ಸೋಮವಾರ, ಫೆಬ್ರವರಿ 14, 2011

ಕನ್ನಡ ವಿಜ್ಞಾನ ಸಾಹಿತಿಗಳ ಸಮಾವೇಶ

ಇ-ಜ್ಞಾನ ವಾರ್ತೆ

ಕನ್ನಡ ಜನಪ್ರಿಯ ವಿಜ್ಞಾನ ಸಾಹಿತಿಗಳ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ವಿಜ್ಞಾನ ಸಾಹಿತಿಗಳ ನಾಲ್ಕನೇ ಸಮಾವೇಶ ಕಳೆದ ವಾರಾಂತ್ಯ (ಫೆಬ್ರುವರಿ ೧೨-೧೩) ಹಾಸನ ಜಿಲ್ಲೆ ಆಲೂರಿನ ಸಮೀಪದ ಪುಣ್ಯಭೂಮಿಯಲ್ಲಿ ನಡೆಯಿತು. ಹಸಿರು ತೋಟದ ಪರಿಸರದಲ್ಲಿ ನಡೆದ ಈ ಸಮಾವೇಶದಲ್ಲಿ ಡಾ| ಪಿ ಎಸ್ ಶಂಕರ್, ಡಾ| ಪ್ರಧಾನ್ ಗುರುದತ್ತ, ಪ್ರೊ| ಎಚ್ ಬಿ ದೇವರಾಜ ಸರ್ಕಾರ್, ಶ್ರೀ ಟಿ ಆರ್ ಅನಂತರಾಮು, ಡಾ| ನಾ ಸೋಮೇಶ್ವರ, ಡಾ| ಲೀಲಾವತಿ ದೇವದಾಸ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಆರೋಗ್ಯ-ಕೃಷಿ-ವಿಜ್ಞಾನ ಸಾಹಿತ್ಯ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ನಾಲ್ವರು ಹಿರಿಯರನ್ನು ಸಮಾವೇಶದ ಮೊದಲ ದಿನದಂದು ಸನ್ಮಾನಿಸಲಾಯಿತು.

ಈ ಸಮಾರಂಭದ ಕೆಲವು ಚಿತ್ರಗಳು ಇಲ್ಲಿವೆ.








ಕಾಮೆಂಟ್‌ಗಳಿಲ್ಲ:

badge