ಸೋಮವಾರ, ಫೆಬ್ರವರಿ 28, 2011

ಹಂಪಿಯಲ್ಲಿ ರಾಷ್ಟ್ರೀಯ ವಿಚಾರಸಂಕಿರಣ

ಇ-ಜ್ಞಾನ ವಾರ್ತೆ


'ಕನ್ನಡದಲ್ಲಿ ಜ್ಞಾನಾಧಾರಿತ ಪಠ್ಯಗಳ ಭಾಷಾಂತರ' ಕುರಿತ ರಾಷ್ಟ್ರೀಯ ವಿಚಾರಸಂಕಿರಣ ಕಳೆದ ಫೆಬ್ರುವರಿ ೨೫ ಹಾಗೂ ೨೬ರಂದು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯಿತು. ಭಾರತ ಸರಕಾರದ ರಾಷ್ಟ್ರೀಯ ಅನುವಾದ ಮಿಷನ್, ಮೈಸೂರಿನ ಸಿಐಐಎಲ್ ಹಾಗೂ ಹಂಪಿ ವಿವಿಯ ಭಾಷಾಂತರ ಅಧ್ಯಯನ ವಿಭಾಗ ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು.

ಒಟ್ಟಾರೆಯಾಗಿ ಜ್ಞಾನಾಧಾರಿತ ಪಠ್ಯಗಳ ಭಾಷಾಂತರದ ಬಗ್ಗೆ ಗಮನಹರಿಸಿದ ಈ ಕಾರ್ಯಕ್ರಮದಲ್ಲಿ ವಿಜ್ಞಾನ ಬರೆವಣಿಗೆ ವಿಷಯದ ಕಡೆಗೂ ಸಾಕಷ್ಟು ಮಹತ್ವ ನೀಡಲಾಗಿತ್ತು. ಡಾ|ಯು ಬಿ ಪವನಜ, ಶ್ರೀ ಟಿ ಆರ್  ಅನಂತರಾಮು, ಶ್ರೀ ಕೊಳ್ಳೇಗಾಲ ಶರ್ಮ, ಶ್ರೀ ಎ ಪಿ ರಾಧಾಕೃಷ್ಣ - ಇವರು ಈ ವಿಚಾರಸಂಕಿರಣದಲ್ಲಿ ಭಾಗವಹಿಸಿದ್ದ ವಿಜ್ಞಾನ-ತಂತ್ರಜ್ಞಾನ ಬರೆಹಗಾರರು.

ಈ ವಿಚಾರಸಂಕಿರಣದಲ್ಲಿ ನಾನೂ ಭಾಗವಹಿಸಿದ್ದೆ. 'ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನ ಬರೆವಣಿಗೆ - ಸವಾಲುಗಳು' ಇದು ನಾನು ಮಂಡಿಸಿದ ಪ್ರಬಂಧದ ವಿಷಯ. - ಶ್ರೀನಿಧಿ

1 ಕಾಮೆಂಟ್‌:

ವಿ.ರಾ.ಹೆ. ಹೇಳಿದರು...

ಸಾಧ್ಯವಾದರೆ ನಿಮ್ಮ ಪ್ರಬಂಧವನ್ನೂ ಹಾಕಿ. atleast ಸಾರಾಂಶ ಹಾಕಿ.

badge