ಸೋಮವಾರ, ಡಿಸೆಂಬರ್ 19, 2011

ಡಿಸೆಂಬರ್ ೨೪,೨೫ರಂದು 'ಕನ್ನಡದಲ್ಲಿ ವಿಜ್ಞಾನದ ಬೆಳವಣಿಗೆ' ವಿಚಾರಗೋಷ್ಠಿ

ಇಜ್ಞಾನ ವಾರ್ತೆ

ಬೆಂಗಳೂರಿನ ಉದಯಭಾನು ಕಲಾಸಂಘ ಈ ವಾರಾಂತ್ಯದಲ್ಲಿ (೨೦೧೧ರ ಡಿಸೆಂಬರ್ ೨೪, ೨೫) 'ಕನ್ನಡದಲ್ಲಿ ವಿಜ್ಞಾನದ ಬೆಳವಣಿಗೆ' ಕುರಿತ ವಿಚಾರಗೋಷ್ಠಿಯನ್ನು ಆಯೋಜಿಸಿದೆ. ಬಸವನಗುಡಿ ನ್ಯಾಷನಲ್ ಕಾಲೇಜಿನ ಡಾ. ಎಚ್. ಎನ್. ಮಲ್ಟೀಮೀಡಿಯಾ ಹಾಲ್‌ನಲ್ಲಿ ಈ ಕಾರ್ಯಕ್ರಮ ಶನಿವಾರ ಬೆಳಿಗ್ಗೆ ೧೦ ಗಂಟೆಗೆ ಪ್ರಾರಂಭವಾಗಲಿದೆ.

ಪ್ರೊ. ಎಚ್. ಆರ್. ರಾಮಕೃಷ್ಣರಾವ್, ಪ್ರೊ. ಎಂ. ಆರ್. ನಾಗರಾಜು, ಡಾ| ಪಿ. ಎಸ್. ಶಂಕರ್, ಡಾ| ಕೆ. ಎನ್. ಗಣೇಶಯ್ಯ, ಶ್ರೀ ಕೊಳ್ಳೇಗಾಲ ಶರ್ಮ, ಶ್ರೀ ಹಾಲ್ದೊಡ್ಡೇರಿ ಸುಧೀಂದ್ರ, ಡಾ| ನಾ. ಸೋಮೇಶ್ವರ ಸೇರಿದಂತೆ ಅನೇಕ ತಜ್ಞರ ಮಾತುಗಳನ್ನು ಕೇಳುವ ಅವಕಾಶ ಈ ಸಂದರ್ಭದಲ್ಲಿ ಒದಗಿಬರಲಿದೆ. ಚರ್ಚೆಯ ಪ್ರವರ್ತನೆಯನ್ನು ಶ್ರೀ ಟಿ. ಆರ್. ಅನಂತರಾಮು ಹಾಗೂ ಶ್ರೀ ನಾಗೇಶ ಹೆಗಡೆಯವರು ಮಾಡಲಿದ್ದಾರೆ. ವಿಚಾರಗೋಷ್ಠಿಯ ಪ್ರಬಂಧಗಳ ಸಂಗ್ರಹವನ್ನು ಪುಸ್ತಕರೂಪದಲ್ಲೂ ಬಿಡುಗಡೆ ಮಾಡಲಾಗುವುದು.

ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಇಲ್ಲಿದೆ.

ಕಾಮೆಂಟ್‌ಗಳಿಲ್ಲ:

badge