ವಿವಿಧ ಮಾಧ್ಯಮಗಳಲ್ಲಿ ಕೇಳಿಬರುತ್ತಿರುವ ಅವರ ನಿಧನವಾರ್ತೆಯಲ್ಲಿ ಅವರನ್ನು "ಇಮೇಲ್ ಸೃಷ್ಟಿಕರ್ತ" ಎಂದು ಗುರುತಿಸುತ್ತಿರುವುದನ್ನೂ ನಾವು ನೋಡುತ್ತಿದ್ದೇವೆ.
ಇಮೇಲ್ ತಂತ್ರಜ್ಞಾನದ ವಿಕಾಸದಲ್ಲಿ ಬಹು ಮಹತ್ವದ ಪಾತ್ರ ವಹಿಸಿದ್ದವರು ಟಾಮ್ಲಿನ್‌ಸನ್. ಆದರೆ ಅವರು ಇಮೇಲ್ ಸೃಷ್ಟಿಕರ್ತರೇನೂ ಆಗಿರಲಿಲ್ಲ. ಹಾಗಾದರೆ ಇಮೇಲ್ ತಂತ್ರಜ್ಞಾನಕ್ಕೆ ಹೊಸ ತಿರುವು ಕೊಟ್ಟ ಅವರ ಸಾಧನೆ ಏನು? ಅಗಲಿದ ಹಿರಿಯರಿಗೆ 
ಈ ಲೇಖನದ ಮೂಲಕ  ನಮ್ಮ ಶ್ರದ್ಧಾಂಜಲಿ...
ಇಮೇಲ್ ಕಂಡುಹಿಡಿದದ್ದು ಯಾರು? ಕಂಪ್ಯೂಟರ್ ಪ್ರಪಂಚದಲ್ಲಿ ಕೇಳಸಿಗುವ ಅನೇಕ ಉತ್ತರವಿಲ್ಲದ ಪ್ರಶ್ನೆಗಳಲ್ಲಿ ಇದೂ ಒಂದು.

ಹೌದು, ಇಮೇಲ್ ತಂತ್ರಜ್ಞಾನವನ್ನು ಯಾರೋ ಒಬ್ಬ ವಿಜ್ಞಾನಿ ಯಾವುದೋ ಒಂದು ದಿನ ಇದ್ದಕ್ಕಿದ್ದಂತೆ ಕಂಡುಹಿಡಿಯಲಿಲ್ಲ; ಕಂಪ್ಯೂಟರ್ ಲೋಕದ ಅದೆಷ್ಟೋ ಆವಿಷ್ಕಾರಗಳಂತೆ ಸಾಕಷ್ಟು ದೀರ್ಘವಾದ ಅವಧಿಯಲ್ಲಿ ಅನೇಕ ತಂತ್ರಜ್ಞರ ಶ್ರಮದಿಂದ ವಿಕಾಸವಾದ ತಂತ್ರಜ್ಞಾನ ಅದು.

ಆದರೆ ಇಮೇಲ್ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ ಅನೇಕ ಸಂಗತಿಗಳಿವೆ - ಇಮೇಲ್ ವಿಳಾಸಗಳಲ್ಲಿ @ ಚಿಹ್ನೆಯ ಬಳಕೆ ಪ್ರಾರಂಭವಾದದ್ದು ಇಂತಹ ಮೈಲಿಗಲ್ಲುಗಳಲ್ಲಿ ಅತ್ಯಂತ ಮಹತ್ವಪೂರ್ಣವಾದದ್ದು.

ಭಾನುವಾರ, ಮಾರ್ಚ್ 6, 2016

ಅಗ್ರಮಾನ್ಯ ಅಗ್ರಿಬ್ರಹ್ಮ ಡಾ. ಎಸ್. ಡಬ್ಲ್ಯು. ಮೆಣಸಿನಕಾಯಿ

ವಿಜ್ಞಾನಿಗಳ ಸಾಧನೆ ಕುರಿತು ಓದುವುದು ಕುತೂಹಲ ಹುಟ್ಟಿಸುವ ವಿಷಯ. ವಿಜ್ಞಾನಿಗಳ ಬದುಕಿನ ಬಗ್ಗೆ ತಿಳಿದುಕೊಳ್ಳುವುದು ಇನ್ನೂ ವಿಶಿಷ್ಟವಾದ ಅನುಭವ. ಅದರಲ್ಲೂ ವಿಜ್ಞಾನಿಯ - ಅವರ ಸಾಧನೆಯ ಬಗ್ಗೆ ಮೊದಲು ಕೇಳಿಯೇ ಇಲ್ಲದಿದ್ದರಂತೂ ಈ ಅನುಭವ ಇನ್ನೂ ವಿಶೇಷವಾಗಿರುತ್ತದೆ.

ಇಂತಹ ವಿಶೇಷ ಅನುಭವ ನೀಡುವ ಪುಸ್ತಕ 'ಸಂಗಮಾದರ್ಶ'. ಖ್ಯಾತ ಕೃಷಿವಿಜ್ಞಾನಿ ಡಾ. ಸಂಗಮನಾಥ ವಿರೂಪಾಕ್ಷ ಮೆಣಸಿನಕಾಯಿಯವರ ಜೀವನ ಚಿತ್ರಣ ನೀಡುವ ಈ ಕೃತಿಯನ್ನು ಮತ್ತೊಬ್ಬ ಕೃಷಿವಿಜ್ಞಾನಿ ಡಾ. ಶರಣಬಸವೇಶ್ವರ ಅಂಗಡಿಯವರು ಬರೆದಿದ್ದಾರೆ. ಅಸಾಧಾರಣ ಕೃಷಿವಿಜ್ಞಾನಿ ಹಾಗೂ ಶಿಕ್ಷಣತಜ್ಞರಾಗಿದ್ದ ಸಂಗಮನಾಥ ಮೆಣಸಿನಕಾಯಿಯವರು ಧಾರವಾಡ ಕೃಷಿ ಕಾಲೇಜು - ವಿಶ್ವವಿದ್ಯಾಲಯಗಳ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದರು.

ಸೋಮವಾರ, ಫೆಬ್ರವರಿ 29, 2016

ಕೆ. ಪಿ. ರಾಯರಿಗೆ ಹ್ಯಾಪಿ ಬರ್ತ್‌ಡೇ!

ಕಂಪ್ಯೂಟರಿಗೆ ಕನ್ನಡ ಕಲಿಸಿದ ಮೇಷ್ಟರು ಶ್ರೀ ಕೆ. ಪಿ. ರಾಯರಿಗೆ ಹ್ಯಾಪಿ ಬರ್ತ್‌ಡೇ ಹೇಳುವ ಅವಕಾಶ ನಮಗೆ ಸಿಗುವುದು ನಾಲ್ಕು ವರ್ಷಕ್ಕೊಮ್ಮೆ. ಇವತ್ತು (ಫೆ. ೨೯, ೨೦೧೬) ಅಂತಹ ಅವಕಾಶಗಳಲ್ಲೊಂದು ನಮ್ಮ ಪಾಲಿಗೆ ಸಿಕ್ಕಿದೆ. ಇಜ್ಞಾನದಲ್ಲಿ ಈ ಹಿಂದೆ ಪ್ರಕಟವಾಗಿದ್ದ ಕೆ. ಪಿ. ರಾವ್ ಜೀವನ-ಸಾಧನೆ ಕುರಿತ ಲೇಖನವನ್ನು ಈ ಸಂದರ್ಭದಲ್ಲಿ ಖುಷಿಯಿಂದ ಮರುಪ್ರಕಟಿಸುತ್ತಿದ್ದೇವೆ.

ಟಿ. ಜಿ. ಶ್ರೀನಿಧಿ

ಕಂಪ್ಯೂಟರಿನಲ್ಲಿರಲಿ, ಮೊಬೈಲ್-ಟ್ಯಾಬ್ಲೆಟ್ಟುಗಳಲ್ಲಿರಲಿ ಕನ್ನಡ ಸರಾಗವಾಗಿ ಮೂಡುವುದು ನಮ್ಮ ಪಾಲಿಗೆ ಹೊಸ ವಿಷಯವೇನೂ ಅಲ್ಲ. 
ಆದರೆ ಕೆಲ ದಶಕಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಕಂಪ್ಯೂಟರುಗಳೇ ಅಪರೂಪವಾಗಿದ್ದ ಆ ಕಾಲದಲ್ಲಿ ಕಂಪ್ಯೂಟರ್ ಬಳಸಬೇಕು ಎಂದರೆ ಇಂಗ್ಲಿಷ್ ಗೊತ್ತಿರಲೇಬೇಕು ಎನ್ನುವಂತಹ ಪರಿಸ್ಥಿತಿ ಇತ್ತು. 

ಫೋನಿನಲ್ಲಿ ಕನ್ನಡ ಓದಬಹುದು, ಕನ್ನಡ ಟೈಪುಮಾಡುವುದೂ ಸುಲಭ ಎಂದೆಲ್ಲ ವಿವರಿಸುವ ನಮಗೆ ಕಂಪ್ಯೂಟರ್ ಪ್ರಪಂಚದಲ್ಲಿ ಕನ್ನಡವೇ ಕಾಣಸಿಗದಿದ್ದ ದಿನಗಳನ್ನು ಊಹಿಸುವುದೇ ಕಷ್ಟ, ಅಲ್ಲವೆ?

ಅಂತಹ ದಿನಗಳಲ್ಲೂ ಕಂಪ್ಯೂಟರ್ ಪ್ರಪಂಚದಲ್ಲಿ ಸಕ್ರಿಯರಾಗಿದ್ದ ಕನ್ನಡದ ಭಗೀರಥರು ತಮ್ಮ ಅದಮ್ಯ ಉತ್ಸಾಹದಿಂದ ಕಂಪ್ಯೂಟರಿಗೂ ಅ-ಆ-ಇ-ಈ ಹೇಳಿಕೊಟ್ಟರು; ಡಿಜಿಟಲ್ ಲೋಕದಲ್ಲಿ ಕನ್ನಡ ಹುಲುಸಾಗಿ ಬೆಳೆಯಲು ಕಾರಣರಾದರು.

ಇಂಗ್ಲಿಷ್ ನಾಡಿನಿಂದ ಬಂದ ಕಂಪ್ಯೂಟರ್, ಇಂತಹ ಮೇಷ್ಟರೊಬ್ಬರ ನೆರವಿನಿಂದ ಕನ್ನಡ ಕಲಿತ ಕತೆ ಇಲ್ಲಿದೆ.

ಭಾನುವಾರ, ಫೆಬ್ರವರಿ 28, 2016

ರಾಷ್ಟ್ರೀಯ ವಿಜ್ಞಾನ ದಿನ

ಪ್ರತಿ ವರ್ಷ ಫೆಬ್ರವರಿ ೨೮ನೇ ದಿನಾಂಕವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ. ವಿಜ್ಞಾನ ಹಾಗೂ ನಮ್ಮ ಜೀವನದಲ್ಲಿ ಅದರ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯ ಉದ್ದೇಶ. ಉಪನ್ಯಾಸಗಳು, ಚರ್ಚಾಸ್ಪರ್ಧೆಗಳು, ರಸಪ್ರಶ್ನೆ, ವಸ್ತುಪ್ರದರ್ಶನ - ಹೀಗೆ ಅನೇಕ ಚಟುವಟಿಕೆಗಳನ್ನು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಂದರ್ಭದಲ್ಲಿ ದೇಶದ ವಿವಿಧೆಡೆ ಹಮ್ಮಿಕೊಳ್ಳಲಾಗುತ್ತದೆ. ಈ ಸಂದರ್ಭದಲ್ಲಿ  ರಾಷ್ಟ್ರೀಯ ವಿಜ್ಞಾನ ದಿನದ ಮಹತ್ವ ಕುರಿತ ಸಣ್ಣದೊಂದು ಲೇಖನ ಇಲ್ಲಿದೆ.
ಟಿ. ಜಿ. ಶ್ರೀನಿಧಿ

ಭಾರತದ ಹೆಮ್ಮೆಯ ವಿಜ್ಞಾನಿ ಸರ್ ಸಿ ವಿ ರಾಮನ್ ಅವರ ಅಪೂರ್ವ ಸಾಧನೆಯ ನೆನಪಿನಲ್ಲಿ ಈ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನ ಎಂದು ಗುರುತಿಸಲಾಗಿದೆ. ಅವರು ೧೯೨೮ರ ಫೆಬ್ರವರಿ ೨೮ರಂದು 'ರಾಮನ್ ಇಫೆಕ್ಟ್' ಎಂದೇ ಪ್ರಸಿದ್ಧವಾದ ತಮ್ಮ ಅಧ್ಯಯನದ ವಿವರಗಳನ್ನು ಜಗತ್ತಿಗೆ ತಿಳಿಸಿದ್ದರು.

ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊತ್ತಮೊದಲ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸಿ ವಿ ರಾಮನ್ ಅವರ ಪೂರ್ಣ ಹೆಸರು ಚಂದ್ರಶೇಖರ ವೆಂಕಟರಾಮನ್ ಎಂದು. ಅವರು ಜನಿಸಿದ್ದು ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ, ೧೮೮೮ರ ನವೆಂಬರ್ ೭ರಂದು. ಅವರ ತಂದೆ ಚಂದ್ರಶೇಖರ ಅಯ್ಯರ್ ಗಣಿತ ಹಾಗೂ ಭೌತವಿಜ್ಞಾನದ ಶಿಕ್ಷಕರಾಗಿದ್ದರು. ನೋಬೆಲ್ ಪ್ರಶಸ್ತಿ ಪಡೆದ ಮತ್ತೋರ್ವ ವಿಜ್ಞಾನಿ ಸುಬ್ರಹ್ಮಣ್ಯಂ ಚಂದ್ರಶೇಖರ್ ಅವರು ಸಿ ವಿ ರಾಮನರ ಸ್ವಂತ ಅಣ್ಣನ ಮಗ.

ಗುರುವಾರ, ಫೆಬ್ರವರಿ 25, 2016

ಜೆನ್‌ಫೋನ್ ಮ್ಯಾಕ್ಸ್: ಮೊಬೈಲೂ ಹೌದು, ಪವರ್‌ಬ್ಯಾಂಕೂ ಹೌದು!

ಟಿ. ಜಿ. ಶ್ರೀನಿಧಿ


ಮೊಬೈಲ್ ಫೋನುಗಳು ಸ್ಮಾರ್ಟ್ ಆಗಿ ಕೆಲ ವರ್ಷ ಕಳೆದಿವೆಯಲ್ಲ, ಈ ಅವಧಿಯಲ್ಲಿ ಏನೆಲ್ಲ ಬದಲಾಗಿದೆ: ಕರೆ ಮಾಡಲು ಮತ್ತು ಎಸ್ಸೆಮ್ಮೆಸ್ ಕಳುಹಿಸಲಷ್ಟೆ ಸೀಮಿತವಾಗಿದ್ದ ಮೊಬೈಲುಗಳು ಇದೀಗ ಅಂಗೈ ಮೇಲಿನ ಕಂಪ್ಯೂಟರುಗಳೇ ಆಗಿಹೋಗಿವೆ. ಹೊಸ ಮಾದರಿಗಳು ಮಾರುಕಟ್ಟೆಗೆ ಬಂದಂತೆಲ್ಲ ಮೊಬೈಲಿನಲ್ಲಿ ಸಿಗುವ ಸೌಲಭ್ಯಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಅದರ ಜೊತೆಗೆ ಮೊಬೈಲುಗಳ ಬೆಲೆಯೂ ಕಡಿಮೆಯಾಗುತ್ತಿದೆ. ಕಳೆದ ವರ್ಷದ 'ಟಾಪ್-ಎಂಡ್' ಮಾಡೆಲಿನಲ್ಲಿ ದೊರಕುತ್ತಿದ್ದ ಸೌಲಭ್ಯ ಈ ವರ್ಷದ 'ಬಜೆಟ್' ಫೋನಿಗೇ ಸೇರಿರುವುದು ಇದೀಗ ಸರ್ವೇಸಾಮಾನ್ಯ.

ಅಂದಹಾಗೆ ಕಡಿಮೆಯಾಗುತ್ತಿರುವುದು ಮೊಬೈಲಿನ ಬೆಲೆಯಷ್ಟೇ ಅಲ್ಲ: ಪ್ರತಿ ಚಾರ್ಜಿನ ನಂತರ ಫೋನಿನ ಬ್ಯಾಟರಿ ಬಾಳಿಕೆಬರುವ ಸಮಯವೂ ಗಣನೀಯವಾಗಿ ಕಡಿಮೆಯಾಗಿದೆ.

ಮಂಗಳವಾರ, ಫೆಬ್ರವರಿ 23, 2016

ಮಾಹಿತಿ ತಂತ್ರಜ್ಞಾನ ಮತ್ತು ಬೆಂಗಳೂರು

ಟಿ. ಜಿ. ಶ್ರೀನಿಧಿ


ಜನಸಾಮಾನ್ಯರಿಗೆ ಮಾಹಿತಿ ತಂತ್ರಜ್ಞಾನದ ಪರಿಚಯವಾಗಿ ಹೆಚ್ಚು ಸಮಯವಾಗಿಲ್ಲ ಎನ್ನುವುದೇನೋ ನಿಜ. ಆದರೆ ಕಂಪ್ಯೂಟರ್ ವಿಜ್ಞಾನ ಹಾಗೂ ನಮ್ಮ ದೇಶದ ನಂಟು ಸಾಕಷ್ಟು ಹಳೆಯದು. ಭಾರತದ ವೈಜ್ಞಾನಿಕ ಕಾರ್ಯಕ್ರಮಗಳಿಗೆ ಭದ್ರ ಬುನಾದಿ ಹಾಕಿಕೊಟ್ಟ ಹೋಮಿ ಭಾಭಾರಂತಹ ದಾರ್ಶನಿಕರ ಪ್ರಯತ್ನಗಳನ್ನು ಇದರ ಹಿನ್ನೆಲೆಯಲ್ಲಿ ನಾವು ಕಾಣಬಹುದು. ಭಾರತದಲ್ಲಿ ಕಂಪ್ಯೂಟರ್ ವಿಜ್ಞಾನ ಕ್ಷೇತ್ರದ ಭೀಷ್ಮಪಿತಾಮಹ ಪ್ರೊ. ಆರ್. ನರಸಿಂಹನ್ ನೇತೃತ್ವದಲ್ಲಿ ನಮ್ಮ ಮೊದಲ ಕಂಪ್ಯೂಟರ್ TIFRAC ಸೃಷ್ಟಿಯ ಕೆಲಸ ೧೯೫೦ರ ದಶಕದಲ್ಲೇ ಪ್ರಾರಂಭವಾಗಿತ್ತು.

ಶುಕ್ರವಾರ, ಫೆಬ್ರವರಿ 19, 2016

ಸರ್ವಾಂತರ್ಯಾಮಿ ಯುಎಸ್‌ಬಿ

ಟಿ. ಜಿ. ಶ್ರೀನಿಧಿ

ಒಂದು ಕಾಲವಿತ್ತು, ಆಗ ಕಂಪ್ಯೂಟರಿನ ಪ್ರತಿಯೊಂದು ಪರಿಕರವನ್ನೂ ಬೇರೆಬೇರೆ ರೀತಿಯಲ್ಲಿ ಜೋಡಿಸಬೇಕಿತ್ತು. ಪ್ರಿಂಟರುಗಳಿಗೆ ಪ್ಯಾರಲಲ್ ಪೋರ್ಟಿನ ಸಂಪರ್ಕ, ಮೋಡೆಮ್‌ಗೆ ಸೀರಿಯಲ್ ಪೋರ್ಟಿನ ಸಂಪರ್ಕವೆಲ್ಲ ಆಗ ಸರ್ವೇಸಾಮಾನ್ಯವಾಗಿತ್ತು. ನಿರ್ದಿಷ್ಟ ಬಗೆಯ ಪೋರ್ಟ್‌ಗಳು ಇರುತ್ತಿದ್ದದ್ದೇ ಒಂದೋ ಎರಡೋ, ಅವು ಮುಗಿದ ಮೇಲೆ ಬೇರೊಂದು ಪರಿಕರವನ್ನು ಸಂಪರ್ಕಿಸುವುದೆಂದರೆ ಅದೊಂದು ತಲೆನೋವಿನ ಸಂಗತಿಯೇ ಆಗಿತ್ತು.

ಕಂಪ್ಯೂಟರಿನ ಮಾತು ಹಾಗಿರಲಿ, ಮೊಬೈಲ್ ಫೋನುಗಳ ಹಣೆಬರಹವೂ - ತೀರಾ ಇತ್ತೀಚಿನವರೆಗೆ - ಹೀಗೆಯೇ ಇತ್ತು: ಸೋನಿ ಎರಿಕ್ಸನ್ನಿನ ಕೇಬಲ್ಲು ನೋಕಿಯಾಗೆ ಆಗಿಬರದು, ಸ್ಯಾಮ್‌ಸಂಗ್‌ನದು ಮೋಟರೋಲಾಗೆ ಸರಿಹೊಂದದು. ಒಂದೊಂದು ಫೋನಿಗೆ ಒಂದೊಂದು ಬಗೆಯ ಕೇಬಲ್ ಸಂಪರ್ಕ, ಪ್ರತಿಯೊಂದಕ್ಕೂ ಬೇರೆಬೇರೆ ಚಾರ್ಜರ್!

ಇಷ್ಟೆಲ್ಲ ತಲೆನೋವನ್ನು ಬಹುಮಟ್ಟಿಗೆ ತಪ್ಪಿಸಿದ ಶ್ರೇಯ ಒಂದು ಮಾನಕಕ್ಕೆ (ಸ್ಟಾಂಡರ್ಡ್) ಸಲ್ಲಬೇಕು.

ಬುಧವಾರ, ಫೆಬ್ರವರಿ 17, 2016

ರೂ. ೨೫೧ಕ್ಕೆ ಮೊಬೈಲ್ ಫೋನ್!

ಇಜ್ಞಾನ ವಾರ್ತೆ


ರಿಂಗಿಂಗ್ ಬೆಲ್ಸ್ ಎಂಬ ನೋಯ್ಡಾ ಮೂಲದ ಮೊಬೈಲ್ ತಯಾರಿಕಾ ಸಂಸ್ಥೆ 'ಫ್ರೀಡಂ ೨೫೧' ಎಂಬ ಹೊಸ ಮೊಬೈಲ್ ಫೋನನ್ನು ಪರಿಚಯಿಸಿದ್ದು ಅದನ್ನು ರೂ. ೨೫೧ಕ್ಕೆ ಮಾರುತ್ತೇನೆಂದು ಹೇಳುವ ಮೂಲಕ ಸಂಚಲನವನ್ನೇ ಸೃಷ್ಟಿಸಿದೆ. ೧.೩ ಗಿಗಾಹರ್ಟ್ಸ್‌ನ ಪ್ರಾಸೆಸರ್, ನಾಲ್ಕು ಇಂಚಿನ ಸ್ಪರ್ಶಸಂವೇದಿ ಪರದೆ, ೧ ಜಿಬಿ ರ್‍ಯಾಮ್, ೮ ಜಿಬಿ ಶೇಖರಣಾ ಸಾಮರ್ಥ್ಯ, ೩.೨ ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹಾಗೂ ೦.೩ ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾಗಳಿರುವ ಈ ಫೋನಿನ ಮುಂಗಡ ಬುಕಿಂಗ್ ನಾಳೆ (ಫೆಬ್ರುವರಿ ೧೮, ೨೦೧೬) ಬೆಳಿಗ್ಗೆ ೬ರಿಂದ ಶುರುವಾಗಲಿದೆಯಂತೆ.

ಮಂಗಳವಾರ, ಫೆಬ್ರವರಿ 16, 2016

ಮಕ್ಕಳಿಗೊಂದು ಅರಿವಿನ ವೇದಿಕೆ

ರಂಗಸ್ವಾಮಿ ಮೂಕನಹಳ್ಳಿ

ಬೆಂಗಳೂರಿನ ವಸಂತ ಪ್ರಕಾಶನ ಸಂಸ್ಥೆ 'ಪುಸ್ತಕ ಮಹಲ್ ' ಪ್ರಕಾಶನ ಸಂಸ್ಥೆಯ ಸಹಭಾಗಿತ್ವದಲ್ಲಿ  'ಮಕ್ಕಳ ಜ್ಞಾನಕೋಶ'ವನ್ನು ನಾಲ್ಕು ಸಂಪುಟಗಳಲ್ಲಿ ಹೊರತರಲಿದೆ. ಆ ಪೈಕಿ ಮೊದಲೆರಡು ಸಂಪುಟಗಳು ಇದೀಗ ಮಾರುಕಟ್ಟೆಗೆ ಬಂದಿದ್ದು, ಉಳಿದೆರಡು ಸದ್ಯದಲ್ಲೇ ಸಹೃದಯರ ಕೈಸೇರಲಿದೆ .

ಮಂಜುಗಡ್ಡೆ ನೀರಿನ ಮೇಲೆ ಏಕೆ ತೇಲುತ್ತದೆ? ನಾಲಿಗೆಗೆ ರುಚಿ ಹೇಗೆ ತಿಳಿಯುತ್ತದೆ? ಆಹಾರವಿಲ್ಲದೆ ಮನಷ್ಯ ಎಷ್ಟು ದಿನ ಬದುಕಿರಬಹುದು? ಶುಷ್ಕ ಹಿಮ ಎಂದರೇನು? ವಿಶ್ವವು ಹೇಗೆ ಆಸ್ತಿತ್ವಕ್ಕೆ ಬಂತು? ಇಂಗ್ಲಿಷ್ ಭಾಷೆ ಹೇಗೆ ಜನ್ಮ ತಾಳಿತು? ನಮಗೇಕೆ ಜ್ವರ ಬರುತ್ತದೆ? ಜನ ಮೊದಲು ಹಣವನ್ನು ಬಳಸಿದ್ದು ಯಾವಾಗ? ಪೈ ಏಕೆ ವಿಶಿಷ್ಟ ಸಂಖ್ಯೆ? - ಹೀಗೆ ವಿಜ್ಞಾನ  ತಂತ್ರಜ್ಞಾನ, ಸಸ್ಯ, ಪ್ರಾಣಿ, ವಿಶ್ವ, ಅಂತರಿಕ್ಷ, ವೈದ್ಯಕೀಯ, ಪ್ರಕೃತಿ ಪರಿಸರ, ವ್ಯಕ್ತಿ, ಅನ್ವೇಷಣೆ ಎಲ್ಲವನ್ನೂ ಕುರಿತು ಮಕ್ಕಳ ಮನದಲ್ಲಿ ಮೂಡಬಹುದಾದ ಎಲ್ಲಾ ರೀತಿಯ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ.

ಗುರುವಾರ, ಫೆಬ್ರವರಿ 11, 2016

ಫೆಬ್ರುವರಿ ೧೧-೧೨: ಮೋಟೊರೋಲಾ ಫೋನುಗಳ ಮೇಲೆ ವಿಶೇಷ ರಿಯಾಯಿತಿ


ಲೆನೋವೋ ಜೊತೆಸೇರಿ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಮೂರನೆಯ ಸ್ಥಾನ ಪಡೆದಿರುವ ಮೋಟೊರೋಲಾ ಫೋನುಗಳ ಮೇಲೆ ಫ್ಲಿಪ್‌ಕಾರ್ಟ್ ವಿಶೇಷ ರಿಯಾಯಿತಿಗಳನ್ನು ಘೋಷಿಸಿದೆ.

ಈ ಕೊಡುಗೆ ಮೋಟೊರೋಲಾ ಫೋನುಗಳು (ಮೋಟೋ ಇ೨, ಮೋಟೋ ಜಿ೩, ಮೋಟೋ ಜಿ ಟರ್ಬೋ, ಮೋಟೋ ಎಕ್ಸ್ - ಪ್ಲೇ, ಸ್ಟೈಲ್ ಹಾಗೂ ಫೋರ್ಸ್) ಹಾಗೂ ಸ್ಮಾರ್ಟ್‌ವಾಚುಗಳಿಗೆ (ಮೋಟೋ ೩೬೦ ೨ನೇ ತಲೆಮಾರು) ಅನ್ವಯಿಸುತ್ತದೆ.

ಮಂಗಳವಾರ, ಫೆಬ್ರವರಿ 9, 2016

ಎಲ್‌ಇಡಿ ಬೆಳಗೋಣ ಬನ್ನಿ!

ಇಜ್ಞಾನ ವಾರ್ತೆ

ಸಂಪನ್ಮೂಲಗಳನ್ನು ಜವಾಬ್ದಾರಿಯುತವಾಗಿ ಬಳಸುವ ಅಗತ್ಯ ಈಗ ಹಿಂದೆಂದಿಗಿಂತಲೂ ಹೆಚ್ಚಿದೆ. ಈ ನಿಟ್ಟಿನಲ್ಲಿ ಕೆಲವು ಸರಳ ಆದರೂ ಪರಿಣಾಮಕಾರಿಯಾದ ಕ್ರಮಗಳನ್ನು ನಾವೂ ಕೈಗೊಳ್ಳಬಹುದು. ವಿದ್ಯುತ್ ಬಳಕೆಯನ್ನು ಮಿತಗೊಳಿಸುವುದು ಇಂತಹ ಕ್ರಮಗಳಲ್ಲೊಂದು. ಇದನ್ನು ಸಾಧ್ಯವಾಗಿಸುವ ಒಂದು ಮಾರ್ಗ ಎಲ್‌ಇಡಿ ಬಲ್ಬುಗಳ ಬಳಕೆ [ಎಲ್ಲೆಲ್ಲೂ ಎಲ್‌ಇಡಿ]. ಎಲ್‌ಇಡಿ ಬಲ್ಬುಗಳು ಹೆಚ್ಚಿನ ಪ್ರಕಾಶ ನೀಡುವುದಷ್ಟೇ ಅಲ್ಲ, ಕಡಿಮೆ ವಿದ್ಯುತ್ ಬಳಸುವ ಮೂಲಕ ಜೇಬಿನ ಮೇಲಿನ ಒತ್ತಡವನ್ನೂ ಕಡಿಮೆಮಾಡುತ್ತವೆ!

ಈ ವಿಷಯ ಗೊತ್ತಿದ್ದರೂ ಎಲ್‌ಇಡಿ ಬಲ್ಬುಗಳ ದುಬಾರಿ ಬೆಲೆಯಿಂದಾಗಿ ಅನೇಕರು ಅವುಗಳಿಂದ ದೂರವೇ ಉಳಿದಿದ್ದರು. ಈಗ, ಕೇಂದ್ರ ಸರಕಾರದ 'ಡೊಮೆಸ್ಟಿಕ್ ಎಫೀಶಿಯೆಂಟ್ ಲೈಟಿಂಗ್ ಪ್ರೋಗ್ರಾಮ್ (ಡಿಇಎಲ್‌ಪಿ)' ದೆಸೆಯಿಂದ ಎಲ್‌ಇಡಿ ಬಲ್ಬುಗಳ ಬೆಲೆ ಕೈಗೆಟುಕುವ ಮಟ್ಟಕ್ಕೆ ಬಂದು ತಲುಪಿದೆ. ಈ ಕಾರ್ಯಕ್ರಮದನ್ವಯ ಒಂಬತ್ತು ವ್ಯಾಟ್‌ನ ಎಲ್‌ಇಡಿ ಬಲ್ಬುಗಳನ್ನು ತಲಾ ನೂರು ರೂಪಾಯಿಯಂತೆ ಬಳಕೆದಾರರಿಗೆ ತಲುಪಿಸಲಾಗುತ್ತಿದೆ. ಅದೂ ಅಂತಿಂಥ ಚೀನಾ ಮಾಲಲ್ಲ, ಹೆಸರಾಂತ ಸಂಸ್ಥೆಗಳು ತಯಾರಿಸುವ ಬಲ್ಬನ್ನೇ!

ಈ ಯೋಜನೆಯ ಹಿಂದಿರುವುದು ಭಾರತ ಸರಕಾರದ ಎನರ್ಜಿ ಎಫಿಶಿಯೆನ್ಸಿ ಸರ್ವೀಸಸ್ ಲಿಮಿಟೆಡ್ (ಇಇಎಸ್ಎಲ್) ಎಂಬ ಸಂಸ್ಥೆ.

ಶನಿವಾರ, ಜನವರಿ 30, 2016

ಜೆನ್‌ಫೋನ್ ಜೂಮ್: ಡಿಜಿಟಲ್ ಕ್ಯಾಮೆರಾಗೆ ಮೊಬೈಲಿನ ಸವಾಲು

ಟಿ. ಜಿ. ಶ್ರೀನಿಧಿ


ಮೊಬೈಲ್ ಕ್ಯಾಮೆರಾ ಮಾಯಾಜಾಲದ ಕುರಿತು ಇಜ್ಞಾನದಲ್ಲಿ ಈ ಹಿಂದೆ ಪ್ರಕಟವಾದ ಲೇಖನ ನಿಮಗೆ ನೆನಪಿರಬಹುದು. "ಮೊಬೈಲ್ ಫೋನ್ ಬಂದ ಮೇಲೆ ತಮ್ಮ ಮಹತ್ವ ಕಳೆದುಕೊಂಡ ಸಾಧನಗಳ ಪೈಕಿ ಡಿಜಿಟಲ್ ಕ್ಯಾಮೆರಾಗೆ ಪ್ರಮುಖ ಸ್ಥಾನ" ಎನ್ನುವ ಅಂಶಕ್ಕೆ ಆ ಲೇಖನದಲ್ಲಿ ಒತ್ತು ಕೊಡಲಾಗಿತ್ತು.

ಈಗ ಮಾರುಕಟ್ಟೆಗೆ ಬರುತ್ತಿರುವ ಹೊಸ ಮೊಬೈಲುಗಳನ್ನು ನೋಡಿದರೆ ಈ ಅಂಶ ಇನ್ನಷ್ಟು ಸ್ಪಷ್ಟವಾಗುತ್ತ ಹೋಗುತ್ತದೆ. ಏಕೆಂದರೆ ಡಿಜಿಟಲ್ ಕ್ಯಾಮೆರಾಗಳಿಗೆ ಪೂರಕವಾಗಿ ರೂಪುಗೊಂಡ ಮೊಬೈಲ್ ಕ್ಯಾಮೆರಾಗಳು ಇದೀಗ ಅವುಗಳಿಗೆ ಸಶಕ್ತ ಪರ್ಯಾಯವಾಗಿಯೂ ಬೆಳೆಯುತ್ತಿವೆ.

ಈ ಅನಿಸಿಕೆಗೆ ಪುಷ್ಟಿಕೊಡುವಂತಹ ವಿಶಿಷ್ಟ ಮೊಬೈಲ್ ದೂರವಾಣಿಯೊಂದು ಇದೀಗ ಬಂದಿದೆ. ಏಸಸ್ ಸಂಸ್ಥೆ ರೂಪಿಸಿರುವ 'ಜೆನ್‌ಫೋನ್ ಜೂಮ್' ಎಂಬ ಈ ಮೊಬೈಲ್ ೨೦೧೬ರ ಜನವರಿ ೨೨ರಂದು ಆಗ್ರಾದಲ್ಲಿ ನಡೆದ ಕಾರ್ಯಕ್ರಮದ ಮೂಲಕ ಅಧಿಕೃತವಾಗಿ ಭಾರತೀಯ ಮಾರುಕಟ್ಟೆ ಪ್ರವೇಶಿಸಿತು. ಈ ಸಾಧನದ ಪರಿಚಯ ಇಗೋ ಇಲ್ಲಿದೆ ನಿಮಗಾಗಿ!

ಮಂಗಳವಾರ, ಜನವರಿ 26, 2016

ಜಾಲಲೋಕದಲ್ಲಿ ಸುಳ್ಳುಗಳ ಜಾಲ

ಟಿ. ಜಿ. ಶ್ರೀನಿಧಿ

ಇದು ಮಾಹಿತಿಯ ಯುಗ. ಎಲ್ಲ ಕಡೆಗಳಿಂದ ಎಲ್ಲ ಸಮಯದಲ್ಲೂ ನಮ್ಮತ್ತ ಮಾಹಿತಿಯ ಮಹಾಪೂರವೇ ಹರಿದು ಬರುತ್ತಿರುತ್ತದೆ.

ಒಂದು ನಿಮಿಷದ ಅವಧಿ ಬಹಳಷ್ಟು ಸಂದರ್ಭಗಳಲ್ಲಿ ನಮಗೆ ಕ್ಷುಲ್ಲಕವೆಂದು ತೋರುತ್ತದಲ್ಲ, ಇಷ್ಟೇ ಸಮಯ ಮಾಹಿತಿಯ ಲೋಕದಲ್ಲಿ ಅದೆಷ್ಟೋ ಚಟುವಟಿಕೆಗಳಿಗೆ ಸಾಕ್ಷಿಯಾಗಿರುತ್ತದೆ. ಫೇಸ್‌ಬುಕ್ ಗೋಡೆಯ ಮೇಲೆ ಒಂದು ನಿಮಿಷದ ಅವಧಿಯಲ್ಲಿ ಅದೆಷ್ಟೋ ಸಾವಿರ ಹೊಸ ಪೋಸ್ಟುಗಳು ಕಾಣಿಸಿಕೊಳ್ಳುತ್ತವೆ, ಹತ್ತಾರು ಲಕ್ಷ ಲೈಕುಗಳು ದಾಖಲಾಗುತ್ತವೆ. ಲಕ್ಷಗಟ್ಟಲೆ ಟ್ವೀಟುಗಳು, ವಾಟ್ಸ್‌ಆಪ್ ಸಂದೇಶಗಳು, ಇನ್ಸ್‌ಟಾಗ್ರಾಮಿನ ಚಿತ್ರಗಳು, ಯೂಟ್ಯೂಬ್ ವೀಡಿಯೋಗಳೆಲ್ಲ ಮಾಹಿತಿಯ ಈ ಮಹಾಪೂರಕ್ಕೆ ತಮ್ಮ ಕೊಡುಗೆ ಸಲ್ಲಿಸುತ್ತವೆ.

ಇಷ್ಟೆಲ್ಲ ಪ್ರಮಾಣದಲ್ಲಿ ಹರಿದುಬರುತ್ತದಲ್ಲ ಮಾಹಿತಿ, ಅದು ನಮ್ಮ ಬದುಕಿನಲ್ಲಿ ಗಮನಾರ್ಹ ಬದಲಾವಣೆಗಳನ್ನು ತಂದಿದೆ. ವಿಭಿನ್ನ ವಿಷಯಗಳನ್ನು ಕುರಿತ ಅರಿವು, ಹೊಸ ಒಳನೋಟಗಳನ್ನೆಲ್ಲ ಎಲ್ಲಿ ಯಾವಾಗ ಬೇಕಾದರೂ ಪಡೆದುಕೊಳ್ಳುವುದು ಸಾಧ್ಯವಾಗಿದೆ.

ಎಡೆಬಿಡದೆ ನಿರಂತರವಾಗಿ ಹರಿದುಬರುವ ಅಷ್ಟೂ ಮಾಹಿತಿ ಉಪಯುಕ್ತವಾದುದಾಗಿದ್ದರೆ ಹ್ಯಾಪಿ ಎಂಡಿಂಗ್ ಸಿನಿಮಾದಂತೆ ಒಳ್ಳೆಯದೇ ಆಯಿತು ಬಿಡಿ ಎನ್ನಬಹುದಿತ್ತು - ಜ್ಞಾನದ ಸಿರಿ ಎಷ್ಟಿದ್ದರೂ ಒಳ್ಳೆಯದೇ ತಾನೆ! ಆದರೆ ನೈಜ ಸ್ಥಿತಿ ಕೊಂಚ ಬೇರೆಯೇ:

ಮಂಗಳವಾರ, ಜನವರಿ 19, 2016

ಜಂತರ್ ಮಂತರ್ ಬಗೆಗೊಂದು ಪುಟಿಯುವ ಪುಟಗಳ ಪುಸ್ತಕ!

ಪ್ರಾಚೀನ ಭಾರತದಲ್ಲಿ ಏನಿತ್ತು ಏನಿರಲಿಲ್ಲ ಎನ್ನುವುದು ಸದಾಕಾಲ ಚರ್ಚೆಗೆ ಗ್ರಾಸವಾಗುವ ವಿಷಯ. ಒಂದು ಬಣ ನಮ್ಮಲ್ಲಿ ಎಲ್ಲವೂ ಇತ್ತು ಎಂದರೆ ಇನ್ನೊಂದು ಬಣ ಮೊದಲ ಬಣವನ್ನು ಹೀಗಳೆಯುವುದರಲ್ಲೇ ತೃಪ್ತಿ ಕಂಡುಕೊಳ್ಳುತ್ತದೆ. ಈ ಗಲಾಟೆಯಲ್ಲಿ ಪ್ರಾಚೀನ ಭಾರತದಲ್ಲಿ ನಿಜಕ್ಕೂ ಏನೆಲ್ಲ ಇತ್ತು ಎನ್ನುವ ಸಂಗತಿ, ಮತ್ತದರ ವಿವರಗಳು ಯಾವ ಬಣಕ್ಕೂ ಸೇರದ ನಮ್ಮಂತಹವರನ್ನು ತಲುಪುವುದೇ ಇಲ್ಲ.

ಈ ಕೊರತೆಯನ್ನು ಕೊಂಚಮಟ್ಟಿಗೆ ತುಂಬಿಕೊಡುವ ಅಪರೂಪದ ಕೆಲಸವೊಂದು ಇದೀಗ - ಅದೂ ಕನ್ನಡದಲ್ಲಿ - ನಡೆದಿದೆ, ಡಾ. ಬಿ. ಎಸ್. ಶೈಲಜಾ ಹಾಗೂ ಶ್ರೀ ವಿ. ಎಸ್. ಎಸ್. ಶಾಸ್ತ್ರಿಯವರ ಪರಿಕಲ್ಪನೆ 'ಜಂತರ್ ಮಂತರ್ - ಜೈಸಿಂಗ್ ವೀಕ್ಷಣಾಲಯಗಳು' ಎನ್ನುವ ಪುಸ್ತಕವಾಗಿ ಹೊರಬಂದಿದೆ. ಜೈಪುರ - ದೆಹಲಿಗಳಲ್ಲೆಲ್ಲ ಇರುವ ಪ್ರಾಚೀನ ಭಾರತದ ವೀಕ್ಷಣಾಲಯ ಜಂತರ್ ಮಂತರ್‌‌ನ ಬಗ್ಗೆ ನಾವೆಲ್ಲ ಕೇಳಿದ್ದೇವಲ್ಲ, ಈ ಪುಸ್ತಕ ಅಲ್ಲಿನ ಯಂತ್ರಗಳು ಹಾಗೂ ಅವುಗಳ ಕಾರ್ಯವೈಖರಿಯನ್ನು ವಿವರವಾಗಿ ಪರಿಚಯಿಸುತ್ತದೆ.

ಗುರುವಾರ, ಜನವರಿ 14, 2016

ಓಸಿಆರ್ ಎಂಬ ಅಕ್ಷರ ಜಾಣ

ಟಿ. ಜಿ. ಶ್ರೀನಿಧಿ

ಒಬ್ಬೊಬ್ಬರ ಕೈಬರಹ ಒಂದೊಂದು ರೀತಿ. ಕೆಲವರದ್ದು ಮುತ್ತು ಪೋಣಿಸಿದಷ್ಟು ಸುಂದರವಾಗಿದ್ದರೆ ಇನ್ನು ಕೆಲವರು ಬರೆದದ್ದು ಇಂಕಿನಲ್ಲಿ ಬಿದ್ದ ಜಿರಲೆ ಓಡಾಡಿದಂತೆ ಕಾಣುತ್ತದೆ.

ಇಷ್ಟೆಲ್ಲ ವಿವಿಧ ಬಗೆಯ ಕೈಬರಹಗಳನ್ನು ಓದುವುದು ದೊಡ್ಡ ಸವಾಲೇ ಸರಿ. ಚೆಂದದ ಬರಹಗಳನ್ನೇನೋ ಸರಾಗವಾಗಿ ಓದಬಹುದು; ಆದರೆ ಸುಸ್ಪಷ್ಟವಲ್ಲದ ಕೈಬರಹದಲ್ಲಿ ಏನು ಬರೆದಿದ್ದಾರೆ ಎಂದು ತಿಳಿಯುವುದೇ ಕಷ್ಟ. ಡಾಕ್ಟರು ಬರೆದದ್ದನ್ನೆಲ್ಲ ಸರಾಗವಾಗಿ ಓದಿಕೊಳ್ಳಲು ಎಲ್ಲರೂ ಮೆಡಿಕಲ್ ಸ್ಟೋರಿನವರೇ ಆಗಲು ಸಾಧ್ಯವೇ?

ಚಿಕ್ಕಂದಿನಿಂದಲೇ ಅಕ್ಷರಗಳ ಪರಿಚಯವಿದ್ದು, ಅವುಗಳ ಗಾತ್ರ-ವಿನ್ಯಾಸಗಳಲ್ಲಿನ ಬದಲಾವಣೆಗಳನ್ನು ಸುಲಭವಾಗಿ ಗುರುತಿಸುವ ಶಕ್ತಿಯೂ ಇರುವ ನಮ್ಮ ಕಥೆಯೇ ಹೀಗೆ. ಇನ್ನು ಯಾರೋ ಗೀಚಿದ ಬರಹವನ್ನು ಓದು ಎಂದು ಕಂಪ್ಯೂಟರಿಗೆ ಹೇಳಿದರೆ ಏನಾಗಬೇಡ? ಕೈಬರಹ ಹಾಗಿರಲಿ, ಮುದ್ರಿತ ಅಕ್ಷರಗಳನ್ನಾದರೂ ಓದಲು ಕಂಪ್ಯೂಟರಿಗೆ ಸಾಧ್ಯವೇ?

ಖಂಡಿತಾ ಸಾಧ್ಯ.

ಬುಧವಾರ, ಡಿಸೆಂಬರ್ 30, 2015

ಏಸಸ್ ಜೆನ್‌ಪ್ಯಾಡ್: ಮನರಂಜನೆಗೊಂದು ಹೊಸ ಟ್ಯಾಬ್ಲೆಟ್

ದೊಡ್ಡಗಾತ್ರದ ಮೊಬೈಲ್ ಫೋನುಗಳು ಸರ್ವೇಸಾಮಾನ್ಯವಾಗುತ್ತಿರುವ ಈ ದಿನಗಳಲ್ಲಿ ಟ್ಯಾಬ್ಲೆಟ್ಟುಗಳು ಪ್ರಸ್ತುತವೋ ಇಲ್ಲವೋ ಎನ್ನುವುದು ನಮಗೆ ಪದೇ ಪದೇ ಎದುರಾಗುವ ಪ್ರಶ್ನೆ. ಪರಿಸ್ಥಿತಿ ಹೀಗಿದ್ದರೂ ಮಾರುಕಟ್ಟೆಗೆ ಹೊಸ ಟ್ಯಾಬ್ಲೆಟ್ಟುಗಳು ಇನ್ನೂ ಬರುತ್ತಲೇ ಇವೆ, ಹೊಸ ಸೌಲಭ್ಯಗಳನ್ನೂ ಪರಿಚಯಿಸುತ್ತಿವೆ.

ಈಚೆಗೆ ಮಾರುಕಟ್ಟೆ ಪ್ರವೇಶಿಸಿರುವ ಏಸಸ್ ಸಂಸ್ಥೆಯ ಜೆನ್‌ಪ್ಯಾಡ್ ೭, ಇಂತಹುದೊಂದು ಟ್ಯಾಬ್ಲೆಟ್. ಅದರ ಪರಿಚಯ ಇಲ್ಲಿದೆ.


ಜೆನ್‌ಪ್ಯಾಡ್‌ನ ವಿನ್ಯಾಸ ಮೊದಲ ನೋಟಕ್ಕೇ ಗಮನಸೆಳೆಯುವಂತಿದೆ. ಹಿಂಬದಿ ರಕ್ಷಾಕವಚ ಪ್ಲಾಸ್ಟಿಕ್‌ನದೇ ಆದರೂ ಗೀರುಗಳಿರುವ (ಲೆದರ್‌/ರೆಗ್ಸಿನ್‌ನಂತಹ) ವಿನ್ಯಾಸದಿಂದಾಗಿ ಆಕರ್ಷಕವಾಗಿ ಕಾಣುತ್ತದೆ - ಜಾರುವುದಿಲ್ಲವಾದ್ದರಿಂದ ಹಿಡಿದುಕೊಳ್ಳಲೂ ಅನುಕೂಲಕರ.

ಮಂಗಳವಾರ, ಡಿಸೆಂಬರ್ 29, 2015

ಫ್ರೀ ಬೇಸಿಕ್ಸ್ ಎಂಬ ಗೊಂದಲದ ಸುತ್ತ

ಟಿ. ಜಿ. ಶ್ರೀನಿಧಿ

ಅಂತರಜಾಲವನ್ನು ಇನ್‌ಫರ್ಮೇಶನ್ ಸೂಪರ್‌ಹೈವೇ ಎಂದು ಕರೆಯುತ್ತಾರಲ್ಲ, ಅದನ್ನು ಒಂದು ರಸ್ತೆಯಾಗಿಯೇ ಕಲ್ಪಿಸಿಕೊಳ್ಳಿ. ಆ ರಸ್ತೆಯಲ್ಲಿ ಎಲ್ಲ ಜಾಲತಾಣ ಹಾಗೂ ಆಪ್ ಬಳಕೆದಾರರಿಗೆ ಸಂಬಂಧಪಟ್ಟ ಮಾಹಿತಿಯೂ ಓಡಾಡುತ್ತಿರುತ್ತದೆ. ಕೆಲವರದು ಎಸ್‌ಯುವಿ ಇರಬಹುದು, ಇನ್ನು ಕೆಲವರದು ಕಾರು-ಬೈಕು-ಬಸ್ಸು-ಲಾರಿಗಳಿರಬಹುದು, ಸೈಕಲ್ ಓಡಿಸುವವರೂ ಇರಬಹುದು. ಆದರೆ ರಸ್ತೆ ಮಾತ್ರ ಎಲ್ಲರಿಗೂ ಒಂದೇ. ಟೋಲ್ ಬಂದಾಗ ಟೋಲ್ ಪಾವತಿಸಿ, ಇಲ್ಲದಿದ್ದರೆ ಹಾಗೆಯೇ ಗಾಡಿ ಓಡಿಸುತ್ತಿರಿ.

ಇದ್ದಕ್ಕಿದ್ದ ಹಾಗೆ ಬಹುರಾಷ್ಟ್ರೀಯ ವಾಹನ ತಯಾರಿಕಾ ಸಂಸ್ಥೆಯೊಂದು ಆ ರಸ್ತೆಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡುಬಿಡುತ್ತದೆ; ತಾನು ತಯಾರಿಸುವ ಕಾರುಗಳಿಗೆ ಮಾತ್ರ ಆ ರಸ್ತೆಯಲ್ಲಿ ಪ್ರವೇಶ ಎಂದು ಹೇಳುತ್ತದೆ. ಅಷ್ಟೇ ಅಲ್ಲ, ಆ ರಸ್ತೆಯ ಮೂಲಕ ಯಾವ ಊರಿಗೆ ಹೋಗಬೇಕು, ದಾರಿಯಲ್ಲಿ ಎಲ್ಲಿ ನಿಲ್ಲಿಸಬೇಕು, ಕಾಫಿ ಎಲ್ಲಿ ಕುಡಿಯಬೇಕು, ಶೌಚಾಲಯಕ್ಕೆ ಎಲ್ಲಿ ಹೋಗಬೇಕು ಎನ್ನುವುದನ್ನೂ ತಾನೇ ನಿರ್ಧರಿಸುತ್ತದೆ. ಹಾಂ, ಇಷ್ಟು ಶರತ್ತುಗಳನ್ನು ಒಪ್ಪಿದರೆ ಸಾಕು, ರಸ್ತೆ ಬಳಸಲು ಟೋಲ್ ಕೊಡುವುದೇನೂ ಬೇಡ ನೋಡಿ!

ಇದೇನೋ ಅಸಂಬದ್ಧವಾಗಿದೆಯಲ್ಲ ಎನಿಸಿದರೆ ಒಂದು ಕ್ಷಣ ಆಚೀಚೆ ನೋಡಿ - ನಿಮ್ಮ ಮನೆಯ ದಿನಪತ್ರಿಕೆಯಲ್ಲಿ, ಟೀವಿ ಕಾರ್ಯಕ್ರಮದ ನಡುವೆ, ಪಕ್ಕದ ಬಸ್ ಸ್ಟಾಪ್ ಫಲಕದಲ್ಲಿ ನಿಮಗೆ 'ಫ್ರೀ ಬೇಸಿಕ್ಸ್'ನ ಜಾಹೀರಾತು ಕಾಣಸಿಗುತ್ತದೆ. ಇಂತಿಂಥವರು ಈ ಯೋಜನೆಯನ್ನು ಬೆಂಬಲಿಸಿದ್ದಾರೆ ಎನ್ನುವ ಮಾಹಿತಿಯಂತೂ ಫೇಸ್‌ಬುಕ್‌ನಲ್ಲಿ ಕಾಣಿಸುತ್ತಲೇ ಇರುತ್ತದೆ.

ಇಷ್ಟಕ್ಕೂ ಏನಿದು ಫ್ರೀ ಬೇಸಿಕ್ಸ್?

ಸೋಮವಾರ, ಡಿಸೆಂಬರ್ 28, 2015

ಕನಸುಗಳಿಗೆ ತಂತ್ರಜ್ಞಾನದ ರೆಕ್ಕೆ

ಟಿ. ಜಿ. ಶ್ರೀನಿಧಿ

ಮಿಕ್ಸರ್ ಗ್ರೈಂಡರಿನಿಂದ ಮಸಾಲೆ ದೋಸೆಯವರೆಗೆ, ದ್ವಿಚಕ್ರ ವಾಹನದಿಂದ ದ್ವಿದಳ ಧಾನ್ಯಗಳವರೆಗೆ ಈಗ ಪ್ರತಿಯೊಂದನ್ನೂ ಆನ್‌ಲೈನ್‌ನಲ್ಲೇ ಕೊಳ್ಳುವುದು ಸಾಧ್ಯ. ಮನೆಯಿಂದ ಹೊರಗೆ ಕಾಲಿಡಬೇಕಾದ ಅಗತ್ಯವಿಲ್ಲ, ಟ್ರಾಫಿಕ್ ಜಾಮ್ ಭಯವೂ ಇಲ್ಲ - ಕೈಲಿರುವ ಮೊಬೈಲಿನಲ್ಲೋ ಪಕ್ಕದ ಕಂಪ್ಯೂಟರಿನಲ್ಲೋ ಕ್ಷಣಾರ್ಧದಲ್ಲೇ ನಮಗೆ ಬೇಕಾದ ವಸ್ತುಗಳನ್ನು ಆರ್ಡರ್ ಮಾಡುವುದು, ಅದಕ್ಕಾಗಿ ಹಣಪಾವತಿಸುವುದು ಸಾಧ್ಯ. ಇಷ್ಟೆಲ್ಲ ಅನುಕೂಲದ ಜೊತೆಗೆ ಡಿಸ್ಕೌಂಟು-ಕ್ಯಾಶ್‌ಬ್ಯಾಕುಗಳ ಆಮಿಷ ಬೇರೆ!

ನಾವು ಕ್ಷಣಾರ್ಧದಲ್ಲಿ ಆರ್ಡರ್ ಮಾಡುವುದೇನೋ ಸರಿ, ಆದರೆ ಆರ್ಡರ್ ಮಾಡಿದ ವಸ್ತು ನಮ್ಮನ್ನು ತಲುಪುವುದು ಮಾತ್ರ ನಿಧಾನ. ದೋಸೆಯೂ ಪಿಜ್ಜಾ-ಬರ್ಗರ್‌ಗಳೂ ಅರ್ಧಗಂಟೆಯಷ್ಟು ಸಮಯ ತೆಗೆದುಕೊಂಡರೆ ಇತರ ವಸ್ತುಗಳು ನಮ್ಮನ್ನು ತಲುಪಲು ಅರ್ಧದಿನವೋ ಅರ್ಧವಾರವೋ ಬೇಕಾಗುತ್ತದೆ.

ಇದೇಕೆ ಹೀಗೆ? ಯಾವುದೋ ವಸ್ತು ಬೇಕೆಂದು ನಾವು ಸಲ್ಲಿಸಿದ ಬೇಡಿಕೆ ಸಂಕೇತಗಳ ರೂಪತಳೆದು ಅಂತರಜಾಲದಲ್ಲಿ ಹಾರಿಹೋಗುತ್ತದಲ್ಲ, ಅದೇ ರೀತಿ ಆ ವಸ್ತುವೂ ಹಾರಿಬಂದು ನಮ್ಮ ಕೈಸೇರುವುದು ಸಾಧ್ಯವಿಲ್ಲವೆ?

ಕಾಲ್ಪನಿಕ ಕತೆಯಂತೆ ಕಾಣುವ ಈ ಸನ್ನಿವೇಶವನ್ನು ನಿಜವಾಗಿಸಲು ಅನೇಕ ಪ್ರಯತ್ನಗಳು ಈಗಾಗಲೇ ನಡೆದಿವೆ. ಆ ಕುರಿತ ಸುದ್ದಿಗಳು ಹಳತೂ ಆಗಿಬಿಟ್ಟಿವೆ.

ಬುಧವಾರ, ಡಿಸೆಂಬರ್ 23, 2015

ಹೊಸ ಪುಸ್ತಕ: 'ಕಂಪ್ಯೂಟರ್‌ಗೆ ಪಾಠ ಹೇಳಿ...'

ನಮ್ಮಿಂದ ಹೇಳಿಸಿಕೊಳ್ಳದೆ ಕಂಪ್ಯೂಟರ್ ಯಾವ ಕೆಲಸವನ್ನೂ ಮಾಡುವುದಿಲ್ಲ; ಅದು ಏನು ಮಾಡುವುದಿದ್ದರೂ ನಾವು ಹೇಳಿದ್ದನ್ನಷ್ಟೆ, ಹೇಳಿದಂತೆಯೇ ಮಾಡುತ್ತದೆ ಎನ್ನುವುದು ನಮಗೆ ಗೊತ್ತು. ಆದರೆ ನಮಗೇನು ಬೇಕು ಎನ್ನುವುದನ್ನು ಕಂಪ್ಯೂಟರಿಗೆ ಹೇಳುವುದು ಹೇಗೆ?

ನಮಗೆ ಬೇಕಾದ ಕೆಲಸ ಮಾಡಿಕೊಡುವ ಸಾಫ್ಟ್‌ವೇರನ್ನು ಕೊಂಡುಕೊಂಡರೆ ಆಯಿತು ನಿಜ. ಆದರೆ ಅದನ್ನು ಮೊದಲಿಗೆ ಯಾರೋ ಸಿದ್ಧಪಡಿಸಿರಬೇಕು ತಾನೆ? ಹಾಗಾದರೆ ಸಾಫ್ಟ್‌ವೇರನ್ನು ಸಿದ್ಧಪಡಿಸುವುದು ಎಂದರೇನು, ಮತ್ತು ಅದು ಸಾಧ್ಯವಾಗುವುದು ಹೇಗೆ?

ಶುಕ್ರವಾರ, ನವೆಂಬರ್ 27, 2015

ಡಿಸೆಂಬರ್ ೧೯-೨೦: ಬೆಂಗಳೂರಿನಲ್ಲಿ ವಿಕಿಪೀಡಿಯ ಸಂಪಾದನೋತ್ಸವ

ಇಜ್ಞಾನ ವಾರ್ತೆ

ಕೆಲ ತಿಂಗಳ ಹಿಂದೆ ಬೆಂಗಳೂರಿನ ಟೆಕ್ಸಸ್ ಇನ್‌ಸ್ಟ್ರುಮೆಂಟ್ಸ್ ಸಂಸ್ಥೆಯಲ್ಲಿ ನಡೆದ ಕನ್ನಡ ವಿಜ್ಞಾನ ಲೇಖಕರ ಶಿಬಿರ ನಿಮಗೆ ನೆನಪಿರಬಹುದು. ಇದೀಗ ಕನ್ನಡ ಮತ್ತು ವಿಜ್ಞಾನ ಬರವಣಿಗೆಗೆ ಸಂಬಂಧಪಟ್ಟ ಇನ್ನೊಂದು ಕಾರ್ಯಕ್ರಮ ಟೆಕ್ಸಸ್ ಇನ್‌ಸ್ಟ್ರುಮೆಂಟ್ಸ್‌ನಲ್ಲಿ ನಡೆಯುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಬರಹಗಳನ್ನು ವಿಕಿಪೀಡಿಯಕ್ಕೆ ಸೇರಿಸುವುದು ಈ ಕಾರ್ಯಕ್ರಮದ ಉದ್ದೇಶ. ವಿಕಿಪೀಡಿಯ ಪರಿಚಯವಿಲ್ಲದವರಿಗೆ ಅಗತ್ಯ ತರಬೇತಿಯನ್ನೂ ನೀಡಲಾಗುವುದು.

ಗುರುವಾರ, ನವೆಂಬರ್ 12, 2015

ವಾಸ್ತವವಲ್ಲದ ವಾಸ್ತವ

ಟಿ. ಜಿ. ಶ್ರೀನಿಧಿ


ಈಗಿನ ಅಜ್ಜ-ಅಜ್ಜಿಯರು ಚಿಕ್ಕಮಕ್ಕಳಾಗಿದ್ದಾಗ ಜಾತ್ರೆ-ಸಂತೆಗಳಲ್ಲಿ ಬಯಾಸ್ಕೋಪ್ (ಅಥವಾ ಬಯೋಸ್ಕೋಪ್) ಎನ್ನುವುದೊಂದು ಆಕರ್ಷಣೆ ಇರುತ್ತಿತ್ತಂತೆ. ದಪ್ಪನೆಯದೊಂದು ಪೆಟ್ಟಿಗೆ, ಅದರೊಳಗೆ ಇಣುಕಲೊಂದು ಕಿಂಡಿ - ಇದು ಬಯಾಸ್ಕೋಪಿನ ಸ್ವರೂಪ. ನಾಲ್ಕಾಣೆಯನ್ನೋ ಎಂಟಾಣೆಯನ್ನೋ ಕೊಟ್ಟು ಆ ಪೆಟ್ಟಿಗೆಯೊಳಗೆ ಇಣುಕಿದರೆ ಮುಂಬಯಿ, ದೆಹಲಿ, ಆಗ್ರಾದ ದೃಶ್ಯಗಳೆಲ್ಲ ಕಣ್ಣೆದುರು ಮೂಡುತ್ತಿದ್ದವು. ಬಾಣಾವರದ ಸಂತೆಯಲ್ಲೇ ಭಾರತ ದರ್ಶನ!

ಕೆಲ ವರ್ಷಗಳ ನಂತರ ಇಂತಹವೇ ಪೆಟ್ಟಿಗೆಗಳು ಇನ್ನು ಸ್ವಲ್ಪ ಚಿಕ್ಕದಾಗಿ 'ವ್ಯೂ ಮಾಸ್ಟರ್' ಎಂಬ ಹೆಸರಿನೊಡನೆ ಮಕ್ಕಳ ಕೈಗೆ ಬಂದವು. ಗುಂಡನೆಯ ಡಿಸ್ಕುಗಳನ್ನು ಪುಟ್ಟದೊಂದು ಸಾಧನದೊಳಕ್ಕೆ ಸೇರಿಸಿ ಇಣುಕಿ ನೋಡಿದರೆ ಅದರಲ್ಲಿನ ಚಿತ್ರಗಳು ನಮ್ಮ ಕಣ್ಮುಂದೆ ಮೂಡುತ್ತಿದ್ದವು (ಈಗ ಇದರ ಥ್ರೀಡಿ ಆವೃತ್ತಿಯೂ ಲಭ್ಯ).

ಬುಧವಾರ, ನವೆಂಬರ್ 4, 2015

ಜೆನ್‌ಫೋನ್ ಲೇಸರ್: ಕೈಗೆಟುಕುವ ಬೆಲೆ, ಉತ್ತಮ ಗುಣಮಟ್ಟ


ಈಚಿನ ದಿನಗಳಲ್ಲಿ ಮೊಬೈಲ್ ಫೋನ್ ಮಾರುಕಟ್ಟೆಗೆ ಹೊಸ ಮಾದರಿಗಳು ಒಂದರ ಹಿಂದೊಂದರಂತೆ ಪ್ರವೇಶಿಸುತ್ತಲೇ ಇವೆ. ಆದಷ್ಟೂ ಹೆಚ್ಚಿನ ಸವಲತ್ತುಗಳನ್ನು ಸಾಧ್ಯವಾದಷ್ಟೂ ಕಡಿಮೆ ಬೆಲೆಯಲ್ಲಿ ಒದಗಿಸಲು ಇಲ್ಲಿ ಸ್ಪರ್ಧೆಯೇ ನಡೆದಿದೆ.

ಮೊಬೈಲ್ ದರಸಮರದಲ್ಲಿ ಅತ್ಯಂತ ಹೆಚ್ಚು ಲಾಭವಾಗಿರುವುದು ಹತ್ತು ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಯ ಫೋನುಗಳನ್ನು ಬಳಸುವವರಿಗೆ ಎನ್ನಬಹುದು. ಇಷ್ಟು ಬೆಲೆಯ ಮಿತಿಯೊಳಗೆ ಸಾಕಷ್ಟು ಉತ್ತಮ ಸೌಲಭ್ಯಗಳನ್ನು ನೀಡುವ ಹಲವು ಫೋನುಗಳು ಇದೀಗ ಮಾರುಕಟ್ಟೆಯಲ್ಲಿವೆ.

ಇಂತಹ ಫೋನುಗಳಲ್ಲೊಂದು ಏಸಸ್ ಸಂಸ್ಥೆಯ 'ಜೆನ್‌ಫೋನ್ ೨ ಲೇಸರ್'.
badge