ಗುರುವಾರ, ನವೆಂಬರ್ 29, 2012

'ಫ್ಲಾಪಿಯಿಂದ ಫೇಸ್‌ಬುಕ್‌ವರೆಗೆ'

ತಂತ್ರಜ್ಞಾನ ಲೇಖಕ ಶ್ರೀ ಟಿ. ಜಿ. ಶ್ರೀನಿಧಿಯವರ 'ಫ್ಲಾಪಿಯಿಂದ ಫೇಸ್‌ಬುಕ್‌ವರೆಗೆ' ಕೃತಿ ಬರುವ ಡಿಸೆಂಬರ್ ೮ರ ಶನಿವಾರ ಸಂಜೆ ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಉದಯವಾಣಿಯ 'ಜೋಶ್' ಪುರವಣಿಯಲ್ಲಿ ಕಳೆದ ಎರಡು ವರ್ಷಗಳಿಂದ ಪ್ರಕಟವಾಗುತ್ತಿರುವ 'ವಿಜ್ಞಾಪನೆ' ಅಂಕಣದ ಆಯ್ದ ಬರೆಹಗಳನ್ನು ಈ ಕೃತಿಯಲ್ಲಿ ಸಂಕಲಿಸಲಾಗಿದೆ.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರಶಸ್ತಿ ಗಳಿಸಿದ್ದ ಅವರ 'ತಿನ್ನಲಾಗದ ಬಿಸ್ಕತ್ತು ನುಂಗಲಾಗದ ಟ್ಯಾಬ್ಲೆಟ್ಟು' ಕೃತಿಯ ಎರಡನೇ ಮುದ್ರಣವೂ ಅಂದೇ ಹೊರಬರುತ್ತಿದೆ.

ಆಕೃತಿ ಪುಸ್ತಕ, ಇಜ್ಞಾನ ಡಾಟ್ ಕಾಮ್ ಹಾಗೂ ಭಾರತೀ ಪ್ರಕಾಶನ - ಇವರ ಸಹಯೋಗದಲ್ಲಿ ಏರ್ಪಡಿಸಲಾಗಿರುವ ಈ ಕಾರ್ಯಕ್ರಮ ಬೆಂಗಳೂರು ರಾಜಾಜಿನಗರದ ಆಕೃತಿ ಪುಸ್ತಕ ಮಳಿಗೆಯಲ್ಲಿ ನಡೆಯಲಿದೆ.

ಇದೇ ಸಂದರ್ಭದಲ್ಲಿ 'ಕನ್ನಡ ಮತ್ತು ಕಂಪ್ಯೂಟರ್' ಎಂಬ ವಿಷಯದ ಕುರಿತು ಸಂವಾದವನ್ನೂ ಏರ್ಪಡಿಸಲಾಗಿದೆ. ಡಾ| ಯು ಬಿ ಪವನಜ, ಶ್ರೀ ಬೇಳೂರು ಸುದರ್ಶನ ಹಾಗೂ ಶ್ರೀ ಎನ್ ಎ ಎಂ ಇಸ್ಮಾಯಿಲ್ ಅವರು ಸಂವಾದದಲ್ಲಿ ಭಾಗವಹಿಸಲಿದ್ದಾರೆ.

ಇಜ್ಞಾನ ಡಾಟ್ ಕಾಮ್ ನಿಮ್ಮನ್ನು ಈ ಕಾರ್ಯಕ್ರಮಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ.

ಸ್ಥಳ: ಆಕೃತಿ ಪುಸ್ತಕ ಮಳಿಗೆ,
೩೧/೧, ೧೨ನೇ ಮುಖ್ಯರಸ್ತೆ, ೩ನೇ ಬ್ಲಾಕ್,
ರಾಜಾಜಿನಗರ, ಬೆಂಗಳೂರು ೫೬೦೦೧೦

ಸಮಯ: ಡಿಸೆಂಬರ್ ೮, ೨೦೧೨ರ ಶನಿವಾರ ಸಂಜೆ ೫ಕ್ಕೆ

ಕೃತಿಯ ಬಗ್ಗೆ...
"ಈ ಲೇಖನಗಳು ನೀಡುವ ಒಳನೋಟ ಅಪರೂಪದ್ದು. ಸಮಾಜದ ಆಗುಹೋಗುಗಳಿಗೂ, ಆ ಕಾಲದ ಬೆಳವಣಿಗೆಗಳಿಗೂ ಇರುವ ಸಂಬಂಧವನ್ನು ಶ್ರೀನಿಧಿ ಸರಳವಾಗಿ ನಿರೂಪಿಸುತ್ತಾರೆ. ಕಲಿಯುವ ಮನಸ್ಸಿದ್ದವರಿಗೆಲ್ಲ ಅವರ ಲೇಖನಗಳು ಸಂಗ್ರಾಹ್ಯವೇ. ಸಮಕಾಲೀನ ಉದಾಹರಣೆಗಳನ್ನು ಕೊಡುತ್ತಲೇ ವರ್ತಮಾನದ ಮಾಹಿತಿ ತಂತ್ರಜ್ಞಾನದ ಕತೆ ಹೇಳುತ್ತಾರೆ. ಅಂತರಜಾಲದ ಯಾವ ಪ್ರಮುಖ ಘಟನೆಗಳೂ ಅವರ ಕಣ್ಣು ತಪ್ಪಿಸಲಾಗದು! ಬಳಕೆದಾರನನ್ನೇ ಗಮನದಲ್ಲಿ ಇಟ್ಟುಕೊಂಡು ಬರೆದ ಈ ಲೇಖನಗಳನ್ನು ಖುಷಿಯಿಂದ ಓದಬಹುದು. ನಮ್ಮ ತಿಳವಳಿಕೆಯ ದಿಗಂತವನ್ನು ವಿಸ್ತರಿಸಿಕೊಳ್ಳಬಹುದು" - ಬೇಳೂರು ಸುದರ್ಶನ (ಮುನ್ನುಡಿಯಿಂದ)

ಕಾಮೆಂಟ್‌ಗಳಿಲ್ಲ:

badge