ಶನಿವಾರ, ಜುಲೈ 1, 2017

ಪುಟ್ಟ-ಕಿಟ್ಟ ವಿಜ್ಞಾನ ಸಂವಾದ ಮಾಲಿಕೆ: ನವಕರ್ನಾಟಕದಿಂದ ಎಂಟು ಹೊಸ ಪುಸ್ತಕ

ಇಜ್ಞಾನ ವಾರ್ತೆ

ನವಕರ್ನಾಟಕ ಪ್ರಕಾಶನದ 'ಪುಟ್ಟ-ಕಿಟ್ಟ ವಿಜ್ಞಾನ ಸಂವಾದ' ಮಾಲಿಕೆಯ ಎಂಟು ಕೃತಿಗಳು ಇಂದು (ಜುಲೈ ೧, ೨೦೧೭) ಬೆಂಗಳೂರಿನಲ್ಲಿ ಬಿಡುಗಡೆಯಾಗಲಿವೆ. ಭೌತ ವಿಜ್ಞಾನದ ವಿಶ್ರಾಂತ ಪ್ರಾಧ್ಯಾಪಕ ಡಾ. ಎ. ಓ. ಆವಲಮೂರ್ತಿ ಈ ಪುಸ್ತಕಗಳನ್ನು ಬರೆದಿದ್ದಾರೆ.

ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನ ಕುರಿತು ಆಸಕ್ತಿಯನ್ನುಂಟುಮಾಡುವುದು 'ಪುಟ್ಟ-ಕಿಟ್ಟ ವಿಜ್ಞಾನ ಸಂವಾದ' ಮಾಲಿಕೆಯ ಉದ್ದೇಶ. ಈ ಸರಣಿಯ ಪುಸ್ತಕಗಳಲ್ಲಿ ನಿತ್ಯ ಜೀವನದಲ್ಲಿ ಅನುಭವಕ್ಕೆ ಬರುವ, ಆದರೆ 'ಅದು ಹೀಗೇಕೆ?'  ಎಂದು ಅರ್ಥವಾಗಿರದ ಹಲವಾರು ಪ್ರಶ್ನೆಗಳಿಗೆ ಸಂವಾದದ ರೂಪದಲ್ಲಿ ವಿವರಣೆ ನೀಡಲಾಗಿದೆ.

ಈ ಸರಣಿಯ ಪುಸ್ತಕಗಳ ಪಟ್ಟಿ ಇಲ್ಲಿದೆ. ಈ ಕೃತಿಗಳನ್ನು ನವಕರ್ನಾಟಕ ಪ್ರಕಾಶನದ ಜಾಲತಾಣದಲ್ಲಿ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಬಹುದು.
  • ತಂಪು ಪಾತ್ರೆ, ಜೋಕೆ!
  • ನೀರೊಳಗಿನ ಕಲ್ಲೇಕೆ ಹಗುರ?
  • ಕಚಗುಳಿ ಇಟ್ಟಾಗ ನಗುವೇಕೆ?
  • ಈರುಳ್ಳಿ ಹಚ್ಚಿದರೆ ಕಣ್ಣೀರೇಕೆ?
  • ಗುಡುಗೇಕೆ ಗುಡುಗುಡು ಸದ್ದು ಮಾಡುತ್ತದೆ?
  • ಭೂಮಿಯ ದ್ರವ್ಯರಾಶಿ ಎಷ್ಟು?
  • ಅಲೆಗಳೇಳುವುದೇಕೆ?
  • ನಾವು ಸೀನುವುದೇಕೆ?

ಕಾಮೆಂಟ್‌ಗಳಿಲ್ಲ:

badge